HomeUncategorizedಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

ಹೊನ್ನಿನೊಳಗೊಂದೊರೆಯನ್ನೂ ಬಯಸದ ಬಸವಣ್ಣನವರು ಹಾಗೂ ಅಕ್ಷಯ ತೃತೀಯ ಎಂಬ ಮೋಸ !

- Advertisement -
| ವಿಶ್ವಾರಾಧ್ಯ ಸತ್ಯಂಪೇಟೆ |
ಪ್ರತಿ ವರ್ಷ ಅಕ್ಷಯ ತೃತೀಯ ದಿನ ಬಂತೆಂದರೆ ಬಂಗಾರ ಮಾರಾಟ ಮಾಡುವವರಿಗೂ ಹಾಗೂ ತೆಗೆದುಕೊಳ್ಳುವವರಿಗೂ ಖುಷಿಯೋ ಖುಷಿ. ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯ ದಿನದಂದು ಯಾರು ಬಂಗಾರ ಖರೀದಿ ಮಾಡುತ್ತಾರೊ ಅವರ ಮನೆಯಲ್ಲಿ ಬಂಗಾರದ ಹೊಳೆಯೇ ಹರಿಯುತ್ತದೆ ಎಂಬುದೊಂದು ನಂಬಿಕೆ. ಈ ನಂಬಿಕೆಗೆ ಯಾವುದೆ ರೀತಿಯ ವೈಜ್ಞಾನಿಕ ಆಧಾರವಿಲ್ಲವೆಂಬುದು ಅಷ್ಟೇ ಸತ್ಯ. ಆದರೆ ಜನ ನಂಬುಗೆಯ ಜಾತ್ರೆಯಲ್ಲಿ ತಮ್ಮ ಅಸಲಿತನವನ್ನು ಕಳಕೊಂಡಿದ್ದಾರೆ. ಜೋತಿಷ್ಯಗಾರರಿಗೆ ತಮ್ಮ ತಲೆಯನ್ನು ಒತ್ತೆ ಇಟ್ಟ ಮೇಲೆ ಅವರ ಮಿದುಳು ಕ್ರಿಯಾಶೀಲವಾಗಿದೆ ಎಂದು ಊಹಿಸಲು ಸಾಧ್ಯವಿಲ್ಲದ ವಾತಾವರಣ ಇಂದು ಸೃಷ್ಟಿಯಾಗಿದೆ. ಇದು ನಮ್ಮ ಭಾರತಿಯರೆಲ್ಲರ ದುರಂತವಾಗಿದೆ.
ಮತ್ತೊಂದು ಆಶ್ಚರ್ಯ ಹಾಗೂ ವ್ಯಂಗ್ಯದ ಸಮಾಚಾರವೆಂದರೆ ಇದೆ ಅಕ್ಷಯ ತೃತೀಯ ನಕ್ಷತ್ರದ ದಿನ ಯುಗ ಯುಗಳ ಪುರುಷ, ವೈಚಾರಿಕ ಚಿಂತಕ, ಚಳುವಳಿಗಳ ಜನಕ ವಿಶ್ವಗುರು ಬಸವಣ್ಣನವರು ಹುಟ್ಟಿದ ದಿನ. ಅಕ್ಷಯ ತೃತೀಯ ದಿನದ ನಂಬುಗೆ ಒಂದು ಬಗೆಯಾದರೆ ಬಸವಣ್ಣನವರ ವಿಚಾರ ಧಾರೆ ಮತ್ತೊಂದು ಮಗ್ಗುಲು. ಇವು ಒಂದಕ್ಕೊಂದು ಸೇರಲು ಸಾಧ್ಯವೇ ಇಲ್ಲ. ಒಂದು ಉತ್ತರವಾದರೆ ಮತ್ತೊಂದು ದಕ್ಷಿಣ. ಆದರೆ ನಾವು ಇವೆರಡರಲ್ಲಿ ಯಾವುದನ್ನು ಆಯ್ದುಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ ಎಂಬ ಸತ್ಯವನ್ನು ಮನಗಾಣಲೆಬೇಕಾಗಿದೆ. ಇಲ್ಲದೆ ಹೋದರೆ ನಾವು ಬದುಕಿರುವವರೆಗೂ ಭ್ರಮೆಗಳ ನಡುವೆಯೆ ಬದುಕು ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಸತ್ತು ಹೋಗುವ ಅಪಾಯ ಇದೆ.
ಹೊನ್ನಿನೊಳಗೊಂದೊರೆಯ , ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣಿ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ
ಎಂಬುದು ಬಸವಣ್ಣನವರ ಉಸಿರು. ನಾಳೆ ಬೇಕೆಂದು ತೆಗೆದು ಇರಿಸುವುದೆ ಬಹು ದೊಡ್ಡ ಅಪರಾಧ. ಅಲ್ಲದೆ ಹೊನ್ನು ಮಾಯೆ ಎಂಬರು. ಹೊನ್ನು ಮಾಯೆ ಅಲ್ಲವೆ ಅಲ್ಲ, ಮನದ ಮುಂದಣ ಆಸೆಯೆ ಮಾಯೆ ಎಂಬುದು ಶರಣರ ಇಂಗಿತವಾಗಿದೆ. ನಾಳೆ ಬೇಕೆಂದು ತೆಗೆದು ಇಡುವುದು ಅಪರಾಧ. ಒಂದು ಸಲ ಬಸವಣ್ಣನವರ ಮಹಾಮನೆಗೆ ಕಳ್ಳನೊಬ್ಬ ಬರುತ್ತಾನೆ. ಆ ಕಳ್ಳ ಸಹಜವಾಗಿ ನೀಲಾಂಬಿಕೆಯ ಕಿವಿಯಲ್ಲಿರುವ ಓಲೆಗೆ ಕೈಹಾಕಿ ಕಳ್ಳತನ ಮಾಡಬೇಕೆಂದು ಪ್ರಯತ್ನ ಮಾಡುತ್ತಿರುತ್ತಾನೆ. ಆಗ ನೀಲಾಂಬಿಕೆ ಚಟಾರನೆ ಕಿರುಚಿಕೊಂಡು ಕಳ್ಳ ಕಳ್ಳ ಎಂದು ಧಾವಂತಗೊಳ್ಳುತ್ತಾರೆ. ಆಶ್ಚರ್ಯವೆಂದರೆ ಕಲ್ಯಾಣ ನಾಡಿನ ಅಂದಿನ ಪ್ರಧಾನಿಯಾಗಿದ್ದ ಬಸವಣ್ಣನವರು ತನ್ನ ಮಡದಿ ನೀಲಾಂಬಿಕೆಯನ್ನು ಗದರಿಸುವ ಧ್ವನಿಯಲ್ಲಿ  :
ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ
ಅಯ್ಯ ನಮ್ಮಯ್ಯನ ಕೈನೊಂದಿತು,
ತೆಗೆದುಕೊಡಾ ಎಲೆ ಬೆಂಡೊಲೆ ಕಿತ್ತಿ
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ
ಕೂಡಲಸಂಗಮನಲ್ಲದೆ ಆರೂ ಇಲ್ಲ
ಎಂಬ ವಚನದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ನಮಗೆ ಬೇಕಾಗಿರುವುದಕ್ಕಿಂತಲೂ ಹೆಚ್ಚು ಹೆಚ್ಚು ಸಂಗ್ರಹ ಮಾಡಿಕೊಂಡಿರುವುದೆ ದೊಡ್ಡ ಅಪರಾಧ. ಕಳ್ಳನಾದರೂ ತನ್ನ ಹಸಿವನ್ನು ಹಿಂಗಿಸಿಕೊಳ್ಳಲು ಕಳ್ಳತನಕ್ಕೆ ಇಳಿದಿರಬಹುದು. ಆದರೆ ನಮ್ಮ ಹೊಟ್ಟೆ ತುಂಬಿಸಿಕೊಂಡೂ ಹೆಚ್ಚು ಹೆಚ್ಚು ಬೇಕೆಂಬ ಬಯಕೆ ಇಟ್ಟುಕೊಂಡವರೆ ಬಲುಗಳ್ಳರು. ಹೀಗಾಗಿ ಆತ ಹಸಿವೆಗಾಗಿ ನಮ್ಮ ಮನೆಗೆ ಬಂದಾತ. ನಾವು ಬಲುಗಳ್ಳರು ಎಂಬುದು ಬಸವಣ್ಣನವರ ಆಶಯ.
ಹೊನ್ನಿಂಗೆ ಬಂದಿಲ್ಲದ, ಹೆಣ್ಣಿಂಗೆ ಬಂದಿಲ್ಲದ , ಆಶನಕ್ಕೆ- ವಸನಕ್ಕೆ ಬಂದಿಲ್ಲದ ಭಕ್ತಿಯ ಪಥವ ತೋರಲು ಬಂದ ಬಸವಣ್ಣನವರ ಹುಟ್ಟು ಹಬ್ಬದ ದಿನವೆ ಅಕ್ಷಯ ತೃತಿ ಎಂಬ ದಿನ ಬಂದಿರುವುದು ಕಾಕತಾಳೀಯ. ಕನಿಷ್ಠ ಪಕ್ಷ ಬಸವಾದಿ ಶರಣರ ಆಶಯಗಳನ್ನು ಹೇಳುವ , ಅನುಸರಿಸುವ ಜನಗಳಾದರೂ ಅಕ್ಷಯ ತೃತೀಯ ಎಂಬ ವಿಶೇಷ ದಿನದಂದು  ಪುರೋಹಿತರು ನಂಬಿಸಿದ ಮೌಢ್ಯದ ಎದುರು ಈಜಬೇಕಿದೆ. ನಮ್ಮ ರಾಜ್ಯದಲ್ಲಿಯೆ ನಿನ್ನೆಯ ದಿನ 3900 ಕೋಟಿ ಮೌಲ್ಯದ ಚಿನ್ಹ ಮಾರಾಟವಾಗಿರುವುದು ನೋಡಿದರೆ ನಾವು ಎತ್ತ ಹೊರಟಿದ್ದೇವೆ ? ಎಂಬುದು ಮನದಟ್ಟಾಗುತ್ತದೆ. ಹೊನ್ನಿನೊಳಗೆ ಒಂದೊರೆಯ ಎಂಬ ಬಸವಣ್ಣನವರ ಮಾತು ಒತ್ತಟ್ಟಿಗಿರಲಿ, ಈ ದಿನ ಖರೀದಿಸಿದ ಬಂಗಾರ ಮುಂದಿನ ವರ್ಷದಷ್ಟೊತ್ತಿಗೆ ದುಪ್ಪಟ್ಟು ಆಗುತ್ತದೆ ಎಂಬುದೆ ಮೂರ್ಖತನವಲ್ಲವೆ ? ವ್ಯಾಪಾರಿಗಳು ಹಾಗೂ ಜೋತಿಷ್ಯಿಗಳು ಕೂಡಿ ಮಾಡಿದ ಆಟಕ್ಕೆ ಭಾರತೀಯ ಮನಸ್ಸುಗಳು ಪಿಗ್ಗಿ ಬಿದ್ದಿರುವುದು ಕಾಣುತ್ತೇವೆ. ಪಂಚಾಂಗವೆಂಬ ಗಣಿತವಲ್ಲದ, ವಿಜ್ಞಾನವಲ್ಲದ ಅರೆ ಬರೆ ಅಜ್ಞಾನದ ಹಿಂದೆ ಹೋಗುತ್ತಿದ್ದೇವೆ. ಪ್ರಜ್ಞಾವಂತ ಬಸವಣ್ಣನವರ ನಾಡಿನ ನಾವೆಲ್ಲ ವ್ಯಾಪಾರಿಗಳ ಹಾಗೂ ಜೋತಿಷ್ಯಿಗಳ ಕೌಲು ಕೂಟಕ್ಕೆ ಬಲಿಯಾಗಿರುವುದು ಎಷ್ಟು ಸರಿ ? ಎಂದು ನಮ್ಮನ್ನೆ ನಾವು ಕೇಳಿಕೊಳ್ಳಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...