Homeಅಂಕಣಗಳುನಾಗಸುಧೆ ಜಗಲಿಯಿಂದನಮಿಸುವ ಹೃದಯದ ನಂದೂರ

ನಮಿಸುವ ಹೃದಯದ ನಂದೂರ

ಶರಣ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ನೀಡಿ 'ಬೆರಗು' ಎನಿಸುವರು.

- Advertisement -
- Advertisement -

ನನ್ನ ಮನೆಯಲ್ಲೊಂದು ಹೂಗಿಡ
ಬೆಳೆಸಿದ್ದೇನೆ ; ಅದು
ನಿತ್ಯ ನಗುತ್ತದೆ
ಅರಳಿಸುತ್ತದೆ ಹೂ
ಮರಳಿಸುತ್ತದೆ ಮನಸ್ಸು
ಅದರೆಡೆಗೆ ಮತ್ತೆ ಮತ್ತೆ ;
ನಾನದನ್ನು ಪ್ರೀತಿಸುತ್ತೇನೆ
ಹೆಸರು ಗೊತ್ತಿಲ್ಲದಿದ್ದರೂ…..

ಎಂಬ ಹೂ ಮನಸ್ಸಿನ, ಮನುಷ್ಯ ಪ್ರೀತಿಯ, ಪ್ರಗತಿ ಪರ ಚಿಂತನೆಯ, ಜನಪರ ಕಾಳಜಿಯ ಕವಿ ಮಹಾಂತಪ್ಪ ನಂದೂರ ಮೂಲತಃ ಕಲ್ಬುರ್ಗಿ ಜಿಲ್ಲೆಯ ‘ಪಟ್ಟಣ’ ಎಂಬ ಊರಿನವರು. ಬಡತನದ ನಡುವೆ ಅರಳಿದ ಪ್ರತಿಭಾವಂತ ನಂದೂರ. ಹೊಟ್ಟೆಪಾಡಿಗಾಗಿ ಮುಂಜಾನೆ ದುಡಿದು, ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಬಾಕಿ ಸಮಯದಲ್ಲಿ ಟ್ಯೂಷನ್ ಹೇಳಿ ತಮ್ಮ ಮೂಲ ನೆಲದಲ್ಲೇ ವಿದ್ಯಾಭ್ಯಾಸ ಮುಗಿಸಿ ಅರ್ಥಶಾಸ್ತ್ರದಲ್ಲಿ ಎಂ.ಎ. ಬಿ.ಎಡ್ ಪದವಿ ಪಡೆದವರು. ನಂತರ ಕೆಲ ಸಮಯ ಅಧ್ಯಾಪಕ ವೃತ್ತಿಯನ್ನು ನಿರ್ವಹಿಸಿ ಈಗ ಬಹು ವರ್ಷಗಳಿಂದ ಹುಬ್ಬಳ್ಳಿಯ ನೈರುತ್ಯ ರೇಲ್ವೆಯ ಲೆಕ್ಕ ಪತ್ರ ವಿಭಾಗದಲ್ಲಿ ಹಿರಿಯ ‘ಅನುಭಾವ’ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪದವಿಯ ಹಂತದಲ್ಲೇ ಕವಿತೆ ಬರೆದು ಜನ ಮನ್ನಣೆ ಪಡೆದ ನಂದೂರ, ನಂತರದ ದಿನಗಳಲ್ಲಿ ಸಾಹಿತ್ಯವೇ ತಮ್ಮ ಉಸಿರೆಂದು ತಿಳಿದು ಕನ್ನಡಮ್ಮನ ಸೇವೆಯಲ್ಲಿ ತೊಡಗಿ, ತಮ್ಮ ನೌಕರಿಗೆ ಎಂದೂ ಚ್ಯುತಿ ಬಾರದಂತೆ ವೃತ್ತಿ ಮತು ಪ್ರವೃತ್ತಿಯಲ್ಲಿ ಸಮಾನತೆಯ ಮಂತ್ರದೊಂದಿಗೆ ಬದುಕಿನಲಿ ಬೆಳಕು ಕಂಡವರು. ಮತ್ತೊಬ್ಬರ ಮನಸ್ಸಿಗೆ ಎಂದೂ ನೋವಾಗದಂತೆ ಎಲ್ಲರೊಳಗೊಂದಾಗುವ ನಗುಮೊಗದ ನಂದೂರ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕಲ್ಬುರ್ಗಿಯಿಂದ ಹುಬ್ಬಳ್ಳಿಗೆ ನೌಕರಿಗೆ ಬಂದ ಮಹಾಂತಪ್ಪ ನಂದೂರರಿಗೆ ಹುಬ್ಬಳ್ಳಿಯ ಪರಿಸರ ತುಂಬಾ ಹಿಡಿಸಿತು. ತಮಗೊಪ್ಪುವ ನೌಕರಿಯೊಂದಿಗೆ ಸಾಹಿತ್ಯದ ಅಭಿಮಾನಿಗಳೂ ಮಾರ್ಗದರ್ಶಕರೂ ಸ್ನೇಹಿತರೂ ದೊರೆತಿದ್ದರಿಂದ ಹುಬ್ಬಳ್ಳಿಯಲ್ಲಿ ಸದ್ದು ಗದ್ದಲವಿಲ್ಲದೇ ತಮ್ಮ ಬರವಣಿಗೆ ಪ್ರಾರಂಭಿಸಿದರು. ಡಾ. ಪ್ರಹ್ಲಾದ ಅಗಸನಕಟ್ಟೆ, ಜಗದೀಶ ಮಂಗಳೂರ ಮಠ ಮತ್ತು ಆರೂರು ಲಕ್ಷ್ಮಣ ಶೇಟ್‌ರಂತಹ ಹಿರಿಯರೊಂದಿಗಿನ ಚರ್ಚೆಯ ಫಲವಾಗಿ ಇವರ ಸಾಹಿತ್ಯದ ನೆಲೆ ಬಲಗೊಂಡಿತು ; ಗೆಳೆಯ ಮುನಿಸ್ವಾಮಿಯ ಸಾಂಗತ್ಯದಿಂದಲೂ ಸಹ. ಇದೇ ಸಂದರ್ಭದಲ್ಲಿ ವಾಣಿಜ್ಯ ನಗರಿ ಎಂದು ಹೆಸರು ಪಡೆದ ಹುಬ್ಬಳ್ಳಿಯಲ್ಲಿ ಸಾಹಿತ್ಯದ ಚಟುವಟಿಕೆಗಳು ನವಿಲಿನಂತೆ ಗರಿಗೆದರಿದವು. ಅನ್ವೇಷಣಾ ಸಾಹಿತ್ಯ, ಅಕ್ಷರ ಸಾಹಿತ್ಯ ವೇದಿಕೆ ಮತ್ತು ನೈರುತ್ಯ ರೇಲ್ವೆ ಕನ್ನಡ ಸಂಘಗಳು ಮೂಲಕ ಮಹಾಂತಪ್ಪ, ಕನ್ನಡದ ಮನಸ್ಸುಗಳೊಳಗೂಡಿ ಹುಬ್ಬಳ್ಳಿಯಲ್ಲಿ ಸಾಹಿತ್ಯದ ಕಂಪು ಇಂಪಾಗಿಸಿದರು. ಮನೆ ಮನೆ ಕವಿಗೋಷ್ಠಿ, ತಿಂಗಳಿಗೊಮ್ಮೆಯ ಸಾಹಿತ್ಯಿಕ ಚರ್ಚೆ, ಪುಸ್ತಕ ಬಿಡುಗಡೆ ಮತ್ತು ಇನ್ನಿತರ ಸಾಹಿತ್ಯದ ಕಾರ್ಯಕ್ರಮಗಳಿಗೆ ಸುನಂದಾ ಕಡಮೆಯವರನ್ನು ಒಳಗೊಂಡಂತೆ ಇಲ್ಲೊಂದು ಸಮಾನ ಮನಸ್ಸಿನ ಪಡೆಯೇ ಸಿದ್ಧವಾಯಿತು. ಅಧ್ಯಯನ ಅಧ್ಯಾಪನಗಳ ಮೂಲಕ ಸಾಹಿತ್ಯಿಕ ನೆಲೆಗಟ್ಟು ಭದ್ರವಾಗುತ್ತಾ ನಂದೂರರು, ಅಲ್ಲಿ ರೇಲ್ವೆಯಲ್ಲಿಯೂ ಸಹ ತಮ್ಮದೇ ಛಾಪಿನಿಂದ ದಕ್ಷ ಅಧಿಕಾರಿ ಎಂದೆನಿಸಿಕೊಳ್ಳುತ್ತಾ, ಇಲ್ಲಿ ವೈಶಿಷ್ಟ್ಯಪೂರ್ಣ ಬರವಣಿಗೆಯ ಮೂಲಕ ಸಾಹಿತ್ಯಾಭಿಮಾನಿಗಳ ಗಮನ ಸೆಳೆದರು.

ಉದಕದೊಳಗಣ ಬೆಂಕಿ (ಕವಿತೆ)
ಅಯಿತಾರ ಅಮಾಸಿ (ಕಥಾ ಸಂಕಲನ)
ದೂರದ ಪದ (ಕವಿತೆ)
ಜೀವ ಕೊಳಲು (ಕವಿತೆ)
ಕಲ್ಯಾಣವೆಂಬ ಪ್ರಣತಿ (ಸುನೀತ ಸಂಗ್ರಹ)
ಪುಟ್ಟರಾಜ ಗವಾಯಿ (ಜೀವನ ಚರಿತ್ರೆ)
ಅರಿವೇ ಪ್ರಮಾಣು (ಜೀವನ ಕಾವ್ಯ)
ಆನಂದ ನಿನಾದ (ವಿಮರ್ಶಾ ಲೇಖನ)

ಇವು ಮಹಾಂತಪ್ಪ ನಂದೂರರ ಪ್ರಮುಖ ಪ್ರಕಟಿತ ವೈವಿಧ್ಯಮಯ ಸಾಹಿತ್ಯದ ಕೃತಿಗಳು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯವಾಗಿದೆ. ಜನಪರ ಮತ್ತು ಜೀವ ಪರ ಕಾಳಜಿ ಇವರ ನಿಲುವು. ಶರಣ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ನೀಡಿ ‘ಬೆರಗು’ ಎನಿಸುವರು. ಸಮಾಜದಲ್ಲಿಯ ಅಸಮಾನತೆ, ಅನ್ಯಾಯ, ಭ್ರಷ್ಟಾಚಾರದ ಜೊತೆ ಪ್ರೀತಿ ಪ್ರೇಮದ ಕವನಗಳೂ ಬರೆದ ಇವರು, ಕವಿತೆಗೆ ಒಂದು ಶಾಂತವಾದ ಸುನಾದವನ್ನು ಕೇಳುವ-ಕೇಳಿಸುವ ದನಿಯೂ ಇರಬೇಕು ಎಂದು ನಂಬಿದವರಿವರು. ಸೃಜನಶೀಲ ಬರಹದಲ್ಲಿ ಪ್ರಯೋಗ ಶೀಲತೆ ಇರಬೇಕು ಎನ್ನುವ ಇವರ ಕಥೆಗಳಲ್ಲಿ ಕಲ್ಬುರ್ಗಿ ನೆಲದ ಸೊಗಡು, ಅಲ್ಲಿಯ ಪರಿಸರ, ಜೀವನ, ನಂಬಿಕೆ, ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಕಥೆಯಾಗಿಸಿರುವರು. ಶರಣು ಸಾಹಿತ್ಯವನ್ನು ಪ್ರೀತಿಸುವ ಮಹಾಂತಪ್ಪ ಬದುಕಿನುದ್ದಕ್ಕೂ ಅಸಮಾನತೆ ಮತ್ತು ಅಸ್ಪ್ರಶ್ಯತೆಗಳಿಗೆ ನೊಂದು ಬೆಂದವರು.

ಸಂಬೋಳಿ ! ಸಂಬೊಳಿ ! ಸಂಬೋಳಿ
ಬಸವಣ್ಣ ಬರುತಿಹರು ಬೀದಿಯಲಿ
ಬಾಗಿಲು ತೆರೆದು ಹೊರ ಬನ್ನಿರಿ
ಬಲದ ಕೈಯಲ್ಲಿ ಭವದ ಬಟ್ಟಲು
ಎಡದ ಕೈಯಲಿ ಅನುಭಾವದ ತೊಟ್ಟಿಲು
ಬರುವ ದಾರಿಯ ತುಂಬಾ ದಯದ ಮೆಟ್ಟಿಲು

ಇದು ಬಸವಣ್ಣನವರ ಕುರಿತಾಗಿ ಇವರು ಬರೆದ ಮತ್ತು ಇವರಿಗೆ ಹೆಸರು ತಂದುಕೊಟ್ಟ ಜನಜನಿತವಾದ ಕವಿತೆ. ಸಮಾನತೆಯ ಪ್ರಣತಿ ಹಿಡಿದು, ಶುಭ್ರ ಬಿಳಿ ಉಡುಗೆ, ಸಹಜ ನಡಿಗೆ, ನಗುಮೊಗಕೆ ನೊಸಲ ವಿಭೂತಿ ತೊಟ್ಟು ನುಡಿದಂತೆ ನಡೆಯುವ ಬಸವ ಪ್ರಭು ಬರುತ್ತಿರುವರು. ಅದಕ್ಕಾಗಿ ಒಳಗೆ ಕೂತಿದ್ದ ಜನರೆಲ್ಲಾ ಎದೆಯ ಕದವ ತೆರೆದು, ಕುಲದ ಕೀಲಿಯ ಕಳಚಿ, ಮಠ ಮಂದಿರ ತೊರೆದು, ಮುಟ್ಟು ಮೈಲಿಗೆಯ ಮಡಿ ಇಲ್ಲದೇ ಮನೆಯ ಹೊಸಿಲ ದಾಟಿ ಹೊರಬನ್ನಿ ಎನ್ನುವಾಗ ಇವರ ಪ್ರಗತಿ ಪರ ನಿಲುವು ಬಸವಣ್ಣನ ಕವಿತೆಯಿಂದ ಸ್ಪಷ್ಟವಾಗಿ ಗೋಚರಿಸುವದು.

ಮಹಾಂತಪ್ಪ ನಂದೂರರ ಬರವಣಿಗೆ-ಬೆಳವಣಿಗೆಗಳನ್ನು ಅತ್ಯಂತ ಪ್ರೀತಿ ಹಾಗೂ ಕುತೂಹಲದಿಂದ ಗಮನಿಸುತ್ತಿರುವ ನಾಡಿನ ಖ್ಯಾತ ಸಾಹಿತಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿಯವರು ‘ಕಲ್ಯಾಣವೆಂಬ ಪ್ರಣತಿ’ಯು ಕುರಿತು ಬರೆಯುತ್ತಾ “ಇದೊಂದು ಅಪರೂಪದ ಕಾವ್ಯ ಪ್ರಯೋಗ. ನೀರಿನ ಮೂಲಕವೇ ನೀರಿನ ಧರ್ಮವನ್ನು ಅರಿಯಬಹುದು ಎನ್ನುವಂತೆ, ಇಲ್ಲಿ ವಚನಕಾರರು ಭಾಷೆಯ ಸಮ್ಮರ್ಧದಿಂದಲೇ ಅವರು ಜೀವಿತದ ಅನನ್ಯವಾದ ಅನುಭೂತಿ- ಯನ್ನು ತನ್ನೊಳಗೆ ಆವಾಹಿಸಿಕೊಳ್ಳುವ ಕಾವ್ಯಾನುಸಂಧಾನವಿದೆ. ಈ ರಚನೆಗಳಿಂದ ನಾವು ಪಡೆಯುವ ಕಾವ್ಯಾನುಭೂತಿಯು, ಮೂಲದ ಭಾಷಾ ಸಮ್ಮರ್ದದೊಂದಿಗೇ ನಾವು ಮುಳುಗಾಟ ನಡೆಸಿದ್ದಲ್ಲಿ ಪಡೆಯಬಹುದಾಗಿದ್ದ ಅನುಭೂತಿಗಿಂತ ಯಾವ ಬಗೆಯ ಭಿನ್ನತೆಯನ್ನು ಪಡೆದಿದೆ ಎಂಬುದು ನಾವೀಗ ಚಿಂತಿಸಬೇಕಾದ ಸಂಗತಿ. ಸದ್ಯಕ್ಕಂತೂ ಹರಿಯುವ ಹೊಳೆಯಲ್ಲಿ ಮುಳುಗಿ ಈಗಷ್ಟೇ ಹೊರಗೆ ಬಂದವನ ಮೈನಡುಕದಂತಿದೆ ಈ ಹೃದಯಸ್ಪರ್ಶಿ ರಚನೆಗಳು” ಎಂದಿರುವರು. ಒಟ್ಟೂ 63 ಶರಣರ ಕುರಿತಾಗಿ 75 ಸುನೀತಗಳು ‘ಕಲ್ಯಾಣವೆಂಬ ಪ್ರಣತಿ’ಯಲ್ಲಿದೆ ಎಂಬುದನ್ನು ನಾವಿಲ್ಲಿ ನೆನೆಯಬಹುದಾಗಿದೆ.

‘ಅರಿವೇ ಪ್ರಮಾಣು’ ಇದು ಅಕ್ಕನಾಗಮ್ಮನ ಜೀವನ ಕಾವ್ಯ ಹದಿನಾಲ್ಕು ಸಾಲಿನ 375 ಸುನಿತಗಳು ಈ ಪುಸ್ತಕದಲ್ಲಿ ಒಳಗೊಂಡಿರುತ್ತದೆ. ಅಕ್ಕ ನಾಗಮ್ಮನ ಬದುಕೇ ಈ ಪುಸ್ತಕದ ಕೇಂದ್ರ ಬಿಂದು. ಆಕೆಯ ಸುತ್ತಲೂ ಶರಣ ಸಂಕುಲದ ಬದುಕು ಮತ್ತು ಅಂದಿನ ಸಾಮಾಜಿಕ, ಜೀವನ ಮೌಲ್ಯಗಳು, ಕಾಯಕ, ಸಮತೆ, ಪುರುಷ ಪ್ರಧಾನ ಅಸಮಾನತೆಯ ಅಂಶಗಳೂ ಒಳಗೊಂಡಿದೆ. ಹನ್ನೆರಡನೇ ಶತಮಾನದಲ್ಲಿ ಮೂಡಿ ಬಂದ ಶರಣ ಸಾಹಿತ್ಯ ವಿಶ್ವಮಾನ್ಯವಾಗಿದೆ. ಅಲಕ್ಷಿತ ವಚನಕಾರ್ತಿ ಅಕ್ಕನಾಗಮ್ಮನವರ ಬದುಕು ಮತ್ತು ಚಿಂತನೆಗಳು ಒಳನೋಟವನ್ನು ನಂದೂರರು ಹೃದಯಂಗಮವಾಗಿ ಚಿತ್ರಿಸಿರುವರು.

ಒಂದು ಸುನಿತ ಇಂತಿದೆ ;

ಪುಣ್ಯವೇನು ಪಾಪವೇನು ಭುವಿಯ ಮೇಲೆ
ಹೆಣ್ಣೆಂದು ಶುರು ಶಾಪವೇನೋ… ಹಿಡಿ ಮುಚ್ಚಿ ತೂರಿ
ಮಣ್ಣು ತುಟಿ ಕಚ್ಚಿ ನಿತ್ಯ ಬಾಳು. ಮೊಗದಲಿ ಬರಿ
ತೋರು ನಗು ಮುಗುಳು. ಅಹಾ ! ತಾನು ಮಹಾ ದೇವಿ
ಮನೆ ಬೆಳಗು ಸಿರಿ ದೇವಿ ಸಂತಾನ ಲಕ್ಷ್ಮಿ ಪುರುಷ
ಫಲ ಕೊಟ್ಟು ಪಡೆವ ಪದವಿ. ಅಧಿಕಾರ ಅಂತಸ್ತು
ವಿದ್ಯೆ ಪೂಜೆ ದೇವರು ದರ್ಶನ ಪುರುಷ ಪಾಲು
ತನ್ನ ಪಾಲಿನ ಭಾಗ್ಯ ತಾನೂಡಿಸುವ ಎದೆ ಹಾಲು
ಅಂತಃಕರಣ ಬೆರಳು ನೇವರಿಸುತಿತ್ತು ತನ್ನದೇ
ಕರುಳು ಕುಡಿ ತನ್ನದುರಿಗಿದ್ದ ಮುದ್ದು ಮಗಳು….
ಗಂಡನಾಸೆ ಗಂಡಿನಾಸೆ ಹೊತ್ತು ಬಸಿರು ಮಾದಲಾಂಬೆ
ಕಣ್ಣು ಮುಂದೆ ತಾಯಿ ಭೂಮಿ ರೂಪ ತಾಯ್ಗರುಳು
ಬೆಳೆ ಬೆಳೆವ ಮಹಾ ತಾಯಿ ಮುತ್ತಬ್ಬೆ ತಂಪು ತವರು
ಬಸಿರು ಹೊತ್ತ ದಾರಿಯ ತುಂಬಾ ನೆರಳು ಹಚ್ಚ ಹಸಿರು…

ನಂದೂರರ ಕಾವ್ಯ ಸೃಷ್ಟಿಯೇ ಅಪೂರ್ವ ವಾದುದು. ಪದಗಳ ಲಾಲಿತ್ಯ, ಶಬ್ದ ಜೋಡಣೆ, ಹಾಡಲು ತಂಪು ಕಿವಿಗಳಿಗೂ ಇಂಪು. ಬಸಿರು ಹೊತ್ತ ದಾರಿಯ ತುಂಬಾ ನೆರಳು ಹಚ್ಚ ಹಸಿರು… ಇಂತಹ ಶಬ್ದ ಪ್ರಯೋಗಗಳು ಓದುಗರ ಮನಸೂರೆಗೊಳ್ಳುತ್ತದೆ. ಇವೆಲ್ಲಾ ಸಾಲುಗಳು ನಂದೂರರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಪರೂಪದ ಕೊಡುಗೆಯಾಗಿರುತ್ತದೆ.

ಸಹೃದಯತೆ ಇದ್ದರೆ ಮಾತ್ರ ಸಾಹಿತ್ಯ ರಚನೆ ಸಾಧ್ಯ ಎಂಬ ನಂಬಿಕೆಯ ಮಹಾಂತಪ್ಪ ನಂದೂರ, ಚೆನ್ನವೀರ ಕಣವಿ ಮತ್ತು ಎಚ್.ಎಸ್. ವೆಂಕಟೇಶಮೂರ್ತಿಯವರ ಸಾಹಿತ್ಯದಿಂದ ಪ್ರೇರಿತರಾಗಿ ತಾನು ಅಕ್ಷರಗಳನ್ನು ಬರೆದೆ ಎನ್ನುವಾಗ ಅವರ ಮುಖದಲ್ಲಿ ಧನ್ಯತಾ ಭಾವ ಹೊರಹೊಮ್ಮುವದು. ನಯ, ವಿನಯ, ವಿಧೇಯತೆ, ಗಾಂಭೀರ್ಯಗಳನ್ನು ಮೈಗೂಡಿಸಿಕೊಂಡ ಇವರು ಬದುಕು ಮತ್ತು ಬರಹದಲ್ಲಿ ಸಮನ್ವಯತೆ ಸಾಧಿಸಿದವರು. ಸಂಕ್ರಮಣ ಕಥೆ ಮತ್ತು ಕಾವ್ಯ ಬಹುಮಾನ, ಡಿ.ಎಸ್.ಕರ್ಕಿ ಕಾವ್ಯ ಬಹುಮಾನ, ಸೇಡಂನ ಅಮ್ಮ ಪ್ರಶಸ್ತಿ, ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ, ಬೆಟ್ಟದೂರು ಪ್ರತಿಷ್ಟಾನದ ಪ್ರಶಸ್ತಿ, ಗುಲ್ಬರ್ಗ ವಿಶ್ವ ವಿದ್ಯಾಲಯದ ಸಾಹಿತ್ಯ ಪ್ರಶಸ್ತಿ, ಶಿವರಾತ್ರೀಶ್ವರ ಪ್ರಶಸ್ತಿ ಹೀಗೆ ಹತ್ತು ಹಲವು ಸಾಹಿತ್ಯಿಕ ಪ್ರಶಸ್ತಿಗಳು ಇವರ ಪುಸ್ತಕಗಳನ್ನು ಹುಡುಕಿಕೊಂಡು ಬಂದಿದೆ.

ಕಾವ್ಯಕ್ಕೆ ಹೂ ಮುಡಿಸುವ ಮನದನ್ನೆ ಪುಷ್ಪಾ, ಬೆರಗಿನ ಅಕ್ಷರಗಳನ್ನು ಮೂಡಿಸುವ ಮಗಳು ದೀಕ್ಷಾ ಮತ್ತು ವೈದ್ಯಕೀಯ ವ್ಯಾಸಂಗದ ಮಗ ಅಭಿಷೇಕ್ ಇವರಿಂದೊಡಗೂಡಿದ ತುಂಬು ಸಂಸಾರದ ಮಹಾಂತಪ್ಪ ನಂದೂರರಿಗೆ ಶುಭ ಕೋರಿ “ನಾಗಸುಧೆ”ಯಿಂದ ಅಭಿನಂದಿಸಿ, ಮುಂಬರುವ ದಿನಗಳಲ್ಲಿ ಇವರಿಂದ ಇನ್ನೂ ಹೆಚ್ಚು ಹೆಚ್ಚು ಮಾನವೀಯ ಮೌಲ್ಯದ ಪುಸ್ತಕಗಳು ಹುಟ್ಟಲಿ ಎಂದು ಆಶಿಸುವೆನು.

-ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...