Homeಮುಖಪುಟಮಹರಾಷ್ಟ್ರದ ಚುನಾವಣಾ ಫಲಿತಾಂಶದ ಸುತ್ತ ಒಂದು ನೋಟ

ಮಹರಾಷ್ಟ್ರದ ಚುನಾವಣಾ ಫಲಿತಾಂಶದ ಸುತ್ತ ಒಂದು ನೋಟ

- Advertisement -
- Advertisement -
ಶ್ರಿರಂಜನ್ ಅವತೆ,  ಸಾವಿತ್ರಿಬಾಯಿ ಫುಲೆ ಯುನಿವರ್ಸಿಟಿ, ಪುಣೆ

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದ ನಾಲ್ಕನೇ ಮತ್ತು ಕೊನೆಯ ಹಂತದ ಮತದಾನ ಏಪ್ರಿಲ್ 29ರಂದು ನಡೆಯಿತು. 48 ಕ್ಷೇತ್ರಗಳಿರುವ ಇಲ್ಲಿ 2014ರಲ್ಲಿ 60.32% ಮತದಾನ ಆಗಿದ್ದರೆ ಈ ಸಲ 60.68% ಮತದಾನ ಆಯಿತು. ಮತದಾನದ ಪ್ರಮಾಣದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ ಮತದಾನದ ಮಾದರಿ ಗಮನಾರ್ಹವಾಗಿ ಬದಲಾಗಿದೆ. 2014ರಲ್ಲಿ ಹಿಂದಿ ಹೃದಯಭಾಗದಲ್ಲಿ ಇದ್ದ ಮೋದಿ ಅಲೆ ಮಹಾರಾಷ್ಟ್ರದಲ್ಲೂ ಇತ್ತು. ಈಗ ಆ ಅಲೆ ಕಣ್ಮರೆಯಾಗಿದೆ. ಹಾಗೂ ಮೋದಿಯ ಜನಪ್ರಿಯತೆಯ ಹೊರತಾಗಿಯೂ ಕೇಂದ್ರದ ಪ್ರಬಲ ನಿರೂಪಣೆಯ ಶಕ್ತಿ ಕುಂದಿದೆ. ಹಾಗಾಗಿ, ಈ ಚುನಾವಣೆಗಳಲ್ಲಿ ಸ್ಥಳೀಯ ಲೆಕ್ಕಾಚಾರಗಳು ನಿರ್ಣಾಯಕವಾಗಿವೆ. ಪ್ರಚಾರದುದ್ದಕ್ಕೂ ರಾಜಕೀಯ ಪಕ್ಷಗಳು ಅಳವಡಿಸಿದ ತಂತ್ರಗಾರಿಕೆಯಿಂದ ಬದಲಾದ ಮೂಡ್ ಸ್ಪಷ್ಟವಾಗಿತ್ತು.

ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ
ಮಹಾರಾಷ್ಟ್ರದ ರಾಜಕಾರಣದಲ್ಲಿ ನಾಲ್ಕು ಪ್ರಮುಖ ಪಕ್ಷಗಳಿದ್ದರೂ, ಸ್ಪರ್ಧೆ ಇರುವುದು ಕಾಂಗ್ರೆಸ್-ಎನ್‍ಸಿಪಿ ಕೂಟ ಮತ್ತು ಶಿವಸೇನೆ-ಬಿಜೆಪಿಯ ಮಧ್ಯೆ. ಮೂರನೇ ತುದಿಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ಭಾರತೀಯ ರಿಪಬ್ಲಿಕ್ ಪಾರ್ಟಿ ಮತ್ತು ಅಸಾದುದ್ದಿನ್ ಒವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್ ಮುಸ್ಲಿಮೀನ್ ಮಧ್ಯದ ಏರ್ಪಟ್ಟ ಮೈತ್ರಿಕೂಟವಾದ ವಂಚಿತ್ ಬಹುಜನ್ ಅಘಾಡಿ (ವಿಬಿಏ) ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಇವರೆಡರ ವಿರುದ್ಧ ನಮ್ಮ ಹೋರಾಟ ಎಂದು ವಿಬಿಏ ಹೇಳಿಕೊಂಡರೂ ಯುಪಿಏ ಮತ್ತು ವಿಬಿಏದ ಮತದಾರರ ಬೇಸ್ ಕೆಲವು ಕ್ಷೇತ್ರಗಳಲ್ಲಿ ವಿಭಜಿತವಾಗುವ ಸಾಧ್ಯತೆ ಇರುವುದರಿಂದ ಯುಪಿಏಗೆ ಈ ಹೊಸ ಮೈತ್ರಿಕೂಟದಿಂದ ತೊಂದರೆ ಆಗಬಹುದಾಗಿದೆ.
ಬಿಜೆಪಿ ಈ ಎರಡು ತಂತ್ರಗಾರಿಕೆಗಳನ್ನು ಬಳಸುತ್ತಿದೆ:

ಮೊದಲನೇಯದಾಗಿ, ಸ್ಥಳೀಯ ಪ್ರಭಾವಿ ಮತ್ತು ಪ್ರಮುಖ ನಾಯಕರನ್ನು ಹೇಗಾದರೂ ಮಾಡಿ ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಅಹ್ಮದ್‍ನಗರದಿಂದ ವಿಖೆ ಪಾಟಿಲ (ರಾಧಾಕೃಷ್ಣ ವಿಖೆ ಪಾಟೀಲ ಅವರು ವಿರೋಧ ಪಕ್ಷದ ನಾಯಕಾಗಿದ್ದರು) ಮತ್ತು ಮಾಧಾದಿಂದ ಮೊಹಿತೆ ಪಾಟೀಲ್ ಅವರನ್ನು ಯಶಸ್ವಿಯಾಗಿ ಬಿಜೆಪಿಗೆ ಬರಮಾಡಿಕೊಂಡರು.

ಎರಡನೇಯದಾಗಿ, ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಮತ್ತು ಅವರ ತಂಡ ಫುಲ್ವಾಮಾ ಮತ್ತು ಬಾಲಾಕೋಟ್ ಘಟನೆಗಳನ್ನು ಬಳಸಿ ರಾಷ್ಟ್ರೀಯ ಸುರಕ್ಷತೆಯ ವಿಷಯದ ಮೇಲೆ ತೀವ್ರವಾಗಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ಮೋದಿ ಕೂಡ ಇದೇ ವಿಷಯಗಳ ಮೇಲೆ ಪ್ರಚಾರ ಮಾಡಿ ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟನ್ನು ಕಡೆಗಣಿಸಿದರು. ಮತ್ತೊಂದು ಕುತುಹೂಲಕಾರಿ ವಿಷಯವೇನೆಂದರೆ, ಈ ಸಲ ಗುಜರಾತಿನ ಡೆವಲಪ್‍ಮೆಂಟ್ ಮಾಡೆಲ್ ಬಗ್ಗೆ ಮತ್ತು ಅಭಿವೃದ್ಧಿಯ ವಿಷಯಗಳು ಮೋದಿಯ ಭಾಷಣದಲ್ಲಿ ಕಾಣಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಜಾತಿ ಮತ್ತು ಧರ್ಮದ ಬಗ್ಗೆ ಅವರ ಮಾತುಗಳು ಕೇಂದ್ರೀಕೃತವಾಗಿದ್ದವು.

ಭೋಪಾಲ್‍ದಿಂದ ಪ್ರಗ್ಯಾ ಠಾಕುರ್ ಅವರು ಸ್ಪರ್ಧಿಸುವುದು ತಿಳಿದ ನಂತರ ಧಾರ್ಮಿಕ ಧೃವೀಕರಣ ತಂತ್ರಗಾರಿಕೆ ಇನ್ನಷ್ಟು ಸ್ಪಷ್ಟವಾಯಿತು. ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಗ್ಯಾ ಠಾಕುರ್ ಮಾಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಲಾತೂರ್‍ನಲ್ಲಿ ಮಾತನಾಡುತ್ತ ಪ್ರಧಾನಿ ಹೇಳಿದ್ದು, “ಮೊದಲ ಬಾರಿ ಮತದಾನ ಮಾಡುವವರಿಗೆ ನಾನು ಕೇಳುವುದೇನೆಂದರೆ, ಬಾಲಾಕೋಟ್ ಏರ್‍ಸ್ಟ್ರೈಕ್‍ನ್ನು ಮಾಡಿದ ಶೂರಸೈನಿಕರಿಗೆ ನೀವು ನಿಮ್ಮ ಮತ ಸಮರ್ಪಿಸಬಲ್ಲಿರಾ? ಫುಲ್ವಾಮಾ ದುರಂತದಲ್ಲಿ ಮಡಿದ ಶೂರ ಹುತಾತ್ಮರ ಹೆಸರಲ್ಲಿ ನಿಮ್ಮ ಮೊದಲ ಮತ ಹಾಕುವುರಾ?” ಆದರೆ 2014ರಂತೆ ಜನರನ್ನು ತನ್ನ ªಮಾತುಗಳಿಂದ ಮೋದಿಯವರಿಗೆ ಹುರುಪು ತುಂಬಲು ಆಗಲಿಲ್ಲ ಅನ್ನುವುದು ನಿಜ.

ಎನ್‍ಡಿಏ ಮುಗ್ಗರಿಸುತ್ತಿರುವ ಸಂದರ್ಭದಲ್ಲಿಯೇ ಯುಪಿಏ ಕೂಡ ದಿಶಾಹೀನವೇ ಆಗಿತ್ತು. ಕಾಂಗ್ರೆಸ್ ಪಕ್ಷವು ಆಂತರಿಕ ಕಲಹಗಳನ್ನು ಎದುರಿಸುತ್ತಿತ್ತು ಹಾಗೂ ಅವುಗಳನ್ನು ನಿರ್ವಹಿಸಿ, ಬಿಜೆಪಿಯನ್ನು ಪ್ರಬಲವಾಗಿ ಎದುರಿಸಲು ಆಗಲಿಲ್ಲ. ಪಶ್ಚಿಮ ಮಹಾರಾಷ್ಟ್ರದಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಎನ್‍ಸಿಪಿಯಿಂದ ಕಣಕ್ಕಿಳಿಸಿದ ಶರದ್ ಪವಾರ್ ಅವರು ಮರಳಿ ತನ್ನ ಶಕ್ತಿಯನ್ನು ಪಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಇತ್ತ ಬಿಜೆಪಿಯ ಮೈತ್ರಿಪಕ್ಷವಾದ ಶಿವಸೇನೆ ಮತದಾರರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲಾಗುತ್ತಿದೆ ಎನ್ನುವ ಸಂಕೇತಗಳಿವೆ ಹಾಗೂ ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ-ಶಾ ಮತ್ತು ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿದ್ದ ಶಿವಸೇನೆ ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ತನ್ನ ಸೀಟುಗಳನ್ನು ಕಳೆದುಕೊಳ್ಳಬಹುದು ಎನ್ನುವ ಸಂಕೇತಗಳಿವೆ.

ರಾಜ್ ಠಾಕ್ರೆ ಫ್ಯಾಕ್ಟರ್
ಈ ಸಲದ ಚುನಾವಣಾ ಜ್ವರ ಕಾವೇರದೇ, ತುಂಬಾ ಆಯಾಸಕರವಾಗಿದ್ದ ಸಮಯದಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಮ್‍ಎನ್‍ಎಸ್) ನಾಯಕ ರಾಜ್ ಠಾಕ್ರೆಯ ಪ್ರವೇಶದಿಂದ ವಿರೋಧಪಕ್ಷಕ್ಕೆ ಬಲತುಂಬಿತಂತಾಯಿತು. ಎಮ್‍ಎನ್‍ಎಸ್ ತನ್ನ ಪಕ್ಷದಿಂದ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಹಾಗೂ ರಾಜ್ ಠಾಕ್ರೆಯವರು ಮೋದಿ-ಶಾ ವಿರುದ್ಧ ಗಟ್ಟಿಯಾಗಿ ಪ್ರಚಾರ ಮಾಡಿದರು. ಅವರ ಭಾಷಣಗಳು ತಮ್ಮ ವಾಕ್‍ಚಾತುರ್ಯದೊಂದಿಗೆ ಮೋದಿ-ಶಾ ಅವರ ಆಶ್ವಾಸನೆಗಳನ್ನು ಪರಿಶೀಲಿಸುವ ವೀಡಿಯೋ ಪ್ರೆಸೆಂಟೇಷನ್ ಕೂಡ ಹೊಂದಿರುತ್ತಿದ್ದವು. ರಾಜ್ ಠಾಕ್ರೆಯ ರ್ಯಾಲಿಗಳಲ್ಲಿ ಹಿಂದೆಂದೂ ಕಾಣದಷ್ಟು ಜನರು ಭಾಗವಹಿಸಿದರು ಹಾಗೂ ರಾಜ್ ಠಾಕ್ರೆಯ ಪ್ರಾಬಲ್ಯವಿರುವ ಮುಂಬಯಿ ನಾಶಿಕ್ ಪ್ರದೇಶದಲ್ಲಿ ಮತದಾರರನ್ನು ಬಿಜಪಿ ವಿರುದ್ಧ ಮತಚಲಾಯಿಸುವಂತೆ ಓಲೈಕೆಯಾಗಿರುವ ಸಾಧ್ಯತೆ ಇದೆ. ರಾಜ್ ಠಾಕ್ರೆಯ ಭಾಷಣದ ವಿಡಿಯೋಗಳು ಮತ್ತು ಅವರು ತೋರಿಸುತ್ತಿದ್ದ ವಿಡಿಯೋಗಳನ್ನು ಮಹಾರಾಷ್ಟ್ರದ ಹೊರಗೆ ಸಬ್‍ಟೈಟಲ್‍ಗಳನ್ನು ಹಾಕಿ ತೋರಿಸಲಾಗುತ್ತಿದೆ ಹಾಗು ಅದರಿಂದ ಎನ್‍ಡಿಏ ಹುಟ್ಟುಹಾಕಿದ ರಾಷ್ಟ್ರೀಯ ಸುರಕ್ಷತೆಯ ಕಥನಕ್ಕೆ ವಿರುದ್ಧದ ಕಥನವನ್ನು ಸೃಷ್ಟಿಸುವಂತೆ ಆಗಿದೆ.

ವಲಯಾವಾರು ಟ್ರೆಂಡ್‍ಗಳು
ಮಹಾರಾಷ್ಟ್ರವು ಐದು ಪ್ರಮುಖ ವಲಯಗಳನ್ನು ಹೊಂದಿದೆ; ವಿದರ್ಭ (10 ಲೋಕಸಭೆ ಕ್ಷೇತ್ರಗಳು), ಮರಾಠವಾಡಾ (8), ಉತ್ತರ ಮಹಾರಾಷ್ಟ್ರ(6), ಮುಂಬಯಿ-ಕೊಂಕಣ್(12) ಹಾಗೂ ಕೆಂದ್ರ/ಪಶ್ಚಿಮ ಮಹಾರಾಷ್ಟ್ರ(12), ಹೀಗೆ ಒಟ್ಟಾರೆ 48 ಲೋಕಸಭೆ ಕ್ಷೇತ್ರಗಳು. ವಿದರ್ಭವು ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ 2014ರಲ್ಲಿ ಮೋದಿ ಪ್ರಧಾನಿ ಆದ ನಂತರ ಮಹಾರಾಷ್ಟ್ರದ ಅಧಿಕಾರ ಕೇಂದ್ರವು ಪಶ್ಚಿಮ ಮಹಾರಾಷ್ಟ್ರದಿಂದ ವಿದರ್ಭಕ್ಕೆ ಸ್ಥಳಾಂತರಗೊಂಡಿತು. ಈ ಸಲ ಮೋದಿ ರ್ಯಾಲಿಗಳಲ್ಲಿ ಕಂಡುಬಂದ ನೀರಸ ಪ್ರತಿಕ್ರಿಯೆಯಿಂದ ಬಿಜೆಪಿ ಆತಂಕೊಂಡಿದೆ. 2014ರ ಚುನಾವಣೆಯಲ್ಲಿ ವಿದರ್ಭದ ಎಲ್ಲಾ ಸೀಟುಗಳಲ್ಲೂ ಎನ್‍ಡಿಏ ಗೆದ್ದಿತ್ತು. ಈ ವಲಯದ ಫಲಿತಾಂಶಗಳು ಕೃಷಿ ಬಿಕ್ಕಟ್ಟಿನ ಬಗ್ಗೆ ಬಿಜೆಪಿಗೆ ಒಂದು ಲಿಟ್ಮಸ್ ಟೆಸ್ಟ್ ಆಗಿ ಪರಿಮಣಿಸಲಿವೆ.

ಅದರಂತೆಯೇ, ರಾಜ್ಯದಲ್ಲಿ ಬರ ಮತ್ತು ಕೃಷಿ ಬಿಕ್ಕಟ್ಟಿನಿಂದ ಅತ್ಯಂತ ಹೆಚ್ಚು ಪೀಡಿತವಾದ ಮರಾಠವಾಡದಲ್ಲೂ ಏನಾಗುವುದೆನ್ನುವುದೂ ಬಿಜೆಪಿಯ ಆಡಳಿತದ ಪರೀಕ್ಷೆಯಾಗಿದೆ. ಉತ್ತರ ಮಹಾರಾಷ್ಟ್ರದಲ್ಲೂ ರೈತರು ಮತ ಚಲಾಯಿಸುವಾಗ ಕೃಷಿ ಬಿಕ್ಕಟ್ಟೇ ಪ್ರಧಾನ ಪಾತ್ರ ವಹಿಸಲಿದೆ. ಇದರ ಹೊರತಾಗಿ ಈ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯಿದೆ ಹಾಗೂ ಆದಿವಾಸಿ ಮತ್ತು ಧನಗರ್ (ಕುರುಬರು) ಅವರ ನಡುವಿನ ಸಂಘರ್ಷದ ವಿಷಯಗಳೂ ನಿರ್ಣಾಯಕ ಪಾತ್ರ ವಹಿಸಲಿವೆ. ಮರಾಠರಿಗೆ 16% ಮೀಸಲಾತಿ ನೀಡುವ ಬಿಜೆಪಿಯ ನಿರ್ಣಯದಿಂದ ಇಲ್ಲಿಯ ಓಬಿಸಿ ಜನರು ಮುನಿಸಿಕೊಂಡಿದ್ದಾರೆ, ಈ ಅಂಶ ಕೇಂದ್ರ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ನಿರ್ಣಾಯಕವಾಗಬಹುದಾಗಿದೆ. ಎನ್‍ಸಿಪಿಯ ಛಗನ್ ಭುಜಬಲ್ ಅವರು ಒಬಿಸಿ ಸಮುದಾಯದ ಮುಖವಾಗಿದ್ದು, ಈ ಸನ್ನಿವೇಶವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಸಾಧ್ಯವಾಷ್ಟು ಪ್ರಯತ್ನ ಮಾಡಿದ್ದಾರೆ. ನಿರುದ್ಯೋಗದ ಸಮಸ್ಯೆ ಎಲ್ಲಾ ವಲಯಗಳಲ್ಲೂ ಇದ್ದೇ ಇದೆ. ನಗರಪ್ರದೇಶದ ಕ್ಷೇತ್ರಗಳ ಹೆಚ್ಚಿನ ಭಾಗ ಬಿಜೆಪಿಗೆ ಬೆಂಬಲ ನೀಡಿದಂತೆ ಕಂಡುಬಂದರೂ, ಗ್ರಾಮೀಣ ಭಾಗದ ಮತದಾರ ಬಿಜೆಪಿಯಿಂದ ಬಹಳ ದೂರ ಸರಿದಿದ್ದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್‍ಗೆ ಗಟ್ಟಿಯಾದ ನಾಯಕತ್ವ ಇಲ್ಲದಿರುವುದು ಹಾಗೂ ಮೈತ್ರಿ ಮಾಡಿಕೊಳ್ಳುವಲ್ಲಿ ಇತರ ಪಕ್ಷಗಳೊಂದಿಗೆ ಸರಿಯಾಗಿ ಕೋ-ಆರ್ಡಿನೇಟ್ ಮಾಡುವಲ್ಲಿ ಸಫಲಾಗಿಲ್ಲ ಹಾಗಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಶರದ್ ಪವಾರ್ ಮತ್ತು ಅವರ ಎನ್‍ಸಿಪಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಮುನ್ನೋಟ
ಸಂಖ್ಯೆಗಳನ್ನಷ್ಟೇ ನೋಡಬೇಕೆಂದರೆ, ಬಿಜೆಪಿ-ಶಿವಸೇನೆಯ ಸಂಖ್ಯೆ 30ಕ್ಕಿಂತ ಕೆಳಗಿಳಿಯಲಿದೆ ಹಾಗೂ ಕಾಂಗ್ರೆಸ್-ಎನ್‍ಸಿಪಿ 20ನ್ನು ಕ್ರಾಸ್ ಮಾಡಬಹುದಾಗಿದೆ. ಈ ಚುನಾವಣೆಯಲ್ಲಿ ಜನರ ಪ್ರಮುಖ ವಿಷಯಗಳು ಹಿನ್ನೆಲೆಗೆ ಸರಿದಿದ್ದಂತೂ ಸ್ಪಷ್ಟ. ಬಿಜೆಪಿ-ಶಿವಸೇನೆ ಮೈತ್ರಿಕೂಟವು ಹಿಂದುತ್ವ ಮತ್ತು ರಾಷ್ಟ್ರೀಯ ಸುರಕ್ಷತೆಯ ಮೇಲೆಯೇ ತನ್ನ ರಾಜಕೀಯವನ್ನು ಕೇಂದ್ರೀಕರಿಸಿದರೆ, ಕಾಂಗ್ರೆಸ್-ಎನ್‍ಸಿಪಿ ಕೂಟವು, ಎಮ್‍ಎನ್‍ಎಸ್‍ನ ಸಹಾಯದೊಂದಿಗೆ ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟನ್ನು ಮುನ್ನೆಲೆಗೆ ತರಲು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಷ್ಟೆಲ್ಲಾ ಹೇಳಿದ ನಂತರವೂ, ಜನಾದೇಶದ ಮತ್ತು ರಾಜಕೀಯ ವಾತಾವರಣದ ಸ್ಪಷ್ಟ ಸೂಚನೆಗಳು ಕಾಣುತ್ತಿಲ್ಲವಾದುದರಿಂದ ಮಹಾರಾಷ್ಟ್ರದ ಭವಿಷ್ಯ ನಿಂತಿರುವುದು ಅಸ್ಥಿರವಾದ ನೆಲದ ಮೇಲೆಯೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...