Homeಮುಖಪುಟಆ ದಿನಗಳು: ಬಿರುಬಿಸಿಲಿನ ನೆಲದಲ್ಲಿ ಪ್ರಭುತ್ವಕ್ಕೆ ಸವಾಲಾಗಿದ್ದ ಬಾಬಾಗೌಡ ಪಾಟೀಲರು

ಆ ದಿನಗಳು: ಬಿರುಬಿಸಿಲಿನ ನೆಲದಲ್ಲಿ ಪ್ರಭುತ್ವಕ್ಕೆ ಸವಾಲಾಗಿದ್ದ ಬಾಬಾಗೌಡ ಪಾಟೀಲರು

ಆಗಿನ್ನೂ ಬೆಳೆಯುತ್ತಿದ್ದ ಸಂಘಟನೆಯ ಎರಡನೇ ಹಂತದ ನಾಯಕರಾಗಿದ್ದ ಬಾಬಾಗೌಡ ಪಾಟೀಲರು ಒಂದೇ ಸಲಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ.

- Advertisement -
- Advertisement -

ಬಾಬಾಗೌಡ ಪಾಟೀಲರು 1998ರ ಸುಮಾರಿಗೆ ಬಿಜೆಪಿ ಸೇರಿದರು, ಸಚಿವರಾದರು ಮತ್ತು ಈ ನಂತರದಲ್ಲಿ ಮತ್ತೆ ರೈತ ಹೋರಾಟಕ್ಕೆ ಬೆಂಬಲವಾಗಿ ಓಡಾಡಿದರು ಎಂಬುದನ್ನು ಬದಿಗಿಟ್ಟು, ಅವರ ಆರಂಭಿಕ ಹೋರಾಟಗಳ ಬಗ್ಗೆ ನೋಡೋಣ.

ಕರ್ನಾಟಕದಲ್ಲಿ ಚಳುವಳಿ ಕಟ್ಟುತ್ತಿರುವ ಎಲ್ಲ ಸಂಘಟನೆಗಳಿಗೂ ಇದರಲ್ಲಿ ಒಂದಿಷ್ಟು ವಿಷಯ ಇವೆ ಅನಿಸುತ್ತದೆ.

‘ಅಲ್ರೀ, ಟೊಮಾಟೋ ಸಾಸ್‌ಗೆ ಅವರೇ ರೇಟ್ ಫಿಕ್ಸ್ ಮಾಡ್ತಾರ. ಅದಕ್ಕ ಜನ ಮಾತಿಲ್ಲದ ರೊಕ್ಕ ಕೊಟ್ ತಗೋತಾರ. ಇನ್ಮ್ಯಾಲ ಟೊಮೆಟೊಕ್ಕೆ ನಾವಾ ರೇಟು ಫಿಕ್ಸ್ ಮಾಡೋ ಹಂಗಾಗಬೇಕು’ ಹೀಗೆ ಉತ್ತರ ಕರ್ನಾಟಕದ ಅದರಲ್ಲೂ ಮುಖ್ಯವಾಗಿ ಮುಂಬೈ ಕರ್ನಾಟಕದಲ್ಲಿ ಬಾಬಾಗೌಡರು ಅಂದು ಕೆಂಡದುಂಡೆಯಂತೆ ಗುಡುಗುತ್ತಿದ್ದರು. ಶಾಲಾ ಬಾಲಕರಾಗಿದ್ದಾಗ ಮತ್ತು ‘ವಕ್ಕಲ್ತನ’ ಹಿನ್ನೆಲೆಯ ನಮಗೆಲ್ಲ ಇದು ರೋಮಾಂಚನ ಸೃಷ್ಟಿಸಿದ್ದಲ್ಲದೇ, ಕ್ರಮೇಣ ಗ್ರಾಮೀಣ ಭಾರತಕ್ಕೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಿತ್ತು.

ನೀವು ಗಮನಿಸಿ ನೋಡಿ, ಈಗೆಲ್ಲಾದರೂ ರಾಕೇಶ್ ಟಿಕಾಯತ್‌ರು ಚುನಾವಣೆಗೆ ನಿಂತರೆ ಗೆಲ್ಲಬಹುದಾ ಎಂಬ ಪ್ರಶ್ನೆಯನ್ನು ಊಹಿಸಿಕೊಳ್ಳಿ. ಉತ್ತರ ಕನ್ನಡದ ಸಂಸತ್ ಚುನಾವಣೆಗೆ ನಿಂತಾಗ ಶಿವರಾಮ ಕಾರಂತರ ಪರ ಎಲ್ಲ ಪ್ರಗತಿಪರ ಸಂಘಟನೆಗಳ ಬೆಂಬಲವಿತ್ತು. ಆದರೆ, ಫಲಿತಾಂಶ ಬಂದಾಗ ಕಾರಂತರು ಮೂರನೇ ಸ್ಥಾನದಲ್ಲಿದ್ದರು.

ಮತ್ತೆ ಸಂಘಟನೆಗಳ ವಿಷಯಕ್ಕೆ ಬರೋಣ, ಈ ಸಲ ಆಮ್ ಆದ್ಮಿ, ಎಸ್‌ಡಿಪಿಐ, ಕರ್ಮಾಟಕ ರಾಷ್ಟ್ರೀಯ ಸಮಿತಿ ಮುಂತಾದ ಸಂಘಟನೆಗಳು ಇತ್ತೀಚಿನ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾರಿ ಅಲ್ಲದಿದ್ದರೂ ಗಮನಾರ್ಹ ಸಾಧನೆ ಮಾಡಿವೆ.

ಆದರೆ, ಆಗಿನ್ನೂ ಬೆಳೆಯುತ್ತಿದ್ದ ಸಂಘಟನೆಯ ಎರಡನೇ ಹಂತದ ನಾಯಕರಾಗಿದ್ದ ಬಾಬಾಗೌಡ ಪಾಟೀಲರು ಒಂದೇ ಸಲಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ.

ಬೆಳಗಾವಿಯ ಬೈಲಹೊಂಗಲದ ಚಿಕ್ಕ ಬಾಗೇವಾಡಿಯ ಪಾಟೀಲರು ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಅದಕ್ಕೆ ಅಂಟಿಕೊಂಡ ಧಾರವಾಡ ಗ್ರಾಮೀಣ ಕ್ಷೇತ್ರ ಎರಡರಲ್ಲೂ ಗೆಲ್ಲುತ್ತಾರೆ! ನಂತರ ಧಾರವಾಡ ಗ್ರಾಮೀಣದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿ ಗೆಲ್ಲುಲು ಸಹಕರಿಸುತ್ತಾರೆ.

ತಾತ್ವಿಕ ರೂಪು ಮತ್ತು ತಳಮಟ್ಟದ ಸಂಘಟನೆ

ಪ್ರೊಫೆಸರ್ ನಂಜುಂಡಸ್ವಾಮಿ ರಾಜ್ಯದಲ್ಲಿ ರೈತ ರೈತ ಸಂಘಟನೆ ಕಟ್ಟಿದ ಪಿತಾಮಹ ಎಂಬುದರಲ್ಲಿ ಎರಡು ಮಾತಿಲ್ಲ ಮತ್ತು ಇರಲೇಬಾರದು. ಆದರೆ ಸಂಘಟನೆ ಮಾಡುವ ಹೊಣೆ ಕೆಳಮಟ್ಟದ ಕಾರ್ಯಕರ್ತರ ಮೇಲಿರುತ್ತದೆ. ‘ಬೈಲಹೊಂಗಲದ ಚಿಕ್ಕ ಬಾಗೆವಾಡಿಯ ಭೂ ಮಾಲೀಕ ಕುಟುಂಬದ ಹಿನ್ನೆಲೆಯ ಬಾಬಾಗೌಡ ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಅದ್ಭುತವಾಗಿ ರೈತರನ್ನು ಸಂಘಟಿಸಿದರು’ ಎನ್ನುತ್ತಾರೆ ಪತ್ರಕರ್ತ ರುಷಿಕೇಶ್ ದೇಸಾಯಿ.

‘ತಾಲೂಕು ಕಚೇರಿಗಳಿಗೇ ಜನ ಹೋಗಲು ಹೆದರುತ್ತಿದ್ದ ಕಾಲವದು. ಬಾಬಾಗೌಡರ ಗುಡುಗು ಹೇಗಿತ್ತೆಂದರೆ ಜನ ಸೀದಾ ತಹಸೀಲ್ದಾರ್ ಎದುರು ನಿಂತು ಪ್ರಶ್ನೆ ಕೇಳಲು ಆರಂಭಿಸಿದರು. ಊರೂರಲ್ಲಿ ‘ಗ್ರಾಮದ ಜನರ ಅನುಮತಿ ಇಲ್ಲದೇ ಭ್ರಷ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡುಗಳು ಕಾಣಿಸಿಕೊಂಡವು ಎನ್ನುತ್ತಾರೆ ಬೆಳಗಾವಿ- ಧಾರವಾಡಗಳಲ್ಲಿ ಹಿಂದೆಲ್ಲ ಅನೇಕ ಚಳುವಳಿಗಳನ್ನು ನಡೆಸಿದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಾ. ವೆಂಕನಗೌಡ ಪಾಟೀಲರು.

“ಒಂದು ನೋಟು, ಒಂದು ರೊಟ್ಟಿ, ಒಂದು ವೋಟು” ಎಂದು ಚುನಾವಣೆ ಮಾಡಿ ಅವರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರು ಎಂಬುದು ಈಗಿನ ಚಳವಳಿಗಳಿಗೆ ಸ್ಫೂರ್ತಿ ಆಗುತ್ತದೆ ಎನ್ನುತ್ತಾರೆ ಚಳುವಳಿ ಹಿನ್ನೆಲೆಯ ಡಾ. ಪಾಟೀಲ್…

ರೈತ ಸಂಘಟನೆಯಲ್ಲಿ ಉಂಟಾದ ಭಿನ್ನಮತಗಳು, ಮುಂದೆ ಬಾಬಾಗೌಡರು ಬಿಜೆಪಿ ಸೇರಿದ ಸ್ಥಿತಿ ಈ ಬಗ್ಗೆ ಬೇಕೆಂತಲೇ ಇಲ್ಲಿ ಚರ್ಚೆ ಮಾಡಿಲ್ಲ. ಅದು ಈಗಿನ ಅಗತ್ಯವೂ ಅಲ್ಲ. ಬಾಬಾಗೌಡ ಪಾಲೀಲರಿಗೆ ಶ್ರಧ್ದಾಂಜಲಿ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...