Homeಅಂಕಣಗಳುಕಾಫಿ ಬೆಳೆ ಮತ್ತು ಕಾರ್ಮಿಕರ ಜೀವನ; ಪ್ರಸಾದ್ ರಕ್ಷಿದಿ

ಕಾಫಿ ಬೆಳೆ ಮತ್ತು ಕಾರ್ಮಿಕರ ಜೀವನ; ಪ್ರಸಾದ್ ರಕ್ಷಿದಿ

ಈಗ ಮಾಲಿಕ-ಕಾರ್ಮಿಕ ಎರಡೂ ವರ್ಗಗಳಲ್ಲಿ ಹಳೆಯ ತಲೆಮಾರಿನ ಜನರು ತೀರ ಕಡಿಮೆಯಾಗಿದ್ದಾರೆ. ಎರಡೂ ಕಡೆಯ ಯುವ ಪೀಳಿಗೆ ಹೆಚ್ಚಿನ ಪಾಲು ನಗರ ಸೇರಿದೆ.

- Advertisement -
- Advertisement -

ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -19

ಕಾಫಿ ವಲಯದ ಈ ಸಂಕಥನ ಪ್ರಾರಂಭವಾಗುವುದು ಸುಮಾರು 1850ರ ಕಾಲದಿಂದ. ಅಂದರೆ ಬ್ರಿಟಿಷರು ಪ್ಲಾಂಟೇಷನ್ ಕೃಷಿಗೆ ತೊಡಗಿದ ಸಮಯದಿಂದ. ಒಂದು ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿನ ಜನಜೀವನ ಆನೆ ನಡಿಗೆಯಲ್ಲಿತ್ತು. ಆನೆ ಹೋದದ್ದೇ ದಾರಿಯೆಂಬ ಮಾತಿದೆ. ಹೌದು ಬ್ರಿಟಿಷರಿಗೂ ಅವರನ್ನು ಅನುಸರಿಸಿದವರಿಗೂ ಇಲ್ಲಿ ನಡೆದದ್ದೇ ದಾರಿಯಾಗಿತ್ತು. ಆನೆ ನಡಿಗೆಯಲ್ಲಿ ಒಂದು ಗಾಂಭೀರ್ಯವಿದೆ, ನೋಡುವವರ ಕಣ್ಣಿಗೆ ಅಚ್ಚರಿ ಸಂತಸವಿದೆ. ಆದರೆ ಆನೆಯ ಕಾಲಡಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುವ ಅಸಂಖ್ಯಾತ ಜೀವಿಗಳ ಬದುಕೂ ಇದೆ. ಇದು ಪ್ರಕೃತಿ ಸಹಜ ಎನ್ನಬಹುದು. ಆನೆಯ ವಿಚಾರದಲ್ಲಿ ಅದು ಸಹಜ, ಅದರೆ ಅನೆಯಂತೆ ನಡೆದ ಮನುಷ್ಯನ ಅಡಿಯಲ್ಲಿ ನೂರಾರು ಕುಟುಂಬಗಳು ನಲುಗಿವೆ, ನಾಶವಾಗಿವೆ. ರೋಗ ರುಜಿನಗಳಿಗೆ ತುತ್ತಾಗಿವೆ. ಅಕ್ಷರಶಃ ಸಂಕೋಲೆಯೊಳಗಿನ ಜೀತದಾಳುಗಳಾಗಿ ಅನಾಮಿಕರಾಗಿ ಸತ್ತವರ ನಿಟ್ಟುಸಿರಿದೆ. (1983ರಲ್ಲಿ ನಮ್ಮ ತಂಡ ಅನಾಮಿಕರು ಎಂಬ ನಾಟಕವನ್ನೂ ಪ್ರದರ್ಶಿಸಿತ್ತು). ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ಸ್ಥಳೀಯ ಪಾಳೆಗಾರಿ ದಬ್ಬಾಳಿಕೆ ಮತ್ತು ಕ್ರೌರ್ಯ ನಿರಂತರವಾಗಿ ಕಾರ್ಮಿಕರ ಮೇಲೆ ನಡೆದಿತ್ತು. ಕೂಲಿ ಮತ್ತು ಸವಲತ್ತುಗಳಲ್ಲಿ ವಂಚನೆ ಸಾಮಾನ್ಯ ಸಂಗತಿಯಾಗಿತ್ತು. ಎಷ್ಟೋ ಕಡೆಗಳಲ್ಲಿ ಕೆಲಸಗಾರರನ್ನು ಕೂಡಿಹಾಕಿ ಹೊಡೆಯಲೆಂದೇ ಪ್ರತ್ಯೇಕ ಕೊಠಡಿಗಳಿದ್ದವು! ಅವರು ತಪ್ಪಿಸಿಕೊಂಡು ಹೋಗುವುದು ಕೂಡಾ ಸುಲಭವಿರಲಿಲ್ಲ. ತಪ್ಪಿಸಿಕೊಂಡು ಹೋದವರು ಕೂಡಾ ಇನ್ನೊಂದು ಸ್ಥಳದಲ್ಲಿ ಬೇರೆಯದೇ ಹೆಸರಿನಲ್ಲಿ ಬದುಕಬೇಕಾಗಿತ್ತು.

ಆ ನಂತರದ ದಿನಗಳಲ್ಲಿ ಹಲವು ಕಾರ್ಮಿಕ ಸಂಘಟನೆಗಳು ಪ್ರಾರಂಭವಾದವು. ಎಡ ಪಕ್ಷಗಳಲ್ಲದೆ ಕಾಂಗ್ರೆಸ್ ಪಕ್ಷದ ಕಾರ್ಮಿಕ ಸಂಘಟನೆಯಾದ ಐಟಕ್ ಕೂಡಾ ಪ್ರಬಲವಾಗಿಯೇ ಬೆಳೆಯಿತು. ಬೆಳೆಗಾರರ ಸಂಘಟನೆಗಳಾದ ಉಪಾಸಿ, ಕರ್ನಾಟಕ ಬೆಳೆಗಾರರ ಒಕ್ಕೂಟ ಮುಂತಾದವರ ಜೊತೆ ಕುಳಿತು ಮಾತುಕತೆ ಚೌಕಾಸಿ ಮಾಡುವ ಹಂತಕ್ಕೆ ಇವು ಬೆಳೆದವು. ಸರ್ಕಾರವೂ ಅನಿವಾರ್ಯವಾಗಿ ಹಲವು ಕಾರ್ಮಿಕ ಕಾನೂನು ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸಿತು. ಇದೆಲ್ಲದರಿಂದ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಸಂಘಟಿತ ವಲಯದ ಕಾರ್ಮಿಕರಿಗೆ ಒಂದಷ್ಟು ಪ್ರಯೋಜನ ದೊರಕಿತು.

ಕಾರ್ಮಿಕರು, ಮಕ್ಕಳು ಎಪ್ಪತ್ತರ ದಶಕದಲ್ಲಿ

ಬಹುಶಃ ಕನ್ನಡ ಸಾಹಿತ್ಯದಲ್ಲಿ ಈ ವಿಚಾರದಲ್ಲಿ ಅಲ್ಪಸ್ವಲ್ಪ ವಿವರಣೆಗಳು ಸಿಗುವುದು ಕಾರಂತರ ಚೋಮನದುಡಿಯಲ್ಲಿ ಮತ್ತು ಭಾರತೀಸುತರ ಹುಲಿಬೋನು ಕಾದಂಬರಿಯಲ್ಲಿ. ತೇಜಸ್ವಿ ಇದೇ ಪ್ರದೇಶದಲ್ಲಿ ನೆಲೆಸಿದರೂ ಅವರ ಕಾದಂಬರಿಗಳ, ಸಾಹಿತ್ಯದ ಹರಹು ಮತ್ತು ಲೋಕ ಬೇರೆಯದು.

ಈ ಕಾರಣದಿಂದ ಅಂತಹ ಬದುಕನ್ನು ಸಹನೀಯಗಳಿಸಲು ಪ್ರಯತ್ನಿಸಿದ ಕೆಲವರ ಬದುಕಿನ ವಿವರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಈ ಕೆಲವೇ ಕೆಲವು ಜನರೂ ಕೂಡಾ ಒಟ್ಟೂ ಸಮಾಜದಲ್ಲಿ ಆ ಕಾಲದಲ್ಲಿ ಉಳಿದವರಿಂದ ಹೆಚ್ಚು ಸಹಕಾರವನ್ನು ಪಡೆದಿರಲಿಲ್ಲ. ಅಂದಿನ ಬಹುತೇಕ ಇತರ ಬೆಳೆಗಾರರರು. ಇಂಥವರನ್ನು ಪ್ರಚಾರ ಪ್ರಿಯರೆಂದೋ, ರಾಜಕೀಯ ಮಾಡುತ್ತ ಆಳುಗಳನ್ನು ಎತ್ತಿಕಟ್ಟುತ್ತಿದ್ದಾರೆಂದು ದೂರುತ್ತಿದ್ದರು. ಕಾರ್ಮಿಕ ವಲಯದಲ್ಲಿ ಇವರ ಕೆಲಸಗಳಿಂದ ಅನುಕೂಲ ಪಡೆದವರು ಕೂಡಾ ಏನೋ ಒಂದು ಬಗೆಯ ಅನುಮಾನ ಮತ್ತು ಹಿಂಜರಿಕೆಗಳಿಂದಲೇ ಇದ್ದರು.

ಶಿವರಾಮ ಕಾರಂತರು ಸಂದರ್ಶನವೊಂದರಲ್ಲಿ ಮಾತನಾಡುತ್ತ, ಚೋಮನ ದುಡಿಯ ಕಾಲದ ದಲಿತರ ಸ್ಥಿತಿ ಹಾಗೆಯೇ ಉಳಿದಿದೆ. ಅಲ್ಲೊಬ್ಬ ಇಲ್ಲೊಬ್ಬ ದಲಿತರು ಕೃಷಿಕರಾಗಿರಬಹುದು, ಆದರೆ ಒಟ್ಟಾರೆಯಾಗಿ ದಲಿತರು ಕೃಷಿಕರಾಗಿಲ್ಲ ಎಂದಿದ್ದರು. ಸರ್ಕಾರಗಳಾಗಲೀ ಇತರ ಸಂಘಟನೆಗಳಾಗಲೀ ದಲಿತರಿಗೆ ಭೂಮಿ ಕೊಡಿಸುವ ಪ್ರಯತ್ನವನ್ನು ಒಂದು ಚಳುವಳಿಯನ್ನಾಗಿ ಮಾಡಲೇ ಇಲ್ಲ. ಈ ಹಿನ್ನೆಲೆಯಲ್ಲಿ ಗಣಪಯ್ಯನಂತರವರ ಕೆಲವು ಬಿಡಿ ಬಿಡಿಯಾದ ಪ್ರಯತ್ನಗಳು ಕೂಡಾ ಬಹಳ ಮುಖ್ಯವೆನಿಸುತ್ತದೆ.

ಆದರೆ ಇಷ್ಟು ವರ್ಷಗಳ ಬಳಿಕ ಈ ಎಲ್ಲರ ಕೆಲಸಗಳು ಮಾಡಿದ ಒಟ್ಟು ಪರಿಣಾಮ ಅದ್ಭುತವೆನಿಸಿದೆ. ಮತ್ತು ಈ ಬರಹಕ್ಕೆ ಅಂದಿನ ಕಾಲವನ್ನು ಬಲ್ಲ ಜನಸಾಮಾನ್ಯರಿಂದ ಬರುತ್ತಿರುವ ಪ್ರತಿಕ್ರಿಯೆಗಳೇ ಸಾಕ್ಷಿಯಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದರೂ ಸುಮಾರಾಗಿ ಎಪ್ಪತ್ತರ ದಶಕದವರೆಗೂ ಇಲ್ಲಿನ ಬದುಕು ಇದೇ ರೀತಿ ಮುಂದುವರೆಯಿತು. ನಂತರ ಒಂದಷ್ಟು ಬದಲಾವಣೆಗಳು ಬಂದವು. ಇಲ್ಲಿನ ಬದುಕು ವೇಗವನ್ನೂ ಹಲವು ತಿರುವುಗಳನ್ನು ಪಡೆಯಿತು. ಈ ಬದಲಾವಣೆಗಳು ದುಡಿಯುವವರಿಗೆ ಒಂದಷ್ಟು ಆರ್ಥಿಕ ಮತ್ತು ಸಾಮಾಜಿಕ ನೆಮ್ಮದಿಯನ್ನು ತಂದದ್ದೂ ನಿಜ. ಆದರೆ ಈ ಬದಲಾವಣೆಗಳು ಮತ್ತು ದೊರಕಿದ ವಿದ್ಯೆ ಬೇರೆಯೇ ಪರಿಣಾಮಗಳನ್ನು ಬೀರಿತು.

ಈಗ ಮಾಲಿಕ-ಕಾರ್ಮಿಕ ಎರಡೂ ವರ್ಗಗಳಲ್ಲಿ ಹಳೆಯ ತಲೆಮಾರಿನ ಜನರು ತೀರ ಕಡಿಮೆಯಾಗಿದ್ದಾರೆ. ಎರಡೂ ಕಡೆಯ ಯುವ ಪೀಳಿಗೆ ಹೆಚ್ಚಿನ ಪಾಲು ನಗರ ಸೇರಿದೆ. ಎಷ್ಟೋ ತೋಟಗಳ ಒಡೆಯರು ಮಾರಾಟಮಾಡಿ ನಗರ ಸೇರಿದ್ದಾರೆ ಇಲ್ಲವೇ ಇರುವ ವಿಸ್ತೀರ್ಣವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹೊರಗಿನಿಂದ ನಾನಾ ಉದ್ಯಮಿಗಳು ಮತ್ತು ರಾಜಕಾರಣಿಗಳು ಇಲ್ಲಿಗೆ ಬಂದು ತೋಟಗಳನ್ನು ಕೊಂಡಿದ್ದರೂ, ಅದಕ್ಕೆ ನಾನಾ ಉದ್ದೇಶಗಳಿವೆ. ಬರಿಯ ಕೃಷಿಯನ್ನೇ ನಂಬಿ ಬದುಕುವವರ ಸ್ಥಿತಿ ಮಾತ್ರ ಕಷ್ಟದ್ದಾಗಿದೆ.

ಗುಮ್ಮಿಗಳೆಂದು ಕರೆಯಲಾಗುತ್ತಿದ್ದ ಲೈನ್ ಮನೆಗಳು

ಇಲ್ಲಿಗೆ ಬರುತ್ತಿರುವ ಅಭಿವೃದ್ಧಿ ಯೋಜನೆಗಳೆಲ್ಲವೂ ಬೇರೆ ಪ್ರದೇಶಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದ್ದಾಗಿವೆ. ಜಲವಿದ್ಯುತ್, ರಸ್ತೆ, ನದೀ ತಿರುವು, ರೈಲ್ವೆ ಎಲ್ಲದರ ಎಲ್ಲ ರೀತಿಯ ಲಾಭ ಪಡೆಯುತ್ತಿರುವವರು ಹೊರಗಿನವರು. ಈಗ ಪ್ರವಾಸೋದ್ಯಮದ ಹೆಸರಿನಲ್ಲಿ ಸರ್ಕಾರ ಹೋಮ್ ಸ್ಟೇಗಳಿಗೆ ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತಿದೆ. ಇದರಿಂದ ಮಲೆನಾಡಿನಲ್ಲಿ ಉದ್ಯೋಗ ಮತ್ತು ಹಣದ ಹರಿವು ಹೆಚ್ಚಿರುವುದು ನಿಜ. ಆದರೆ ಅನೇಕ ಸಾಮಾಜಿಕ ಸಮಸ್ಯೆಗಳನ್ನೂ ತಂದೊಡ್ಡಿದೆ. ಜೊತೆಗೆ ಪಶ್ಚಿಮಘಟ್ಟಗಳು ಕಸದ ತೊಟ್ಟಿಯಾಗುತ್ತಿವೆ.

ಪ್ರಾಣಿಗಳಿಗೆ ತಾಣವೇ ಇಲ್ಲದೆ ಅಂಡಲೆಯುವ ಸ್ಥಿತಿ ನಿರ್ಮಾಣವಾಗಿರುವುದರಿಂದ ಅವುಗಳು ನಿರಂತರ ದಾಳಿ ಮಾಡುತ್ತಿದ್ದು ಕೃಷಿ ಅಸಾಧ್ಯವೆನ್ನಿಸುವಷ್ಟು ತೊಂದರೆಯಾಗುತ್ತಿದೆ.

ಅಭಿವೃದ್ಧಿ ಯೋಜನೆಗಳಿಗೆಂದು ಒಂದಷ್ಟು ನೆಲ ಉದ್ಯಮಿಗಳ ಪಾಲಾದರೆ ಕೃಷಿ ಅಸಾಧ್ಯವಾಗಿ ಮಾರಾಟವಾಗುತ್ತಿರುವ ಜಮೀನೂ ದೊಡ್ಡ ಪ್ರಮಾಣದಲ್ಲಿಯೇ ಇವೆ.

ಅಲ್ಲೆಲ್ಲ ತೋಟಗಳ ನಡುವೆ, ಗೇಟೆಡ್ ಕಮ್ಯೂನಿಟಿಗಳೆಂಬ ಶ್ರೀಮಂತರ ಗುಂಪು ವಸತಿಗಳು ನಿರ್ಮಾಣವಾಗುತ್ತಿವೆ.

ಮುಂದಿನ ದಿನಗಳು ಕಾಫಿ ವಲಯ ಇನ್ನಷ್ಟು ಬದಲಾವಣೆಯಾಗಲಿದೆ. ಮತ್ತು ಇಲ್ಲಿನ ಸಾಂಸ್ಕೃತಿಕ ಸಾಮಾಜಿಕ ಸ್ವರೂಪವನ್ನು ನಿರ್ಧರಿಸುವ ಶಕ್ತಿಗಳೂ ಬದಲಾಗಲಿವೆ.

ಸದ್ಯಕ್ಕಂತೂ ಕಾಫಿ ವಲಯ ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ ಮತ್ತು ಹೋಮ್ ಸ್ಟೇ ಗಳಿಂದ ತುಂಬಿದೆ. ಅವುಗಳೇ ಈಗ ಈ ಪ್ರದೇಶಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ತರುತ್ತಿದೆಯಲ್ಲದೆ, ಸಾವಿರಾರು ಜನರಿಗೆ ಉದ್ಯೋಗವನ್ನೂ ಕೊಟ್ಟಿದೆ ಎನ್ನುವುದನ್ನೂ ನಾವು ಮರೆಯಬಾರದು.

ಕಾರ್ಮಿಕರ ಸಾಲು ಮನೆಗಳು

ಒಂದು ಒಳ್ಳೆಯ ಸೃಜನಶೀಲತೆಯ ಮತ್ತು ಚೇತೋಹಾರಿಯಾದ ಉದ್ಯೋಗವಾಗಬಹುದಾದ ಪರಿಸರ ಪ್ರವಾಸೋದ್ಯಮವನ್ನು ಕುರೂಪಿ ಮತ್ತು ಪರಿಸರ ವಿರೋಧಿಯೂ ಆಗಿ ಮಾರ್ಪಡಿಸಿಕೊಂಡವರೂ ನಾವೇ…. ಈ ವಿಚಾರದಲ್ಲಿ ಇತರ ಹಲವಾರು ಸಣ್ಣ ಸಣ್ಣ ದೇಶಗಳಿಂದ ನಾವು ಕಲಿಯುವಂಥದ್ದು ತುಂಬಾ ಇದೆ.

ಆಹಾರದ ಕೊರತೆಯಾಯಿತೆಂದು ನೂರಾರು ತರದ ರಾಸಾಯನಿಕ, ವಿಷ ಸುರಿದು ಆಹಾರ ಬೆಳೆದು ತಿಂದು  ನೂರಾರು ರೋಗಗಳನ್ನು ಆವಾಹಿಸಿಕೊಂಡು ಪ್ರತಿವರ್ಷ ಲಕ್ಷಾಂತರ ರೂಪಾಯಿ ಔಷಧಿ ತಿನ್ನುವ ಸ್ಥಿತಿಯಂತೆಯೇ ಮಲೆನಾಡಿನ ಆರ್ಥಿಕತೆಯೂ ಆಗಿದೆ.

ಇದರಲ್ಲಿ ನಮ್ಮ ಪಾಲಿಲ್ಲವೇ ಖಂಡಿತ ಇದೆ. ಆದರೆ ನಮ್ಮದು ಒಂದು ಪಾಲಾದರೆ ಉಳಿದ ಮೂರು ಪಾಲು ನಿರಂತರವಾಗಿ ನಮ್ಮನ್ನು ಆಳಿದವರದ್ದೇ ಆಗಿದೆ.

ಗಣಪಯ್ಯನವರು ನಡಹಳ್ಳಿಯಲ್ಲಿ ಪ್ರಥಮವಾಗಿ ಮಾಡಿದ,ದಲಿತರ ಸಹಕಾರಿ ಕಾಫಿ ಪ್ಲಾಂಟೇಷನ್ ನಲ್ಲಿ.

ನಗರಗಳ ಬಕಾಸುರ ಹಸಿವೆಯನ್ನು ಹಿಂಗಿಸಲು ನಾವು ತೆರುತ್ತಿರುವ ದಂಡ ಬಹಳ ದೊಡ್ಡದು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...