Homeಅಂಕಣಗಳುಕಾಫಿ ಬೆಳೆ ಮತ್ತು ಕಾರ್ಮಿಕರ ಜೀವನ; ಪ್ರಸಾದ್ ರಕ್ಷಿದಿ

ಕಾಫಿ ಬೆಳೆ ಮತ್ತು ಕಾರ್ಮಿಕರ ಜೀವನ; ಪ್ರಸಾದ್ ರಕ್ಷಿದಿ

ಈಗ ಮಾಲಿಕ-ಕಾರ್ಮಿಕ ಎರಡೂ ವರ್ಗಗಳಲ್ಲಿ ಹಳೆಯ ತಲೆಮಾರಿನ ಜನರು ತೀರ ಕಡಿಮೆಯಾಗಿದ್ದಾರೆ. ಎರಡೂ ಕಡೆಯ ಯುವ ಪೀಳಿಗೆ ಹೆಚ್ಚಿನ ಪಾಲು ನಗರ ಸೇರಿದೆ.

- Advertisement -
- Advertisement -

ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -19

ಕಾಫಿ ವಲಯದ ಈ ಸಂಕಥನ ಪ್ರಾರಂಭವಾಗುವುದು ಸುಮಾರು 1850ರ ಕಾಲದಿಂದ. ಅಂದರೆ ಬ್ರಿಟಿಷರು ಪ್ಲಾಂಟೇಷನ್ ಕೃಷಿಗೆ ತೊಡಗಿದ ಸಮಯದಿಂದ. ಒಂದು ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿನ ಜನಜೀವನ ಆನೆ ನಡಿಗೆಯಲ್ಲಿತ್ತು. ಆನೆ ಹೋದದ್ದೇ ದಾರಿಯೆಂಬ ಮಾತಿದೆ. ಹೌದು ಬ್ರಿಟಿಷರಿಗೂ ಅವರನ್ನು ಅನುಸರಿಸಿದವರಿಗೂ ಇಲ್ಲಿ ನಡೆದದ್ದೇ ದಾರಿಯಾಗಿತ್ತು. ಆನೆ ನಡಿಗೆಯಲ್ಲಿ ಒಂದು ಗಾಂಭೀರ್ಯವಿದೆ, ನೋಡುವವರ ಕಣ್ಣಿಗೆ ಅಚ್ಚರಿ ಸಂತಸವಿದೆ. ಆದರೆ ಆನೆಯ ಕಾಲಡಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುವ ಅಸಂಖ್ಯಾತ ಜೀವಿಗಳ ಬದುಕೂ ಇದೆ. ಇದು ಪ್ರಕೃತಿ ಸಹಜ ಎನ್ನಬಹುದು. ಆನೆಯ ವಿಚಾರದಲ್ಲಿ ಅದು ಸಹಜ, ಅದರೆ ಅನೆಯಂತೆ ನಡೆದ ಮನುಷ್ಯನ ಅಡಿಯಲ್ಲಿ ನೂರಾರು ಕುಟುಂಬಗಳು ನಲುಗಿವೆ, ನಾಶವಾಗಿವೆ. ರೋಗ ರುಜಿನಗಳಿಗೆ ತುತ್ತಾಗಿವೆ. ಅಕ್ಷರಶಃ ಸಂಕೋಲೆಯೊಳಗಿನ ಜೀತದಾಳುಗಳಾಗಿ ಅನಾಮಿಕರಾಗಿ ಸತ್ತವರ ನಿಟ್ಟುಸಿರಿದೆ. (1983ರಲ್ಲಿ ನಮ್ಮ ತಂಡ ಅನಾಮಿಕರು ಎಂಬ ನಾಟಕವನ್ನೂ ಪ್ರದರ್ಶಿಸಿತ್ತು). ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ಸ್ಥಳೀಯ ಪಾಳೆಗಾರಿ ದಬ್ಬಾಳಿಕೆ ಮತ್ತು ಕ್ರೌರ್ಯ ನಿರಂತರವಾಗಿ ಕಾರ್ಮಿಕರ ಮೇಲೆ ನಡೆದಿತ್ತು. ಕೂಲಿ ಮತ್ತು ಸವಲತ್ತುಗಳಲ್ಲಿ ವಂಚನೆ ಸಾಮಾನ್ಯ ಸಂಗತಿಯಾಗಿತ್ತು. ಎಷ್ಟೋ ಕಡೆಗಳಲ್ಲಿ ಕೆಲಸಗಾರರನ್ನು ಕೂಡಿಹಾಕಿ ಹೊಡೆಯಲೆಂದೇ ಪ್ರತ್ಯೇಕ ಕೊಠಡಿಗಳಿದ್ದವು! ಅವರು ತಪ್ಪಿಸಿಕೊಂಡು ಹೋಗುವುದು ಕೂಡಾ ಸುಲಭವಿರಲಿಲ್ಲ. ತಪ್ಪಿಸಿಕೊಂಡು ಹೋದವರು ಕೂಡಾ ಇನ್ನೊಂದು ಸ್ಥಳದಲ್ಲಿ ಬೇರೆಯದೇ ಹೆಸರಿನಲ್ಲಿ ಬದುಕಬೇಕಾಗಿತ್ತು.

ಆ ನಂತರದ ದಿನಗಳಲ್ಲಿ ಹಲವು ಕಾರ್ಮಿಕ ಸಂಘಟನೆಗಳು ಪ್ರಾರಂಭವಾದವು. ಎಡ ಪಕ್ಷಗಳಲ್ಲದೆ ಕಾಂಗ್ರೆಸ್ ಪಕ್ಷದ ಕಾರ್ಮಿಕ ಸಂಘಟನೆಯಾದ ಐಟಕ್ ಕೂಡಾ ಪ್ರಬಲವಾಗಿಯೇ ಬೆಳೆಯಿತು. ಬೆಳೆಗಾರರ ಸಂಘಟನೆಗಳಾದ ಉಪಾಸಿ, ಕರ್ನಾಟಕ ಬೆಳೆಗಾರರ ಒಕ್ಕೂಟ ಮುಂತಾದವರ ಜೊತೆ ಕುಳಿತು ಮಾತುಕತೆ ಚೌಕಾಸಿ ಮಾಡುವ ಹಂತಕ್ಕೆ ಇವು ಬೆಳೆದವು. ಸರ್ಕಾರವೂ ಅನಿವಾರ್ಯವಾಗಿ ಹಲವು ಕಾರ್ಮಿಕ ಕಾನೂನು ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸಿತು. ಇದೆಲ್ಲದರಿಂದ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸಂಘಟಿತ ವಲಯದ ಕಾರ್ಮಿಕರಿಗೆ ಒಂದಷ್ಟು ಪ್ರಯೋಜನ ದೊರಕಿತು.

ಕಾರ್ಮಿಕರು, ಮಕ್ಕಳು ಎಪ್ಪತ್ತರ ದಶಕದಲ್ಲಿ

ಬಹುಶಃ ಕನ್ನಡ ಸಾಹಿತ್ಯದಲ್ಲಿ ಈ ವಿಚಾರದಲ್ಲಿ ಅಲ್ಪಸ್ವಲ್ಪ ವಿವರಣೆಗಳು ಸಿಗುವುದು ಕಾರಂತರ ಚೋಮನದುಡಿಯಲ್ಲಿ ಮತ್ತು ಭಾರತೀಸುತರ ಹುಲಿಬೋನು ಕಾದಂಬರಿಯಲ್ಲಿ. ತೇಜಸ್ವಿ ಇದೇ ಪ್ರದೇಶದಲ್ಲಿ ನೆಲೆಸಿದರೂ ಅವರ ಕಾದಂಬರಿಗಳ, ಸಾಹಿತ್ಯದ ಹರಹು ಮತ್ತು ಲೋಕ ಬೇರೆಯದು.

ಈ ಕಾರಣದಿಂದ ಅಂತಹ ಬದುಕನ್ನು ಸಹನೀಯಗಳಿಸಲು ಪ್ರಯತ್ನಿಸಿದ ಕೆಲವರ ಬದುಕಿನ ವಿವರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಈ ಕೆಲವೇ ಕೆಲವು ಜನರೂ ಕೂಡಾ ಒಟ್ಟೂ ಸಮಾಜದಲ್ಲಿ ಆ ಕಾಲದಲ್ಲಿ ಉಳಿದವರಿಂದ ಹೆಚ್ಚು ಸಹಕಾರವನ್ನು ಪಡೆದಿರಲಿಲ್ಲ. ಅಂದಿನ ಬಹುತೇಕ ಇತರ ಬೆಳೆಗಾರರರು. ಇಂಥವರನ್ನು ಪ್ರಚಾರ ಪ್ರಿಯರೆಂದೋ, ರಾಜಕೀಯ ಮಾಡುತ್ತ ಆಳುಗಳನ್ನು ಎತ್ತಿಕಟ್ಟುತ್ತಿದ್ದಾರೆಂದು ದೂರುತ್ತಿದ್ದರು. ಕಾರ್ಮಿಕ ವಲಯದಲ್ಲಿ ಇವರ ಕೆಲಸಗಳಿಂದ ಅನುಕೂಲ ಪಡೆದವರು ಕೂಡಾ ಏನೋ ಒಂದು ಬಗೆಯ ಅನುಮಾನ ಮತ್ತು ಹಿಂಜರಿಕೆಗಳಿಂದಲೇ ಇದ್ದರು.

ಶಿವರಾಮ ಕಾರಂತರು ಸಂದರ್ಶನವೊಂದರಲ್ಲಿ ಮಾತನಾಡುತ್ತ, ಚೋಮನ ದುಡಿಯ ಕಾಲದ ದಲಿತರ ಸ್ಥಿತಿ ಹಾಗೆಯೇ ಉಳಿದಿದೆ. ಅಲ್ಲೊಬ್ಬ ಇಲ್ಲೊಬ್ಬ ದಲಿತರು ಕೃಷಿಕರಾಗಿರಬಹುದು, ಆದರೆ ಒಟ್ಟಾರೆಯಾಗಿ ದಲಿತರು ಕೃಷಿಕರಾಗಿಲ್ಲ ಎಂದಿದ್ದರು. ಸರ್ಕಾರಗಳಾಗಲೀ ಇತರ ಸಂಘಟನೆಗಳಾಗಲೀ ದಲಿತರಿಗೆ ಭೂಮಿ ಕೊಡಿಸುವ ಪ್ರಯತ್ನವನ್ನು ಒಂದು ಚಳುವಳಿಯನ್ನಾಗಿ ಮಾಡಲೇ ಇಲ್ಲ. ಈ ಹಿನ್ನೆಲೆಯಲ್ಲಿ ಗಣಪಯ್ಯನಂತರವರ ಕೆಲವು ಬಿಡಿ ಬಿಡಿಯಾದ ಪ್ರಯತ್ನಗಳು ಕೂಡಾ ಬಹಳ ಮುಖ್ಯವೆನಿಸುತ್ತದೆ.

ಆದರೆ ಇಷ್ಟು ವರ್ಷಗಳ ಬಳಿಕ ಈ ಎಲ್ಲರ ಕೆಲಸಗಳು ಮಾಡಿದ ಒಟ್ಟು ಪರಿಣಾಮ ಅದ್ಭುತವೆನಿಸಿದೆ. ಮತ್ತು ಈ ಬರಹಕ್ಕೆ ಅಂದಿನ ಕಾಲವನ್ನು ಬಲ್ಲ ಜನಸಾಮಾನ್ಯರಿಂದ ಬರುತ್ತಿರುವ ಪ್ರತಿಕ್ರಿಯೆಗಳೇ ಸಾಕ್ಷಿಯಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸುಮಾರಾಗಿ ಎಪ್ಪತ್ತರ ದಶಕದವರೆಗೂ ಇಲ್ಲಿನ ಬದುಕು ಇದೇ ರೀತಿ ಮುಂದುವರೆಯಿತು. ನಂತರ ಒಂದಷ್ಟು ಬದಲಾವಣೆಗಳು ಬಂದವು. ಇಲ್ಲಿನ ಬದುಕು ವೇಗವನ್ನೂ ಹಲವು ತಿರುವುಗಳನ್ನು ಪಡೆಯಿತು. ಈ ಬದಲಾವಣೆಗಳು ದುಡಿಯುವವರಿಗೆ ಒಂದಷ್ಟು ಆರ್ಥಿಕ ಮತ್ತು ಸಾಮಾಜಿಕ ನೆಮ್ಮದಿಯನ್ನು ತಂದದ್ದೂ ನಿಜ. ಆದರೆ ಈ ಬದಲಾವಣೆಗಳು ಮತ್ತು ದೊರಕಿದ ವಿದ್ಯೆ ಬೇರೆಯೇ ಪರಿಣಾಮಗಳನ್ನು ಬೀರಿತು.

ಈಗ ಮಾಲಿಕ-ಕಾರ್ಮಿಕ ಎರಡೂ ವರ್ಗಗಳಲ್ಲಿ ಹಳೆಯ ತಲೆಮಾರಿನ ಜನರು ತೀರ ಕಡಿಮೆಯಾಗಿದ್ದಾರೆ. ಎರಡೂ ಕಡೆಯ ಯುವ ಪೀಳಿಗೆ ಹೆಚ್ಚಿನ ಪಾಲು ನಗರ ಸೇರಿದೆ. ಎಷ್ಟೋ ತೋಟಗಳ ಒಡೆಯರು ಮಾರಾಟಮಾಡಿ ನಗರ ಸೇರಿದ್ದಾರೆ ಇಲ್ಲವೇ ಇರುವ ವಿಸ್ತೀರ್ಣವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹೊರಗಿನಿಂದ ನಾನಾ ಉದ್ಯಮಿಗಳು ಮತ್ತು ರಾಜಕಾರಣಿಗಳು ಇಲ್ಲಿಗೆ ಬಂದು ತೋಟಗಳನ್ನು ಕೊಂಡಿದ್ದರೂ, ಅದಕ್ಕೆ ನಾನಾ ಉದ್ದೇಶಗಳಿವೆ. ಬರಿಯ ಕೃಷಿಯನ್ನೇ ನಂಬಿ ಬದುಕುವವರ ಸ್ಥಿತಿ ಮಾತ್ರ ಕಷ್ಟದ್ದಾಗಿದೆ.

ಗುಮ್ಮಿಗಳೆಂದು ಕರೆಯಲಾಗುತ್ತಿದ್ದ ಲೈನ್ ಮನೆಗಳು

ಇಲ್ಲಿಗೆ ಬರುತ್ತಿರುವ ಅಭಿವೃದ್ಧಿ ಯೋಜನೆಗಳೆಲ್ಲವೂ ಬೇರೆ ಪ್ರದೇಶಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದ್ದಾಗಿವೆ. ಜಲವಿದ್ಯುತ್, ರಸ್ತೆ, ನದೀ ತಿರುವು, ರೈಲ್ವೆ ಎಲ್ಲದರ ಎಲ್ಲ ರೀತಿಯ ಲಾಭ ಪಡೆಯುತ್ತಿರುವವರು ಹೊರಗಿನವರು. ಈಗ ಪ್ರವಾಸೋದ್ಯಮದ ಹೆಸರಿನಲ್ಲಿ ಸರ್ಕಾರ ಹೋಮ್ ಸ್ಟೇಗಳಿಗೆ ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತಿದೆ. ಇದರಿಂದ ಮಲೆನಾಡಿನಲ್ಲಿ ಉದ್ಯೋಗ ಮತ್ತು ಹಣದ ಹರಿವು ಹೆಚ್ಚಿರುವುದು ನಿಜ. ಆದರೆ ಅನೇಕ ಸಾಮಾಜಿಕ ಸಮಸ್ಯೆಗಳನ್ನೂ ತಂದೊಡ್ಡಿದೆ. ಜೊತೆಗೆ ಪಶ್ಚಿಮಘಟ್ಟಗಳು ಕಸದ ತೊಟ್ಟಿಯಾಗುತ್ತಿವೆ.

ಪ್ರಾಣಿಗಳಿಗೆ ತಾಣವೇ ಇಲ್ಲದೆ ಅಂಡಲೆಯುವ ಸ್ಥಿತಿ ನಿರ್ಮಾಣವಾಗಿರುವುದರಿಂದ ಅವುಗಳು ನಿರಂತರ ದಾಳಿ ಮಾಡುತ್ತಿದ್ದು ಕೃಷಿ ಅಸಾಧ್ಯವೆನ್ನಿಸುವಷ್ಟು ತೊಂದರೆಯಾಗುತ್ತಿದೆ.

ಅಭಿವೃದ್ಧಿ ಯೋಜನೆಗಳಿಗೆಂದು ಒಂದಷ್ಟು ನೆಲ ಉದ್ಯಮಿಗಳ ಪಾಲಾದರೆ ಕೃಷಿ ಅಸಾಧ್ಯವಾಗಿ ಮಾರಾಟವಾಗುತ್ತಿರುವ ಜಮೀನೂ ದೊಡ್ಡ ಪ್ರಮಾಣದಲ್ಲಿಯೇ ಇವೆ.

ಅಲ್ಲೆಲ್ಲ ತೋಟಗಳ ನಡುವೆ, ಗೇಟೆಡ್ ಕಮ್ಯೂನಿಟಿಗಳೆಂಬ ಶ್ರೀಮಂತರ ಗುಂಪು ವಸತಿಗಳು ನಿರ್ಮಾಣವಾಗುತ್ತಿವೆ.

ಮುಂದಿನ ದಿನಗಳು ಕಾಫಿ ವಲಯ ಇನ್ನಷ್ಟು ಬದಲಾವಣೆಯಾಗಲಿದೆ. ಮತ್ತು ಇಲ್ಲಿನ ಸಾಂಸ್ಕೃತಿಕ ಸಾಮಾಜಿಕ ಸ್ವರೂಪವನ್ನು ನಿರ್ಧರಿಸುವ ಶಕ್ತಿಗಳೂ ಬದಲಾಗಲಿವೆ.

ಸದ್ಯಕ್ಕಂತೂ ಕಾಫಿ ವಲಯ ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳಿಂದ ತುಂಬಿದೆ. ಅವುಗಳೇ ಈಗ ಈ ಪ್ರದೇಶಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ತರುತ್ತಿದೆಯಲ್ಲದೆ, ಸಾವಿರಾರು ಜನರಿಗೆ ಉದ್ಯೋಗವನ್ನೂ ಕೊಟ್ಟಿದೆ ಎನ್ನುವುದನ್ನೂ ನಾವು ಮರೆಯಬಾರದು.

ಕಾರ್ಮಿಕರ ಸಾಲು ಮನೆಗಳು

ಒಂದು ಒಳ್ಳೆಯ ಸೃಜನಶೀಲತೆಯ ಮತ್ತು ಚೇತೋಹಾರಿಯಾದ ಉದ್ಯೋಗವಾಗಬಹುದಾದ ಪರಿಸರ ಪ್ರವಾಸೋದ್ಯಮವನ್ನು ಕುರೂಪಿ ಮತ್ತು ಪರಿಸರ ವಿರೋಧಿಯೂ ಆಗಿ ಮಾರ್ಪಡಿಸಿಕೊಂಡವರೂ ನಾವೇ…. ಈ ವಿಚಾರದಲ್ಲಿ ಇತರ ಹಲವಾರು ಸಣ್ಣ ಸಣ್ಣ ದೇಶಗಳಿಂದ ನಾವು ಕಲಿಯುವಂಥದ್ದು ತುಂಬಾ ಇದೆ.

ಆಹಾರದ ಕೊರತೆಯಾಯಿತೆಂದು ನೂರಾರು ತರದ ರಾಸಾಯನಿಕ, ವಿಷ ಸುರಿದು ಆಹಾರ ಬೆಳೆದು ತಿಂದು  ನೂರಾರು ರೋಗಗಳನ್ನು ಆವಾಹಿಸಿಕೊಂಡು ಪ್ರತಿವರ್ಷ ಲಕ್ಷಾಂತರ ರೂಪಾಯಿ ಔಷಧಿ ತಿನ್ನುವ ಸ್ಥಿತಿಯಂತೆಯೇ ಮಲೆನಾಡಿನ ಆರ್ಥಿಕತೆಯೂ ಆಗಿದೆ.

ಇದರಲ್ಲಿ ನಮ್ಮ ಪಾಲಿಲ್ಲವೇ ಖಂಡಿತ ಇದೆ. ಆದರೆ ನಮ್ಮದು ಒಂದು ಪಾಲಾದರೆ ಉಳಿದ ಮೂರು ಪಾಲು ನಿರಂತರವಾಗಿ ನಮ್ಮನ್ನು ಆಳಿದವರದ್ದೇ ಆಗಿದೆ.

ಗಣಪಯ್ಯನವರು ನಡಹಳ್ಳಿಯಲ್ಲಿ ಪ್ರಥಮವಾಗಿ ಮಾಡಿದ,ದಲಿತರ ಸಹಕಾರಿ ಕಾಫಿ ಪ್ಲಾಂಟೇಷನ್ ನಲ್ಲಿ.

ನಗರಗಳ ಬಕಾಸುರ ಹಸಿವೆಯನ್ನು ಹಿಂಗಿಸಲು ನಾವು ತೆರುತ್ತಿರುವ ದಂಡ ಬಹಳ ದೊಡ್ಡದು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...