Homeಮುಖಪುಟಕಾಲು ನಡಿಗೆಯ ದಿಗಂಬರ ಶ್ರಮಣಿಕೆ, ಸತ್ಯಶೋಧನೆಯ ಸಾರ್ಥಕತೆ: ಕೇಶವ ಮಳಗಿ

ಕಾಲು ನಡಿಗೆಯ ದಿಗಂಬರ ಶ್ರಮಣಿಕೆ, ಸತ್ಯಶೋಧನೆಯ ಸಾರ್ಥಕತೆ: ಕೇಶವ ಮಳಗಿ

- Advertisement -
- Advertisement -

ತಾನು ಹುಟ್ಟಿ ಎರಡೂವರೆ ಸಾವಿರ ವರ್ಷಗಳ ಬಳಿಕವೂ ಜೈನಧರ್ಮದ ಸನ್ಯಾಸಿಗಳು ಇಂದಿಗೂ ಕಾಲು ನಡಿಗೆಯಲ್ಲಿಯೇ ತಮ್ಮ ಪರಿಕ್ರಮಣವನ್ನು ಪೂರೈಸಬೇಕಿರುವುದು ನನ್ನನ್ನು ವರ್ಷಗಳಿಂದ ವಿಸ್ಮಯ, ಅಚ್ಚರಿ ಮತ್ತು ಜಿಜ್ಞಾಸೆಗೆ ತಳ್ಳಿದೆ. ಬೇರಾವ ದರ್ಶನಗಳು ಇಂಥದ್ದೊಂದು ಕಠಿಣ ನಿಯಮವನ್ನು ಪಾಲಿಸಿಕೊಂಡು ಬಂದಿವೆಯೋ ಗೊತ್ತಿಲ್ಲ.
ಪರಿತ್ಯಾಗಿ ದಿಗಂಬರ ಮೊದಲು ಎಲ್ಲವನ್ನೂ ಕಳಚಬೇಕು. ಬಳಿಕ ತನ್ನನ್ನು ನಿಸರ್ಗಕ್ಕೆ ಒಪ್ಪಿಸಿಕೊಳ್ಳಬೇಕು. ಲೋಕವನ್ನು ನಗ್ನ ಸ್ಥಿತಿಯಲ್ಲಿಯೇ ಎದುರುಕೊಳ್ಳುತ್ತಲೇ ಅಂತಿಮವಾಗಿ ಪ್ರಕೃತಿಯಲ್ಲಿ ಒಂದಾಗಬೇಕು.

ಇಲ್ಲಿ ಎಲ್ಲವೂ ಅನಿರೀಕ್ಷಿತ, ದುರ್ಗಮ, ಅಗಮ್ಯ, ಅಗೋಚರ. ನಿರೀಕ್ಷಿತವಾದುದೆಂದರೆ ಆ ಕ್ಷಣಕ್ಕೆ ಎದುರಾಗುವ ಅನುಭವ ಮಾತ್ರ. ದೇಹದ ಐದೂ ಬಗೆಯ ‘ಗೋಚರ’ ಇಂದ್ರೀಯಗಳು; ಏಕಕಾಲಕ್ಕೆ ಅಸ್ತಿತ್ವದಲ್ಲಿರುವ ಅಗೋಚರವಾದ ಹಲ ಬಗೆಯ ‘ಮನಸ್ಸು’ಗಳನ್ನು ಈ ಸವಣ ‘ಪಂಚಭೂತ’ಗಳೊಂದಿಗೆ ನೇರ ಮುಖಾಮುಖಿಯಾಗಿಸಬೇಕಾಗುತ್ತದೆ. ರಾಜರಸ್ತೆಯ ನುಣುಪು, ಕಾಡಿನ ಕಾಲುದಾರಿಗಳ ಹುಲ್ಲು-ಮುಳ್ಳು, ಪಾದಕ್ಕೆ ಆಣೆ ಎಬ್ಬಿಸಬಲ್ಲ ಹಳಕು ಹರಳು, ಬೆಳಚುಗಲ್ಲು ತುಳಿದು ಮುಂದೆ ಹೋಗಬೇಕಾಗುತ್ತದೆ. ಭಯಾನಕ ಬಿಸಿಲು, ಗಾಳಿ, ತಂಪನೀವ ನೆರಳು, ಹೂವಿನಂತೆ ತಲೆ ಸವರುವ ತುಂತುರು ಮಳೆಗಳ ಕೃಪೆಯೂ ಒಂದೊಮ್ಮೆ ದೊರಕೀತು. ಎಲ್ಲವೂ ನಿಸರ್ಗದ ಕೃಪೆಯಷ್ಟೇ! ಸಾಯುಜ್ಯದ ದಾರಿಯಲ್ಲಿ ಅದೂ ಒಂದು ಅನುಭವ, ಅಷ್ಟೇ! ಅದೇ ಎಲ್ಲವೂ ಅಲ್ಲ.

ಇತಿಹಾಸವು ರೂಪಿಸುವ ಮುಖದ ಮೇಲಿನ ಗಾಯಗಳ ನಿಜವಾದ ವ್ಯಂಗ್ಯ ಮತ್ತು ದುರಂತವೆಂದರೆ, ಈ ಗಾಯಗಳು ಉಳಿದವರಿಗೆ ಸ್ಫಟಿಕದಂತೆ ಗೋಚರಿಸುತ್ತವೆ, ಆದರೆ ಅವನ್ನು ಹೊತ್ತವರಿಗೆ ಮಾತ್ರ ಕಾಣಿಸುವುದಿಲ್ಲ. ಮನುಷ್ಯಲೋಕದ ಈ ರೂಕ್ಷ ವಾಸ್ತವವನ್ನು ಮರೆಯಾಗಿಸಲೆಂಬಂತೆ ನಮ್ಮ ಜನಪದ ದೈವಾರಾಧನೆಗಳು ‘ಮುಖಮರೆ’ ಅಥವ ಬೇರೊಂದು ರೂಪವನ್ನು ತೊಟ್ಟು ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಸತ್ಯದ ನಿಯಮವನ್ನು ‘ಕಾರಣಿಕೆ’ಯ ಮೂಲಕ ಅರುಹುತ್ತವೆ! ಇವು ಬೇರೊಂದು ಲೋಕದಿಂದ ಬರುತ್ತಿದ್ದರೂ ನಮ್ಮ ಪೂರ್ವಿಕರದೇ ಆಗಿರುತ್ತವೆ. ಅಷ್ಟರಮಟ್ಟಿಗೆ ದೈವಕ್ಕೆ ನಮ್ಮ ಬದುಕಿನ ಪಡಿಪಾಟಲು ಏನೆಂದು ತಿಳಿದಿದೆ! ಹೀಗೆ ತಿಳಿದಿರುವುದರಿಂದಲೇ ಅವು ನಮ್ಮನ್ನು ವಿಮರ್ಶಿಸಿ, ಶಿಕ್ಷಿಸಿ, ಶಮನಗೊಳಿಸಬಲ್ಲುವು.
ಮೇಲಿನ ಎಲ್ಲ ಮಾತುಗಳು ಸಾಪೇಕ್ಷಿತ ಸತ್ಯಶೋಧಕನಿಗೂ ಅನ್ವಯ. ಆತ ಸಿದ್ಧಮಾದರಿಯ ಪರಿಕರಗಳೊಂದಿಗೆ ಎಲ್ಲವನ್ನೂ ಅರಿತುಕೊಳ್ಳುವೆ ಎಂಬ ಹಂಕಾರದಲಿ ಹೊರಡದಿರುವ ‘ದಿಗಂಬರ.’

ಒಂದು ಸಿದ್ಧಾಂತಕ್ಕೆ ಕಟ್ಟು ಬೀಳದೆ, ಒಂದು ಕಡೆ ನೆಲೆ ನಿಲ್ಲದೆ, ನಿರಂತರ ಜಂಗಮ ತತ್ತ್ವದಲಿ ನಂಬಿಕೆಯಿಟ್ಟ ಸವಣ.
ಒಂದೇ ಬಗೆಯ ನಾಲಗೆ ರುಚಿಗೆ (ಮಾತು) ಕಟ್ಟು ಬೀಳದೆ ಒಡಲನ್ನು ಹಸಿವಿನಿಂದ ಕಂಗೆಡಿಸಬಲ್ಲ ಸಂಯಮಿ. ಉಪವಾಸಿಗ, ಉಪಾಸಕ.

ಏಕಬಗೆಯ ಜನರನ್ನು ನೋಡುತ್ತ, ಭೇಟಿಯಾಗುತ್ತ ಲೋಲುಪ ವಾಚಾಳಿಯಾಗುವ ಬದಲು ದೇಶಭಾಷಿಕ ಗಡಿಗಳ ಮೀರಿ ನಡೆದು ಉಳಿದ ಜನರಾಡುವ ಸೊಲ್ಲಿನ ಒಂದೆರಡು ಶಬ್ದಗಳನು ಕಲಿತು, ಅರಿತುಕೊಳ್ಳುವ ಕಲಿಕೆದಾರ.

ಸ್ಥಿತಪ್ರಜ್ಞ, ಸ್ಥಾವರ, ಏಕತಾನದ ಕಟ್ಟುಪಾಡುಗಳಿಗಿಂತ ಕಟ್ಟು ಬಿಚ್ಚಿಟ್ಟ, ಕಗ್ಗಂಟಾದ, ಚಿನ್ನ ಮತ್ತು ಚಿಂದಿಗಳಿರುವ ಗಂಟನ್ನು ಬಿಚ್ಚಿ ನೋಡುವ ‘ಬಹುತ್ವ’ದ ಕುತೂಹಲಿ.
ಕಾಲು ನಡಿಗೆ ಕೂಡ ಸೊಗಸುಗಾರರ ‘ರೂಢಿಸಿಕೊಂಡ ಶೈಲಿಯ’ ನಡಿಗೆಯಾಗುವ;
ಪಡೆದ ಅನುಭವವು (ಕ್ಷೇತ್ರಕಾರ್ಯ) ಹಳಸಿದ ಅನ್ನವಾಗುವ, ಕೇಳಿಸಿಕೊಂಡಿದ್ದೇನೆಂಬ ಭ್ರಮೆಯಲ್ಲಿರುವ ‘ಕಾಲಜ್ಞಾನ’ದ ಮಾತು ಕೂಡ ಲೊಳಲೊಟ್ಟೆಯಾಗುವ ಅಪಾಯ ಸತ್ಯಶೋಧಕನಿಗೆ ಕಟ್ಟಿಟ್ಟ ಬುತ್ತಿ. ಆತ ‘ತಾನೊಬ್ಬ ದಿಗಂಬರ, ‘ಕವಣಿಗ’. ತನ್ನ ಕೈಯಲ್ಲಿ ಯಾವ ಪರಿಕರಗಳೂ ಇಲ್ಲ, ತಾನು ನಡೆದು ಸವೆಸಬೇಕಾದ ದಾರಿ ಬಲು ದೂರ. ಇನ್ನೂ ಕೇಳಬೇಕಾದ ನಿಸರ್ಗದ ಸಹಜ ಚೆಲುವಿನ ದನಿಗಳು, ಅದು ನೀಡುವ ಎಲ್ಲ ಬಗೆಯ ಅನುಭವಗಳು, ಕೇಳದ ಮಾತುಗಳು ಬಹಳ ಇವೆ. ಸಿಕ್ಕ ಮಾನವ ದಿವ್ಯಾನುಭವವನ್ನೇ ಕವಣೆ*ಯನ್ನಾಗಿ ಮಾಡಿಕೊಳ್ಳಬೇಕು’ ಎಂದು ಅರಿತಿದ್ದರೆ ಆತನ ಅನುಭವದ ಗಂಟಿನ ಬುತ್ತಿ ಮುಂದಿನವರ ನಾಲಗೆಗೆ ತುಸು ರುಚಿಯನ್ನು, ಕಣ್ಣಗೆ ಪಸೆಯನ್ನು, ಒಡಲಿಗೆ ತಣ್ಣಗಿನ ಭಾವವನ್ನು ಕಾಲಿಗೆ ಕಸುವನ್ನು ನೀಡುತ್ತವೆ.

ಇಷ್ಟೂ ಮಾತುಗಳನ್ನು ಬರೆಯುತ್ತಿರುವುದು ನನಗಿಂತ ಕಿರಿಯರಾದ ಆದರೆ ವಿನಯ, ಸಂಯಮ, ಅಪಾರ ಸಹನೆಗಳನ್ನು ಹೊಂದಿ ಹೆಜ್ಜೆ ಇಡುತ್ತಿರುವ ದಿಗಂಬರ ಸವಣ ಎ.ಎಸ್‌. ಪ್ರಭಾಕರ ಅವರಿಗಾಗಿ. ಮೇಲಿನ ಮಾತುಗಳಿಗೆ ಸಮರ್ಥನೆಯಂತೆ ಅವರ ‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕದ ಪ್ರಬಂಧಗಳು ರೂಪುಗೊಂಡಿವೆ. ಅಲ್ಲಿ ಹೆಮ್ಮರವಾಗುವ ಬೀಜದ ಮಾತುಗಳು ಅಡಗಿವೆ.

ಈ ಭಾನುವಾರ ಬಿಡುಗಡೆಯಾಗಿರುವ ಅವರ ಈ ಪುಸ್ತಕ ಕೊಂಡು ಓದಿ. ಪ್ರಭಾಕರ ಅವರ ಬರಿಗಾಲಿನ ಹೆಜ್ಜೆ ಬಹುದೂರ ಸಾಗಲಿ. ಅಂತಹ ಸಾಮರ್ಥ್ಯ ಅವರಿಗಿದೆ.
(ಇದೇ ಮಾತುಗಳನ್ನು ನನಗಿಂತ ವಯಸ್ಸಿನಲ್ಲಿಯಷ್ಟೇ ಚಿಕ್ಕವರಾದ ಸುರೇಶ ನಾಗಲಮಡಿಕೆ, ಅರುಣ್‌ ಜೋಳದಕೂಡ್ಲಿಗಿ, ಸುಧಾಕರ ದೇವಾಡಿಗ, ಆರಡಿ ಮಲ್ಲಯ್ಯ ಕಟ್ಟೇರ, ರಂಗನಾಥ ಕಂಟನಕುಂಟೆ, ವಿನಯ ನಂದೀಹಾಳ ಮತ್ತು ಅಂಥ ಯುವ ಸಂಶೋಧರ ಬಗ್ಗೆಯೂ ಹೇಳಬಹುದು.)

*
ಕವಣೆ: ಕ್ಲಾದ್‌ ಲೆವಿ ಸ್ಟ್ರಾಸ್‌ ಇದನ್ನು ಬ್ರಿಕೊಲೆಜ್‌ ಎನ್ನುತ್ತಾನೆ. ಗ್ರಾಹ್ಯ ಮಾನವ ಅನುಭವದಲ್ಲಿ ಕೈಗೆ ದೊರಕಿದ್ದನ್ನೇ ಸತತ ಪರಿಶ್ರಮದ ಮೂಲಕ ಪಳಗಿಸಿ, ತಾನೇ ಮಾಡುತ್ತ, ಮಾಡುತ್ತ ಕಲಿಯುವ ಅಥವ ಪರಿಕರವೊಂದನ್ನು ರೂಪಿಸಿಕೊಳ್ಳುವ ಪ್ರಕ್ರಿಯೆ.

  • ಕೇಶವ ಮಳಗಿ 

ಪುಸ್ತಕ ಕೊಳ್ಳಲು ಬಯಸುವವರು ಕೆಳಗಿನ ಕೊಂಡಿ ಬಳಸಿ

ಚಹರೆಗಳೆಂದರೆ ಗಾಯಗಳೂ ಹೌದು -ಸಮುದಾಯ ಅಧ್ಯಯನ ಕುರಿತ ಕಥನಗಳು
ಲೇಖಕರು- ಡಾ.ಎ.ಎಸ್.ಪ್ರಭಾಕರ್
ಬೆಲೆ- 250/-
ಗೂಗಲ್ ಪೆ- 9880302817

ಆನ್‌ಲೈನ್ ಮೂಲಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ‘ಚಹರೆಗಳೆಂದರೆ ಗಾಯಗಳೂ ಹೌದು’ ಒಂದು ಸಕಾಲಿಕ ಮೌಲಿಕ ಕೃತಿ – ನಾ ದಿವಾಕರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...