Homeನಿಜವೋ ಸುಳ್ಳೋಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?

ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?

ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ ಎಂದಿದ್ದರು

- Advertisement -
- Advertisement -

ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?
ವರನಟ ಡಾ. ರಾಜ್ ಮತ್ತು ಇಂದಿರಾಗಾಂಧಿ ನಡುವೆ ನರೇಂದ್ರ ಮೋದಿ!

ಮಿಥ್ಯ: ಇಂಥದೊಂದು ಫೋಟೊ ಸಾಕಷ್ಟು ವೈರಲ್ ಆಗಿದೆ. ಅದು ಗುಜರಾತಿನಲ್ಲೇ ಹೆಚ್ಚು ಓಡಾಡುತ್ತಿದ್ದು, ಈ ಫೋಟೊ ಬಳಸುವವರ ಟಾರ್ಗೆಟ್ ನರೇಂದ್ರ ಮೋದಿ! ‘ನೋಡ್ರಪ್ಪ ನಿಮ್ಮ ಮೋದಿ ಸಾಬ್ ಕೂಡ ಕಾಂಗ್ರೆಸ್‍ಮನ್ ಆಗಿದ್ದ. ಈಗ ಏನ್ ಹೇಳ್ತೀರಿ ಭಕ್ತರೇ?’ ಎಂದು ಕಿಚಾಯಿಸುವ ಸಂದೇಶವನ್ನು ತೇಲಿಬಿಡಲಾಗಿದೆ. ‘ವೊಟ್ ಫಾರ್ ಎಐಎಂಐಎಂ’ ಫೇಸ್‍ಬುಕ್ ಪುಟದಲ್ಲಿ ಇದು 5 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದ್ದರೆ, ಇನ್ನೊಂದು ಫೇಸ್‍ಬುಕ್ ಪುಟದಲ್ಲಿ 6 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಸತ್ಯ: ಅಂದಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಕನ್ನಡದ ಹೆಮ್ಮೆ ಡಾ. ರಾಜಕುಮಾರ್ ಮಧ್ಯೆ ಯುವಕ ಮೋದಿ ಇರುವ ಈ ಫೋಟೋ ನಕಲಿ. ಇದನ್ನು ಫೋಟೊಶಾಪ್ ಮಾಡಲಾಗಿದೆ. ‘ಮೋದಿಯೂ ನಮ್ಮವನೇ ಆಗಿದ್ದ’ ಎಂದು ಕಾಂಗ್ರೆಸ್‍ನವರು ಈ ಕೆಲಸ ಮಾಡಿರಲಿಕ್ಕಿಲ್ಲ. ಆದರೆ ಎಐಎಂಐಎಂ ಫೇಸ್‍ಬುಕ್ ಪೇಜ್‍ನಿಂದ ಹೆಚ್ಚು ಶೇರ್ ಆಗಿರುವುದನ್ನು ನೋಡಿದರೆ, ಆ ಪಾರ್ಟಿ ಕಡೆಯವರು ಮಾಡಿರುವ ಸಾಧ್ಯತೆ ಇದ್ದು, ನೋಡಿ ಕಾಂಗ್ರೆಸ್, ಬಿಜೆಪಿ, ಇಂದಿರಾ, ಮೋದಿ ಎಲ್ಲ ಒಂದೇ ಎಂದು ಕಿಚಾಯಿಸುವ ಉದ್ದೇಶವಿರಬಹುದು. ಒಟ್ಟಿನಲ್ಲಿ ಎರಡೂ ಸಾಧ್ಯತೆಯಿವೆ.

ಈ ನಕಲಿ ಫೋಟೊದಲ್ಲಿ ಇಂದಿರಾ ಮತ್ತು ರಾಜ್ ಮಧ್ಯದಿಂದ ಮುಖ ಕಾಣುವಂತೆ ಹಿಂದಿನ ಸಾಲಿನಲ್ಲಿ ಮೋದಿ ಮುಖ ತುರುಕಲಾಗಿದೆ. ವೈರಲ್ ಮಾಡಿದವರು ರಾಜ್ ಹೆಸರನ್ನು ಎಲ್ಲೂ ಬಳಸಿಲ್ಲ. altnews ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‍ನಲ್ಲಿ ಪರಿಶೀಲಿಸಿದಾಗ, ದಿ ಕ್ವಿಂಟ್ ಪೋರ್ಟಲ್‍ನಲ್ಲಿ ‘Karnataka’s  reluctant politician: The Life and Times of ‘Annavru’ ಎಂಬ ಲೇಖನವಿದ್ದು ಅದರಲ್ಲಿ ಓರಿಜಿನಲ್ ಫೋಟೊ ಸಿಕ್ಕಿದೆ. ಸಂಗೀತ ಕಾರ್ಯಕ್ರಮವೊಂದರಲ್ಲಿ ತೆಗೆದ ಫೋಟೊ ಇದು. ಆ ಫೋಟೊದಲ್ಲಿ ಮೋದಿ ಮೂತಿ ಇಲ್ಲ. ಈ ಫೋಟೊವನ್ನು ಫೋಟೊಶಾಪ್ ಮಾಡಿ ಮೋದಿಯನ್ನು ತುರುಕಲಾಗಿದೆ.

ಓರಿಜಿನಲ್ ಫೋಟೊ

ನಮ್ಮ ಓದುಗರಿಗಾಗಿ ನಾನುಗೌರಿ ಡೆಸ್ಕ್ ಈ ಲೇಖನ ಹುಡುಕಿ ಓದಿದಾಗ, ಅದನ್ನು ದಿ ಕ್ವಿಂಟ್‍ಗೆ ಟಿ.ಎಂ. ವೀರರಾಘವನ್ 2018ರಲ್ಲಿ ಬರೆದಿದ್ದು 24-04-2019ರಂದು ಮತ್ತೆ ಅಪ್‍ಡೇಟ್ ಮಾಡಲಾಗಿದೆ. ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ. ಹಲವಾರು ಸಲ ರಾಜಕೀಯ ಪಕ್ಷಗಳು ಅವರಿಗೆ ದುಂಬಾಲು ಬಿದ್ದರೂ ರಾಜ್ ಎಂದೂ ಒಪ್ಪಿಕೊಳ್ಳಲಿಲ್ಲ. 1978ರಲ್ಲಿ ಚಿಕ್ಕಮಗಳೂರು ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್‍ರನ್ನು ಕಣಕ್ಕಳಿಸಲು ಜನತಾ ಪಕ್ಷ ಯತ್ನಿಸಿತ್ತು ಎಂಬುದನ್ನು, ರಾಜ್ ಅದನ್ನು ನಿರಾಕರಿಸಿದ್ದರು ಎಂಬುದನ್ನು ಲೇಖನದಲ್ಲಿ ಬರೆಯಲಾಗಿದೆ.

ಫೋಟೊ ಕೃಪೆ ಸಂಗೀತಾ ಮ್ಯುಸಿಕ್ ಎಂದಿದ್ದು, ಅವರ ವೆಬ್‍ಸೈಟಿನ ಆಲ್ಬಮ್‍ನಲ್ಲಿ ಈ ಫೋಟೊ ಕಂಡುಬಂತು. ಸಂಗೀಯ ಮ್ಯೂಸಿಕ್‍ನವರ ಕಾರ್ಯಕ್ರಮಕ್ಕೆ ಇಂದಿರಾ ಗಾಂಧಿಯವರನ್ನು ಕರೆಸಿದಾಗ ಈ ಫೋಟೊ ಕ್ಲಿಕ್ಕಿಸಲಾಗಿದೆ. ಚಿತ್ರದಲ್ಲಿ ಪಾರ್ವತಮ್ಮ ರಾಜಕುಮಾರ್, ರಾಜ್ ಸಹೋದರಿ ಅವರನ್ನು ಕಾಣಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...