Homeಮುಖಪುಟಕಾಲು ನಡಿಗೆಯ ದಿಗಂಬರ ಶ್ರಮಣಿಕೆ, ಸತ್ಯಶೋಧನೆಯ ಸಾರ್ಥಕತೆ: ಕೇಶವ ಮಳಗಿ

ಕಾಲು ನಡಿಗೆಯ ದಿಗಂಬರ ಶ್ರಮಣಿಕೆ, ಸತ್ಯಶೋಧನೆಯ ಸಾರ್ಥಕತೆ: ಕೇಶವ ಮಳಗಿ

- Advertisement -
- Advertisement -

ತಾನು ಹುಟ್ಟಿ ಎರಡೂವರೆ ಸಾವಿರ ವರ್ಷಗಳ ಬಳಿಕವೂ ಜೈನಧರ್ಮದ ಸನ್ಯಾಸಿಗಳು ಇಂದಿಗೂ ಕಾಲು ನಡಿಗೆಯಲ್ಲಿಯೇ ತಮ್ಮ ಪರಿಕ್ರಮಣವನ್ನು ಪೂರೈಸಬೇಕಿರುವುದು ನನ್ನನ್ನು ವರ್ಷಗಳಿಂದ ವಿಸ್ಮಯ, ಅಚ್ಚರಿ ಮತ್ತು ಜಿಜ್ಞಾಸೆಗೆ ತಳ್ಳಿದೆ. ಬೇರಾವ ದರ್ಶನಗಳು ಇಂಥದ್ದೊಂದು ಕಠಿಣ ನಿಯಮವನ್ನು ಪಾಲಿಸಿಕೊಂಡು ಬಂದಿವೆಯೋ ಗೊತ್ತಿಲ್ಲ.
ಪರಿತ್ಯಾಗಿ ದಿಗಂಬರ ಮೊದಲು ಎಲ್ಲವನ್ನೂ ಕಳಚಬೇಕು. ಬಳಿಕ ತನ್ನನ್ನು ನಿಸರ್ಗಕ್ಕೆ ಒಪ್ಪಿಸಿಕೊಳ್ಳಬೇಕು. ಲೋಕವನ್ನು ನಗ್ನ ಸ್ಥಿತಿಯಲ್ಲಿಯೇ ಎದುರುಕೊಳ್ಳುತ್ತಲೇ ಅಂತಿಮವಾಗಿ ಪ್ರಕೃತಿಯಲ್ಲಿ ಒಂದಾಗಬೇಕು.

ಇಲ್ಲಿ ಎಲ್ಲವೂ ಅನಿರೀಕ್ಷಿತ, ದುರ್ಗಮ, ಅಗಮ್ಯ, ಅಗೋಚರ. ನಿರೀಕ್ಷಿತವಾದುದೆಂದರೆ ಆ ಕ್ಷಣಕ್ಕೆ ಎದುರಾಗುವ ಅನುಭವ ಮಾತ್ರ. ದೇಹದ ಐದೂ ಬಗೆಯ ‘ಗೋಚರ’ ಇಂದ್ರೀಯಗಳು; ಏಕಕಾಲಕ್ಕೆ ಅಸ್ತಿತ್ವದಲ್ಲಿರುವ ಅಗೋಚರವಾದ ಹಲ ಬಗೆಯ ‘ಮನಸ್ಸು’ಗಳನ್ನು ಈ ಸವಣ ‘ಪಂಚಭೂತ’ಗಳೊಂದಿಗೆ ನೇರ ಮುಖಾಮುಖಿಯಾಗಿಸಬೇಕಾಗುತ್ತದೆ. ರಾಜರಸ್ತೆಯ ನುಣುಪು, ಕಾಡಿನ ಕಾಲುದಾರಿಗಳ ಹುಲ್ಲು-ಮುಳ್ಳು, ಪಾದಕ್ಕೆ ಆಣೆ ಎಬ್ಬಿಸಬಲ್ಲ ಹಳಕು ಹರಳು, ಬೆಳಚುಗಲ್ಲು ತುಳಿದು ಮುಂದೆ ಹೋಗಬೇಕಾಗುತ್ತದೆ. ಭಯಾನಕ ಬಿಸಿಲು, ಗಾಳಿ, ತಂಪನೀವ ನೆರಳು, ಹೂವಿನಂತೆ ತಲೆ ಸವರುವ ತುಂತುರು ಮಳೆಗಳ ಕೃಪೆಯೂ ಒಂದೊಮ್ಮೆ ದೊರಕೀತು. ಎಲ್ಲವೂ ನಿಸರ್ಗದ ಕೃಪೆಯಷ್ಟೇ! ಸಾಯುಜ್ಯದ ದಾರಿಯಲ್ಲಿ ಅದೂ ಒಂದು ಅನುಭವ, ಅಷ್ಟೇ! ಅದೇ ಎಲ್ಲವೂ ಅಲ್ಲ.

ಇತಿಹಾಸವು ರೂಪಿಸುವ ಮುಖದ ಮೇಲಿನ ಗಾಯಗಳ ನಿಜವಾದ ವ್ಯಂಗ್ಯ ಮತ್ತು ದುರಂತವೆಂದರೆ, ಈ ಗಾಯಗಳು ಉಳಿದವರಿಗೆ ಸ್ಫಟಿಕದಂತೆ ಗೋಚರಿಸುತ್ತವೆ, ಆದರೆ ಅವನ್ನು ಹೊತ್ತವರಿಗೆ ಮಾತ್ರ ಕಾಣಿಸುವುದಿಲ್ಲ. ಮನುಷ್ಯಲೋಕದ ಈ ರೂಕ್ಷ ವಾಸ್ತವವನ್ನು ಮರೆಯಾಗಿಸಲೆಂಬಂತೆ ನಮ್ಮ ಜನಪದ ದೈವಾರಾಧನೆಗಳು ‘ಮುಖಮರೆ’ ಅಥವ ಬೇರೊಂದು ರೂಪವನ್ನು ತೊಟ್ಟು ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಸತ್ಯದ ನಿಯಮವನ್ನು ‘ಕಾರಣಿಕೆ’ಯ ಮೂಲಕ ಅರುಹುತ್ತವೆ! ಇವು ಬೇರೊಂದು ಲೋಕದಿಂದ ಬರುತ್ತಿದ್ದರೂ ನಮ್ಮ ಪೂರ್ವಿಕರದೇ ಆಗಿರುತ್ತವೆ. ಅಷ್ಟರಮಟ್ಟಿಗೆ ದೈವಕ್ಕೆ ನಮ್ಮ ಬದುಕಿನ ಪಡಿಪಾಟಲು ಏನೆಂದು ತಿಳಿದಿದೆ! ಹೀಗೆ ತಿಳಿದಿರುವುದರಿಂದಲೇ ಅವು ನಮ್ಮನ್ನು ವಿಮರ್ಶಿಸಿ, ಶಿಕ್ಷಿಸಿ, ಶಮನಗೊಳಿಸಬಲ್ಲುವು.
ಮೇಲಿನ ಎಲ್ಲ ಮಾತುಗಳು ಸಾಪೇಕ್ಷಿತ ಸತ್ಯಶೋಧಕನಿಗೂ ಅನ್ವಯ. ಆತ ಸಿದ್ಧಮಾದರಿಯ ಪರಿಕರಗಳೊಂದಿಗೆ ಎಲ್ಲವನ್ನೂ ಅರಿತುಕೊಳ್ಳುವೆ ಎಂಬ ಹಂಕಾರದಲಿ ಹೊರಡದಿರುವ ‘ದಿಗಂಬರ.’

ಒಂದು ಸಿದ್ಧಾಂತಕ್ಕೆ ಕಟ್ಟು ಬೀಳದೆ, ಒಂದು ಕಡೆ ನೆಲೆ ನಿಲ್ಲದೆ, ನಿರಂತರ ಜಂಗಮ ತತ್ತ್ವದಲಿ ನಂಬಿಕೆಯಿಟ್ಟ ಸವಣ.
ಒಂದೇ ಬಗೆಯ ನಾಲಗೆ ರುಚಿಗೆ (ಮಾತು) ಕಟ್ಟು ಬೀಳದೆ ಒಡಲನ್ನು ಹಸಿವಿನಿಂದ ಕಂಗೆಡಿಸಬಲ್ಲ ಸಂಯಮಿ. ಉಪವಾಸಿಗ, ಉಪಾಸಕ.

ಏಕಬಗೆಯ ಜನರನ್ನು ನೋಡುತ್ತ, ಭೇಟಿಯಾಗುತ್ತ ಲೋಲುಪ ವಾಚಾಳಿಯಾಗುವ ಬದಲು ದೇಶಭಾಷಿಕ ಗಡಿಗಳ ಮೀರಿ ನಡೆದು ಉಳಿದ ಜನರಾಡುವ ಸೊಲ್ಲಿನ ಒಂದೆರಡು ಶಬ್ದಗಳನು ಕಲಿತು, ಅರಿತುಕೊಳ್ಳುವ ಕಲಿಕೆದಾರ.

ಸ್ಥಿತಪ್ರಜ್ಞ, ಸ್ಥಾವರ, ಏಕತಾನದ ಕಟ್ಟುಪಾಡುಗಳಿಗಿಂತ ಕಟ್ಟು ಬಿಚ್ಚಿಟ್ಟ, ಕಗ್ಗಂಟಾದ, ಚಿನ್ನ ಮತ್ತು ಚಿಂದಿಗಳಿರುವ ಗಂಟನ್ನು ಬಿಚ್ಚಿ ನೋಡುವ ‘ಬಹುತ್ವ’ದ ಕುತೂಹಲಿ.
ಕಾಲು ನಡಿಗೆ ಕೂಡ ಸೊಗಸುಗಾರರ ‘ರೂಢಿಸಿಕೊಂಡ ಶೈಲಿಯ’ ನಡಿಗೆಯಾಗುವ;
ಪಡೆದ ಅನುಭವವು (ಕ್ಷೇತ್ರಕಾರ್ಯ) ಹಳಸಿದ ಅನ್ನವಾಗುವ, ಕೇಳಿಸಿಕೊಂಡಿದ್ದೇನೆಂಬ ಭ್ರಮೆಯಲ್ಲಿರುವ ‘ಕಾಲಜ್ಞಾನ’ದ ಮಾತು ಕೂಡ ಲೊಳಲೊಟ್ಟೆಯಾಗುವ ಅಪಾಯ ಸತ್ಯಶೋಧಕನಿಗೆ ಕಟ್ಟಿಟ್ಟ ಬುತ್ತಿ. ಆತ ‘ತಾನೊಬ್ಬ ದಿಗಂಬರ, ‘ಕವಣಿಗ’. ತನ್ನ ಕೈಯಲ್ಲಿ ಯಾವ ಪರಿಕರಗಳೂ ಇಲ್ಲ, ತಾನು ನಡೆದು ಸವೆಸಬೇಕಾದ ದಾರಿ ಬಲು ದೂರ. ಇನ್ನೂ ಕೇಳಬೇಕಾದ ನಿಸರ್ಗದ ಸಹಜ ಚೆಲುವಿನ ದನಿಗಳು, ಅದು ನೀಡುವ ಎಲ್ಲ ಬಗೆಯ ಅನುಭವಗಳು, ಕೇಳದ ಮಾತುಗಳು ಬಹಳ ಇವೆ. ಸಿಕ್ಕ ಮಾನವ ದಿವ್ಯಾನುಭವವನ್ನೇ ಕವಣೆ*ಯನ್ನಾಗಿ ಮಾಡಿಕೊಳ್ಳಬೇಕು’ ಎಂದು ಅರಿತಿದ್ದರೆ ಆತನ ಅನುಭವದ ಗಂಟಿನ ಬುತ್ತಿ ಮುಂದಿನವರ ನಾಲಗೆಗೆ ತುಸು ರುಚಿಯನ್ನು, ಕಣ್ಣಗೆ ಪಸೆಯನ್ನು, ಒಡಲಿಗೆ ತಣ್ಣಗಿನ ಭಾವವನ್ನು ಕಾಲಿಗೆ ಕಸುವನ್ನು ನೀಡುತ್ತವೆ.

ಇಷ್ಟೂ ಮಾತುಗಳನ್ನು ಬರೆಯುತ್ತಿರುವುದು ನನಗಿಂತ ಕಿರಿಯರಾದ ಆದರೆ ವಿನಯ, ಸಂಯಮ, ಅಪಾರ ಸಹನೆಗಳನ್ನು ಹೊಂದಿ ಹೆಜ್ಜೆ ಇಡುತ್ತಿರುವ ದಿಗಂಬರ ಸವಣ ಎ.ಎಸ್‌. ಪ್ರಭಾಕರ ಅವರಿಗಾಗಿ. ಮೇಲಿನ ಮಾತುಗಳಿಗೆ ಸಮರ್ಥನೆಯಂತೆ ಅವರ ‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕದ ಪ್ರಬಂಧಗಳು ರೂಪುಗೊಂಡಿವೆ. ಅಲ್ಲಿ ಹೆಮ್ಮರವಾಗುವ ಬೀಜದ ಮಾತುಗಳು ಅಡಗಿವೆ.

ಈ ಭಾನುವಾರ ಬಿಡುಗಡೆಯಾಗಿರುವ ಅವರ ಈ ಪುಸ್ತಕ ಕೊಂಡು ಓದಿ. ಪ್ರಭಾಕರ ಅವರ ಬರಿಗಾಲಿನ ಹೆಜ್ಜೆ ಬಹುದೂರ ಸಾಗಲಿ. ಅಂತಹ ಸಾಮರ್ಥ್ಯ ಅವರಿಗಿದೆ.
(ಇದೇ ಮಾತುಗಳನ್ನು ನನಗಿಂತ ವಯಸ್ಸಿನಲ್ಲಿಯಷ್ಟೇ ಚಿಕ್ಕವರಾದ ಸುರೇಶ ನಾಗಲಮಡಿಕೆ, ಅರುಣ್‌ ಜೋಳದಕೂಡ್ಲಿಗಿ, ಸುಧಾಕರ ದೇವಾಡಿಗ, ಆರಡಿ ಮಲ್ಲಯ್ಯ ಕಟ್ಟೇರ, ರಂಗನಾಥ ಕಂಟನಕುಂಟೆ, ವಿನಯ ನಂದೀಹಾಳ ಮತ್ತು ಅಂಥ ಯುವ ಸಂಶೋಧರ ಬಗ್ಗೆಯೂ ಹೇಳಬಹುದು.)

*
ಕವಣೆ: ಕ್ಲಾದ್‌ ಲೆವಿ ಸ್ಟ್ರಾಸ್‌ ಇದನ್ನು ಬ್ರಿಕೊಲೆಜ್‌ ಎನ್ನುತ್ತಾನೆ. ಗ್ರಾಹ್ಯ ಮಾನವ ಅನುಭವದಲ್ಲಿ ಕೈಗೆ ದೊರಕಿದ್ದನ್ನೇ ಸತತ ಪರಿಶ್ರಮದ ಮೂಲಕ ಪಳಗಿಸಿ, ತಾನೇ ಮಾಡುತ್ತ, ಮಾಡುತ್ತ ಕಲಿಯುವ ಅಥವ ಪರಿಕರವೊಂದನ್ನು ರೂಪಿಸಿಕೊಳ್ಳುವ ಪ್ರಕ್ರಿಯೆ.

  • ಕೇಶವ ಮಳಗಿ 

ಪುಸ್ತಕ ಕೊಳ್ಳಲು ಬಯಸುವವರು ಕೆಳಗಿನ ಕೊಂಡಿ ಬಳಸಿ

ಚಹರೆಗಳೆಂದರೆ ಗಾಯಗಳೂ ಹೌದು -ಸಮುದಾಯ ಅಧ್ಯಯನ ಕುರಿತ ಕಥನಗಳು
ಲೇಖಕರು- ಡಾ.ಎ.ಎಸ್.ಪ್ರಭಾಕರ್
ಬೆಲೆ- 250/-
ಗೂಗಲ್ ಪೆ- 9880302817

ಆನ್‌ಲೈನ್ ಮೂಲಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ‘ಚಹರೆಗಳೆಂದರೆ ಗಾಯಗಳೂ ಹೌದು’ ಒಂದು ಸಕಾಲಿಕ ಮೌಲಿಕ ಕೃತಿ – ನಾ ದಿವಾಕರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...