Homeಮುಖಪುಟಕಾಲು ನಡಿಗೆಯ ದಿಗಂಬರ ಶ್ರಮಣಿಕೆ, ಸತ್ಯಶೋಧನೆಯ ಸಾರ್ಥಕತೆ: ಕೇಶವ ಮಳಗಿ

ಕಾಲು ನಡಿಗೆಯ ದಿಗಂಬರ ಶ್ರಮಣಿಕೆ, ಸತ್ಯಶೋಧನೆಯ ಸಾರ್ಥಕತೆ: ಕೇಶವ ಮಳಗಿ

- Advertisement -
- Advertisement -

ತಾನು ಹುಟ್ಟಿ ಎರಡೂವರೆ ಸಾವಿರ ವರ್ಷಗಳ ಬಳಿಕವೂ ಜೈನಧರ್ಮದ ಸನ್ಯಾಸಿಗಳು ಇಂದಿಗೂ ಕಾಲು ನಡಿಗೆಯಲ್ಲಿಯೇ ತಮ್ಮ ಪರಿಕ್ರಮಣವನ್ನು ಪೂರೈಸಬೇಕಿರುವುದು ನನ್ನನ್ನು ವರ್ಷಗಳಿಂದ ವಿಸ್ಮಯ, ಅಚ್ಚರಿ ಮತ್ತು ಜಿಜ್ಞಾಸೆಗೆ ತಳ್ಳಿದೆ. ಬೇರಾವ ದರ್ಶನಗಳು ಇಂಥದ್ದೊಂದು ಕಠಿಣ ನಿಯಮವನ್ನು ಪಾಲಿಸಿಕೊಂಡು ಬಂದಿವೆಯೋ ಗೊತ್ತಿಲ್ಲ.
ಪರಿತ್ಯಾಗಿ ದಿಗಂಬರ ಮೊದಲು ಎಲ್ಲವನ್ನೂ ಕಳಚಬೇಕು. ಬಳಿಕ ತನ್ನನ್ನು ನಿಸರ್ಗಕ್ಕೆ ಒಪ್ಪಿಸಿಕೊಳ್ಳಬೇಕು. ಲೋಕವನ್ನು ನಗ್ನ ಸ್ಥಿತಿಯಲ್ಲಿಯೇ ಎದುರುಕೊಳ್ಳುತ್ತಲೇ ಅಂತಿಮವಾಗಿ ಪ್ರಕೃತಿಯಲ್ಲಿ ಒಂದಾಗಬೇಕು.

ಇಲ್ಲಿ ಎಲ್ಲವೂ ಅನಿರೀಕ್ಷಿತ, ದುರ್ಗಮ, ಅಗಮ್ಯ, ಅಗೋಚರ. ನಿರೀಕ್ಷಿತವಾದುದೆಂದರೆ ಆ ಕ್ಷಣಕ್ಕೆ ಎದುರಾಗುವ ಅನುಭವ ಮಾತ್ರ. ದೇಹದ ಐದೂ ಬಗೆಯ ‘ಗೋಚರ’ ಇಂದ್ರೀಯಗಳು; ಏಕಕಾಲಕ್ಕೆ ಅಸ್ತಿತ್ವದಲ್ಲಿರುವ ಅಗೋಚರವಾದ ಹಲ ಬಗೆಯ ‘ಮನಸ್ಸು’ಗಳನ್ನು ಈ ಸವಣ ‘ಪಂಚಭೂತ’ಗಳೊಂದಿಗೆ ನೇರ ಮುಖಾಮುಖಿಯಾಗಿಸಬೇಕಾಗುತ್ತದೆ. ರಾಜರಸ್ತೆಯ ನುಣುಪು, ಕಾಡಿನ ಕಾಲುದಾರಿಗಳ ಹುಲ್ಲು-ಮುಳ್ಳು, ಪಾದಕ್ಕೆ ಆಣೆ ಎಬ್ಬಿಸಬಲ್ಲ ಹಳಕು ಹರಳು, ಬೆಳಚುಗಲ್ಲು ತುಳಿದು ಮುಂದೆ ಹೋಗಬೇಕಾಗುತ್ತದೆ. ಭಯಾನಕ ಬಿಸಿಲು, ಗಾಳಿ, ತಂಪನೀವ ನೆರಳು, ಹೂವಿನಂತೆ ತಲೆ ಸವರುವ ತುಂತುರು ಮಳೆಗಳ ಕೃಪೆಯೂ ಒಂದೊಮ್ಮೆ ದೊರಕೀತು. ಎಲ್ಲವೂ ನಿಸರ್ಗದ ಕೃಪೆಯಷ್ಟೇ! ಸಾಯುಜ್ಯದ ದಾರಿಯಲ್ಲಿ ಅದೂ ಒಂದು ಅನುಭವ, ಅಷ್ಟೇ! ಅದೇ ಎಲ್ಲವೂ ಅಲ್ಲ.

ಇತಿಹಾಸವು ರೂಪಿಸುವ ಮುಖದ ಮೇಲಿನ ಗಾಯಗಳ ನಿಜವಾದ ವ್ಯಂಗ್ಯ ಮತ್ತು ದುರಂತವೆಂದರೆ, ಈ ಗಾಯಗಳು ಉಳಿದವರಿಗೆ ಸ್ಫಟಿಕದಂತೆ ಗೋಚರಿಸುತ್ತವೆ, ಆದರೆ ಅವನ್ನು ಹೊತ್ತವರಿಗೆ ಮಾತ್ರ ಕಾಣಿಸುವುದಿಲ್ಲ. ಮನುಷ್ಯಲೋಕದ ಈ ರೂಕ್ಷ ವಾಸ್ತವವನ್ನು ಮರೆಯಾಗಿಸಲೆಂಬಂತೆ ನಮ್ಮ ಜನಪದ ದೈವಾರಾಧನೆಗಳು ‘ಮುಖಮರೆ’ ಅಥವ ಬೇರೊಂದು ರೂಪವನ್ನು ತೊಟ್ಟು ನಮ್ಮೆದುರು ಕಾಣಿಸಿಕೊಳ್ಳುತ್ತವೆ. ಸತ್ಯದ ನಿಯಮವನ್ನು ‘ಕಾರಣಿಕೆ’ಯ ಮೂಲಕ ಅರುಹುತ್ತವೆ! ಇವು ಬೇರೊಂದು ಲೋಕದಿಂದ ಬರುತ್ತಿದ್ದರೂ ನಮ್ಮ ಪೂರ್ವಿಕರದೇ ಆಗಿರುತ್ತವೆ. ಅಷ್ಟರಮಟ್ಟಿಗೆ ದೈವಕ್ಕೆ ನಮ್ಮ ಬದುಕಿನ ಪಡಿಪಾಟಲು ಏನೆಂದು ತಿಳಿದಿದೆ! ಹೀಗೆ ತಿಳಿದಿರುವುದರಿಂದಲೇ ಅವು ನಮ್ಮನ್ನು ವಿಮರ್ಶಿಸಿ, ಶಿಕ್ಷಿಸಿ, ಶಮನಗೊಳಿಸಬಲ್ಲುವು.
ಮೇಲಿನ ಎಲ್ಲ ಮಾತುಗಳು ಸಾಪೇಕ್ಷಿತ ಸತ್ಯಶೋಧಕನಿಗೂ ಅನ್ವಯ. ಆತ ಸಿದ್ಧಮಾದರಿಯ ಪರಿಕರಗಳೊಂದಿಗೆ ಎಲ್ಲವನ್ನೂ ಅರಿತುಕೊಳ್ಳುವೆ ಎಂಬ ಹಂಕಾರದಲಿ ಹೊರಡದಿರುವ ‘ದಿಗಂಬರ.’

ಒಂದು ಸಿದ್ಧಾಂತಕ್ಕೆ ಕಟ್ಟು ಬೀಳದೆ, ಒಂದು ಕಡೆ ನೆಲೆ ನಿಲ್ಲದೆ, ನಿರಂತರ ಜಂಗಮ ತತ್ತ್ವದಲಿ ನಂಬಿಕೆಯಿಟ್ಟ ಸವಣ.
ಒಂದೇ ಬಗೆಯ ನಾಲಗೆ ರುಚಿಗೆ (ಮಾತು) ಕಟ್ಟು ಬೀಳದೆ ಒಡಲನ್ನು ಹಸಿವಿನಿಂದ ಕಂಗೆಡಿಸಬಲ್ಲ ಸಂಯಮಿ. ಉಪವಾಸಿಗ, ಉಪಾಸಕ.

ಏಕಬಗೆಯ ಜನರನ್ನು ನೋಡುತ್ತ, ಭೇಟಿಯಾಗುತ್ತ ಲೋಲುಪ ವಾಚಾಳಿಯಾಗುವ ಬದಲು ದೇಶಭಾಷಿಕ ಗಡಿಗಳ ಮೀರಿ ನಡೆದು ಉಳಿದ ಜನರಾಡುವ ಸೊಲ್ಲಿನ ಒಂದೆರಡು ಶಬ್ದಗಳನು ಕಲಿತು, ಅರಿತುಕೊಳ್ಳುವ ಕಲಿಕೆದಾರ.

ಸ್ಥಿತಪ್ರಜ್ಞ, ಸ್ಥಾವರ, ಏಕತಾನದ ಕಟ್ಟುಪಾಡುಗಳಿಗಿಂತ ಕಟ್ಟು ಬಿಚ್ಚಿಟ್ಟ, ಕಗ್ಗಂಟಾದ, ಚಿನ್ನ ಮತ್ತು ಚಿಂದಿಗಳಿರುವ ಗಂಟನ್ನು ಬಿಚ್ಚಿ ನೋಡುವ ‘ಬಹುತ್ವ’ದ ಕುತೂಹಲಿ.
ಕಾಲು ನಡಿಗೆ ಕೂಡ ಸೊಗಸುಗಾರರ ‘ರೂಢಿಸಿಕೊಂಡ ಶೈಲಿಯ’ ನಡಿಗೆಯಾಗುವ;
ಪಡೆದ ಅನುಭವವು (ಕ್ಷೇತ್ರಕಾರ್ಯ) ಹಳಸಿದ ಅನ್ನವಾಗುವ, ಕೇಳಿಸಿಕೊಂಡಿದ್ದೇನೆಂಬ ಭ್ರಮೆಯಲ್ಲಿರುವ ‘ಕಾಲಜ್ಞಾನ’ದ ಮಾತು ಕೂಡ ಲೊಳಲೊಟ್ಟೆಯಾಗುವ ಅಪಾಯ ಸತ್ಯಶೋಧಕನಿಗೆ ಕಟ್ಟಿಟ್ಟ ಬುತ್ತಿ. ಆತ ‘ತಾನೊಬ್ಬ ದಿಗಂಬರ, ‘ಕವಣಿಗ’. ತನ್ನ ಕೈಯಲ್ಲಿ ಯಾವ ಪರಿಕರಗಳೂ ಇಲ್ಲ, ತಾನು ನಡೆದು ಸವೆಸಬೇಕಾದ ದಾರಿ ಬಲು ದೂರ. ಇನ್ನೂ ಕೇಳಬೇಕಾದ ನಿಸರ್ಗದ ಸಹಜ ಚೆಲುವಿನ ದನಿಗಳು, ಅದು ನೀಡುವ ಎಲ್ಲ ಬಗೆಯ ಅನುಭವಗಳು, ಕೇಳದ ಮಾತುಗಳು ಬಹಳ ಇವೆ. ಸಿಕ್ಕ ಮಾನವ ದಿವ್ಯಾನುಭವವನ್ನೇ ಕವಣೆ*ಯನ್ನಾಗಿ ಮಾಡಿಕೊಳ್ಳಬೇಕು’ ಎಂದು ಅರಿತಿದ್ದರೆ ಆತನ ಅನುಭವದ ಗಂಟಿನ ಬುತ್ತಿ ಮುಂದಿನವರ ನಾಲಗೆಗೆ ತುಸು ರುಚಿಯನ್ನು, ಕಣ್ಣಗೆ ಪಸೆಯನ್ನು, ಒಡಲಿಗೆ ತಣ್ಣಗಿನ ಭಾವವನ್ನು ಕಾಲಿಗೆ ಕಸುವನ್ನು ನೀಡುತ್ತವೆ.

ಇಷ್ಟೂ ಮಾತುಗಳನ್ನು ಬರೆಯುತ್ತಿರುವುದು ನನಗಿಂತ ಕಿರಿಯರಾದ ಆದರೆ ವಿನಯ, ಸಂಯಮ, ಅಪಾರ ಸಹನೆಗಳನ್ನು ಹೊಂದಿ ಹೆಜ್ಜೆ ಇಡುತ್ತಿರುವ ದಿಗಂಬರ ಸವಣ ಎ.ಎಸ್‌. ಪ್ರಭಾಕರ ಅವರಿಗಾಗಿ. ಮೇಲಿನ ಮಾತುಗಳಿಗೆ ಸಮರ್ಥನೆಯಂತೆ ಅವರ ‘ಚಹರೆಗಳೆಂದರೆ ಗಾಯಗಳೂ ಹೌದು’ ಪುಸ್ತಕದ ಪ್ರಬಂಧಗಳು ರೂಪುಗೊಂಡಿವೆ. ಅಲ್ಲಿ ಹೆಮ್ಮರವಾಗುವ ಬೀಜದ ಮಾತುಗಳು ಅಡಗಿವೆ.

ಈ ಭಾನುವಾರ ಬಿಡುಗಡೆಯಾಗಿರುವ ಅವರ ಈ ಪುಸ್ತಕ ಕೊಂಡು ಓದಿ. ಪ್ರಭಾಕರ ಅವರ ಬರಿಗಾಲಿನ ಹೆಜ್ಜೆ ಬಹುದೂರ ಸಾಗಲಿ. ಅಂತಹ ಸಾಮರ್ಥ್ಯ ಅವರಿಗಿದೆ.
(ಇದೇ ಮಾತುಗಳನ್ನು ನನಗಿಂತ ವಯಸ್ಸಿನಲ್ಲಿಯಷ್ಟೇ ಚಿಕ್ಕವರಾದ ಸುರೇಶ ನಾಗಲಮಡಿಕೆ, ಅರುಣ್‌ ಜೋಳದಕೂಡ್ಲಿಗಿ, ಸುಧಾಕರ ದೇವಾಡಿಗ, ಆರಡಿ ಮಲ್ಲಯ್ಯ ಕಟ್ಟೇರ, ರಂಗನಾಥ ಕಂಟನಕುಂಟೆ, ವಿನಯ ನಂದೀಹಾಳ ಮತ್ತು ಅಂಥ ಯುವ ಸಂಶೋಧರ ಬಗ್ಗೆಯೂ ಹೇಳಬಹುದು.)

*
ಕವಣೆ: ಕ್ಲಾದ್‌ ಲೆವಿ ಸ್ಟ್ರಾಸ್‌ ಇದನ್ನು ಬ್ರಿಕೊಲೆಜ್‌ ಎನ್ನುತ್ತಾನೆ. ಗ್ರಾಹ್ಯ ಮಾನವ ಅನುಭವದಲ್ಲಿ ಕೈಗೆ ದೊರಕಿದ್ದನ್ನೇ ಸತತ ಪರಿಶ್ರಮದ ಮೂಲಕ ಪಳಗಿಸಿ, ತಾನೇ ಮಾಡುತ್ತ, ಮಾಡುತ್ತ ಕಲಿಯುವ ಅಥವ ಪರಿಕರವೊಂದನ್ನು ರೂಪಿಸಿಕೊಳ್ಳುವ ಪ್ರಕ್ರಿಯೆ.

  • ಕೇಶವ ಮಳಗಿ 

ಪುಸ್ತಕ ಕೊಳ್ಳಲು ಬಯಸುವವರು ಕೆಳಗಿನ ಕೊಂಡಿ ಬಳಸಿ

ಚಹರೆಗಳೆಂದರೆ ಗಾಯಗಳೂ ಹೌದು -ಸಮುದಾಯ ಅಧ್ಯಯನ ಕುರಿತ ಕಥನಗಳು
ಲೇಖಕರು- ಡಾ.ಎ.ಎಸ್.ಪ್ರಭಾಕರ್
ಬೆಲೆ- 250/-
ಗೂಗಲ್ ಪೆ- 9880302817

ಆನ್‌ಲೈನ್ ಮೂಲಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ‘ಚಹರೆಗಳೆಂದರೆ ಗಾಯಗಳೂ ಹೌದು’ ಒಂದು ಸಕಾಲಿಕ ಮೌಲಿಕ ಕೃತಿ – ನಾ ದಿವಾಕರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...