Homeಮುಖಪುಟಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಾದಿದೆ ಭೂಕಂಪ! – ಇದು ಡಾಟಾ ಅನಲಿಟಿಕಲ್ ಸಮೀಕ್ಷೆ ಬಿಚ್ಚಿಟ್ಟ ಸತ್ಯ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕಾದಿದೆ ಭೂಕಂಪ! – ಇದು ಡಾಟಾ ಅನಲಿಟಿಕಲ್ ಸಮೀಕ್ಷೆ ಬಿಚ್ಚಿಟ್ಟ ಸತ್ಯ

ಆಂಥ್ರೋ.ಎಐ ಸಮೀಕ್ಷೆಯ ಪ್ರಕಾರ, ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಹೆಣಗಾಡುತ್ತಿರುವ ಬಿಜೆಪಿಗೆ ಉತ್ತರ ಪ್ರದೇಶವೊಂದರಲ್ಲೆ 40-45 ಸ್ಥಾನಗಳು ಕೈಬಿಟ್ಟು ಹೋಗಲಿವೆ ಎಂದಂತಾಯಿತು

- Advertisement -
- Advertisement -

ಲೋಕಸಭಾ ಚುನಾವಣೆಯ ಆರು ಹಂತಗಳು ಮುಗಿದಿವೆ. ದೇಶ ಈಗ ಕೊನೇ ಹಂತದ ಕ್ಷಣಗಣನೆಯಲ್ಲಿದೆ. ಈ ಹಂತದಲ್ಲಿ ಆಂಥ್ರೋ.ಎಐ ಎಂಬ ಆನ್ಲೈನ್ ಪೋರ್ಟಲ್, ಬಿಜೆಪಿ ಬೆಚ್ಚಿಬೀಳುವಂತ ಡಾಟಾ ಅನಾಲಿಟಿಕಲ್ ಸಮೀಕ್ಷಾ ವರದಿಯೊಂದನ್ನು ಪ್ರಕಟಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಉತ್ತರ ಪ್ರದೇಶ ನಿರ್ಣಾಯಕ ಪಾತ್ರ ವಹಿಸಿತ್ತು. ಆ ಸಲ 41% ಮತಗಳಿಕೆಯೊಂದಿಗೆ ಎನ್.ಡಿ.ಎ 80 ಸ್ಥಾನಗಳ ಪೈಕಿ 73ರಲ್ಲಿ ಗೆದ್ದಿತ್ತು. ತನ್ನ ರಾಜಕೀಯ ಇತಿಹಾಸದಲ್ಲೇ ಆ ಪ್ರಮಾಣದ ಇಳುವರಿ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಲಭಿಸಿರಲಿಲ್ಲ.

ಆದರೆ ಆಂಥ್ರೋ.ಎಐ ಸಂಸ್ಥೆ, ಉತ್ತರ ಪ್ರದೇಶದ ರಾಜಕಾರಣವನ್ನೇ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಸಮೀಕ್ಷೆಯೊಂದನ್ನು ಮುಂದಿಟ್ಟಿದ್ದು ಅದರ ಪ್ರಕಾರ ಬಿಜೆಪಿ ಈ ಸಲ 15 ರಿಂದ 25 ಸೀಟು ಗೆದ್ದರೆ ದೊಡ್ಡ ಮಾತು ಎಂದು ಹೇಳಿದೆ. ತೀರಾ ಅನಿರೀಕ್ಷಿತ ಅಲೆಗಳೇನಾದರು ಈ ಹಂತದಲ್ಲಿ ಸೃಷ್ಟಿಯಾದರೂ, ಬಿಜೆಪಿಯ ಸೀಟು ಗಳಿಕೆ ಕಷ್ಟಪಟ್ಟು 30 ತಲುಪಬಹುದೇ ವಿನಾಃ ಅದಕ್ಕಿಂತ ಹೆಚ್ಚಾಗುವ ಸಂಭವವೇ ಇಲ್ಲ ಎನ್ನುತ್ತಿದೆ ಆ ಸಮೀಕ್ಷೆ. ಇದಕ್ಕೆ ಪ್ರತಿಯಾಗಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮಹಾಘಟಬಂಧನಕ್ಕೆ ಅಭೂತಪೂರ್ವ ಜನಬೆಂಬಲ ಸಿಗಲಿದ್ದು ಈ ಮೈತ್ರಿ ಕೂಟಕ್ಕೆ 40 ರಿಂದ 55 ಸ್ಥಾನಗಳು ಸಿಗಲಿವೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ಗೆ 5-9 ಸ್ಥಾನಗಳನ್ನು ನಿರೀಕ್ಷಿಸಲಾಗಿದೆ.

ಅಂದರೆ ಆಂಥ್ರೋ.ಎಐ ಸಮೀಕ್ಷೆಯ ಪ್ರಕಾರ, ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಹೆಣಗಾಡುತ್ತಿರುವ ಬಿಜೆಪಿಗೆ ಉತ್ತರ ಪ್ರದೇಶವೊಂದರಲ್ಲೆ 40-45 ಸ್ಥಾನಗಳು ಕೈಬಿಟ್ಟು ಹೋಗಲಿವೆ ಎಂದಂತಾಯಿತು. ಹೀಗೇನಾದರು ಆದಲ್ಲಿ, ಅದು ಬಿಜೆಪಿಯನ್ನು ಅಧಿಕಾರದಿಂದ ಬಹಳಷ್ಟು ದೂರಕ್ಕೆ ತಳ್ಳಲಿದೆ.

ಪ್ರತಿ ಕ್ಷೇತ್ರದ, ಆಯಾ ಪ್ರಾದೇಶಿಕ ಪ್ರಭಾವಗಳು, ಅಭ್ಯರ್ಥಿಗಳ ಸಾಮರ್ಥ್ಯ, ಸಾಮಾಜಿಕ ಸಂರಚನೆ, ಜಾತಿ ಸಮೀಕರಣ, ಹಿಂದಿನ ಚುನಾವಣೆಗಳ ಮತಗಳಿಕೆ ಏರಿಳಿತವನ್ನು ಕೂಲಕಂಷವಾಗಿ ಅಧ್ಯಯನ ಮಾಡಿದ್ದು, ಆ ಕ್ಷೇತ್ರವಾರು ಸಮೀಕ್ಷೆಯನ್ನು ಏಪ್ರಿಲ್ 19ರ ನಂತರ, 23ಕ್ಕು ಮುನ್ನ ಬಿಡುಗಡೆ ಮಾಡುವುದಾಗಿ ಪೋರ್ಟಲ್ ಹೇಳಿಕೊಂಡಿದೆ. ನುರಿತ ಸಂವಹನ ತಜ್ಞರು, ದತ್ತಾಂಶ ತಜ್ಞರು, ಚುನಾವಣಾ ಸಮೀಕ್ಷಾ ತಜ್ಞರು, ಗಣಿತಜ್ಞರ ಜೊತೆಗೆ ಮಾನವ ಮನಶಾಸ್ತ್ರ ಪರಿಣಿತರ ತಂಡ ಈ ಸಮೀಕ್ಷೆಗಾಗಿ ಸುದೀರ್ಘ ಕೆಲಸ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಸಮೀಕ್ಷೆಯಲ್ಲಿ ಡಾಟಾ ಅನಾಲಿಟಿಕ್ಸ್ ತುಂಬಾ ಪರಿಣಾಮಕಾರಿಯಾದ ಟೂಲ್ ಆಗಿ ಬಳಕೆಯಾಗುತ್ತಿದ್ದು, ಜನರ ಮೂಡ್ ನ ಜೊತೆಗೆ ಸದ್ಯೋತಿಹಾಸದ ಚುನಾವಣಾ ಅಂಕಿಅಂಶಗಳನ್ನು, ಸ್ವಿಂಗ್ ಪರ್ಸೇಂಟೇಜ್ ಅನ್ನು, ವೋಟಿಂಗ್ ಪರ್ಸೆಂಟೇಜ್ ಮತ್ತು ವೋಟಿಂಗ್ ಟ್ರೆಂಡ್ ನಡುವೆ ಇರುವ ಸಂಬಂಧವನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿ ಅದರ ಆಧಾರದಲ್ಲಿ ಫಲಿತಾಂಶವನ್ನು ಅಸೆಸ್ ಮಾಡುವ ಈ ವಿಧಾನ ಹೆಚ್ಚು ಮಾನ್ಯತೆ ಪಡೆದಿದೆ. ಈಗ ಹೆಚ್ಚೂಕಮ್ಮಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಆದ ಡಾಟಾ ಅನಾಲಿಟಿಕ್ಸ್ ವಿಭಾಗಗಳನ್ನು ಒಳಗೊಂಡಿರುತ್ತವೆ. ಕಳೆದ ಚುನಾವಣೆಗಳಲ್ಲಿ ಇದೇ ಆಂಥ್ರೋ.ಎಐ ಸಂಸ್ಥೆ ಈ ಡಾಟಾ ಅನಾಲಿಟಿಕ್ಸ್ ವಿಧಾನ ಬಳಸಿ ಫಲಿತಾಂಶಕ್ಕೆ ನಿಖರವಾದ ಸಮೀಕ್ಷೆಗಳನ್ನು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಒಂದು ನಿರ್ದಿಷ್ಟ ಸಿದ್ಧಾಂತದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಿಕೊಂಡ ಒಂದು ಗುಂಪು ಹಾಗೂ ನರೇಂದ್ರ ಮೋದಿ ಅತ್ಯುತ್ತಮ ನಾಯಕ, ಅವರು ಮಾತ್ರ ಈ ದೇಶಕ್ಕೆ ಸೂಕ್ತ ಎಂದು ಗ್ರಹಿಸಿದ ಮತ್ತೊಂದು ಗುಂಪು, ಈ ಎರಡು ಗುಂಪುಗಳೇ ಬಿಜೆಪಿಯ ಪ್ರಮುಖ ಮತದಾರರು ಎಂದು ಅಂದಾಜಿಸಿರುವ ಸಮೀಕ್ಷೆ ಕಳೆದ ಸಾರಿಯಂತೆ ಈ ಸಲವೂ ಈ ಗುಂಪುಗಳು ಬಿಜೆಪಿಗೆ ಮತಹಾಕಿವೆ ಮತ್ತು ಹೊಸ ಮತದಾರರೂ ಬಿಜೆಪಿಯತ್ತ ಒಲವು ಹೊಂದಿದ್ದಾರೆ ಎಂದು ಒಪ್ಪಿಕೊಳ್ಳುತ್ತದೆ. ಆದರೆ ಬಿಜೆಪಿ ಈ ಸಲ ಕಳೆದುಕೊಳ್ಳುತ್ತಿರುವ ಮತಸಮೂಹಕ್ಕೆ ಹೋಲಿಸಿದರೆ  ಇವು ತುಂಬಾ ನಗಣ್ಯ ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

2014ರಲ್ಲಿ ಉತ್ತರ ಪ್ರದೇಶದ ಚುನಾವಣಾ ಅಖಾಡಕ್ಕಿಳಿದ ಅಮಿತ್ ಶಾ ಪ್ರಮುಖವಾಗಿ ಎರಡು ವರ್ಗಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಮೊದಲನೆಯದ್ದು ಯಾದವ್ ಜನಾಂಗವನ್ನು (ಸಾಂಪ್ರದಾಯಿಕ ಎಸ್ಪಿ ಮತದಾರರು) ಹೊರತುಪಡಿಸಿದ ಒಬಿಸಿ ಜಾತಿಗಳು. ಎರಡನೆಯದ್ದು ಜಾಟವ್ ರನ್ನು (ಬಿಎಸ್ಪಿ ಮತಸಮೂಹ) ಹೊರತುಪಡಿಸಿದ ದಲಿತರು. ವಾಸ್ತವದಲ್ಲಿ ಉತ್ತರ ಪ್ರದೇಶದ ಬಿಜೆಪಿ ಘಟಕ ಕಳೆದು ಹಲವು ವರ್ಷಗಳಿಂದಲೇ ಈ ಜಾತಿ ಸಮೀಕರಣದ ಮೇಲೆ ಕಾರ್ಯಗತವಾಗುತ್ತಾ ಬಂದಿತ್ತು. ಯಾದವ್ ಜಾತಿ ರಾಜಕಾರಣದಿಂದ (ಎಸ್ಪಿ) ಬೇಸತ್ತಿದ್ದ ಇತರೆ ಹಿಂದುಳಿದ ಜಾತಿಗಳು ಮತ್ತು ಜಾಟ್ ಸಮುದಾಯದ (ಮಾಯಾವತಿಯವರ) ರಾಜಕಾರಣದಿಂದ ಅಸಮಾಧಾನಗೊಂಡಿದ್ದ ಇತರೆ ದಲಿತ ಜಾತಿಗಳು ಬಿಜೆಪಿಯಲ್ಲಿ ತಮ್ಮ ರಾಜಕೀಯ ಅಧಿಕಾರದ ಅವಕಾಶವನ್ನು ಹುಡುಕುವ ಯತ್ನ ಮಾಡಿದ್ದರು. ಅದಕ್ಕೆ ಪೂರಕವಾಗಿ ಆ ಜಾತಿಗಳ ನಾಯಕರಿಗೆ ಪಕ್ಷದೊಳಗೆ ಹುದ್ದೆಗಳನ್ನು ನೀಡಿದ್ದಲ್ಲದೆ, ಅದೇ ಸಮುದಾಯದವರನ್ನು ಹೆಚ್ಚೆಚ್ಚು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ ಅಮಿತ್ ಶಾ ತಂತ್ರಗಾರಿಕೆ ಬಿಜೆಪಿಗೆ ಅದ್ಭುತ ಫಸಲು ತಂದುಕೊಟ್ಟಿತ್ತು. ಇನ್ನು ಬ್ರಾಹ್ಮಣ, ಠಾಕೂರ್ರಂತಹ ಮೇಲ್ಜಾತಿಗಳು ಬಿಜೆಪಿಗೆ ಸಾಂಪ್ರದಾಯಿಕ ಮತಗಳಾಗಿ ನಿಂತಿದ್ದರಿಂದ 73 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

ಆದರೆ, ಇಂದಿರಾಗಾಂಧಿಯ ನಂತರ ಮೋದಿ ಯಾವ ಪ್ರಮಾಣದಲ್ಲಿ ಅಧಿಕಾರ ಕೇಂದ್ರೀಕರಣ ಮಾಡಿಕೊಂಡಿದ್ದಾರೆಂದರೆ, ಸಂಸದರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದ್ದಾರೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಸರ್ಕಾರ ಬಂದನಂತರವಂತೂ ಸಂಸದರ ಅಧಿಕಾರ ಇನ್ನಷ್ಟು ಮೊಟಕುಗೊಂಡಿದೆ. ತಮ್ಮತಮ್ಮ ಜಾತಿಯ ನಾಯಕರಿಗೆ ಟಿಕೇಟು ಸಿಕ್ಕು, ಅವರು ಸಂಸದರಾಗಿ ಆಯ್ಕೆಯಾದ ನಂತರ ಯಾದವರಂತೆ, ಜಾಟರಂತೆ ತಾವು ಅಧಿಕಾರ ಪ್ರತಿಷ್ಠೆ ಗಳಿಸಿಕೊಳ್ಳುತ್ತೇವೆ ಎಂಬ ಗ್ರಹಿಕೆಯಲ್ಲಿದ್ದ ಈ ಸಮುದಾಯಗಳು ದೊಡ್ಡ ಭ್ರಮಾನಿರಸನಕ್ಕೆ ತುತ್ತಾಗಿವೆ ಎಂಬುದು ಈ ಸಮೀಕ್ಷೆಯ ಸಾರಾಂಶ. ವಿಪರ್ಯಾಸವೆಂದರೆ, ಯಾದವ್ ಮತ್ತು ಜಾಟ್ ವಿರುದ್ಧ ಈ ತಳ ಸಮುದಾಯಗಳು ಒಗ್ಗೂಡಿ ಬಿಜೆಪಿಯತ್ತ ಮುಖ ಮಾಡಿದ್ದ ಒಬಿಸಿ ಮತ್ತು ದಲಿತರಲ್ಲಿ, ಯಾದವ್ ಮತ್ತು ಜಾಟರೆಡೆಗಿಂತ ಹೆಚ್ಚಾಗಿ ಠಾಕೂರ್ (ಬಿಜೆಪಿ ಬೆಂಬಲಿಸುವ ಮೇಲ್ಜಾತಿ) ಸಮುದಾಯದ ವಿರುದ್ಧ ಅಸಮಾಧಾನ ಹೆಚ್ಚಾಗಿರುವುದನ್ನು ತನ್ನ ಸಮೀಕ್ಷೆಯುದ್ದಕ್ಕೂ ಕಂಡಿರುವುದಾಗಿ ಆಂಥ್ರೋ.ಎಐ ಉಲ್ಲೇಖಿಸಿದೆ. ಠಾಕೂರ್ ಸಮುದಾಯದ ಮೇಲೆ ಆಕ್ರೋಶವೆಂದರೆ ಅದು ಪರೋಕ್ಷವಾಗಿ ಬಿಜೆಪಿ ಮೇಲಿನ ಆಕ್ರೋಶವೇ ಆಗಿರುತ್ತದೆ.

ಕಳೆದ ಸಲ ಬಿಜೆಪಿಗೆ ಮತ ಹಾಕಿದ್ದ ಕುರ್ಮಿ ಮತ್ತು ಕುಶ್ವಾಹ್ ಸಮುದಾಯಗಳು ಈ ಬಾರಿ ಎಸ್ಪಿ-ಬಿಎಸ್ಪಿ ಮೈತ್ರಿಯತ್ತ ಮುಖ ಮಾಡಿವೆ ಎನ್ನುವ ಸಮೀಕ್ಷೆ ನಿಶಾದ್ ಸಮುದಾಯದಲ್ಲೂ ಬಿಜೆಪಿ ವಿರುದ್ಧ ಸಣ್ಣ ಬಂಡಾಯವನ್ನು ಗುರುತಿಸಿರುವುದಾಗಿ ಹೇಳಿಕೊಂಡಿದೆ. ಮುಖ್ಯವಾಗಿ ಇಲ್ಲಿನ ಜನ ಅಯೋಧ್ಯೆಯ ರಾಮಮಂದಿರ ವಿಷಯವನ್ನು ಚರ್ಚಿಸುತ್ತಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಕೇಂದ್ರದಲ್ಲಿ ಪೂರ್ಣ ಐದು ವರ್ಷ ಮತ್ತು ರಾಜ್ಯದಲ್ಲಿ ಎರಡು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದರು ಮಂದಿರ ನಿರ್ಮಾಣ ಯಾಕೆ ಮುಂದಕ್ಕೆ ಕದಲಲಿಲ್ಲ ಎನ್ನುವ ಪ್ರಶ್ನೆ ಜಾತಿ ಸಮೀಕರಣದ ಹೊರತಾಗಿಯೂ ಬಿಜೆಪಿಯನ್ನು ಇಲ್ಲಿ ಮೆತ್ತಗಾಗಿಸಿದೆ ಎಂಬುದು ಸಮೀಕ್ಷೆಯ ವಾದ.

ಬಿಜೆಪಿ ಪಾಲಿಗೆ ಈ ಸಲ ಉತ್ತರ ಪ್ರದೇಶದಲ್ಲಿ ಗಣನೀಯ ಪ್ರತಿಕೂಲವಾಗಲಿದೆ ಎಂದು ಸಮೀಕ್ಷೆ ಗುರುತಿಸಿರುವ ಮತ್ತೊಂದು ವರ್ಗವೆಂದರೆ ಅದು ಮಹಿಳೆಯರು!

ಆದರೆ ಆ ಮಹಿಳೆಯರಿಗೆ ಸಿಕ್ಕಿದ್ದು ನೋಟುರದ್ಧತಿಯ ದೊಡ್ಡ ಶಾಕ್! ಆಂಥ್ರೋ.ಎಐ ಸಮೀಕ್ಷೆಯಿಂದ ತಿಳಿದುಬಂದಂತೆ, ಸಣ್ಣ ಪ್ರಮಾಣದಲ್ಲಿ ಗಂಡಸರು ಈಗಲೂ `ನೋಟು ರದ್ಧತಿಯಿಂದ ಶ್ರೀಮಂತರಿಗೆ ಹೊಡೆತ ಬಿದ್ದಿದೆ’ ಎಂಬ ತರ್ಕದಲ್ಲೇ ತೇಲಾಡುತ್ತಿದ್ದರೂ; ತಮ್ಮ ಸಣ್ಣ ಉಳಿತಾಯಗಳು ಕೈಬಿಟ್ಟುಹೋಗಿ, ಸಣ್ಣಪುಟ್ಟ ಜೀವನಾಧಾರ ಗುಡಿಕೈಗಾರಿಕೆಗಳು, ಕಸುಬುಗಳು ನಷ್ಟಕ್ಕೆ ತುತ್ತಾದ ಪ್ರಾಯೋಗಿಕ ಸಂಕಟವನ್ನು ಅನುಭವಿಸಿರುವ ಮಹಿಳೆಯರು ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.

ಇನ್ನು ಗೋರಕ್ಷಕರಿಂದಾಗಿ ಉಲ್ಬಣಗೊಂಡಿರುವ ಬೀಡಾಡಿ ದನಗಳ ಸಮಸ್ಯೆಗಳು, ಅತಿಹೆಚ್ಚು ಪ್ರಚಾರಕ್ಕಷ್ಟೇ ಸೀಮಿತಗೊಂಡು ತಮ್ಮ ಪ್ರಯೋಜನಕ್ಕೆ ಬಾರದ ಸರ್ಕಾರಿ ಯೋಜನೆಗಳೂ ಈ ಮಹಿಳೆಯರ ಸಿಟ್ಟನ್ನು ಹೆಚ್ಚಿಸಿವೆ ಎನ್ನುತ್ತಿದೆ ಸಮೀಕ್ಷೆ.

ಬಿಜೆಪಿ ವಿರುದ್ಧ ಉತ್ತರ ಪ್ರದೇಶದ ಉದ್ದಗಲಕ್ಕೂ ಹರಿದಾಡುತ್ತಿರುವ ಇಂತಹ ಅಂಡರ್ ಕರೆಂಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಬರುತ್ತಿದ್ದು, ಸೀಟು ಗಳಿಕೆಯ ದೃಷ್ಟಿಯಿಂದ ಬಿಜೆಪಿಗೆ ಇಲ್ಲಿ ದೊಡ್ಡ ಭೂಕಂಪನವೇ ಕಾದಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಆಧಾರ: Anthro.Ai.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...