Homeನ್ಯಾಯ ಪಥಇಸ್ರೇಲ್‌ಗೆ ಹೊಸ ಪ್ರಧಾನಿ; ಪ್ಯಾಲೆಸ್ಟೇನಿಯನ್ನರು ಬೆಂಕಿಯಿಂದ ಬಾಣೆಲೆಗೆ?

ಇಸ್ರೇಲ್‌ಗೆ ಹೊಸ ಪ್ರಧಾನಿ; ಪ್ಯಾಲೆಸ್ಟೇನಿಯನ್ನರು ಬೆಂಕಿಯಿಂದ ಬಾಣೆಲೆಗೆ?

- Advertisement -
- Advertisement -

ಕಳೆದ ಮೇ ತಿಂಗಳಿನಲ್ಲಿ ಹನ್ನೊಂದು ದಿನದ ಕಾಲ ಗಾಜಾ ವಿರುದ್ಧ ನಡೆದ ಏಕಪಕ್ಷೀಯ ಇಸ್ರೇಲಿನ ಕ್ರೌರ್ಯದ ನಂತರದ ಇದೇ 13ನೇ ತಾರೀಕು ಇಸ್ರೇಲಿನಲ್ಲಿ ಹೊಸ ಮೈತ್ರಿಕೂಟ ರಚನೆಯಾಗಿದೆ. ಜೂನ್ ತಿಂಗಳ 13ನೇ ತಾರೀಕು ಇಸ್ರೇಲಿನ ನೂತನ ಪ್ರಧಾನಮಂತ್ರಿಯಾಗಿ ನಫ್ತಾಲಿ ಬೆನೆಟ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಪ್ರಧಾನಿಯಾಗಿದ್ದ ಬೆಂಜಮಿನ್ ನೇತನ್ಯಾಹು ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಬೆಂಜಮಿನ್ ನೇತನ್ಯಾಹು ಅವರ ದೀರ್ಘ ಮತ್ತು ವಿಭಜಕ ಆಳ್ವಿಕೆಯು ಅಧಿಕೃತವಾಗಿ ಕೊನೆಗೊಂಡಿದೆ. ಆದರೆ, ವ್ಯಾಪಕವಾಗಿ ವಿಭಿನ್ನವಾದ ಸಿದ್ಧಾಂತಗಳನ್ನು ಹೊಂದಿರುವ ನೇತನ್ಯಾಹು ವಿರೋಧಿ ಪಡೆಗಳಿಂದ ಒಟ್ಟಿಗೆ ಸೇರಿಸಲ್ಪಟ್ಟ ಒಂದು ಅನಿಶ್ಚಿತ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯೆಶ್ ಅತಿದ್ ಲ್ಯಾಪಿಡಾ, ಯಮಿನಾ ಪಕ್ಷ, ಕಹೋಲ್-ಲವನ್ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್, ಅವರ್ ಹೋಂ ಇಸ್ರೇಲ್‌ನ ಅವಿಗ್ಡೋರ್ ಲೈಬರ್ಮನ್, ನ್ಯೂ ಹೋಪ್, ಎಡಪಂಥೀಯ ಪಕ್ಷಗಳಾದ ಲೇಬರ್, ಮೆರೆಟ್ಜ್ ಮತ್ತು ಅರೇಬಿಕ್ “ರಾಮ್” ಎಂಬ ಒಟ್ಟು ಎಂಟು ಪಕ್ಷಗಳು ಸೇರಿ ಈ ಮೈತ್ರಿಕೂಟವನ್ನು ರಚಿಸಿವೆ.

ಕಳೆದ ಹನ್ನೆರಡು ವರ್ಷಗಳಿಂದ, ಅದರಲ್ಲೂ ಮುಖ್ಯವಾಗಿ ಕಳೆದ ಎರಡು ವರ್ಷಗಳಿಂದ ಒಂದಲ್ಲ ಒಂದು ರೀತಿಯಿಂದ ಅನಿಶ್ಚಿತತೆಯಿಂದ, ಯುದ್ಧದಾಹಿ, ಭ್ರಷ್ಟಾಚಾರಗಳಲ್ಲಿ ಸಿಲುಕಿದ್ದ ಪ್ಯಾಲೆಸ್ಟೇನಿಯನ್ನರ ಮೇಲೆ ನಿರಂತರ ಕ್ರೌರ್ಯವನ್ನು ನಡೆಸಿಕೊಂಡೇ ಸಮ್ಮಿಶ್ರ ಸರ್ಕಾರವನ್ನು ನೇತನ್ಯಾಹು ಮುನ್ನಡೆಸಿದ್ದರು. ಇರಾನ್ ವಿರುದ್ಧ ಯುದ್ಧಕ್ಕಾಗಿ ಪರಿತಪಿಸುತ್ತಿದ್ದ ನೇತನ್ಯಾಹು ಪ್ರಾದೇಶಿಕ ಅಸ್ಥಿರತೆ ಮತ್ತು ಬಿಕ್ಕಟ್ಟನ್ನು ಇನ್ನಷ್ಟು ವಿಸ್ತರಿಸಿದರು. ಒಬಾಮ ಮತ್ತು ಟ್ರಂಪ್ ಅಧಿಕಾರದ ಅವಧಿಯಲ್ಲಿ ಗಾಜಾ, ಜೆರುಸಲೆಮ್ ಮತ್ತು ವೆಸ್ಟ್ ಬ್ಯಾಂಕ್‌ನ ತನ್ನ ಸೆಟ್ಟ್ಲರ್ ಕಾಲೋನಿಯಲಿಸಂಅನ್ನು (ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿ ಪ್ಯಾಸ್ಟೇನಿಯನ್ನರ ಭೂಪ್ರದೇಶವನ್ನು ಕಬಳಿಸಿಕೊಂಡು ಇಸ್ರೇಲಿ ಪ್ರದೇಶವನ್ನು ವಿಸ್ತರಿಸಿಕೊಳ್ಳುವುದು) ಇನ್ನಷ್ಟು ತೀವ್ರವಾಗಿ ಮುಂದುವರಿಸಲಾಯಿತು. ಟ್ರಂಪ್ ಅಧಿಕಾರದಲ್ಲಿ ಏಕಪಕ್ಷೀಯವಾಗಿ ಜೆರುಸಲೆಮ್‌ಅನ್ನು ಇಸ್ರೇಲಿನ ರಾಜಧಾನಿಯನ್ನಾಗಿ ಘೋಷಿಸಿಕೊಂಡು ಸಿರಿಯಾದಿಂದ ವಶಪಡಿಸಿಕೊಂಡಿದ್ದ ಪ್ರದೇಶ ಗೋಲನ್ ಹೈಟ್ಸ್‌ಅನ್ನು ತನ್ನದೆಂದು ಘೋಷಿಸಿಕೊಂಡರು. ಸಿರಿಯಾ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಶಕ್ತಿಗಳಿಗೆ ಕುಮ್ಮಕ್ಕು ಮತ್ತು ರಕ್ಷಣೆ ನೀಡುತ್ತಾ ಸಿರಿಯಾ ಮತ್ತು ಇರಾಕ್ ದೇಶದ ಮೇಲೆ ಈಗಲೂ ಕ್ಷಿಪಣಿ ಮತ್ತು ಯುದ್ಧ ವಿಮಾನಗಳ ಮೂಲಕ ದಾಳಿ ನಡೆಸುತ್ತಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ.

ಬೆಂಜಮಿನ್ ನೇತನ್ಯಾಹು

ನೇತನ್ಯಾಹು ಅಧಿಕಾರಾವಧಿಯಲ್ಲಿ ಒಟ್ಟು ನಾಲ್ಕು ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೇನಿಯರನ್ನು ಮಾರಣಹೋಮ ನಡೆದ ವರದಿಗಳಿವೆ. ಅದರಲ್ಲಿ 800ಕ್ಕೂ ಹೆಚ್ಚಿನ ಸಂಖ್ಯೆ ಮಕ್ಕಳದ್ದೇ. ಅಸಂಖ್ಯಾತ ಅನಾಥರನ್ನು ಸೃಷ್ಟಿಸಿರುವುದಲ್ಲದೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಾಶಗೊಳಿಸಲಾಗಿದೆ. ಕಳೆದ ತಿಂಗಳು ನೆಡೆದ ಗಾಜಾ ಮಾರಣಹೋಮದಲ್ಲಿ ಒಟ್ಟು 260ಕ್ಕೂ ಮೇಲ್ಪಟ್ಟ ಪ್ಯಾಸ್ಟೇನಿಯನ್ನರು ಹತರಾಗಿದ್ದಾರೆ. ಅದರಲ್ಲಿ 60ಕ್ಕೂ ಹೆಚ್ಚು ಮಕ್ಕಳೇ. ಅಂತಾರಾಷ್ಟ್ರೀಯ ಸುದ್ದಿವಾಹಿನಿಗ (ಅಲ್ ಜಜಿರಾ, ಅಸೋಸಿಯೇಟೆಡ್ ಪ್ರೆಸ್ ಸೇರಿ) ಹದಿನಾಲ್ಕು ಅಂತಸ್ತಿನ ಕಟ್ಟಡವನ್ನು ಧ್ವಂಸಗೊಳಿಸಿ, ಕಂಡುಕೇಳರಿಯದ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಿರಾಯುಧರಾದ ಪ್ಯಾಲೆಸ್ಟೇನಿಯನ್ನರ ಮೇಲೆ ಬಳಸಲಾಗಿದೆ. ಮಾರ್ಚ್ 23ರ ಚುನಾವಣೆ ನಂತರದ ಫಲಿತಂಶವನ್ನು ತಿಳಿದ ನೇತನ್ಯಾಹು, ಟ್ರಂಪ್ ಮಾಡಿದ ಹಾಗೆ ಚುನಾವಣಾ ಅಕ್ರಮದ ಬಗ್ಗೆ ಮಾತನಾಡತೊಡಗಿ ನಂತರ ಇಸ್ರೇಲ್‌ಅನ್ನು ಯುದ್ಧದೆಡೆಗೆ ಕೊಂಡೊಯ್ಯಲು ಪ್ರಯತ್ನಿಸಿ ಗಾಜಾ ಮೇಲೆ ಮೇ ತಿಂಗಳಿನಲ್ಲಿ ಆಕ್ರಮಣ ನಡೆಸಿದ.

“ನಾವು ಪ್ರಪಾತಕ್ಕೆ ಮುಂಚಿತವಾಗಿ ರೈಲನ್ನು ನಿಲ್ಲಿಸಿದ್ದೇವೆ” ಎಂದು ಹೇಳಿರುವ ನಫ್ತಾಲಿ ಬೆನೆಟ್ “ವಿವಿಧ ನಾಯಕರು, ಎಲ್ಲಾ ಭಾಗದ ಜನರು ಸೇರಿ, ಈ ಹುಚ್ಚುತನವನ್ನು ನಿಲ್ಲಿಸುವ ಸಮಯ ಬಂದಿದೆ” ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಈಗ ಅಧಿಕಾರಕ್ಕೆ ಬಂದಿರುವ ಒಕ್ಕೂಟ ತೀವ್ರ ಬಲಪಂಥೀಯ ಪಕ್ಷಗಳನ್ನೂ ಒಳಗೊಂಡು, ಮಧ್ಯ ಮತ್ತು ಎಡಪಕ್ಷಗಳನ್ನೂ ಒಳಗೊಂಡಿದೆ. ಈ ಸಮ್ಮಿಶ್ರ ಸರ್ಕಾರದ ಒಪ್ಪಂದದ ಪ್ರಕಾರ ಮೊದಲಾರ್ಧದಲ್ಲಿ ಯಮಿನ ಪಕ್ಷದ ಬೆನೆಟ್ ಪ್ರಧಾನಿಯಾದರೆ, ದ್ವಿತೀಯಾರ್ಧದಲ್ಲಿ ಹೇಳಿಕೊಳ್ಳಲು ಎಡವೂ ಅಲ್ಲದ ಬಲವೂ ಅಲ್ಲದ ಮಧ್ಯಮ ವಾದದ ಲಿಪಿಡ್ ಪ್ರಧಾನಿಯಾಗಿರುತ್ತಾರೆ. ಆದರೆ ಇರದಲ್ಲಿ ಪ್ರಶ್ನೆ ಬರುವುದೇ ಸ್ವತಃ ತೀವ್ರ ರಾಷ್ಟ್ರೀಯವಾದಿ ಮತ್ತು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡು ರಾಷ್ಟ್ರ ಕಲ್ಪನೆಯ ವಿರುದ್ಧವಾಗಿರುವ ಪ್ರಧಾನಿ ನಫ್ತಾಲಿ ಬೆನೆಟ್ ನಿಲುವುಗಳು, ನೇತನ್ಯಾಹು ಅವರ ವಿಸ್ತಾರವಾದಿ ನೀತಿ-ನಿಲುವುಗಳಿಗಿಂತ ಹೇಗೆ ವಿಭಿನ್ನವಾಗಿರಲು ಸಾಧ್ಯ? 1967ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಇಸ್ರೇಲ್‌ಗೆ ವಲಸೆ ಬಂದ ಅಮೆರಿಕನ್ ಪೋಷಕರಿಗೆ ಜನಿಸಿದ ಬೆನೆಟ್, ಬಲಪಂಥೀಯ ಅಲ್ಟ್ರಾ ನ್ಯಾಷನಲಿಸ್ಟ್ ಆಗಿದ್ದು, ಅವರು ಪ್ಯಾಲೆಸ್ಟೇನಿಯನ್ ರಾಜ್ಯವನ್ನು ತೀವ್ರವಾಗಿ ವಿರೋಧಿಸುತ್ತಾರೆ.

ಯಹೂದಿಗಳಿಗೆ ಟೆಂಪಲ್ ಮೌಂಟ್ ಎಂದು ಕರೆಯಲ್ಪಡುವ ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಪೂಜ್ಯ ನೋಬಲ್ Sanctuary ಮಸೀದಿ ಸಂಕೀರ್ಣದ ಮೇಲೆ ಯಹೂದಿ ನಿಯಂತ್ರಣವನ್ನು ಹೆಚ್ಚಿಸಲು ಬೆನೆಟ್ ವಾದಿಸುತ್ತಾರೆ. ಇದು ಇಸ್ಲಾಮಿನ ಮೂರನೇ ಪವಿತ್ರ ತಾಣವಾಗಿದೆ. 2013ರಲ್ಲಿ ಬೆನೆಟ್ “ನಾವು ಭಯೋತ್ಪಾದಕರನ್ನು ಸೆರೆಹಿಡಿದರೆ, ನಾವು ಅವರನ್ನು ಕೊಲ್ಲಬೇಕು… ನನ್ನ ಜೀವನದಲ್ಲಿ ನಾನು ಈಗಾಗಲೇ ಸಾಕಷ್ಟು ಅರಬ್ಬರನ್ನು ಕೊಂದಿದ್ದೇನೆ – ಮತ್ತು ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂಬ ಹೇಳಿಕೆ ನೀಡಿದ್ದರು. ಅಕ್ಟೋಬರ್ 2018ರ ಹೇಳಿಕೆಯಲ್ಲಿ ತಾವು ರಕ್ಷಣಾ ಮಂತ್ರಿಯಾಗಿದ್ದರೆ “ಇಸ್ರೇಲ್ ಮತ್ತು ಗಾಜಾ ನಡುವಿನ ಗಡಿಯನ್ನು ದಾಟಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ಟೇನಿಯರನ್ನು ಕೊಲ್ಲಲು ಗುಂಡು ಆದೇಶ ನೀಡುತ್ತೇನೆ ಮತ್ತು ಪ್ಯಾಲೆಸ್ಟೇನಿಯನ್ನರ ಮಕ್ಕಳು ಮಕ್ಕಳಲ್ಲ ಭಯೋತ್ಪ್ಪಾದಕರು” ಎಂಬ ಹೇಳಿಕೆಯು ನೀಡಿದ್ದ.

ಇಸ್ರೇಲ್ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಇರುವ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುತ್ತದೆ. ಆದರೆ, ಅದರ ದುರ್ವರ್ತನೆಗೂ ಮತ್ತು ಪ್ರಜಾಪ್ರಭುತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬ್ರಿಟನ್ ಮತ್ತು ಅಮೆರಿಕ ಕುಮ್ಮಕ್ಕಿನಿಂದ ಸೃಷ್ಟಿಯಾದ ಇಸ್ರೇಲ್ ದೇಶ ಅಲ್ಲಿನ ಮೂಲ ನಿವಾಸಿಗಳಾದ ಪ್ಯಾಲೆಸ್ಟೀನರ ಮೇಲೆ ತನ್ನ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ, ದೌರ್ಜನ್ಯ ನಡೆಸಿ, ತನ್ನ ವಿಸ್ತೀರ್ಣವನ್ನು ಬೆಳೆಸುತ್ತಾ ಹೋಗಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವನ್ನು ಅಮೆರಿಕ ಮತ್ತು ಯೂರೋಪಿನ ರಾಷ್ಟ್ರಗಳು ಇಸ್ರೇಲಿಗೆ ಪೂರೈಸುತ್ತವೆ. ಟ್ರಂಪ್ ಅಧಿಕಾರದಿಂದ ಕೆಳಗಿಳಿದ ನಂತರ ಬೈಡೆನ್ ಅಧಿಕಾರ ಹೇಗೆ ಟ್ರಂಪ್ ನೀತಿಗಳನ್ನೇ ಅನುಸರಿಸುತ್ತಿವೆಯೋ ಹಾಗೆಯೇ ನೇತನ್ಯಾಹು ನಂತರ ಬೆನೆಟ್ ಅದೇ ಆಕ್ರಮಣಕಾರಿ

ಯುದ್ಧದಾಹಿ ನೀತಿಗಳನ್ನು ಅನುಸರಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪ್ರಧಾನಿ ಮೋದಿಯ ವಿಶ್ವಾಸಿಗಳೆಂಬ ಹೆಗ್ಗಳಿಕೆಯ ಜಗತ್ತಿನ ಬಲಪಂಥೀಯ ಸರ್ಕಾರಗಳು (ಟ್ರಂಪ್, ನೇತನ್ಯಾಹು) ಒಂದರ ನಂತರ ಒಂದು ಪತನವಾಗುತ್ತಿದ್ದರೂ ಅದರಿಂದ ತೆರವಾದ ಜಾಗವನ್ನು ತುಂಬಲು ಜನಪರವಾದ ಸಿದ್ಧಾಂತವುಳ್ಳ ಪಕ್ಷಗಳ-ರಾಜಕಾರಣದ ಕೊರತೆಯಿಂದ ಅದೇ ರೀತಿಯ ತೋಳಗಳು ಅಧಿಕಾರಕ್ಕೇರುತ್ತಿದ್ದಾರೆ. ಇದರಿಂದ ಭಾರತವು ಪಾಠ ಕಲಿಯುತ್ತದೆಯೇ ಅಥವಾ ಅದೇ ತಪ್ಪನ್ನು ಮುಂದುವರೆಸುತ್ತದೆಯೇ ಕಾದು ನೋಡಬೇಕು.

ಭರತ್ ಹೆಬ್ಬಾಳ

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


ಇದನ್ನೂ ಓದಿ: ನಿಯಂತ್ರಿಸಲು ಸಾಧ್ಯವಾಗದ ಎಲ್ಲವನ್ನೂ ಮೋದಿ ಸರ್ಕಾರ ಧ್ವಂಸ ಮಾಡುತ್ತಿದೆ: ಮಮತಾ ಬ್ಯಾನರ್ಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇದು ಯಾವ ವಿಸ್ತಾರವಾದ ಚೀನಾ ತರ ವಿಸ್ತಾರ ಮಾಡ್ಬೇಕು ಚೀನಾ ನೆಲದಲ್ಲಿ ಈ ರೀತಿ ಬರದಿದ್ದರೆ ನಿಮ್ಮ ಸ್ವಾತಂತ್ರ ಗೊತ್ತಾಗೋದು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...