Homeಮುಖಪುಟಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಶ್ರದ್ಧಾಂಜಲಿ: ಲಂಕೇಶರ ಆಪ್ತ ನಮ್ಮ ಯೋಗಪ್ಪನವರು

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು...

- Advertisement -
- Advertisement -

ನಮ್ಮ ಯೋಗಪ್ಪನವರನ್ನು ಕೊರೊನಾ ಬಲಿ ಪಡೆದಿದೆ. ಇದು ಕನ್ನಡ ಸಾಹಿತ್ಯಾಕ್ಕಾದ ದೊಡ್ಡ ನಷ್ಟ. ಏಕೆಂದರೆ, ಯೋಗಪ್ಪನವರು ಇನ್ನೂ ಮಹತ್ತರವಾದುದನ್ನು ಬರೆಯುವವರಿದ್ದರು. ಅವರು ಲಂಕೇಶರಿಗೆ ಪರಿಚಯವಾದುದ್ದೇ ತಮ್ಮ ಗಟ್ಟಿಯಾದ ಬರಹ ಮತ್ತು ಓದಿನ ಮುಖಾಂತರ. ಇಂಗ್ಲಿಷ್ ಸಾಹಿತ್ಯದ ಓದಿನ ವಿಷಯದಲ್ಲಿ ಪಾಂಡಿತ್ಯದ ಔನ್ನತ್ಯದಲ್ಲಿದ್ದ ಯೋಗಪ್ಪನವರು ನಮ್ಮಂತವರ ಜೊತೆಯೂ ಸಹಜವಾದ ಸ್ನೇಹದಿಂದಿದ್ದರು. ಅವರು ಲಂಕೇಶ್ ಜೊತೆ ಮಾತನಾಡುತ್ತ ಕುಳಿತಿದ್ದರೆ ನಾವು ಉಸಿರೆತ್ತದೆ ಸುಮ್ಮನೆ ಕೇಳಿಸಿಕೊಳ್ಳುವಂತಾಗುತ್ತಿತ್ತು.

ಜಗತ್ತಿನ ಲೇಖಕರ ಬಗ್ಗೆ ಯೋಗಪ್ಪನವರು ಮಾತನಾಡುತ್ತಿದ್ದರೆ, ಲಂಕೇಶ್ ತಮ್ಮ ಅಭಿಪ್ರಾಯವನ್ನು ಸೇರಿಸುತ್ತ ವಿಸ್ಕಿ ಗುಳುಕರಿಸುವುದನ್ನು ಮರೆತು ಆಲಿಸುತ್ತಿದ್ದರು. ಆಗಲೇ ಅವರ ಮನದಾಳದಲ್ಲಿ ಈ ಜಗತ್ತಿನ ರೂಪಕ ಲೇಖಕರ ಬಗ್ಗೆ ಕನ್ನಡದ ಮನಸ್ಸುಗಳಿಗೆ ಸಂಕ್ಷಿಪ್ತವಾಗಿ ಕೊಡಬೇಕೆನ್ನಿಸಿರಬೇಕು. ಲಂಕೇಶ್ ಪತ್ರಿಕೆಯನ್ನ ನಿರಂತರ ಪ್ರಯೋಗಶೀಲತೆಗೆ ಗುರಿ ಮಾಡುತ್ತಿದ್ದರಿಂದ ಈ ಹಿಂದೆ ಎನ್.ಎಸ್ ಶಂಕರ್ ಕೈಲಿ ’ಚಂಚಲೆ’ ಮತ್ತು ನಟರಾಜ್ ಹುಳಿಯಾರ್‌ರಿಂದ ’ಬರೆವ ಬದುಕು’ ಅಂಕಣಗಳನ್ನು ಬರೆಸಿದ್ದರು. ಮಹಿಳಾ ಲೇಖಕಿಯರಿಂದ ’ನಿಮ್ಮಿ’ ಬರೆಸಿದ್ದರು. ಇವನ್ನೆಲ್ಲಾ ಶುರುಮಾಡಿ ಪತ್ರಿಕೆಯ ನೌಕರರಿಗೆ ಮುಂದುವರಿಸಲು ಬಿಡುತ್ತಿದ್ದರು.

ಹಾಗೆಯೇ ಯೋಗಪ್ಪನವರಿಂದ ಜಗತ್ತಿನ ವಿಸ್ಮಯಕಾರಿ ಲೇಖಕರ ಬಗೆಗಿನ ಸಂಗತಿಗಳನ್ನು ಬರೆಸುತ್ತಿದ್ದರು. ಪತ್ರಿಕೆಯ ಸಾಹಿತ್ಯ ಮತ್ತು ರಾಜಕಾರಣದ ಸಮತೂಕವನ್ನು ನಿಭಾಯಿಸುವುದರಲ್ಲಿ ಯೋಗಪ್ಪನವರ ಬರವಣಿಗೆ ಮಹತ್ವ ಪಡೆದುಕೊಂಡಿದ್ದವು.

ಅವರು ನನಗೆ ಅಷ್ಟಾಗಿ ಪರಿಚಯವಿಲ್ಲದ ಸಮಯದಲ್ಲಿ ಅವರ ಗೆಳೆಯನಂತಿದ್ದ ಉತ್ತರ ಕರ್ನಾಟಕದ ವರದಿಗಾರನೊಬ್ಬ ಲಂಕೇಶರಿಗೆ ಯೋಗಪ್ಪನವರ ವಿಷಯದಲ್ಲಿ ಚಾಡಿ ಹೇಳುತ್ತ ಕುಳಿತಿದ್ದ. ಅದನ್ನ ಕೇಳಿಸಿಕೊಂಡ ನಾನು ಇನ್ನು ಯೋಗಪ್ಪನವರು ಪತ್ರಿಕೆಯಿಂದ ಹೊರನಡೆದಂತೆಯೇ ಎಂದು ಭಾವಿಸಿದ್ದೆ. ಆದರೆ ಲಂಕೇಶ್ ಚಾಡಿ ಹೇಳಿದವನ ಮಾತನ್ನು ಪಕ್ಕಕ್ಕಿಟ್ಟು ಯೋಗಪ್ಪನವರನ್ನು ಗೌರವಿಸಿದ್ದರು. ಆಗೊಮ್ಮೆ ಪತ್ರಿಕೆ ಆಫೀಸಿನಲ್ಲಿ ಶರ್ಮರ ಕಾವ್ಯ ಕುರಿತ ಚರ್ಚೆಯಲ್ಲಿ ಯೋಗಪ್ಪನವರು ಶರ್ಮರ ಎದುರೇ ಅವರ ಕಾವ್ಯದ ಅಂತರಾಳವನ್ನು ಅನಾವರಣ ಮಾಡಿದ್ದರು. ಇದರಿಂದ ಕೆರಳಿದ ಶರ್ಮರು ಯೋಗ್ಯಪ್ಪನವರು ಎಂದು ವ್ಯಂಗ್ಯವಾಗಿ ಮೂದಲಿಸಿದ್ದರು. ಆದರೂ ಯೋಗಪ್ಪನವರು ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ತುಟಿಬಿರಿದರು. ಆಗ ನಟರಾಜ್ ಹುಳಿಯಾರ್ ಮತ್ತು ಲಂಕೇಶರು ಯೋಗಪ್ಪನವರ ವ್ಯಾಖ್ಯಾನವನ್ನು ಸಮರ್ಥಿಸಿಕೊಂಡಿದ್ದರು.

ಒಮ್ಮೆ ಪಶುಸಂಗೋಪನಾ ಸಚಿವರಾಗಿದ್ದ ಬಿ.ಬಿ ನಿಂಗಯ್ಯ ನನ್ನ ಗೆಳೆಯರಾದ ಕಾರಣಕ್ಕೆ ಆಫೀಸಿಗೆ ಕರೆದರು. ಹೋದಾಗ ಇಲ್ಲೆ ಊಟ ಮಾಡಿ ಎಂದರು. ಆಯ್ತು ಎಂದು ಊಟಕ್ಕೆ ಕುಳಿತಾಗ ನಿಂಗಯ್ಯನವರಿಗೆ ಪಿ.ಎಸ್ ಆಗಿದ್ದ ಯೋಗಪ್ಪನವರು ವಿಧೇಯ ಪರಿಚಾರಕನಂತೆ ಊಟ ಬಡಿಸಿದ್ದು ನಾನು ಮರೆಯಲಾಗದ ಮುಜುಗರಕ್ಕೆ ಈಡುಮಾಡಿತ್ತು. ಆದರೆ ಯೋಗಪ್ಪನವರಿಗೆ ಏನೂ ಅನ್ನಿಸಿರಲಿಲ್ಲ ಬದಲಿಗೆ ಗೆಳೆಯನಿಗೆ ಆತಿಥ್ಯ ನೀಡಿದ ಖುಷಿಯಲ್ಲಿದ್ದರು.

ಅವರು ಪಿ.ಎಸ್‌ ಆಗಿ ಕೆಲಸ ಮಾಡಿದ ಮಂತ್ರಿಗಳು ನೆನೆಸಿಕೊಳ್ಳುವಂತಹ ಅಧಿಕಾರಿಯಾಗಿದ್ದರು. ಅವರು ಉದಾಸಿ ಬಳಿಯಿದ್ದಾಗ ನಾನೊಮ್ಮೆ ಹೋಗಿದ್ದೆ. ನನ್ನನ್ನು ಉದಾಸಿಗೆ ಪರಿಚಯಿಸಿದ್ದನ್ನು ನೋಡಿ ದಂಗು ಬಡಿದಿದ್ದೆ. ಏಕೆಂದರೆ, ನನ್ನ ಕಟ್ಟೆಪುರಾಣವನ್ನು ಆ ರೂಪದಲ್ಲಿ ಉದಾಸಿಗೆ ವಿವರಿಸಿದ್ದರು. ಉದಾಸಿ ಕೂಡ ಎಂ.ಪಿ ಪ್ರಕಾಶರ ಒಡನಾಡಿಯಾದ್ದರಿಂದ ಯೋಗಪ್ಪನವರ ಮಾತುಗಳನ್ನು ಲಕ್ಷ್ಯವಿಟ್ಟು ಕೇಳುತ್ತಿದ್ದರು. ಮುಂದೆ ನಾನು ಕಟ್ಟೆಪುರಾಣವನ್ನು ಪುಸ್ತಕವಾಗಿ ಪ್ರಕಟಿಸಿದಾಗ ಯೋಗಪ್ಪನವರಿಂದಲೇ ಮುನ್ನುಡಿ ಬರೆಸಿದ್ದೆ.

“ಪ್ರೀತಿಯೆಂಬುದು ಚಂದ್ರನ ದಯೆ” ಎಂಬ ಕಾವ್ಯದ ಗಣಿಯಂತಿರುವ ಪುಸ್ತಕವನ್ನು ಅವರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಈಗಾಗಲೇ ಕೆಎಎಸ್ ಅಧಿಕಾರಿಯಾಗಿರುವ ಅವರ ಮಗಳೊಂದಿಗೆ ದಿಢೀರನೆ ಪತ್ರಿಕೆ ಆಫೀಸಿಗೆ ಬಂದು ಗೌರಿ ಕೈಯಿಂದ ಬಿಡುಗಡೆ ಮಾಡಿಸಿದರು. ನಂತರ ಕ್ರಿಕೆಟ್ ಕ್ಲಬ್ಬಿನಲ್ಲಿ ಗೌರಿ, ಸತೀಶ್, ಶ್ರೀನಿವಾಸ ಕರಿಯಪ್ಪ ಮತ್ತು ಈ ಚಂದ್ರನಿಗೆ ಪಾರ್ಟಿ ಕೊಟ್ಟರು. ಸಾಮಾನ್ಯವಾಗಿ ಯಾರಾದರೂ ಕುಡಿಸಿದಾಗ ಆಗುವಂತೆಯೇ, ಜಾಸ್ತಿ ಕುಡಿದು ಪೊಲೀಸರಿಗೆ ಸಿಕ್ಕಿಬಿದ್ದೆವು. ಆಗ ಪೊಲೀಸರಿಗೆ, ಕೆಎಎಸ್ ಅಧಿಕಾರಿ ಮತ್ತು ಕನ್ನಡದ ದೊಡ್ಡ ಸಾಹಿತಿ ಯೋಗಪ್ಪನವರು ಪಾರ್ಟಿ ಕೊಟ್ಟರು, ಆದ್ದರಿಂದ ಬಿಡಿ ಸಾರ್ ಎಂದೆವು. ಸಾಹಿತಿ ಪಾರ್ಟಿ ಕೊಟ್ರು ಅಂತ ಇಷ್ಟೊಂದೇನ್ರಿ ಕುಡಿಯದು. ಈ ಕಡೆ ಬನ್ನಿ ಗಾಡಿ ಹಾಕಿ ಎಂದರು. ದಿಕ್ಕು ಕಾಣದ ನಾನು  ಕೊನೆಗೆ ಕಷ್ಟಪಟ್ಟು ಬಿಡಿಸಿಕೊಂಡು ಬರುವಷ್ಟರಲ್ಲಿ ಅರ್ಧ ರಾತ್ರಿಯಾಯ್ತು. ಇದನ್ನು ಯೋಗಪ್ಪನವರಿಗೆ ಹೇಳಿದಾಗ, ಅದಾಗಲೇ ಜಗತ್ತಿನ ರೂಪಕ ಲೇಖಕರ ಬಗ್ಗೆ ಅರೆದು ಕುಡಿದಿದ್ದ ಯೋಗಪ್ಪನವರು ತುಟಿ ಬಿರಿದು ಹೌದ್ರಾ ಎಂದಿದ್ದರು!

ಅವರು ’ಪ್ರೀತಿಯೆಂಬುದು ಚಂದ್ರನ ದಯೆ’ ಎಂಬ ಪುಸ್ತಕ ಕೊಟ್ಟು ಅಭಿಪ್ರಾಯ ಕೇಳಿದ್ದರು. ಆಗ ನಾನು ಫೋನು ಮಾಡಿ “ಸಂಗವ್ವಕ್ಕನ ಮುದ್ದಿನ.. ಬನಶಂಕರಿ ಜಾತ್ರೆಯಲ್ಲಿ ಮಾಯವಾದವಲ್ಲೊ ಎಂಬ ಹಾಡಿನ ಸಾಲುಗಳನ್ನು ರಾಗವಾಗಿ ಹೇಳಿ ಬನಶಂಕರಿ ಜಾತ್ರೆ ನೋಡಬೇಕಲ್ರಿ ಸರ ಎಂದಿದ್ದೆ. ಅದಕೇನಂತೆ ಈ ಬಾರಿ ನೋಡೋನು ಎಂದು ಆ ಜಾತ್ರೆಯನ್ನು ವರ್ಣಿಸಿದ್ದರು.

ಕಳೆದ ಕೊರೊನಾ ಟೈಮಿನಲ್ಲಿ ನಾನು ಮನೆಯಲ್ಲೇ ಇದ್ದು ಲಂಕೇಶರ ಒಡನಾಟದಲ್ಲಿನ ವಿವರಕ್ಕೆ ರೂಪಕೊಟ್ಟು ಒಂದು ಪುಸ್ತಕ ಮಾಡಿ ಅದಕ್ಕೊಂದು ಟೈಟಲ್ ಬೇಕು ಎಂದು ಕೇಳಿದ್ದೆ. ಅದಕ್ಕವರು, ಲಂಕೇಶ್ ಜೊತೆಯಾಗಿದ್ದವುರು ಏನೇನಾದ್ರು ಅನ್ನದನ್ನ ನೀವು ಮಾತ್ರ ಬರೀತಿರಿ ಅದಕ “ಲಂಕೇಶ್ ಜೊತೆಗೆ” ಅಂತ ಟೈಟಲ್ ಇಡ್ರಲ್ಲಾ ಎಂದಿದ್ದರು. ಆ ಪುಸ್ತಕವನ್ನು ಅವರಿಗೆ ಕೊಡಲು ಇಂದು ನಾಳೆ ಎನ್ನುತ್ತಿದ್ದ ನನಗೆ ಕೊರೊನಾ ಸರಿಯಾದ ಉತ್ತರ ಕೊಟ್ಟಿತು. ಆರೋಗ್ಯದ ವಿಷಯದಲ್ಲಿ ತುಂಬ ಶಿಸ್ತಿನ ವ್ಯಕ್ತಿಯಾಗಿದ್ದ ಯೋಗಪ್ಪನವರು ಮಗನ ಮದುವೆ ಸಲುವಾಗಿ ಲಗ್ನಪತ್ರಿಕೆ ಕೊಡಲು ಹೋದಾಗ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರ ಪತ್ನಿ ಮತ್ತು ಮಗ ಚೇತರಿಸಿಕೊಂಡಿರುವುದು ಸುದೈವ. ಈಗಿನ ಸರಕಾರದ ಸುಮಾರು ಜನ ನಮಗೊಬ್ಬ ಸಮರ್ಥ ಪಿಎಸ್ ಬೇಕಾಗಿದ್ದಾರೆಂದು ವಿಚಾರಿಸುತ್ತಿದ್ದಾಗ ಬಸವರಾಜ ಹೊರಟ್ಟಿಯವರ ಗಮನಕ್ಕೆ ಯೋಗಪ್ಪನವರು ಬಂದಿದ್ದರು. ಇನ್ನೇನು ನೇಮಕ ಹೊರಬೀಳುವ ಸಮಯಕ್ಕೆ ಸರಿಯಾಗಿ ಅಪ್ಪ ಮಕ್ಕಳ ಪಕ್ಷ ತಮ್ಮ ಕಡೆಯವರೊಬ್ಬರನ್ನು ಹೊರಟ್ಟಿಯವರ ಮೇಲೆ ಹೇರಿದ್ದರು. ಎಂದಿನಂತೆ ಯೋಗಪ್ಪನವರು “ಬೇಷಾತು ಬಿಡ್ರಿ” ಎಂದು ನೆಮ್ಮದಿಯಾಗಿದ್ದರು.

ಯೋಗಪ್ಪನವರ ಬರವಣಿಗೆ ಕಡಿಮೆಯಿದ್ದರೂ ಅವು ಮತ್ತೆ ಮತ್ತೆ ಓದುವಂತಹ ತೂಕವುಳ್ಳ ಕೃತಿಗಳಾಗಿವೆ. ’ದೇವರ ಹೆಸರಲ್ಲಿ ಪ್ರಮಾಣ ಮಾಡಿ’ ಎಂಬ ಕಾದಂಬರಿ, ’ಆರಾಮ ಕುರ್ಚಿ’ ಎಂಬ ಕಥಾಸಂಕಲನ, ’ರೂಪಕ ಲೇಖಕರು’, ’ಪ್ರೀತಿಯೆಂಬುದು ಚಂದ್ರನ ದಯೆ’, ನೀಲು ಕುರಿತ ವಿಶ್ಲೇಷಣೆ ಇವೆಲ್ಲಾ ಕನ್ನಡ ಸಾಹಿತ್ಯಕ್ಕೆ ಯೋಗಪ್ಪನವರು ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ.


ಇದನ್ನೂ ಓದಿ: ದ್ವೇಷ-ಅಸೂಯೆ ಮತ್ತು ಹಿಂಸೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡದಿರೋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...