Homeಮುಖಪುಟಆಸ್ಕರ್‌, ಆಸ್ಕರಣ್ಣನಾಗಿಯೇ ಉಳಿದಿದ್ದರು: ಪುರುಷೋತ್ತಮ ಬಿಳಿಮಲೆ

ಆಸ್ಕರ್‌, ಆಸ್ಕರಣ್ಣನಾಗಿಯೇ ಉಳಿದಿದ್ದರು: ಪುರುಷೋತ್ತಮ ಬಿಳಿಮಲೆ

ಆಸ್ಕರ್‌ ಫೆರ್ನಾಂಡಿಸ್‌ ರಾಜೀವ್‌ ಗಾಂಧಿ ಕಾಲದಿಂದಲೂ ಗಾಂಧೀ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು. ಆದರೆ ಈ ಸಂಬಂಧವನ್ನು ಅವರೆಂದೂ ದುರುಪಯೋಗಪಡಿಸಿಕೊಂಡವರಲ್ಲ.

- Advertisement -
- Advertisement -

ಕಾಲನ ಗರ್ಭ ಸೇರಿದ ಆಸ್ಕರ್‌

80 ವರ್ಷದ ಆಸ್ಕರ್‌ ಫೆರ್ನಾಂಡಿಸ್‌ ( ಮಾರ್ಚ್‌ 27, 1941) ಇನ್ನಿಲ್ಲವೆಂಬ ಸುದ್ದಿ ತಲುಪಿದಾಗ ಕಾಲನ ಚಕ್ರಗಳು ಹಿಂದಕ್ಕೆ ಸರಿಯತೊಡಗಿದುವು. ದೇವರಾಜು ಅರಸು ಕಾಲದಲ್ಲಿ ಕರಾವಳಿಯ ಹಿಂದುಳಿದ ವರ್ಗದಿಂದ ಮೇಲೆದ್ದು ಬಂದ ಶ್ರೀಗಳಾದ ಜನಾರ್ದನ ಪೂಜಾರಿ, ಆಸ್ಕರ್‌ ಫೆರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿ ತಮ್ಮ ರಾಜಕೀಯ ಏಳುಬೀಳುಗಳ ನಡುವೆಯೂ ಕೊನೆಯವರೆಗೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿಯೇ ಉಳಿದರು.

ಈ ತ್ರಿಮೂರ್ತಿಗಳಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ರಾಜೀವ್‌ ಗಾಂಧಿ ಕಾಲದಿಂದಲೂ ಗಾಂಧೀ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು. ಆದರೆ ಈ ಸಂಬಂಧವನ್ನು ಅವರೆಂದೂ ದುರುಪಯೋಗಪಡಿಸಿಕೊಂಡವರಲ್ಲ. ಜೊತೆಗೆ ಆಸ್ಕರ್‌ ಎಂದೂ ಮಹತ್ವಾಕಾಂಕ್ಷಿಯೂ ಆಗಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸುತ್ತಿದ್ದ ಅವರು ಕೇಂದ್ರದಲ್ಲಿ ರಸ್ತೆ ಸಾರಿಗೆ, ಹೆದ್ದಾರಿ, ಕಾರ್ಮಿಕ ಮತ್ತು ಉದ್ಯೋಗ, ಯೋಜನಾ ಅನುಷ್ಠಾನ, ಯುವಜನ ಹಾಗೂ ಕ್ರೀಡಾ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಮಂತ್ರಿಯಾದಾಗ ಅವರು ಹಿಗ್ಗಿದವರಲ್ಲ, ಆಗದಿದ್ದಾಗ ಅವರು ಕುಗ್ಗಿದವರಲ್ಲ. ಆಸ್ಕರ್‌, ಆಸ್ಕರಣ್ಣ ನಾಗಿಯೇ ಉಳಿದಿದ್ದರು.

1975-76ರ ಅವಧಿಯಲ್ಲಿ ಉಡುಪಿಯ ಮುನ್ಸಿಪಲ್‌ ಕೌನ್ಸಿಲ್‌ನ ಸದಸ್ಯರಾಗಿದ್ದ ಅವರು 1980ರಲ್ಲಿ ಮೊದಲ ಬಾರಿಗೆ ವಿ.ಎಸ್‌ ಆಚಾರ್ಯರನ್ನು ಸೋಲಿಸಿ, ಉಡುಪಿ ಕ್ಷೇತ್ರದಿಂದ ಏಳನೇ ಲೋಕ ಸಭೆ ಪ್ರವೇಶಿಸಿದ ಅವರು ಮುಂದೆ, 1984 ರಲ್ಲಿ ಕೆ ಎಸ್‌ ಹೆಗ್ಡೆ , 1989 ರಲ್ಲಿ ಎಂ ಸಂಜೀವ, 1991ರಲ್ಲಿ ರುಕ್ಮಯ್ಯ ಪೂಜಾರಿಯರನ್ನು ಮತ್ತು 1996ರಲ್ಲಿ ಜಯರಾಮ ಶೆಟ್ಟರನ್ನು ಸೋಲಿಸಿ ಲೋಕ ಸಭೆಗೆ ಆಯ್ಕೆಯಾದರು.

1980ರಲ್ಲಿ ಮೊದಲ ಸಲ ಆಸ್ಕರ್‌ ಗೆದ್ದಾಗ ಅವರ ಗೆಲುವಿನ ಅಂತರ ಒಂದೂವರೆ ಲಕ್ಷವಾಗಿದ್ದರೆ, 196ರಲ್ಲಿ ಅವರ ಗೆಲುವಿನ ಅಂತರ ಕೇವಲ ಎರಡು ಸಾವಿರವಾಗಿತ್ತು. ಆ ಹೊತ್ತಿಗೆ ದೆಹಲಿ ಕೇಂದ್ರಿತ ರಾಜಕಾರಣದಲ್ಲಿ ಮುಳುಗಿದ್ದ ಆಸ್ಕರ್‌ ಅವರಿಗೆ ತನ್ನ ಕಾಲ ಕೆಳಗಿನ ನೆಲ ಕುಸಿಯುವುದು ಗೊತ್ತಾಗಲೇ ಇಲ್ಲ. ಅವರು ತನಗೆ ಮತ ಹಾಕಿದವರಿಗಿಂತ ಹೆಚ್ಚಗಿ ದೆಹಲಿ ಜನಗಳಿಗೇ ಹತ್ತಿರವಾಗುತ್ತಾ ಹೋದರು. ಕಾಂಗ್ರೆಸ್‌ ನ ಕೇಂದ್ರ ಕಚೇರಿಯಲ್ಲಿಯೇ ಅವರು 24 ಗಂಟೆಗಳ ಕಾಲ ದುಡಿಯತೊಡಗಿದರು. ಪರಿಣಾಮವಾಗಿ, 1998ರ ಲೋಕ ಸಭಾ ಚುನಾವಣೆಯಲ್ಲಿ ಅವರು ಸುಮಾರು 42 ಸಾವಿರ ಮತಗಳಿಂದ ಸೋತರು. ಸೋತರೂ ಮತ್ತೆ ರಾಜ್ಯ ಸಭೆಗೆ ಪ್ರವೇಶ ಪಡೆದರು.

80-90ರ ದಶಕದಲ್ಲಿ ಆಗಿನ್ನೂ ಯುವಕರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿಯವರು ತಮಗೊದಗಿದ ಅವಕಾಶಗಳನ್ನು ಉಪಯೋಗಿಸಿಕೊಂಡು ಉಡುಪಿ ಮಂಗಳೂರುಗಳಲ್ಲಿ ಹೆಚ್ಚು ಕೆಲಸ ಮಾಡಿದ್ದರೆ, ಕರಾವಳಿ ಇವತ್ತು ಈ ಮಟ್ಟಿನ ಕೋಮುವಾದಕ್ಕೆ ಬಲಿಯಾಗುತ್ತಿರಲಿಲ್ಲ. ಭೂ ಸುಧಾರಣೆಯ ಆನಂತರ ಹುಟ್ಟಿಕೊಂಡ ಹೊಸ ತಲೆಮಾರಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ನಾಯಕರು ವಿಫಲರಾಗಿದ್ದರು. ಕಾರಣ ತಮ್ಮದೇ ಜನಗಳಿಂದ ದೂರವಾಗುತ್ತಲೇ ಹೋದರು. ಪೂಜಾರಿಯವರು ಮತ್ತು ಮೊಯಿಲಿಯವರು ಸೋತರು, ಆಸ್ಕರ್‌ ಇದೀಗ ಕೊನೆಯುಸಿರು ಎಳೆದರು.

ಮೃದು ಮಾತಿನ ಆಸ್ಕರ್‌ ಅಂದರೆ ದೆಹಲಿಯಲ್ಲಿ ಎಲ್ಲರಿಗೂ ಇಷ್ಟ. ಯೋಗ ಮತ್ತು ಕಥಕ್‌ ಅವರ ಪ್ರೀತಿಯ ಹವ್ಯಾಸಗಳು. ಹೆಂಡತಿ ಬ್ಲೋಸಮ್‌ ರನ್ನು ಹತ್ತಿರ ಕುಳಿತುಕೊಳ್ಳಿಸದೇ ಇದ್ದರೆ ಅವರು ಭಾಷಣ ಮಾಡುತ್ತಲೇ ಇರಲಿಲ್ಲ. ಕಚೇರಿಗೆ ಯಾರು ಹೋದರೂ ಕರೆದು ಮಾತಾಡಿಸುವ ಸೌಜನ್ಯ, ನಮ್ಮಂಥ ರಾಜಕೀಯೇತರ ಜನರು ಹೋದರೆ ಹತ್ತಿರ ಕುಳ್ಳಿರಿಸಿಕೊಂಡು ಹೆಗಲ ಮೇಲೆ ಕೈ ಹಾಕಿ ಹರಟುವ ಪ್ರೀತಿ ಮೊದಲಾದ ಗುಣಗಳಿಂದಾಗಿ ಆಸ್ಕರ್‌ ಅಜಾತ ಶತ್ರುವಾಗಿಯೇ ಉಳಿದರು.

2004-2008ರ ಅವಧಿಯಲ್ಲಿ ನಾನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಸಂಘಕ್ಕೊಂದು ಸಾಂಸ್ಕೃತಿಕ ಸಮುಚ್ಚಯ ಕಟ್ಟುತ್ತಿದ್ದಾಗ, ಆಸ್ಕರ್‌, ಮೊಯಿಲಿ ಮತ್ತು ಅನಂತ ಕುಮಾರ್‌ ನಮ್ಮ ಸಹಾಯಕ್ಕೆ ನಿಂತಿದ್ದರು. ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಗೆಳೆಯ ವಸಂತ ಶೆಟ್ಟಿ ಬೆಳ್ಳಾರೆಯವರು ಆಸ್ಕರ್‌ ಮತ್ತು ಮೊಯಿಲಿಯವರನ್ನು ಸೇರಿಸಿ ಯಕ್ಷಗಾನವನ್ನು ಮಾಡುವ ಯೋಜನೆ ರೂಪಿಸಿದರು. ಮಂಗಳೂರಿನಿಂದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿಯವರು ಸಹಾಯ ಹಸ್ತ ಚಾಚಿದರು. ವಿದ್ಯಾ ಕೋಳ್ಯೂರು ತರಬೇತಿ ನೀಡಿದರು. ಕೃಷ್ಣ ಭಟ್ಟರು ಎಲ್ಲ ವ್ಯವಸ್ಥೆ ಮಾಡಿದರು. ಆಸ್ಕರ್‌ ಅವರದು ʼ ಅತ್ಯುನ್ನತಿಯೊಳ್‌ ಅಮರಸಿಂಧೂದ್ಭವನಾದ ಭೀಷ್ಮಾಚಾರ್ಯ, ಮೊಯಿಲಿಯವರದು ʼ ಸೂತ ಪುತ್ರ ಕರ್ಣʼ, ನಂದು ʼನೀತಿವಂತ ವಿದುರʼ ಇತ್ಯಾದಿ. ಒಂದು ಹಂತದಲ್ಲಿ ಭೀಷ್ಮಚಾರ್ಯ ಅವರು ಇದಿರಾದಾಗ ನಾನು ( ವಿದುರ) ಹೇಳಿದೆ-
ʼ ಅಚಾರ್ಯರೇ, ನಿಮಗೆ ಹಸ್ತಿನಾಪುರದ ಪಟ್ಟವನ್ನು ಕಾಯುವುದೇ ಕೆಲಸವಾಯಿತಲ್ಲ? ನೀವು ಪಟ್ಟವೇರುವುದು ಯಾವಾಗ?

ತುಂಬಿದ ಸಭೆ ಚಪ್ಪಳೆ ತಟ್ಟಿತು, ಭೀಷ್ಮರು ಮುಗುಳ್ನಕ್ಕರು.

ಮರುದಿನ ದೇಶದಾದ್ಯಂತ ʼ ನೇತಾ ಬನ್‌ ಗಯಾ ಅಭಿನೇತಾʼ ಅಂತ ಸುದ್ದಿಯಾಯಿತು.
ರಾಜಕೀಯದ ಪಟ್ಟುಗಳು ಕ್ಷಿಪ್ರವಾಗಿ ಬದಲಾಗುತ್ತಿರುವಾಗ ಆಸ್ಕರ್‌ ಮರೆಯಾದದ್ದು ಸಾಂಕೇತಿಕವೂ ಹೌದು .

ಪೋತು ಬಲೆ ಆಸ್ಕರಣ್ಣ!

(ಚಿತ್ರದಲ್ಲಿ ಎಡಬದಿಗೆ ಕರ್ಣನಾಗಿ ಮೊಯಿಲಿ, ಮಧ್ಯೆ ಭೀಷ್ಮನಾಗಿ ಆಸ್ಕರ್‌ ಮತ್ತು ಬಲಬದಿಯಲ್ಲಿ ವಿದುರನಾಗಿ ನಾನು, ಫೋಟೋ: ದಿನೇಶ್‌ ಶೆಣೈ)
  • ಪುರುಷೋತ್ತಮ ಬಿಳಿಮಲೆ

ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ (80) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...