Homeಅಂಕಣಗಳುಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್' ಸಿನೆಮಾ

ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ

- Advertisement -
- Advertisement -

ತನ್ನನ್ನು ನಾಗರಿಕ ಎಂದು ಕರೆದುಕೊಳ್ಳುವ ಸಮಾಜ ಪೂರ್ವಗ್ರಹಗಳಿದ್ದಲ್ಲಿ ಅವುಗಳನ್ನು ಮೂರು ತಾಸು ಬದಿಗೆ ಸರಿಸಿ ಮನತೆರೆದು ’ಜೈ ಭೀಮ್’ ಚಲನಚಿತ್ರವನ್ನು ಅದರ ಎಲ್ಲ ಮಿತಿಗಳೊಂದಿಗೆ ಒಮ್ಮೆ ನೋಡುವುದು ಒಳಿತು. ಬತ್ತಿ ಹೋಗಿರಬಹುದಾದ ಅಂತಃಕರಣದ ಸೆಲೆಗಳು ಮತ್ತೆ ಜಿನುಗಿಯಾವು!

ಕ್ರೂರ ಜಾತಿವ್ಯವಸ್ಥೆಯ ಧೂರ್ತ ಹುನ್ನಾರಗಳಿಗೆ ಕೊನೆಮೊದಲಿಲ್ಲ. ಮೇಲುಕೀಳಿನ ಹಾಲಾಹಲವನ್ನು ತುಂಬಿತುಳುಕಿಸುವ ಜಾತಿಪದ್ಧತಿ ಹಿಂದೂ ಸಮಾಜದ ವೈಶಿಷ್ಟ್ಯ. ಮನುಷ್ಯನೇ ಮನುಷ್ಯನನ್ನು ಹಿಂಸಿಸಿ ಅವಮಾನಿಸಿ ಮೃಗದಂತೆ ಬೇಟೆಯಾಡಿ ಕೊಲ್ಲುವ ಕ್ರೌರ್ಯದ ಅಮಾನುಷ ನಿರ್ಮಿತಿ.

’ಜೈ ಭೀಮ್’ ಚಲನಚಿತ್ರದ ಮೊದಲ ದೃಶ್ಯವೇ ’ನಾಗರಿಕ’ ಸಮಾಜದ ಕರಾಳ ಮುಖದ ಕುರೂಪವನ್ನು ತೆರೆದು ತೋರುತ್ತದೆ. ಬಿಡುಗಡೆಯಾದ ಕೈದಿಗಳನ್ನು ಜೈಲಿನ ಆವರಣದಲ್ಲಿ ಪೊಲೀಸರು ಅವರವರ ಜಾತಿಯ ಆಧಾರದ ಮೇಲೆ ಪ್ರತ್ಯೇಕಗೊಳಿಸಿ ನಿಲ್ಲಿಸುತ್ತಾರೆ. ಬಲಿಷ್ಠ ಜಾತಿಯವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ದಲಿತರು-ಆದಿವಾಸಿಗಳನ್ನು ಉಳಿಸಿಕೊಂಡು ಅವರು ಮಾಡಿಯೇ ಇಲ್ಲದ ಹೊಸ ಆಪಾದನೆಗಳನ್ನು ಹೇರಲಾಗುತ್ತದೆ. ನಿಜವಾದ ಅಪರಾಧಿಗಳು ಪತ್ತೆಯಾಗದೆ ಬಾಕಿ ಉಳಿದಿರುವ ಕೇಸುಗಳಲ್ಲಿ ಇವರನ್ನು ಸಿಲುಕಿಸಿ ಪುನಃ ಜೈಲಿಗೆ ಅಟ್ಟಲಾಗುತ್ತದೆ. ಬಗೆಹರಿಸಲಾಗದೆ ಬಾಕಿ ಉಳಿಸಿರುವ ಕೇಸುಗಳಲ್ಲಿ ಈ ಅತಿ ದೀನರನ್ನು ಇರುಕಿಸಲಾಗುತ್ತದೆ. ಹೀಗೆ ಬಲಿಪಶುಗಳನ್ನು ಪೂರೈಕೆ ಮಾಡುವ ಜೈಲರನ ಜೇಬುಗಳನ್ನು ಪೊಲೀಸರೇ ಭರ್ತಿ ಮಾಡುತ್ತಾರೆ.

ತಮಿಳುನಾಡಿನಲ್ಲಿ ಇರುಳರೆಂದೂ, ಕರ್ನಾಟಕದಲ್ಲಿ ಇರುಳಿಗರೆಂದೂ ಕರೆಯಲಾಗುವ ಈ ಸಮುದಾಯ ಅತ್ಯಂತ ಹಿಂದುಳಿದ ಬುಡಕಟ್ಟಿಗೆ ಸೇರಿದವರು. ಹಾವು ಹಿಡಿದು ಕಾಡಿಗೆ ಬಿಡುವ ಮತ್ತು ಹಾವಿನ ವಿಷಕ್ಕೆ ಔಷಧಿ ಕೊಡುವ ಈ ಜನರು ಹೊಲಗದ್ದೆಗಳಲ್ಲಿ ಫಸಲು ಮುಕ್ಕುವ ಇಲಿಗಳ ಹಿಡಿಯುವವರು. ಬ್ರಿಟಿಷ್ ಸರ್ಕಾರದಿಂದ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡಿದ್ದ ಹಲವಾರು ಜಾತಿಗಳು ಮತ್ತು ಬುಡಕಟ್ಟುಗಳ ಪೈಕಿ ಇರುಳರೂ ಸೇರಿದ್ದಾರೆ. ಎರಡು ಹೊತ್ತಿನ ಅನ್ನಕ್ಕೆ ಮತ್ತು ಗೇಣು ಬಟ್ಟೆಗೆ ಗಳಿಸುವಲ್ಲೇ ಮುಗಿದುಹೋಗುವ ದೀನ ಬದುಕುಗಳು ಇವರವು. ಇರುಳಿಗರನ್ನು ಮತ್ತು ಇವರಂತಹ ಅಸಂಖ್ಯ ತಬ್ಬಲಿ ಜಾತಿಗಳನ್ನು ಸವರ್ಣೀಯ ಸಮಾಜ ಮತ್ತು ನಮ್ಮ ಅಪರಾಧ ನ್ಯಾಯಾಂಗ ವ್ಯವಸ್ಥೆ (Criminal Justice System) ನಡೆಸಿಕೊಳ್ಳುವ ಪರಿ ಅಮಾನುಷ. ದಿಕ್ಕಿಲ್ಲದ ನಾಯಿ ನರಿಗಳು ಹುಳು ಹುಪ್ಪಟೆಗಳಿಗಿಂತಲೂ ಕೀಳಾಗಿ ಹುಟ್ಟಿ ಸಾಯುವ ಇವರನ್ನು ಮನುಷ್ಯರೆಂದು ಬಗೆದೇ ಇಲ್ಲ. ಹಾಗೆಂದೇ ಮಾನವಹಕ್ಕುಗಳು ಎಂಬ ಪರಿಕಲ್ಪನೆ ಇವರನ್ನು ದೂರದಿಂದಲೂ ಮುಟ್ಟುವುದಿಲ್ಲ. ಇವರ ಭಾರತವೇ ಬೇರೆ. ಅದು ಕತ್ತಲ ಭಾರತ. ಅದೃಶ್ಯ ಭಾರತ. ನಾಗರಿಕ ಎಂದು ಹೇಳಲಾಗುವ ಅನಾಗರಿಕ ಸಮಾಜದ ಕುರುಡುಗಣ್ಣಿಗೆ, ಕಿವುಡುಗಿವಿಗೆ, ಸತ್ತ ನಾಲಗೆಗೆ, ಅವಸಾನಗೊಂಡ ಆತ್ಮಸಾಕ್ಷಿಯನ್ನು ಆರ್ತತೆ, ಅಸಹಾಯಕತೆಯಿಂದ ನೋಡುವ ಆದಿವಾಸಿ-ದಲಿತ ಭಾರತ.

ಜೈ ಭೀಮ್ ಚಲನಚಿತ್ರದ ಕ್ರೌರ್ಯವನ್ನು ಛತ್ತೀಸಗಢ-ಝಾರ್ಖಂಡದಂತಹ ಆದಿವಾಸಿ ಬಹುಳ ಸೀಮೆಯಂತೂ ಅನವರತ ಎದುರಿಸುತ್ತ ಬಂದಿದೆ. ಉತ್ತರಪ್ರದೇಶ-ಬಿಹಾರದಲ್ಲಿ ನೆಲೆಸಿರುವ ಹೊಲಗದ್ದೆಗಳಲ್ಲಿ ಇಲಿ ಹಿಡಿದು ತಿನ್ನುವ ಮೂಸಾಹರ ಎಂಬ ಅತಿ ದಲಿತ ಜಾತಿಯೊಂದಿದೆ. ಅದರಲ್ಲಿ ಅಕ್ಷರಸ್ಥರ ಪ್ರಮಾಣ ಶೇ.ಮೂರು. ಇದೇ ಗತಿ ಮುಂದುವರೆದರೆ ಈ ಜಾತಿ ಸಂಪೂರ್ಣ ಸಾಕ್ಷರವಾಗಲು ನಾಲ್ಕು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಬೇಕಾದೀತಂತೆ! ಮೂಸಾಹರರೊಂದಿಗೆ ಇರುಳರೂ ಸೇರಿದಂತೆ ಇನ್ನೂ ನೂರಾರು ಜಾತಿಗಳು- ಬುಡಕಟ್ಟುಗಳು ಈ ಪಟ್ಟಿಗೆ ಸೇರುವುದು ನಿಶ್ಚಿತ.

ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು Annihilation of Casteನ ಎಂಟನೆಯ ಅಧ್ಯಾಯದಲ್ಲಿ ಆದಿವಾಸಿಗಳ ದುಸ್ಥಿತಿಯ ಕುರಿತು ಎತ್ತಿರುವ ಪ್ರಶ್ನೆಯೊಂದು ಹೀಗಿದೆ: “ಆದಿವಾಸಿಗಳನ್ನು ಇವ ನಮ್ಮವನೆಂದು ತಬ್ಬಿಕೊಂಡು ಪ್ರೀತಿಸಲು ಹಿಂದೂ ಸಮಾಜ ಮುಂದಾಗಲೇ ಇಲ್ಲ. ಬದುಕಿಡೀ ಜಾತಿವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದೇ ಹಿಂದುವಿನ ಪರಮ ಉದ್ದೇಶವಾಗಿದ್ದಾಗ ಈ ಕೆಲಸ ಮಾಡಲು ಹಿಂದುವಿಗೆ ಹೇಗೆ ಸಾಧ್ಯವಾದೀತು”?

1871ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ ಕ್ರಿಮಿನಲ್ ಟ್ರೈಬ್ಸ್ ಕಾಯಿದೆಯನ್ನು 1951ರಲ್ಲಿ ರದ್ದು ಮಾಡಲಾಗುತ್ತದೆ. ಆದರೆ ಕಾಗದದ ಮೇಲೆ ಮಾತ್ರವೇ ರದ್ದಾಗಿರುವ ಈ ಕಾಯಿದೆಯನ್ನು ಪೊಲೀಸ್ ವ್ಯವಸ್ಥೆ ಜೀವಂತವಾಗಿ ಇರಿಸಿಕೊಂಡಿದೆ. ಕ್ರಿಮಿನಲ್ ಟ್ರೈಬ್ಸ್ ಹಣೆಪಟ್ಟಿ ಹಚ್ಚಲಾಗಿದ್ದ ನೂರಾರು ಬುಡಕಟ್ಟುಗಳ ಅಮಾಯಕ ಜನರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ. ಅವರು ಮಾಡದೆ ಇರುವ ಅಪರಾಧಗಳಲ್ಲಿ ಬಂಧಿಸಿ ಜೈಲುಗಳಲ್ಲಿ ಚಿತ್ರಹಿಂಸೆ ಮಾಡಿ ಅವರಿಂದ ಬಲವಂತದ ಹುಸಿ ತಪ್ಪೊಪ್ಪಿಗೆ ಪಡೆದು, ಅದನ್ನು ನ್ಯಾಯಾಲಯಗಳಲ್ಲಿ ಮಂಡಿಸಿ, ಶಿಕ್ಷೆ ಕೊಡಿಸಿ ಜೈಲುಗಳ ನರಕಕ್ಕೆ ನೂಕಲಾಗುತ್ತಿದೆ. ಚಿತ್ರವಧೆಯ ಹಂತದಲ್ಲೇ ಪ್ರಾಣ ಬಿಡುವ ದಿಕ್ಕಿಲ್ದವರ ಲೆಕ್ಕವಿಲ್ಲ.

ಅಮಾಯಕ ಅನಕ್ಷರಸ್ಥ ತಬ್ಬಲಿ ಜನಾಂಗಗಳ ಈ ಚಿತ್ರವಧೆಯ ರಕ್ತ ನಾಗರಿಕ ಸಮಾಜದ ಕೈಗಳನ್ನು ಮೆತ್ತಿ ತೊಟ್ಟಿಕ್ಕುತ್ತಿದೆ. ಕಣ್ಣುಮುಚ್ಚಿ ಲೋಲುಪತೆಯಲ್ಲಿ ಮೈಮರೆತಿರುವ ಈ ಜಾತಿವ್ಯಾಧಿಪೀಡಿತ ಸಮಾಜದ ಆತ್ಮಸಾಕ್ಷಿ ಸಾವಿರಾರು ವರ್ಷಗಳ ಅಂಧ ಅಮಾನುಷ ಪರಂಪರೆಯಡಿ ಹೂತು ಹೋಗಿದೆ.

ರಾಷ್ಟ್ರೀಯ ಚಿತ್ರಹಿಂಸೆ ವಿರೋಧೀ ಆಂದೋಲನದ (National Campaign Against Torture) ಅಧ್ಯಯನದ ಪ್ರಕಾರ ದಿನಂಪ್ರತಿ ಸರಾಸರಿ ಐವರು ಬಂಧಿತರು ಪೊಲೀಸ್ ವಶದಲ್ಲಿ ಚಿತ್ರಹಿಂಸೆಯಿಂದ ಸಾಯುತ್ತಿದ್ದಾರೆ. 2019ರಲ್ಲಿ ಹೀಗೆ ಕಾನೂನುಪಾಲಕರಿಂದ ’ಕೊಲೆ’ ಯಾದವರ ಸಂಖ್ಯೆ 1,723.

2020ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಾಖಲಿಸಿರುವ ನ್ಯಾಯಾಂಗ ವಶದ ಸಾವುಗಳ ಸಂಖ್ಯೆ 1,569. ಕಾಗದದ ಮೇಲೆ ಕಡತಗಳಲ್ಲಿ ಅಂಕಿಅಂಶಗಳಾಗಿ ಮಾತ್ರವೇ ದಾಖಲಾಗುವ ಈ ಸಾವುಗಳ ಹಿಂದೆ ಎಂತೆಂತಹ ಕ್ರೌರ್ಯ- ಕಣ್ಣೀರಿನ ಕತೆಗಳಿದ್ದಾವು!

ಠಾಣೆಗಳಲ್ಲಿ ಜರುಗುವ ಈ ’ಕೊಲೆ’ಗಳ ಬಲಿಪಶುಗಳು ಬಹುತೇಕ ತಳವರ್ಗಗಳಿಗೆ ಸೇರಿದವರು. ದಲಿತರು, ಬುಡಕಟ್ಟು ಜನಾಂಗಗಳವರು ಹಾಗೂ ಮುಸಲ್ಮಾನರು. ಭಾರತ ಸರ್ಕಾರ ಅಪರಾಧಗಳ ಕುರಿತು (ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರ್ಷವರ್ಷವೂ ಅಂಕಿಅಂಶಗಳನ್ನು ಪ್ರಕಟಿಸುತ್ತದೆ. ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಯು ಬಡವರು ಮತ್ತು ದಮನಿತರ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ದುಷ್ಟತನದ ಒಂದು ಸಣ್ಣ ಉದಾಹರಣೆ ಈ ಅಂಕಿಅಂಶಗಳು. ಹಣ ತೆತ್ತು ಉತ್ತಮ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಣವಂತರು-ಬಲಿಷ್ಠರು-ಪ್ರಭಾವಿಗಳನ್ನು ಬಂಧಿಸಿಡುವ ಶಕ್ತಿ ಯಾವ ಜೈಲಿನ ಸಲಾಕೆಗಳಿಗೂ ಇಲ್ಲ.

ಸರ್ಕಾರಿ ಸಂಸ್ಥೆಯೇ ಆಗಿರುವ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ ಶಿಕ್ಷೆಯಾಗಿ ಸೆರೆವಾಸ ಅನುಭವಿಸಿರುವ ವಿಚಾರಣಾಧೀನ ಕೈದಿಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.50.8. ದೇಶದ ಜನಸಂಖ್ಯೆಯಲ್ಲಿ ಇವರ ಒಟ್ಟು ಪ್ರಮಾಣ ಶೇ.39.4. ಈ ಮೂರೂ ಸಮುದಾಯಗಳು ಆರ್ಥಿಕ-ಸಾಮಾಜಿಕ-ಶೈಕ್ಷಣಿಕವಾಗಿ ಹಿಂದುಳಿದವುಗಳು. ದಾರಿದ್ರ್ಯದ ತಿರುಗಣಿಗೆ ಸಿಕ್ಕ ಈ ಸಮುದಾಯಗಳು ನಿರುದ್ಯೋಗದ ಉರಿಯನ್ನೂ ಎದುರಿಸುತ್ತ ಬಂದಿವೆ. ಭೂ ಒಡೆತನದ ಬಲವೂ ಇವುಗಳಿಗೆ ಇಲ್ಲ. ಬಲಿಷ್ಠ ಜಾತಿಗಳ ದಮನ ದೌರ್ಜನ್ಯ ಹಿಂಸೆಗಳಲ್ಲಿ ಬೇಯುತ್ತ ಬಂದಿವೆ. ಅಮೆರಿಕೆಯಲ್ಲಿ ಕೂಡ ದಮನಿತ ಜನಾಂಗವಾದ ಕಪ್ಪು ವರ್ಣೀಯರ ಜನಸಂಖ್ಯಾ ಪ್ರಮಾಣ ಶೇ.13. ಆದರೆ ಜೈಲುಗಳಲ್ಲಿ ಕೊಳೆಯುತ್ತಿರುವ ಕಪ್ಪು ಜನರ ಪ್ರಮಾಣ ಶೇ.40.

ತಾರತಮ್ಯ ತುಂಬಿ ತುಳುಕಿರುವ ವ್ಯಾಧಿಗ್ರಸ್ತ ಅಸಮಾನ ಸಮಾಜದ ಪ್ರತಿಬಿಂಬವಿದು. ಸ್ವಾತಂತ್ರ್ಯ, ಸಮಾನತೆ, ಸೋದರತೆ ಹೊಂದಿದ ಸಮಾಜ ಮಾತ್ರವೇ ಆರೋಗ್ಯಕರವೂ ಬಲಿಷ್ಠವೂ ಮತ್ತು ಸಮೃದ್ಧವೂ ಆಗಬಲ್ಲದು.


ಇದನ್ನೂ ಓದಿ:  ದಾಸ್ತಯೆವ್‌ಸ್ಕಿ 200; ಇಡೀ ಮನುಕುಲಕ್ಕೆ ಸಲ್ಲುವ ಕಥೆಗಳನ್ನು ರಚಿಸಿದ ಫ್ಯೊದೋರ್ ಮಿಖಾಯ್ಲೊವಿಚ್ ದಾಸ್ತಯೆವ್‌ಸ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...