Homeಮುಖಪುಟಒಲಂಪಿಕ್ ಅಂಗಳಕ್ಕೆ ಟಿಕೆಟ್‌ ಕಲೆಕ್ಟರ್‌ : ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ

ಒಲಂಪಿಕ್ ಅಂಗಳಕ್ಕೆ ಟಿಕೆಟ್‌ ಕಲೆಕ್ಟರ್‌ : ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ

ರೇವತಿ ಓಡಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅವರ ಜೀವನದ ಓಟ ಸಾಗಿದ್ದು ಮುಳ್ಳು ಬೇಲಿಗಳ ಮೇಲೆ. ಕಡುಬಡತನದ ನಡುವೆಯೂ ಅವರು ತಮ್ಮ ಒಲಂಪಿಕ್‌ ಕನಸನ್ನು ಕೈಬಿಡಲಿಲ್ಲ.

- Advertisement -
- Advertisement -

ಒಲಂಪಿಕ್ ಕನಸು ಕಾಣದ ಕ್ರೀಡಾಪಟುಗಳೇ ಇಲ್ಲ ಎನ್ನಬಹುದು. ವಿಶ್ವದ ಅತ್ಯಂತ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸೆ ಮತ್ತು ಕನಸು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲೂ ಇರುತ್ತದೆ. ಬಹುತೇಕ ಕ್ರೀಡಾಪಟುಗಳು ಆರ್ಥಿಕ, ಕೌಟುಂಬಿಕ ಮತ್ತು ವಯಕ್ತಿಕ ಸಮಸ್ಯೆಗಳು ಮತ್ತು ಸಾಮರ್ಥ್ಯಗಳ ಕಾರಣದಿಂದ ಒಲಂಪಿಕ್ ಹಾದಿಯನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಾರೆ. ಕೆಲವೇ ಕೆಲವರು  ಛಲ ಬಿಡದ ತ್ರಿವಿಕ್ರಮನಂತೆ ಜಿದ್ದಿಗೆ ಬಿದ್ದು ಅತ್ಯುನ್ನತ ಕ್ರೀಡಾಕೂಟಕ್ಕೆ ಟಿಕೇಟ್ ಗಿಟ್ಟಿಸಿಕೊಳ್ಳುತ್ತಾರೆ. ಅಂತಹ ಛಲಗಾರ್ತಿ ತಮಿಳುನಾಡಿನ  ರೇವತಿ. ಜೀವನಕ್ಕೆ ಉದ್ಯೋಗ ಮಾಡುವುದು ರೈಲ್ವೆ ಟಿಕೆಟ್‌ ಕಲೆಕ್ಟರ್‌ ಆಗಿ. ಆದರೆ ಕನಸು ಒಲಂಪಿಕ್‌ನದ್ದು. ಮಧುರೈ ರೈಲ್ವೆ ನಿಲ್ಧಾಣದಲ್ಲಿ ಟಿಕೆಟ್‌ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಿರುವ 23 ವರ್ಷದ ರೇವತಿ ವೀರಮಣಿ 400 ಮೀಟರ್‌ ರಿಲೇಯಲ್ಲಿ ಒಲಂಪಿಕ್ಗೆ ಅರ್ಹತೆ ಪಡೆದಿದ್ದಾರೆ.

ರೇವತಿ ಸಾಧನೆಗೆ ದಕ್ಷಿಣ ರೈಲ್ವೆ ಅಭಿನಂದಿಸಿದ್ದು ಒಲಂಪಿಕ್‌ನಲ್ಲಿ ಅವರು ಚಿನ್ನವನ್ನು ಗೆದ್ದು ಬರಲಿ ಎಂದು ಹಾರೈಸಿದೆ.

ಮಧುರೈ ತಮಿಳುನಾಡಿನ ಚಿಕ್ಕ ಪಟ್ಟಣ. ಬಾಂಬೆ, ಮದ್ರಾಸು, ದೆಹಲಿಗಳಂತೆ ಇಲ್ಲಿ ದೊಡ್ಡ ದೊಡ್ಡ ಕ್ರೀಡಾ ಸಂಕೀರ್ಣಗಳಾಗಲಿ ಅಥವಾ ತರಬೇತಿ ಕೇಂದ್ರಗಳಾಗಲಿ ಇಲ್ಲ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳು ತೀರಾ ವಿರಳ. ಹಾಗಂತ ರೇವತಿಯವರು ತಮ್ಮ ಕನಸನ್ನು ಎಂದೂ ಕೈಬಿಡಲಿಲ್ಲ. ರೇವತಿ ಓಡಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅವರ ಜೀವನದ ಓಟ ಸಾಗಿದ್ದು ಮುಳ್ಳು ಬೇಲಿಗಳ ಮೇಲೆ.

ರೇವತಿ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟ ದುರಂತವನ್ನು ಎದುರಿಸಿದರು. ಅವರು ಮತ್ತು ಸಹೋದರಿ ಬಾಲ್ಯದಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದರು. ನಂತರ ಇಬ್ಬರು ಹೆಣ್ಣು ಮಕ್ಕಳ ಪೋಷಣೆಗೆ ನಿಂತಿದ್ದು ಮಧುರೈನಲ್ಲಿರುವ ರೇವತಿಯವರ ಅಜ್ಜಿ .  ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅವರ ಅಜ್ಜಿ ಅವರನ್ನು ಬೆಳೆಸಲು ಹೆಣಗಾಡಿದರು. ಮನೆಯಲ್ಲಿ ಬಡತನ, ವೃದ್ಧೆ ಅಜ್ಜಿ, ತಂದೆ ತಾಯಿಯರ ಸಾವು ಎಂತವರನ್ನೂ ಕಂಗೆಡೆಸದೇ, ಕುಗ್ಗಿಸದೇ ಇರಲಾರದು. ರೇವತಿ ಕಷ್ಟಗಳು ಎದುರಾದಷ್ಟು ಪುಟಿಯುತ್ತಲೇ ಹೋದರು. ಅವರ ಅಜ್ಜಿ ಮೊಮ್ಮಕ್ಕಳಿಗೆ  ಮತ್ತು ಎಲ್ಲಾ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ನೀಡಿದರು.

ಇದನ್ನೂ ಓದಿ: ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡುತ್ತಿರುವ, ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಪಟು!

ಶಾಲೆಯ ದಿನಗಳಲ್ಲಿ ರೇವತಿ ವಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಎಲ್ಲರೂ ಮಕ್ಕಳಾಟ ಎಂದು ನಂಬಿದ್ದರೇ ವಿನ: ರೇವತಿ ಒಲಂಪಿಕ್‌ಗೆ ಆಯ್ಕೆಯಾಗುವ ಊಹೆಯನ್ನೂ ಮಾಡಿರಲಿಲ್ಲ. ಚಿಗುರೆಯಂತೆ ಓಡುವ ಪುಟ್ಟ ಹುಡುಗಿಯಲ್ಲಿ ಅಡಗಿದ್ದ ಸುಪ್ತ ಪ್ರತಿಭೆಯನ್ನು ಗುರುತಿಸಿದವರು ಕೋಚ್ ಕಣ್ಣನ್.

“ಇಬ್ಬರು ಹೆಣ್ಣು ಮಕ್ಕಳು ಐದು ವರ್ಷದವರಿದ್ದಾಗ  ನನ್ನ ಮಗಳು ಮತ್ತು ಸೊಸೆ ತೀರಿಕೊಂಡರು. ನಾನು ಅವರನ್ನು ಕರೆದುಕೊಂಡು ಹೋಗಿ ಶಿಕ್ಷಣ ನೀಡಿದೆ. ಶಾಲೆಯ ಕೋಚ್‌ ರೇವತಿ ಚೆನ್ನಾಗಿ ಓಡುತ್ತಾರೆ ಎಂದು ಮೆಚ್ಚಿ ಅವಳಿಗೆ ತರಬೇತಿ ಪ್ರಾರಂಭಿಸಲು ಹೇಳಿದರು. ನಾನು ಆರಂಭದಲ್ಲಿ ಹಿಂಜರಿಯುತ್ತಿದ್ದರೂ, ನಾನು ರೇವತಿಯನ್ನು ತರಬೇತಿಗೆ ಹೋಗಲು ಅನುಮತಿಸಿದೆ. ಈಗ ನನ್ನ ಮೊಮ್ಮಗಳು  ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ. ಮತ್ತು ಅವಳ ಸಾಧನೆಗೆ ಕಾರಣವಾದ, ಮಾರ್ಗದರ್ಶನವನ್ನು ನೀಡಿದ ಕೋಚ್‌ಗೆ ನಾನು ಧನ್ಯವಾದ ಹೇಳುತ್ತೇನೆ”” ಎಂದು ರೇವತಿಯರ ಅಜ್ಜಿ ಕೆ.ಅರ್ಮಲ್‌ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಕೆ.ಅರ್ಮಲ್‌ ಅವರ ಹಿರಿಯ ಮೊಮ್ಮಗಳಾದ ರೇವತಿ, ಇಬ್ಬರು ಹೆಣ್ಣುಮಕ್ಕಳಲ್ಲಿ ಮೊದಲನೆಯವಳು   ಟವನ್ನು ಪಡೆಯುವುದು ತುಂಬಾ ಕಷ್ಟ, ಅವರ ಅಜ್ಜಿ, ಹುಡುಗಿಯರನ್ನು ಸರ್ಕಾರಿ ಹಾಸ್ಟೆಲ್ನಲ್ಲಿ ಬಿಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅವರ ಎರಡನೆಯ ತರಗತಿಯಿಂದ ಹಿಡಿದು ಹನ್ನೆರಡನೇ ತರಗತಿ ಮುಗಿಸುವವರೆಗೆ, ಸಹೋದರಿಯರು ಹಾಸ್ಟೆಲ್‌ನಲ್ಲಿಯೇ ಉಳಿದು ತಮ್ಮ ಶಿಕ್ಷಣವನ್ನು ಮುಂದುವರೆಸಿದರು.

ಕಣ್ಣನ್ ಅವರೇ ರೇವತಿಯರಿಗೆ ಮುಂದೆ ತರಬೇತಿ ನೀಡಿದರು. ಆರ್ಥಿಕವಾಗಿ ರೇವತಿಯವರ ಬೆನ್ನೆಲುಬಾಗಿ ನಿಂತ ಕೋಚ್‌ ಕಣ್ಣನ್‌ ತಮ್ಮ  ಮನೆಯಲ್ಲಿ ರೇವತಿಯವರಿಗೆ ವಾಸಿಸಲು ಅವಕಾಶ ನೀಡಿ ಸ್ವಂತ ಮಗಳಂತೆ ನೋಡಿಕೊಂಡರು. ರೇವತಿಯ ಅಪಾರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅರಿತುಕೊಂಡ ಕೋಚ್‌ ಅವರು ಯುವ ಕ್ರೀಡಾಪಟು ಹೆಚ್ಚು ಶ್ರಮವಹಿಸಿ ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು. ಕಣ್ಣನ್‌ ಅವರ ಸಹಾಯದಿಂದ ರೇವತಿ ಮಧುರೈನ ಲೇಡಿ ಡಾಕ್ ಕಾಲೇಜಿನಲ್ಲಿ ಪ್ರವೇಶ ಪಡೆದರು, ನಂತರ ಅಲ್ಲಿಯೇ ಅವರು ತರಬೇತಿ ಮುಂದುವರಿಸಿದರು.

ಇದನ್ನೂ ಓದಿ: ಶಿವಮೊಗ್ಗ: ಭಿಕ್ಷೆ ಬೇಡುತ್ತಿದ್ದ, ಚಿಂದಿ ಆಯುತ್ತಿದ್ದ ಮಕ್ಕಳೀಗ ಕ್ರೀಡಾಪ್ರವೀಣರು!

ಅಲ್ಲಿಂದ ರೇವತಿ ಮತ್ತೆ ಹಿಂತಿರುಗಿ ನೋಡಲಿಲ್ಲ. 2016 ರಲ್ಲಿ ನಡೆದ ರಾಷ್ಟ್ರೀಯ ಜ್ಯನಿಯರ್‌ ಅಥ್ಲೆಟಿಕ್ ಚಾಂಪಿಯನ್‌ ಶಿಪ್‌ನಲ್ಲಿ 100 ಮೀ ಮತ್ತು 200 ಮೀ. ಎರಡರಲ್ಲೂ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ನಂತರ ಸೀನಿಯರ್ ಶಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದರು. ರೇವತಿಯವರ ಪ್ರತಿಭೆಗೆ ದೇಶದ ಅತ್ಯುನ್ನತ ಕ್ರೀಡಾ ತರಬೇತಿ ಸಂಸ್ಥೆ ಪಟಿಯಾಲಾದ ಭಾರತೀಯ ರಾಷ್ಟ್ರೀಯ ಅಥ್ಲೆಟಿಕ್‌ ಶಾಲೆಯಲ್ಲಿ ಅವಕಾಶ ದೊರೆಯಿತು

ನ್ಯಾಷನಲ್ ಕ್ಯಾಂಪ್‌ ನಲ್ಲಿ ಕೋಚ್ ಗಲಿನಾ ಬುಖಾರಿನಾ ಅವರ ಅಡಿಯಲ್ಲಿ ತರಬೇತಿ ಪಡೆದ ಅವರು ದೋಹಾದಲ್ಲಿ ನಡೆದ 2019 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ 4×100 ಮೀಟರ್ ರಿಲೇಯಲ್ಲಿ 4 ನೇ ಸ್ಥಾನವನ್ನು ಗಳಿಸಿದರು. ಕೋಚ್‌ ಸಲಹೆಯ ಮೇರೆಗೆ,  ರೇವತಿ 100 ಮೀ ವಿಭಾಗವನ್ನು ಬಿಟ್ಟು 400 ಮೀ ವಿಭಾಗದಲ್ಲಿ ಸ್ಪರ್ಧಿಸ ತೊಡಗಿದರು. ಅದೇ ವರ್ಷ ಅವರಿಗೆ 4×400 ಮೀಟರ್ ರಿಲೇಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು.

2019 ರಲ್ಲಿ ಅವರು ದಕ್ಷಿಣ ರೈಲ್ವೆಯ ಮಧುರೈ ವಿಭಾಗದಲ್ಲಿ ಟಿಕೆಟ್ ಪರೀಕ್ಷಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಅಜ್ಜಿ ಕೆ. ಅರ್ಮುಲ ಆರೋಗ್ಯ ಬಿಗಡಾಯಿಸಿದಾಗ ದೂರದ ಪಟಿಯಾಲದಲ್ಲಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ಸಾಧ್ಯವಿರಲಿಲ್ಲ ಹಾಗಾಗಿ ಮಧುರೈನಲ್ಲಿ ರೈಲ್ವೆ ಕೆಲಸಕ್ಕೆ ಸೇರಿಕೊಂಡೆ ಎನ್ನುತ್ತಾರೆ ಯುವ ಕ್ರೀಡಾಪಟು ರೇವತಿ ವೀರಮಣಿ.

ಇದನ್ನೂ ಓದಿ:  ಒಲಂಪಿಕ್ಸ್‌ ಕ್ರೀಡಾಪಟು “ಹಿಮಾ‌ ದಾಸ್‌” ಅಸ್ಸಾಮ್ ಡಿಎಸ್ಪಿಯಾಗಿ ನೇಮಕ

2020 ರ ಅಂತ್ಯ ಮತ್ತು 2021 ರ ಆರಂಭ ರೇವತಿಯ ಕ್ರೀಡಾ ಜೀವನದ ಅತ್ಯಂತ ಕಠಿಣ ದಿನಗಳು. ಆದಿನಗಳಲ್ಲಿ ಅವರು ಅನುಭವಿಸಿದ ನೋವು ಮತ್‌ತು ಮಾನಸಿಕ ಖಿನ್ನತೆಯನ್ನು ರೇವತಿ ಈ ರೀತಿಯಾಗಿ ಹಂಚಿಕೊಳ್ಳುತ್ತಾರೆ.

2020 ರ ನವೆಂಬರ್‌ನಲ್ಲಿ ಮೊಣಕಾಲು ನೋವು ತೀವ್ರವಾಗಿ ಬಾಧಿಸಿತು. ನೋವು ಮತ್ತಷ್ಟು ಉಲ್ಬಣಗೊಂಡು ಒಂದು ದಿನ ಓಟವನ್ನೇ ನಿಲ್ಲಿಸಬೇಕೆಂದುಕೊಂಡೆ. ತಿಂಗಳುಗಳ ಕಾಲ ಟ್ರ್ಯಾಕ್‌ನಿಂದ ದೂರ ಉಳಿದೆ. 6 ತಿಂಗಳು ಬೆಡ್‌ ರೆಸ್ಟ್‌ನಲ್ಲಿದ್ದು  ಫಿಸಿಯೋ ಸಿಮೋನಿ ಷಾ ಅವರಿಂದ ಚಿಕಿತ್ಸೆ ಪಡೆದೆ. ನನ್ನ ಕ್ರೀಡಾ ಬದುಕಿನ ಅತ್ಯಂತ ಕಠಿಣ ದಿನಗಳು ಅವು. ಸುಮಾರು 6 ತಿಂಗಳ ನಂತರ  ಚೇತರಿಸಿಕೊಂಡು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅಲ್ಲಿನ ಗೆಲುವು ನನಗೆ ಮರು ಜೀವ ನೀಡಿತು. ಒಲಂಪಿಕ್ ಅರ್ಹತಾ ಸ್ಪರ್ಧೆಯಲ್ಲಿ 400 ಮೀಟರ್‌ ಓಟವನ್ನು 53.55 ಸೆಕೆಂಡುಗಳಲ್ಲಿ ಮುಗಿಸಿದೆ. ಇದು ನನ್ನ ಇದುವರೆಗಿನ ಅತ್ಯುತ್ತ ದಾಖಲೆ. ಒಲಂಪಿಕ್ ಅರ್ಹತೆ ನನ್ನ ಜೀವನದ ಹಿಂದಿನ ದಿನಗಳ ಕಷ್ಟಗಳನ್ನು ಮರೆಸಿದೆ. ನನಗಿಂತಲೂ 76 ವರ್ಷ ವಯಸ್ಸಿನ ನನ್ನ ಅಜ್ಜಿ ಈ ಸಾಧನೆಯಿಂದ ಸಂತೋಷಗೊಂಡಿದ್ದಾರೆ.

ತಮ್ಮ ಕ್ರೀಡಾ ಜೀವನದ ಆರಂಭದಲ್ಲಿ ಇದ್ದ ಸೌಲಭ್ಯದ ಕೊರತೆ, ಆರ್ಥಿಕ ಬಡತನಗಳನ್ನು ಮೆಟ್ಟಿನಿಂತ ರೇವತಿ ಒಲಂಪಿಕ್‌ ಕ್ರೀಡಾಕೂಟದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿಸುವ ಸ್ಪೂರ್ತಿಯುತ ಮಾತನಾಡುತ್ತಾರೆ. ಪರಿಶ್ರಮದ ಹಿಂದೆ ಯಶಸ್ಸು ಹೇಗೆ ಬೆನ್ನತ್ತುತ್ತದೆ ಎಂಬುದಕ್ಕೆ ರೇವತಿ ವೀರಮಣಿ ಜೀವಂತ ಉದಾಹರಣೆ.

“ಈ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್‌ಗಳಿವೆ, ತರಬೇತಿ ಮತ್ತು ಶಾಲಾ ಶಿಕ್ಷಣವು ಉಚಿತವಾಗಿದೆ ಮತ್ತು  ಸರ್ಕಾರವೇ ಎಲ್ಲವನ್ನೂ ನೋಡಿಕೊಳ್ಳುತ್ತದೆ. ನಮ್ಮ ದಿನಗಳಲ್ಲಿ, ಈ ಬಗ್ಗೆ ನಮಗೆ ಹೆಚ್ಚು ತಿಳಿದಿರಲಿಲ್ಲ. ನಮ್ಮ ಸಾಮರ್ಥ್ಯದ ಪೂರ್ಣ ಪ್ರಮಾಣದಲ್ಲಿ ಪ್ರದರ್ಶನ ನೀಡುವುದು  ಅತ್ಯಂತ ಮುಖ್ಯವಾದ ಭಾಗವಾಗಿದೆ – ಪರಿಶ್ರಮದ ಹಿಂದೆ ಪ್ರಾಯೋಜಕರು, ತರಬೇತಿ ಮತ್ತು ಬೆಂಬಲ ಸೌಲಭ್ಯಗಳೆಲ್ಲವೂ ಅನುಸರಿಸುತ್ತವೆ ”, ಎಂದು ರೇವತಿ ಅಭಿಪ್ರಾಯಪಡುತ್ತಾರೆ.

23 ವರ್ಷದ ರೇವತಿ ವೀರಮಣಿ ಜುಲೈ 26 ರಿಂದ ಆರಂಭವಾಗುವ ಟೋಕಿಯೊ ಒಲಂಪಿಕನಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದು ಬರಲಿ ಎಂಬುದೊಂದೇ ನಮ್ಮ ಹಾರೈಕೆ. ಬಡತನದ ಬೆಂಕಿಯಲ್ಲಿ ಬೆಂದು, ಕುಟುಂಬಕ್ಕಾಗಿ ರೈಲ್ವೆಯಲ್ಲಿ ಕೆಲಸಮಾಡುತ್ತ ಒಲಂಪಿಕ್‌ಗೆ ಅವಕಾಶ ಗಿಟ್ಟಿಸಿದ 23 ವರ್ಷದ ರೇವತಿ ವೀರಮಣಿ ಅವರ ಬದುಕು ಮತ್ತು ಸಾಧನೆ ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ.  ಹೆಚ್ಚು ಹೆಚ್ಚು ಕ್ರೀಡಾಪಟುಗಳು ಒಲಂಪಿಕ್ ಅಂಗಳದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕವನ್ನು ಗೆದ್ದು ಬರಲಿ.

-ರಾಜೇಶ್ ಹೆಬ್ಬಾರ್

ಇದನ್ನೂ ಓದಿ:  ಭತ್ತದ ಗದ್ದೆಯಿಂದ ವಿಶ್ವ ಅಥ್ಲೆಟಿಕ್ಸ್‌ವರೆಗೆ ಓಡಿದ ಚಿನ್ನದ ಹುಡುಗಿ ಹಿಮಾ ದಾಸ್ ಬಗ್ಗೆ ನಿಮಗೆ ಗೊತ್ತೆ?

 

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...