Homeಅಂಕಣಗಳುಕಳೆದುಹೋದ ದಿನಗಳುಕಳೆದುಹೋದ ದಿನಗಳು -26: ಗಣಪಯ್ಯನವರು ಹಾರ್ಲೆ ತೋಟ ಕೊಂಡಿದ್ದು ಹೀಗೆ..

ಕಳೆದುಹೋದ ದಿನಗಳು -26: ಗಣಪಯ್ಯನವರು ಹಾರ್ಲೆ ತೋಟ ಕೊಂಡಿದ್ದು ಹೀಗೆ..

- Advertisement -
- Advertisement -

ಗಣಪಯ್ಯನವರ ಕಾಲದ ಮತ್ತು ಬದುಕಿನ ಒಂದು ಬಹುಮುಖ್ಯ ಸಂಗತಿಯಿದು.

ಗಣಪಯ್ಯ ಸಹೋದರರು, ಹಾರ್ಲೆ ತೋಟವನ್ನು ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಅಂದಿನ ಹಾರ್ಲೆ ಎಸ್ಟೇಟಿನ ಮ್ಯಾನೇಜರ್ (ಹೆನ್ರಿ ಗಾಡ್ ಫ್ರೆಯ ಮ್ಯಾನೇಜರ್) ಆಗಿದ್ದ ಮಿಡ್ಲ್‌ಟನ್‌ನ ಸಹಾಯ ಮುಖ್ಯವಾಗಿತ್ತು. ಹಾರ್ಲೆ ಎಸ್ಟೇಟನ್ನು ಗಾಡ್‌ಫ್ರೆ ಮಾರಲು ಹೊರಟಾಗ ಅದರ ಜವಾಬ್ದಾರಿಯನ್ನು ಕೊಟ್ಟದ್ದು ಮದರಾಸಿನ ಒಂದು ಕಂಪೆನಿಗೆ. ಅವರು ಹಾರ್ಲೆ ಎಸ್ಟೇಟಿನ ಮಾರಾಟಕ್ಕೆ ಟೆಂಡರ್ ಕರೆದರು. ಮಿಡ್ಲ್ ಟನ್ ಗೆ ಆಗಲೇ ಗಣಪಯ್ಯನವರ ಪರಿಚಯ ಇತ್ತು. ಇವರು ಟೆಂಡರ್ ಹಾಕುತ್ತಾರೆಂದು ತಿಳಿದಾಗ ಮಿಡ್ಲ್‌ಟನ್‌ ಗಣಪಯ್ಯನವರಿಗೆ “ಹಾರ್ಲೆ ತೋಟ ಖರೀದಿಗೆ ಪಿಯರ್ಸ್ ಲೆಸ್ಲೀ ಕಂಪೆನಿಯೂ ಟೆಂಡರ್ ಹಾಕುತ್ತಿದೆ, ನೀವು ಸ್ವಲ್ಪ ಟೆಂಡರ್ ಹಣವನ್ನು ಹೆಚ್ಚು ನಮೂದಿಸುವುದು ಒಳ್ಳೆಯದು” ಎಂದು ಸೂಚನೆ ಕೊಟ್ಟರಂತೆ. ಅಂತೆಯೇ ಇವರು ಅಂದಾಜಿನ ಮೇಲೆ ಸ್ವಲ್ಪ ಹೆಚ್ಚು ಬೆಲೆ ನಮೂದಿಸಿದರಂತೆ, ಹಾಗಾಗಿ ಹಾರ್ಲೆ ತೋಟ ಇವರಿಗೆ ಸಿಕ್ಕಿತು. ಗಣಪಯ್ಯನವರಿಗೆ ತೋಟ ಸಿಕ್ಕಿದ್ದರಿಂದ ಮಿಡ್ಲ್‌ಟನ್‌ಗೆ ಸಂತೋಷವಾಗಿತ್ತು ಎನ್ನುವುದು ಆತನ ಮಾತುಗಳಲ್ಲಿ ವ್ಯಕ್ತವಾಗಿದೆ.

ಮುಂದೆ ಗಣಪಯ್ಯ ಹಾರ್ಲೆ ತೋಟದ ಪಕ್ಕದಲ್ಲಿ ಉದ್ಯಾನವನ (ಹಾರ್ಲೆ ಪಾರ್ಕ್) ಈಜುಕೊಳ ಮುಂತಾದವನ್ನು ನಿರ್ಮಾಣ ಮಾಡುತ್ತಿದ್ದಾಗ, ಕೆಲವರು ತಕರಾರು ಮಾಡುತ್ತಿದ್ದರು. ಆ ಪಾರ್ಕಿನ ಮುಖ್ಯ ಭಾಗವಾದ ಈಜುಕೊಳ, ಊಟದ ಸ್ಥಳ, ಶೌಚಾಲಯ ಮುಂತಾದ ಜಾಗಗಳು ಅವರ ಹಿಡುವಳಿಯಲ್ಲಿದ್ದರೂ ಪಾರ್ಕಿನ ಮುಂಭಾಗದ ಪ್ರವೇಶದ್ವಾರದ ಸ್ಥಳ ಸರ್ಕಾರಿ ನೆಲದಲ್ಲಿತ್ತು. ಈ ಪಾರ್ಕು ಸಾರ್ವಜನಿಕರಿಗಾಗಿ ನಿರ್ಮಾಣ ಮಾಡುತ್ತಿರುವುದರಿಂದ ಅದನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಹೀಗೆ ಕೆಲವರು ತಕರಾರು ಮಾಡುವಾಗ “ನಮಗೆ ದನ ಮೇಯಿಸಲು ಜಾಗ ಇಲ್ಲ. ಎಲ್ಲಾ ಕಡೆ ದಲಿತರಿಗೆ ಮನೆ ಕಟ್ಸಿ ಗಿಡ ಹಾಕುಸ್ತಾರೆ. ಈಗ ಇಲ್ಲಿ ಪಾರ್ಕ್ ಮಾಡ್ತಾ ಇದ್ದಾರೆ” ಎಂದು ದೂರುತ್ತಿದ್ದರು.

ಪಿಯರ್ಸ ಮತ್ತು ಲೆಸ್ಲಿ

ಇದಕ್ಕೆ ಕಾರಣಗಳು ಬೇರೆಯೇ ಇದ್ದವು. ಊರಿನಲ್ಲಿ ಹಲವಾರು “ಗಣ್ಯರು” ಸರ್ಕಾರಿ ಜಾಗಕ್ಕೆ ಬೇಲಿಸುತ್ತಿ ಗಿಡಹಾಕಿದಾಗ ಇವರ ತಕರಾರುಗಳೇನೂ ಇರಲಿಲ್ಲ.

ಗಣಪಯ್ಯನವರು ಹಾರ್ಲೆಗೆ ಬಂದ ಕೆಲವೇ ಸಮಯದಲ್ಲಿ ಅಲ್ಲೇ ಪಕ್ಕದ ಒಂದು ಕುಟುಂಬದವರು ದುರಭ್ಯಾಸಗಳಿಂದ ಸಾಲ ಮಾಡಿ ಜಮೀನು ಅಡವಿಟ್ಟು ಕಷ್ಟದಲ್ಲಿದ್ದರು. ನಂತರ ಅವರು ಗಣಪಯ್ಯನವರಲ್ಲಿ ಬಂದು ಏನೋ ಆಗಿಹೋಯಿತು ಸಹಾಯ ಮಾಡಿ ಎಂದು ಕೇಳಿದಾಗ ಅದನ್ನು ಗಣಪಯ್ಯ ಬಿಡಿಸಿಕೊಟ್ಟಿದ್ದರು. ನಂತರವೂ ಇದು ಹಾಗೆಯೇ ಮುಂದುವರೆದಾಗ ಆ ಮನೆಯ ಹೆಣ್ಣುಮಗಳು ಬಂದು ಗಣಪಯ್ಯನವರಲ್ಲಿ ಕಷ್ಟ ಹೇಳಿಕೊಂಡರು. ಮತ್ತೊಮ್ಮೆ ಗಣಪಯ್ಯ ಅವರನ್ನೆಲ್ಲ ಒಟ್ಟುಸೇರಿಸಿ ಬುದ್ಧಿ ಹೇಳಿದರೂ ಪ್ರಯೋಜನವಾಗಲಿಲ್ಲ. ಆಗ ಗಣಪಯ್ಯ ಅವರ ಒಂದಷ್ಟು ಜಮೀನನ್ನು ತಾವೇ ಕೊಂಡು, ಸಾಲವನ್ನೂ ತೀರಿಸಿ ಉಳಿದ ಆ ಹಣಕ್ಕೆ ತಮ್ಮ ಕೈಯಿಂದ ಸ್ವಲ್ಪ ಸೇರಿಸಿ ಬ್ಯಾಂಕಿನಲ್ಲಿ ಇಟ್ಟದ್ದೂ ಅಲ್ಲದೆ ಆಕೆಯ ಬದುಕಿಗೆ ಸಹಾಯವಾಗುವಂತೆ ಮಾಡಿದ್ದರು. ಹಾಗೆ ಬ್ಯಾಂಕಿನಲ್ಲಿ ಇಟ್ಟ ಹಣ ಮುಂದೆ ಬೆಳೆದು ಆಕೆಯ ವೃದ್ಧಾಪ್ಯದಲ್ಲಿ ಒಂದು ಇಡುಗಂಟಾಗಿ ದೊರೆಯಿತು. ಇದು ಆ ಮನೆಯ ಕೆಲವು ಹಿರಿಯ ಗಂಡಸರನ್ನು ಕೆರಳಿಸಿತ್ತು. ಅವರು ಆ ಬಗ್ಗೆ ಹಲವು ವರ್ಷಗಳ ಕಾಲ ದ್ವೇಷ ಸಾಧಿಸುತ್ತಿದ್ದರು ಮತ್ತು ಗಣಪಯ್ಯನವರ ವಿರುದ್ಧ ಅನೇಕ ಕಡೆಗಳಲ್ಲಿ ದೂರು ಕೊಟ್ಟು ಪ್ರಯೋಜನವಾಗದೆ ನಿರಾಶರಾದರು. ನಂತರ ಹೀಗೆ ಅಲ್ಲಿ ಇಲ್ಲಿ ಮೂಗರ್ಜಿ ಬರೆಯುತ್ತ ತಕರಾರು ಮಾಡುತ್ತ ಇದ್ದರು. ಪಾರ್ಕಿನ ಜಾಗದ ತಕರಾರಿಗೂ ಇವರೇ ಕಾರಣರಾಗಿದ್ದರು.

ಗಣಪಯ್ಯನವರು ಇದರಿಂದ ವಿಚಲಿತರಾಗಲಿಲ್ಲ. ಇಂತಹ ಹಲವಾರು ಪ್ರಸಂಗಗಳನ್ನು ಅವರು ಎದುರಿಸಿದ್ದರು.

ಗಣಪಯ್ಯನವರ ಕಾಲಾನಂತರ ಆ ಹೆಣ್ಣುಮಗಳು ರವೀಂದ್ರನಾಥರಿಗೂ, ನನಗೂ ಬರೆದ ಜಂಟಿ ಪತ್ರ ಬರೆದರು. ಆ ವಿಚಾರಗಳನ್ನು ಹೀಗೆ ವಿವರಿಸುತ್ತದೆ.

ಆ ಪತ್ರ ಹೀಗಿದೆ……

ಆ ತಾಯಿ ಯೊಬ್ಬರ ಪತ್ರ

ರವೀಂದ್ರನಾಥರವರಿಗು ಮತ್ತು ಪ್ರಶಾದನವರಿಗು ನಮಸ್ಕಾರಗಳು. ಏನೆಂದರೆ ವಿಸಿಆ, (ವಿಷಯ) ಮದ್ಲುಗೆ (ಮೊದಲಿಗೆ) ತೋಟ ಬೋಗ್ಯ ಮಾಡಿದ್ರು (ನಮ್ಮ ಮಾವ) ಬಿಡಿಸಿಕೊಂಡ್ರು. ನಾವು ದೇವಲಕೆರೆ ಹತ್ತಿರ ಬೆಂಬಳೆಯವರಂತೆ. ನಮ್ಮ ಮಾವನವರಿಗೂ ಸಹ ಇಲ್ಲಿಗೆ ಬಂದಿದ್ದು ಗೊತ್ತಿಲ್ಲ. ಹಿಂದೆ ಇಲ್ಲಿ ಏಳು ಎಕರೆ ಆಸ್ತಿ ಮಾರಿದ್ರು. ನಮ್ಮ ಮಕ್ಕಳು ಚಿಕ್ಕವು. ಮಾವ ಇರಲಿಲ್ಲ (ತೀರಿಕೊಂಡಿದ್ದರು) ತಾಯಿ ಮಗ ಸೈನ್ ಹಾಕಿದ್ದು. (ಗಂಡ ಮತ್ತು ಅತ್ತೆ) ನನಗೆ ಗೊತ್ತಿಲ್ಲ. ಆಮೇಲೆ ಗದ್ದೆ ಬಸಪ್ಪ ಗೌಡನಿಗೆ ಬೊಗ್ಯ ಮಾಡಿದ್ದು ಅದನ್ನು ಮಕ್ಕಳ ಸ್ಥಿತಿ ನೋಡಲಾಗದೆ ಇದೇ ಸಾವುಕಾರರು (ಗಣಪಯ್ಯ) ಬಿಡಿಸಿಕೊಟ್ರು. ಆಮೇಲೆ ಎರಡು ಎಕರೆ ಮಾರಿದ್ರು. ಸಾವುಕಾರರಲ್ಲಿ ದೂರು ಕೊಟ್ಟೆ. ಅವರು ಎಲ್ಲರನ್ನು ಕರೆಸಿ ಮಕ್ಕಳ ಹೆಸರಿಗೆ (ಉಳಿದ ಆಸ್ತಿ) ಮಾಡಿದರು.

ಅತ್ತೆಯ ಹತ್ತಿರ ಏಟು ತಿನ್ನಲು ಸಾದ್ಯವಾಗಲಿಲ್ಲ. ಕೊವಿ ಇತ್ತು ಅದನ್ನೆ ಎತ್ತಿ ಬರುತಿದ್ರು. ನನ್ನ ಗಂಡನ ಆಸ್ತಿ ಹೇಳುತಿದ್ರು. ಇಲ್ಲೇ ಕರೆಸಿ ಸಾವುಕಾರರು (ಗಣಪಯ್ಯ) ಬೈದ್ರು ಕೇಳಲಿಲ್ಲ. ಮಕ್ಕಳನ್ನು ಎಲ್ಲೆಲ್ಲೊ ಬಿಟ್ಟು ಹತ್ತನೆ ಕ್ಲಾಸು ಒದಿಸಿದೆ. ಆ ಮಿಡ್ಲ್‌ಟನ್‌ ಸಾಹೇಬರಿದ್ದಾಗ ನಮ್ಮ ಮಾವನವರನ್ನು ಸಿಕಾರಿಗೆ ಕರೆಯುತ್ತಿದ್ದರಂತೆ. ಈ ಸಾವುಕಾರರು ಒಳ್ಳೆ ಜನ(ಗಣಪಯ್ಯ) ಇವರನ್ನು ನೀವು ಬಿಡಬೇಡಿ ಎಂದು ಹೇಳಿದ್ರಂತೆ. ಬ್ಯಾಂಕಿನಿಂದ ಹಣ ತೆಗೆದದ್ದು (ಸಾಲ) ಹೌದು, ತೀರ್ಮಾನವಾಗಿದೆ. (ಸಾಲ ತೀರಿಸಿ ಆಗಿದೆ) ಡಾಕ್ಟುರು (ರವೀಂದ್ರನಾಥ) ಸುಮಾರು ಬಡ್ಡಿ ಉಳಿಸಿಕೊಟ್ಟಿದ್ದಾರೆ.

ಸಾವುಕಾರು (ಗಣಪಯ್ಯ) ನಿಮ್ಮ ಹತ್ತಿರ ದುಡ್ಡಿದ್ದರೆ ಬ್ಯಾಂಕಿಗೆ ಇಟ್ಟುಕೊಳ್ಳಿ ಎಂದು ಹೇಳಿದು, ಹಾಳಾಗುತ್ತೆ ಹೇಳಿದರು. ಒಂಬೈನೂರಿತ್ತು ಅವರೇ ನೂರು ಸೇರಿಸಿ ಇಟ್ಟರು. ನಾನು (ಜೊತೆಯಲ್ಲಿಬ್ಯಾಂಕಿಗೆ) ಹೊದೆ.

ಆ ಮೇಲೆ ನಾಲ್ಕು ಎಮ್ಮೆ ತೆಗೆದು ನಾನೆ ಕಾಯುವುದು ಹಾಲು ಕೊಡಲು ಮಾಡಿದೆ. ಎಮ್ಮೆ ತಗಲು ಸಾವುಕಾರರೆ ಎರಡು ಸಾವಿರ ಹೀಗೆ ದುಡ್ಡು ಕೊಡೆಂದು ಅಮ್ಮನಿಗೆ ಹೇಳುತಿದ್ರು. ಸ್ವಲ್ಪ ವರುಶದಲ್ಲಿ ಅವರ ದುಡ್ಡು ಕೊಟ್ಟೆ. ಡಾಕ್ಟ್ರು ಬೆಂಗಳೂರಿನಲಿದ್ರು. ಇವರೆಲ್ಲ ನನ್ನ ತಂದೆ ಅಣ್ಣನ ಹಾಗೆ ಸಾಕಿದರು. ನನ್ನ ಎರಡು ಮಕ್ಕಳು ಹೋದ ಮೇಲೆ ವ್ಯತೆಯು ಜಾಸ್ತಿ ಆಯಿತು. ಏನು ಬೇಡ ಮಾಡಲು ಆಗುವುದಿಲ್ಲ (ಅದಕ್ಕೆ) ಮಾರಬೇಕೆಂದು ಮಾಡಿದ್ದು. ಆವಾಗಿನ ಸಾವಿರ ರೂಪಾಯಿ ಈಗಿನ ಲಕ್ಷ ಕೂಡುವುದಿಲ್ಲ (ಸಮನಲ್ಲ)

ಮುಂದೆ ದೇವರಿಚ್ಛೆ, ಸಾವುಕಾರು ಯಾವಾಗಲೂ ಹೇಳುತಿದ್ರು, ನಿಮ್ಮ ಜಮೀನಿನ ಮಣ್ಣು ಹಾರ್ಲೆ ತೋಟದಲ್ಲಿ ಸಿಕ್ಕಿ ಹಾಳು ಮಾಡಿದಿರಿ ಎಂದು. (ನಿಮ್ಮ ಜಮೀನು ನನಗೆ ಮಾರಿ ನನ್ನನ್ನು ದೂರುವಂತೆ ಮಾಡಿದಿರಿ ಎಂದರ್ಥ)

ಪುರಾಣವೆಂದು ಬೇಸರ ಮಾಡಬೇಡಿ ಓದಿ ನೋಡಿ.

(ಆವರಣದೊಳಗಿನ ವಿವರಣೆಗಳು ನನ್ನದು)

ಅನೇಕ ಸಲ ನಾನು ಅವರನ್ನು ಬ್ಯಾಂಕಿಗೆ ಕರೆದೊಯ್ದು ಬಡ್ಡಿ ತೆಗೆಸಿ ಕೊಡುತ್ತಿದ್ದೆ. ನಂತರ ಅವರು ಬ್ಯಾಂಕಿನಲ್ಲಿದ್ದ ಹಣವನ್ನು ಪಡೆದು ದೂರದಲ್ಲಿದ್ದ ಬಂಧುಗಳ ಮನೆಗೆ ಹೋದರು. ಈಗ ಎಲ್ಲಿದ್ದಾರೆಂದು ತಿಳಿಯದು.

ಬಾಲ ನಿಕೇತನದ ಸಾರ್ಥಕತೆಯ ಸಾಕ್ಷಿ

ಇಂತಹ ಹಲವಾರು ಪ್ರಸಂಗಗಳನ್ನು ಗಣಪಯ್ಯ ಮುಂದೆಯೂ ಎದುರಿಸಿದರು.

ಅವರು ಒಮ್ಮೆ ಹಾರ್ಲೆ ತೋಟದ ಟಿಂಬರ್ ಮಾರಾಟ ಮಾಡಿದರು. ಟಿಂಬರ್‌ನ ಜೊತೆಯಲ್ಲಿ ಒಂದಷ್ಟು ಸೌದೆ ಸಾಗಾಣಿಕೆ ಪರ್ಮಿಟ್ಟುಗಳು ದೊರೆಯುತ್ತವೆ. ಆಗ ಸ್ಥಳೀಯ ರಾಜಕಾರಣಿಯೊಬ್ಬರು ಗಣಪಯ್ಯನವರಲ್ಲಿ ತನಗೊಂದಷ್ಟು ಪರ್ಮಿಟ್ಟುಗಳನ್ನು ಕೊಡುವಂತೆ ಕೇಳಿದರು. ಸಾಮಾನ್ಯವಾಗಿ ಇಂತ ಪರ್ಮಿಟ್ಟುಗಳು ಬೇರೆ ಸ್ಥಳದಲ್ಲಿ, ಹೆಚ್ಚಿನ ಸಲ ಸರ್ಕಾರಿ ಜಾಗದಲ್ಲಿ ಮರಕಡಿದು ಸೌದೆ ಸಾಗಾಣಿಕೆಗೆ ಬಳಕೆಯಾಗುತ್ತವೆ. ಗಣಪಯ್ಯನವರು ಅದನ್ನು ಕೊಡಲಿಲ್ಲ.

ಆ ರಾಜಕಾರಣಿ ಸಿಟ್ಟಿಗೆದ್ದು ಗಣಪಯ್ಯ ಸರ್ಕಾರಿ ಜಾಗದಲ್ಲಿ ಮರ ಕಡಿದಿದ್ದಾರೆ ಎಂದು ಹುಯಿಲೆಬ್ಬೆಸಿ, ಅದು ವಿಧಾನ ಸಭೆಯಲ್ಲಿಯೂ ಪ್ರಸ್ತಾಪವಾಗುವಂತೆ ಮಾಡಿದರು. ಅದು ಪತ್ರಿಕೆಗಳಲ್ಲಿಯೂ ಸುದ್ದಿಯಾಗಿ, ಕೊನೆ ತನಿಖೆಯಾಗಿ ಸರ್ವೆ ನಡೆಯಿತು. ತನಿಖೆ ಮುಗಿದು ದೂರಿನಲ್ಲಿ ಹುರುಳಿಲ್ಲವೆಂದು ತೀರ್ಮಾನವಾಯಿತು. ಆದರೆ ಟಿಂಬರ್ ಕಡಿದು ಸಾಗಾಣಿಕೆ ಮಾಡಲು ಒಂದಷ್ಟು ತಿಂಗಳು ತಡವಾಗಿ ನಷ್ಟವಾಯಿತು. ಆದರೆ ಗಣಪಯ್ಯನವರಾಗಲೀ ರವೀಂದ್ರನಾಥರಾಗಲೀ ಅದಕ್ಕೆ ಜಗ್ಗಲಿಲ್ಲ.

ಗಣಪಯ್ಯನವರ ಕಾಲಾನಂತರ ಮುಂದೆಯೂ ಇಂಥ ಪ್ರಸಂಗಗಳು ನಡೆದಿವೆ.

ಸಕಲೇಶಪುರದಲ್ಲಿ ನಡೆಯುತ್ತಿದ್ದ ಬಾಲನಿಕೇತನ ಅನಾಥಾಶ್ರಮದಲ್ಲಿ ಅಡಿಗೆ ಮತ್ತು ಸ್ನಾನಕ್ಕೆಂದು ತೋಟದಿಂದ ಮರಗಸಿ ಮಾಡಿದ ಕೋಲು ಸೌದೆಯನ್ನು ಸಾಗಿಸುವಾಗ ಪೋಲಿಸ್ ಅಧಿಕಾರಿಯೊಬ್ಬರು, ಎಸ್ಟೇಟಿನ ಲಾರಿ (ಲಾರಿಯ ಕಾಲುಭಾಗವೂ ಸೌದೆ ಇರಲಿಲ್ಲ)ಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಒಪ್ಪಿಸಿದರು. ಅದಕ್ಕೂ ಕಾರಣ ಬೇರೆ ಇತ್ತು. ಆಗ ಅರಣ್ಯ ಇಲಾಖೆಯವರೇ ಪೋಲಿಸ್ ಅಧಿಕಾರಿಗೆ ಇದು ಬೇಡ ಬಿಡಿ ಎಂದರಂತೆ, ಆದರೆ ಅವರು ಹಠಕ್ಕೆ ಬಿದ್ದಿದ್ದರು.

ಲಾರಿ ಒಂದು ವಾರ ಅಲ್ಲೇ ಇದ್ದರೂ ರವೀಂದ್ರನಾಥರು ಅದನ್ನು ಬಿಡಿಸಿಕೊಳ್ಳಲು ಹೋಗಲಿಲ್ಲ. ಅದನ್ನು ನೋಡಿದವರೆಲ್ಲ ನಗಲಾರಂಭಿಸಿದ್ದರಿಂದ, ಅರಣ್ಯಾಧಿಕಾರಿಗಳಿಗೆ ಮುಜುಗರವಾಗತೊಡಗಿತು. ನಂತರ ಅವರವರೇ ಮಾತಾಡಿಕೊಂಡು ಲಾರಿಯನ್ನು ಬಿಟ್ಟು ಕಳುಹಿಸಿದರು. ಆ ನಂತರವೂ ಈ ರೀತಿಯ ಹಲವು ಘಟನೆಗಳು ನಡೆಯುತ್ತಿದ್ದವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ದಲಿತರಿಗೆ ವಸತಿ ಮಂಜೂರು ಮತ್ತು ಆತ್ಮವಿಶ್ವಾಸ ತುಂಬುತ್ತಿದ್ದ ಗಣಪಯ್ಯನವರ ಕುಟುಂಬ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...