Homeಸಿನಿಮಾಕ್ರೀಡೆಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ: ಹೇಗೆ?

ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ: ಹೇಗೆ?

ಇದೆಲ್ಲವೂ ಘಟಿಸಲು ಭಾರತ ತಂಡವು ತನ್ನ ಉಳಿದ ಮೂರು ಪಂದ್ಯಗಳನ್ನು ಸಾಕಷ್ಟು ಭಾರೀ ಅಂತರದಲ್ಲಿ ಗೆಲ್ಲುವುದು ಪೂರ್ವ ಷರತ್ತಾಗಿದೆ.

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡವು ಸತತ ಎರಡು ಹೀನಾಯ ಸೋಲುಗಳಿಂದ ಕಂಗೆಟ್ಟಿದೆ. ಪಾಕ್ ವಿರುದ್ಧ 10 ವಿಕೆಟ್‌ಗಳ ಸೋಲುಂಡಿದ್ದ ಭಾರತ, ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಪರಾಭವಗೊಂಡಿತು. ಅಲ್ಲಿಗೆ ಸೆಮಿಫೈನಲ್ ಅವಕಾಶ ದೂರವಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಆದರೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ. ಹೇಗೆ ಎಂದು ನೋಡೋಣ.

ಸದ್ಯದ ಪಾಯಿಂಟ್ಸ್ ಪಟ್ಟಿ

ಈಗ ಗ್ರೂಪ್ 2 ರ ಪಾಯಿಂಟ್ ಪಟ್ಟಿಯಲ್ಲಿ ಸತತ ಮೂರು ಗೆಲವುಗಳೊಂದಿಗೆ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ. ಅದು ತನ್ನ ಉಳಿದ ಎರಡು ಪಂದ್ಯಗಳಲ್ಲಿ ನಮೀಬಿಯ ಮತ್ತು ಸ್ಕಾಟ್ಲ್ಯಾಂಡ್ ವಿರುದ್ದ ಸೆಣಸಲಿದೆ. ಒಂದು ಗೆಲುವು ಪಡೆದರೂ ಅದರ ಸೆಮಿಫೈನಲ್ ಸ್ಥಾನ ಭದ್ರವಾಗಲಿದೆ. ಗ್ರೂಪ್ 2 ರಲ್ಲಿ ಸೆಮಿಫೈನಲ್ ತಲುಪಲು ಇನ್ನೊಂದು ತಂಡಕ್ಕೆ ಮಾತ್ರ ಅವಕಾಶವಿದ್ದು ಆಫ್ಘಾನಿಸ್ತಾನ, ನ್ಯೂಜಿಲೆಂಡ್, ನಮೀಬಿಯಾ, ಭಾರತ ಮತ್ತು ಸ್ಕಾಟ್ಲ್ಯಾಂಡ್ ತಂಡಗಳು ಆ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಇವುಗಳಲ್ಲಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ಭಾರತ ತಂಡಕ್ಕೆ ಹೆಚ್ಚಿನ ಸಾಧ್ಯತೆಗಳಿವೆ.

ಭಾರತ ಹೇಗೆ ಸೆಮಿಫೈನಲ್ ತಲುಪಬಹುದು?

ಭಾರತದ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಆಫ್ಘಾನಿಸ್ತಾನ ಎದುರು ಅಬುದಾಬಿಯಲ್ಲಿ
ನವೆಂಬರ್ 5: ಸ್ಕಾಟ್ಲ್ಯಾಂಡ್ ಎದುರು ದುಬೈನಲ್ಲಿ
ನವೆಂಬ್ 8: ನಮೀಬಿಯಾ ಎದುರು ದುಬೈನಲ್ಲಿ

ನ್ಯೂಜಿಲೆಂಡ್‌ನ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಸ್ಕಾಟ್ಲ್ಯಾಂಡ್ ಎದುರು ದುಬೈನಲ್ಲಿ
ನವೆಂಬರ್ 5: ನಮೀಬಿಯಾ ಎದುರು ಶಾರ್ಜಾದಲ್ಲಿ
ನವೆಂಬರ್ 7: ಆಫ್ಘಾನಿಸ್ತಾನ ಎದುರು ಅಬುದಾಬಿಯಲ್ಲಿ

ಆಫ್ಘಾನಿಸ್ತಾನದ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಭಾರತದ ಎದುರು ಅಬುದಾಬಿಯಲ್ಲಿ
ನವೆಂಬರ್ 7: ನ್ಯೂಜಿಲೆಂಡ್‌ ಎದುರು ಅಬುದಾಬಿಯಲ್ಲಿ

ಭಾರತವು ತನ್ನ ಮುಂದಿನ ಮೂರು ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದಲ್ಲಿ 6 ಪಾಯಿಂಟ್‌ಗಳ ಜೊತೆಗೆ ಉತ್ತಮ ನೆಟ್ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ತಲುಪಬಹುದು. ಸದ್ಯಕ್ಕೆ -1.609 ರ ಕಡಿಮೆ ರನ್‌ರೇಟ್ ಭಾರತಕ್ಕಿದೆ. ಆದರೆ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಉಳಿದ ತಂಡಗಳ ಎದುರು ಸೋಲುವುದು ಕೂಡ ಭಾರತಕ್ಕೆ ಅತೀ ಅಗತ್ಯವಾಗಿದೆ.

ಭಾರತ 8 ಪಾಯಿಂಟ್‌ಗಳನ್ನು ಗಳಿಸುವುದು ಸಾಧ್ಯವಿಲ್ಲ. ಆದರೆ ಆ ಸಾಧ್ಯತೆ ಆಫ್ಘಾನಿಸ್ತಾನ ತಂಡಕ್ಕಿದೆ. ಏಕೆಂದರೆ ಅದು ಈಗಾಗಲೇ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು 4 ಪಾಯಿಂಟ್ ಗಳಿಸಿಕೊಂಡಿದೆ. ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಅದು 8 ಪಾಯಿಂಟ್ ಪಡೆದು ಸೆಮಿಫೈನಲ್ ತಲುಪಬಹುದು. ಅಥವಾ ಒಂದನ್ನು ಭಾರೀ ಅಂತರದಿಂದ ಗೆದ್ದು ಹೆಚ್ಚು ರನ್ ರೇಟ್ ಇದ್ದಲ್ಲಿ ಅದರ ಹಾದಿ ಸುಗಮ.

ನ್ಯೂಜಿಲೆಂಡ್‌ ತಂಡಕ್ಕೂ ಸಹ ಆ ಅವಕಾಶವಿದೆ. ಅದು ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಪಾಯಿಂಟ್ ಗಳಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಮೂರನ್ನು ಗೆದ್ದು 8 ಪಾಯಿಂಟ್ ಪಡೆದು ಸೆಮಿಫೈನಲ್ ತಲುಪಬಹುದು. ಅಥವಾ ಎರಡನ್ನು ಭಾರೀ ಅಂತರದಿಂದ ಗೆದ್ದು ಹೆಚ್ಚು ರನ್ ರೇಟ್ ಇದ್ದಲ್ಲಿ ಅದರ ಹಾದಿ ಸುಗಮ.

ಈ ಹಿನ್ನೆಲೆಯಲ್ಲಿ ನವೆಂಬರ್ 7ರಂದು ಅಬುದಾಬಿಯಲ್ಲಿ ನಡೆಯಲಿದರು ಆಫ್ಘಾನಿಸ್ತಾನ ಎದುರಿನ ನ್ಯೂಜಿಲೆಂಡ್ ಪಂದ್ಯಕ್ಕೆ ಭಾರೀ ಮಹತ್ವ ಬಂದಿದೆ.

ಸನ್ನಿವೇಶ 1

ಭಾರತವು ಭಾರೀ ಅಂತರದಿಂದ ಆಫ್ಘಾನಿಸ್ತಾನದ ಎದುರು ಗೆಲ್ಲುತ್ತದೆ. ಅದೇ ರೀತಿ ಆಫ್ಘಾನಿಸ್ತಾನವು ನ್ಯೂಜಿಲೆಂಡ್ ಎದರು ಭಾರೀ ಅಂತರದಿಂದ ಗೆದ್ದಲ್ಲಿ ಎರಡೂ ತಂಡಗಳು 6 ಪಾಯಿಂಟ್‌ಗೆ ಬಂದು ನಿಂತರೆ ನೆಟ್ ರನ್ ರೇಟ್ ಆಧಾರ ಮುಖ್ಯವಾಗುತ್ತದೆ.

ಸನ್ನಿವೇಶ 2

ಭಾರತವು ಭಾರೀ ಅಂತರದಿಂದ ಆಫ್ಘಾನಿಸ್ತಾನದ ಎದುರು ಗೆಲ್ಲುತ್ತದೆ. ನ್ಯೂಜಿಲೆಂಡ್ ಸಹ ಆಫ್ಘಾನಿಸ್ತಾನ ಎದುರು ಗೆದ್ದಲ್ಲಿ ಆಫ್ಘಾನಿಸ್ತಾನ ಕೇವಲ 04 ಪಾಯಿಂಟ್‌ಗಳಿಗೆ ಸೀಮಿತವಾಗುತ್ತದೆ. ಅದರ ಸೆಮಿಫೈನಲ್ ಹಾದಿ ಮುಚ್ಚಿಹೋಗುತ್ತದೆ. ಎರಡೂ ತಂಡಗಳು 6 ಪಾಯಿಂಟ್‌ಗೆ ಬಂದು ನಿಂತರೆ ನೆಟ್ ರನ್ ರೇಟ್ ಆಧಾರ ಮುಖ್ಯವಾಗುತ್ತದೆ. ಒಂದು ವೇಳೆ ನ್ಯೂಜಿಲೆಂಡ್ ತಂಡವು ನಮೀಬಿಯಾ ಅಥವಾ ಸ್ಕಾಟ್ಲ್ಯಾಂಡ್ ಎದುರಿನ ಒಂದು ಪಂದ್ಯ ಸೋತರೂ ಭಾರತದ ನೆಟ್‌ ರನ್ ರೇಟ್ ಉತ್ತಮವಾಗಿದ್ದಲ್ಲಿ ಭಾರತಕ್ಕೆ ಅವಕಾಶ ತೆರೆದುಕೊಳ್ಳುತ್ತದೆ.

ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ಭಾರತಕ್ಕೆ ಸಹಾಯ ಮಾಡಬಲ್ಲವೇ?

ಭಾರತಕ್ಕೆ ಸೆಮಿಫೈನಲ್ ತಲುಪಲು ಬೇರೆ ದಾರಿಗಳು ಸಹ ಇವೆ. ಭಾರತವು ಆಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ಎದುರು ಗೆಲ್ಲಲೇಬೇಕು. ನಂತರ ಈ ಎರಡು ತಂಡಗಳು ಪಾಕಿಸ್ತಾನದ ಎದುರು ಸೆಣೆಸುತ್ತಿವೆ. ಅಲ್ಲಿ ಅವರೆಡೂ ಭಾರೀ ಅಂತರದಿಂದ ಗೆದ್ದಲ್ಲಿ ಪಾಕಿಸ್ತಾನವೇ ಹೊರಹೋಗುವ ಸಾಧ್ಯತೆ ಸಹ ಇದೆ. ಆದರೆ ಭಾರೀ ಅಂತರದಿಂದ ಗೆಲ್ಲಬೇಕು ಮತ್ತು ಭಾರತ ಪಾಕಿಸ್ತಾನಕ್ಕಿಂತ ಉತ್ತಮ ನೆಟ್‌ ರನ್ ರೇಟ್ ಹೊಂದಿರಬೇಕಾಗುತ್ತದೆ.

ಇನ್ನೊಂದು ರೀತಿಯಲ್ಲಿ ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ತಂಡಗಳು ನ್ಯೂಜಿಲೆಂಡ್ ವಿರುದ್ಧವೂ ದೊಡ್ಡ ಜಯ ಪಡೆದರೆ ಅದು ಭಾರತಕ್ಕೆ ವರದಾನವಾಗುತ್ತದೆ. ಆಗ ನ್ಯೂಜಿಲೆಂಡ್ ಆಫ್ಘಾನಿಸ್ತಾನದ ಎದುರು ಗೆದ್ದಿರಬೇಕು ಮತ್ತು ಭಾರತ ನಮೀಬಿಯಾಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ.. ಭಾರತದ ಪಾಲಿಗೆ ಅತಿ ದೊಡ್ಡ ಸವಾಲು ಇದಾಗಿದೆ. ಅದು ಪುಟಿದೆದ್ದು ಆಡಬೇಕಿದೆ ಮತ್ತು ಭಾರೀ ಅಂತರ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ಆಗಷ್ಟೇ ಉಳಿದ ಸನ್ನಿವೇಶಗಳಿಗೆ ಜೀವ ಬರುತ್ತದೆ. ಏನಾಗುತ್ತದೆ ಕಾದು ನೋಡೋಣ..


ಇದನ್ನೂ ಓದಿ: ಮೊಹಮ್ಮದ್ ಶಮಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ: ಕೋಮುವಾದಿ ದಾಳಿಗೆ ತೀವ್ರ ಖಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....