Homeಅಂಕಣಗಳುಕಳೆದುಹೋದ ದಿನಗಳುಮುಖ್ಯಮಂತ್ರಿಗಳ ಮನೆಗೆ ಬರುವುದಿಲ್ಲವೆಂದಿದ್ದ ಆದರ್ಶವಾದಿ ಕಾಂಗ್ರೆಸ್ಸಿಗ ಶಾಂತಪ್ಪ: ಪ್ರಸಾದ್ ರಕ್ಷಿದಿ

ಮುಖ್ಯಮಂತ್ರಿಗಳ ಮನೆಗೆ ಬರುವುದಿಲ್ಲವೆಂದಿದ್ದ ಆದರ್ಶವಾದಿ ಕಾಂಗ್ರೆಸ್ಸಿಗ ಶಾಂತಪ್ಪ: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು – 23

ಅಂದು ಸರ್ಕಾರಿ ಸ್ಥಳವನ್ನು ಜಮೀನಿದ್ದವರು ಒತ್ತುವರಿ ಮಾಡುತ್ತಿದ್ದವರ ನಡುವೆಯೂ ಕೆಲವರು ನ್ಯಾಯ ನಿಷ್ಟುರಿ ಭೂಮಾಲಿಕರಿದ್ದರಿದ್ದರು.

ಅಂತಹವರಲ್ಲಿ ಒಬ್ಬರು ಹಾದಿಗೆ ಶಾಂತಪ್ಪನವರು. ಅವರು ಕಾಂಗ್ರೆಸ್ಸಿಗರು, ಗಣಪಯ್ಯನವರ ಸ್ವತಂತ್ರ ಪಾರ್ಟಿ ಹಾಸನ ಜಿಲ್ಲೆಯಲ್ಲಿ ಉತ್ತುಂಗದಲ್ಲಿ ಇದ್ದಾಗಲೂ ಶಾಂತಪ್ಪನವರು ಕಾಂಗ್ರೆಸ್ಸಿನಲ್ಲಿಯೇ ಇದ್ದರು. ಆದರೆ ಗಣಪಯ್ಯನವರ ಸ್ನೇಹವಲಯದಲ್ಲೇ ಇದ್ದರು.
ಶಾಂತಪ್ಪನವರು ಆ ಕಾಲದಲ್ಲಿಯೇ ಬಿ.ಎ. ಪದವೀಧರರು. ಕಾಲೇಜಿನಲ್ಲಿ ಕೆಂಗಲ್ ಹನುಮಂತಯ್ಯನವರ ಸಹಪಾಠಿಗಳು ಮಾತ್ರವಲ್ಲ, ಆತ್ಮೀಯ ಸ್ನೇಹಿತರು ಕೂಡಾ. ಹನುಮಂತಯ್ಯನವರ ಜೊತೆಗಿನ ಒಡನಾಟ ಮತ್ತು ಸ್ನೇಹ ಕಾಲೇಜು ದಿನಗಳ ನಂತರವೂ ಮುಂದುವರೆದಿತ್ತು.

ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿ ನಿಯುಕ್ತರಾದಾಗ ಪ್ರಮಾಣ ವಚನ ಸಮಾರಂಭಕ್ಕೆ ಸಮಯ ನಿಗದಿ ಮಾಡಲು ಅಧಿಕಾರಿಗಳು ಹನುಮಂತಯ್ಯನವರಲ್ಲಿ ಚರ್ಚಿಸಲು ಬಂದರು. ಆಗ ಹನುಮಂತಯ್ಯನವರು, ಶಾಂತಪ್ಪನವರಲ್ಲಿ ಇಂತ ಸಮಯಕ್ಕೆ ನಿನಗೆ ಬಿಡುವು ಇದಿಯೇನಯ್ಯ, ನಾನು ಪ್ರಮಾಣ ವಚನ ಸ್ವೀಕರಿಸುವಾಗ ಅಲ್ಲಿ ನೀನಿರಬೇಕು. ಆಗ ನಿನಗೆ ಬಿಡುವಿರದಿದ್ದರೆ ಹೇಳು ಸಮಯ ಬದಲಾಯಿಸುತ್ತೇನೆ ಎಂದರಂತೆ !

ಮುಖ್ಯಮಂತ್ರಿಯಾಗಿ ಕೆಂಗಲ್ ಹನುಮಂತಯ್ಯನವರ ಪ್ರಮಾಣವಚನ ಸ್ವೀಕಾರಕ್ಕೆ ಶಾಂತಪ್ಪನವರು ಸಾಕ್ಷಿಯಾದರು. ನಂತರ ಗೆಳೆಯನನ್ನು ಹನುಮಂತಯ್ಯ ತಮ್ಮ ಮನೆಗೆ ಊಟಕ್ಕೆ ಕರೆದೊಯ್ದರು.

ಊಟ ಮಾಡುವಾಗ ಹನುಮಂತಯ್ಯನವರು, “ಶಾಂತು ನಾನೀಗ ಮುಖ್ಯಮಂತ್ರಿ ನಿಂದೇನಾದ್ರೂ ಕೆಲಸ ಇದ್ರೆ ಸಂಕೋಚ ಮಾಡ್ಬೇಡ ನನ್ನತ್ರ ಬಾ” ಎಂದರಂತೆ.

ಆಗ ಶಾಂತಪ್ಪ “ಹನುಮಂತು ಏನಾದರೂ ಸಾರ್ವಜನಿಕ ಕೆಲಸ ಇದ್ರೆ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಕೊಡ್ತೇನೆ, ಇನ್ನು ನಾನು ನಿನ್ನ ಮನೆಗೆ ಬರೋದು, ಒಂದಿನ ನೀನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಲೇ ಬೇಕಲ್ಲ, ಆ ನಂತರ ಬರ್ತೀನಿ” ಎಂದರು. ಮುಂದೆ ಹಾಗೆಯೇ ನಡೆದುಕೊಂಡರು.

ಸಾಕಷ್ಟು ಕಾಫಿ ತೋಟವಿದ್ದ ಶಾಂತಪ್ಪನವರು ಸಾರ್ವಜನಿಕ ಕೆಲಸಗಳಿಗೆ ಕೊಡುಗೈ ದೊರೆ. ಪ್ರತಿ ವರ್ಷ ತಮ್ಮ ಆದಾಯದ ಗಣನೀಯ ಮೊತ್ತವನ್ನು ಇಂತಹ ಕೆಲಸಗಳಿಗೆಂದೇ ಬೇರೆ ತೆಗೆದಿಟ್ಟು ಖರ್ಚು ಮಾಡುತ್ತಿದ್ದರು.

ಒಮ್ಮೆ ಇವರ ಮಗ, ತಂದೆ ಮನೆಯಲ್ಲಿ ಇಲ್ಲದಾಗ ತೋಟದ ಪಕ್ಕದಲ್ಲಿದ್ದ ಒಂದಷ್ಟು ಸರ್ಕಾರಿ ಜಾಗಕ್ಕೆ ಬೇಲಿ ಹಾಕಿಸಿದರು. ಕೆಲವು ದಿನಗಳ ನಂತರ ಶಾಂತಪ್ಪನವರು ತೋಟಕ್ಕೆ ಹೋದಾಗ ಅದು ಅವರ ಕಣ್ಣಿಗೆ ಬಿತ್ತು. ಕೆಲಸದವರಲ್ಲಿ ವಿಚಾರಿಸಿದಾಗ ಅದು ತಮ್ಮ ಮಗನ ಕೆಲಸವೆಂದು ತಿಳಿಯಿತು. ಕೂಡಲೇ ಕೆಲಸದವರನ್ನು ಕರೆಸಿ. ಬೇಲಿ ಮೊದಲು ಎಲ್ಲಿ ಇತ್ತೋ ಅಲ್ಲಿಗೇ ಹಾಕಿಸಿದರಲ್ಲದೆ ಮಗನನ್ನು ಕರೆದು ಇನ್ನುಮುಂದೆ ಹೀಗೆ ಮಾಡಬೇಕೆಂದು ತಾಕೀತು ಮಾಡಿದರು.

ಇವರ ಒಬ್ಬನೇ ಮಗ ಹೆಚ್.ಎಸ್. ಸಂಪತ್. ಸ್ನೇಹಜೀವಿ, ಅಪಾರ ಗೆಳೆಯರನ್ನು ಕಟ್ಟಿಕೊಂಡು ಸಕಲೇಶಪುರದಲ್ಲಿ ಕ್ರೀಡಾಭಿವೃದ್ಧಿಗೆ ದುಡಿದವರು. ಮುಂದೆ ನಮ್ಮ ಕ್ಯಾಮನಹಳ್ಳಿ ಮಂಡಲ ಪಂಚಾಯತಿಯ ಪ್ರಧಾನರಾಗಿ ಹಲವಾರು ಜನಪರ ಕೆಲಸಗಳನ್ನು ಮಾಡಿದರು. ನಮ್ಮ ನಮ್ಮ ಜೈ ಕರ್ನಾಟಕ ಸಂಘ ಬೆಳ್ಳೇಕೆರೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರದ ದಿನಗಳಲ್ಲಿ ಸಕಲೇಶಪುರ ಶಾಸಕರಾದ ಬಿ.ಡಿ.ಬಸವರಾಜ್ ಇವರ ಹತ್ತಿರದ ಸಂಬಂಧಿ.

ಗಣಪಯ್ಯನವರು ಪ್ರಾರಂಭಿಸಿದ್ದ ಮನೆಗಳ ಕೆಲಸ ಮುಗಿಯುತ್ತಾ ಬಂದಿತ್ತು. ಅಗಲಟ್ಟಿ ಮಾವಿನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದ ನೂರು ಎಕರೆ ಜಮೀನಿನ ಸರ್ವೆ ಎಲ್ಲ ಮುಗಿದರೂ, ಇನ್ನೂ ಹಕ್ಕು ಪತ್ರ ವಿತರಣೆ ಆಗಿರಲಿಲ್ಲ. ಅದಕ್ಕಾಗಿ ಪ್ರಯತ್ನ ನಡೆದೇ ಇತ್ತು.

ಈಗ ನಿರ್ಮಾಣವಾಗಿದ್ದ ಮನೆಗಳನ್ನು ಅವರಿಗೆ ಹಸ್ತಾಂತರಿಸುವ ಬಗ್ಗೆ ಒಂದು ಸಮಾರಂಭ ಮಾಡಬೇಕೆಂದು ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳೂ ಹೇಳುತ್ತಿದ್ದರು. ಸುಮಾರು ಹತ್ತು ಕಡೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಮನೆಗಳು ವಾಸಕ್ಕೆ ಕೊಡುವ ಹಂತಕ್ಕೆ ಬಂದಿದ್ದವು.
ಹೆನ್ನಲಿ ಗ್ರಾಮದಲ್ಲಿ ಹೇಮಾವತಿ ನದಿ ದಡದಲ್ಲಿ ಒಂದು ಸಮಾರಂಭಕ್ಕೆ ತಯಾರಿ ನಡೆಯಿತು. ಯೋಜನೆ ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಉತ್ಸಾಹದಿಂದಲೇ ತಯಾರಿ ನಡೆಸಿದರು.
ಅಂದಿನ ಕಾರ್ಯಕ್ರಮಕ್ಕೆ ಸಿ.ಎಂ.ಪೂಣಚ್ಚನವರು ಅತಿಥಿಗಳಾಗಿ ಬಂದಿದ್ದರು. ಅವರು ಆಗ ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು. ಅಂದು ಅವರು ಭಾಷಣದಲ್ಲಿ ನಾವು ದಕ್ಷಿಣ ಭಾರತದ ಜನ ಪುಣ್ಯ ಮಾಡಿದ್ದೇವೆ. ನಮ್ಮಲ್ಲಿ ಗಣಪಯ್ಯನವರಂತಹ ಜನ ಇದ್ದಾರೆ. ಆ ಕಾರಣಕ್ಕಾಗಿಯೇ ನಾವು ಸ್ವಲ್ಪಮಟ್ಟಿಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಆದರೆ ಇಲ್ಲಿಗೆ ಹೋಲಿಸಿದಲ್ಲಿ ಉತ್ತರ ಭಾರತದ ರಾಜ್ಯಗಳು ನಮಗಿಂತ ಐವತ್ತು ವರ್ಷಗಳಷ್ಟು ಹಿಂದೆ ಇದ್ದಾರೆ. ಹಳ್ಳಿಗಳ ಜನರಿಗೆ ದೇಶಕ್ಕೆ ಪ್ರಜಾಪ್ರಭುತ್ವ ಬಂದಿದೆ ಎಂದೇ ಗೊತ್ತಿಲ್ಲ. ಇನ್ನೂ ರಾಜರ ಆಳ್ವಿಕೆ ಇದೆ ಎಂದೇ ನಂಬಿದ್ದಾರೆ. ನಮ್ಮಂತವರು ಹೋದರೂ ಮಹಾರಾಜರು ಬಂದರು ಎಂದುಕೊಳ್ಳುತ್ತಾರೆ. ನೀವೆಲ್ಲ ಇಲ್ಲಿ ಇರುವಂತಹ ಅವಕಾಶವನ್ನು ಬಳಸಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸಿ. ಕುದುರೆಯನ್ನು ಹೊಳೆಯವರೆಗೆ ಒಯ್ಯಬಹುದಷ್ಟೇ ಆದರೆ ನೀರನ್ನು ಅದೇ ಕುಡಿಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಮನೆಗಳ ಫಲಾನುಭವಿಗಳೆಲ್ಲರೂ ಸೇರಿ, ಸುಮಾರು ಎರಡು ಸಾವಿರ ಜನರಿಗಾಗುವಷ್ಟು ಉಪ್ಪಿಟ್ಟು ಮತ್ತು ಕೇಸರಿಬಾತನ್ನು ತಯಾರಿಸಿದ್ದರು. ಕೆಲವರು ಭಾಷಣಗಳು ಮುಗಿದಕೂಡಲೇ ದಲಿತರು ಮಾಡಿದ ಅಡಿಗೆಯೆಂದು ಉಪಹಾರಕ್ಕೆ ನಿಲ್ಲದೆ ಜಾರಿಕೊಂಡರು. ಆದರೆ ಗಣಪಯ್ಯ ಮತ್ತು ಪೂಣಚ್ಚನವರು ಎಲ್ಲರ ಮದ್ಯೆ ಉಪಹಾರಕ್ಕೆ ಕುಳಿತಾಗ ಇನ್ನು ಕೆಲವರು ನಿರ್ವಾಹವಿಲ್ಲದೆ ಜೊತೆ ಸೇರಿದರು.

ಈ ಮನೆಗಳನ್ನು ಕಟ್ಟಿದ ಕೆಲವು ಸ್ಥಳಗಳಿಗೆ ಮೊದಲೇ ರೂಡಿಯಾದ ಹೆಸರುಗಳಿದ್ದವು, ಉದಾಹರಣೆಗೆ ಕೃಷ್ಣಾಪುರ, ಅಜ್ಜನಕೆರೆ, ಹಾರ್ಲೆ ಕೂಡಿಗೆ ಹೀಗೆ, ಇದ್ದವು ಆ ಹೆಸರುಗಳನ್ನು ಬಿಟ್ಟು ಕೆಲವು ಹೆಸರಿಲ್ಲದ ಸ್ಥಳಗಳು ಮತ್ತು ಕೇರಿಗಳಿಗೆ ಗಣಪಯ್ಯ ಹೊಸ ಹೆಸರನ್ನು ಇಟ್ಟರು. ರಾಮಕೃಷ್ಣ ನಗರ, ವಿವೇಕ ನಗರ, ವಿಜಯ ನಗರ ಹೀಗೆ, ಈ ತಲೆಮಾರಿನ ಅನೇಕರು “ರಾಮಕೃಷ್ಣ ನಗರ” ದ ಹೆಸರು, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆದಾಗ ಇಟ್ಟದ್ದೆಂದು ತಿಳಿದಿದ್ದಾರೆ. ಮತ್ತು ಕೆಲವರು ರಾಜಕೀಯದ ವ್ಯಕ್ತಿಗಳು ಅದನ್ನೇ ಭಾಷಣಗಳಲ್ಲಿಯೂ ಹೇಳುತ್ತಾರೆ. ಅದು ನಿಜವಲ್ಲ ಹೆಗಡೆಯವರು ಮುಖ್ಯಮಂತ್ರಿ ಆಗುವ ಮೊದಲೇ ಈ ಸ್ಥಳಕ್ಕೆ ಹೆಸರಿಡಲಾಗಿತ್ತು, ಮತ್ತು ಅದು ರಾಮಕೃಷ್ಣ ಪರಮಹಂಸರ ಹೆಸರು ಮತ್ತು ಪಕ್ಕದ “ವಿವೇಕ ನಗರ” ದ ವಿವೇಕಾನಂದರ ಹೆಸರಾಗಿದೆ.

ಹಾಗೇಯೇ ಇನ್ನೊಂದು ಹೆಸರು ವಿಜಯ ನಗರ. ಯಾವ ಬ್ಯಾಂಕೂ ಈ ಯೋಜನೆಗೆ ಸಾಲ ಕೊಡದಿದ್ದಾಗ ಸಾಲ ಕೊಟ್ಟ ವಿಜಯಬ್ಯಾಂಕಿನ ವಿಠ್ಠಲ ಶೆಟ್ಟರ ಹೆಸರಿಡೋಣ ಎಂದಿದ್ದರು ಗಣಪಯ್ಯ. ಆಗ ವಿಠ್ಠಲ ಶೆಟ್ಟರು ನಾನೊಬ್ಬ ಬ್ಯಾಂಕ್ ನೌಕರ ಜನರ ದುಡ್ಡನ್ನು ಜನರಿಗೆ ಕೊಡುವವ, ನನ್ನ ಹೆಸರು ಹಾಕಲೇಬಾರದು ಎಂದರು. ಆದ್ದರಿಂದ ಬ್ಯಾಂಕಿನ ಹೆಸರಾದರೂ ಇರಲಿ ಎಂದು ಹೇಳಿ ಕಾನೂನಿನ ತೊಡಕಾಗದಂತೆ ವಿಜಯ ನಗರ ಎಂದು ಹೆಸರಿಟ್ಟರು.
ನಂತರ ಆ ಮನೆಗಳತ್ತ ಗಣಪಯ್ಯನವರ ಓಡಾಟ ಹೆಚ್ಚಾಯಿತು. ಅವರಿಗೆ ಬಟ್ಟೆ ಬರೆ ಹಂಚುವುದು, ಹಣ್ಣಿನ ಗಿಡಗಳನ್ನು ಕೊಡಿಸುವುದು. ಬೇರೆ ಬೆಳೆಗಳಿಗೆ ಪ್ರೋತ್ಸಾಹ ನೀಡುವುದು ಮಾಡುತ್ತಿದ್ದರು.

ರಾಜ್ಯ ರಾಜಕಾರಣದಲ್ಲಿ ಅವರ ತೊಡಗುವಿಕೆ ಕಡಿಮೆಯಾಗುತ್ತ ಬಂತು. ರಾಜ್ಯದಲ್ಲಿ ರೈತ ಚಳುವಳಿ ಉತ್ತುಂಗಕ್ಕೇರಿತ್ತು. ಗುಂಡೂರಾವ್ ಸರ್ಕಾರವನ್ನು ಕೆಳಗಿಳಿಸುವಲ್ಲಿ ರೈತ ಸಂಘದ ಪಾತ್ರವೂ ಗಣನೀಯವಾಗಿತ್ತು. ರೈತ ಸಂಘ ತನ್ನ ಕಾರ್ಯಕರ್ತರಿಗೆ ಗುಂಡೂರಾವ್ ಸರ್ಕಾರ ವಿರುದ್ಧ ಮತ ಚಲಾಯಿಸುವಂತೆ ಕರೆನೀಡಿತ್ತು. ದೇವರಾಜ ಅರಸರ ದೇಹಾಂತ್ಯವಾಗಿತ್ತು. ಬಂಗಾರಪ್ಪನವರು ಕಾಂಗ್ರೆಸ್ಸಿನಿಂದ ಬೇರೆಯಾಗಿ ಕರ್ನಾಟಕ ಕ್ರಾಂತಿರಂಗ ಎಂಬ ಪಕ್ಷವನ್ನು ಕಟ್ಟಿದ್ದರು. ಇದೆಲ್ಲದರ ಫಲವಾಗಿ ಜನತಾ ಪಕ್ಷ ಹೆಚ್ಚು ಸದಸ್ಯರನ್ನು ಗೆದ್ದು ಹದಿನೆಂಟು ಜನರು ಶಾಸಕರಿದ್ದ ಬಿಜೆಪಿಯ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂತು. ರಾಮಕೃಷ್ಣಹೆಗಡೆಯವರು ಮುಖ್ಯಮಂತ್ರಿಗಳಾದರು.


ಇದನ್ನೂ ಓದಿ: ಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...