Homeಮುಖಪುಟಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

- Advertisement -
- Advertisement -

ಆಗಸದ ಅಲೆಮಾರಿಗಳ ನೆರಳು ಬೆಳಕಿನಾಟವೇ ಗ್ರಹಣ. ಗ್ರಹಣದ ಸಮಯದಲ್ಲಿ ತಾರ್ಕಿಕ ನಿಲುವುಗಳಿಲ್ಲದ, ಅಸಂಬದ್ಧವಾದ ಮೂಡ ನಂಬಿಕೆಗಳನ್ನು ಮೂಟೆಗಟ್ಟಲೆ ಜನರ ಮನಸ್ಸಿನಲ್ಲಿ ತುರುಕುವ ಕೆಲಸವನ್ನು ಇಂದಿಗೂ ಹಲವು ಮಾಧ್ಯಮಗಳೂ ಮತ್ತು ಕೆಲವು ಸಂಸ್ಥೆಗಳು ನಡೆಸುತ್ತಲೇ ಬಂದಿದ್ದಾರೆ. ಜನಗಳು ಭಯಭೀತರಾಗಿ ಕುರುಡು ಭಕ್ತಿಯಿಂದ ತಮ್ಮ ಹತ್ತಿರ ಬಂದು ಒಂದಷ್ಟು ದುಡ್ಡು ಚೆಲ್ಲಬೇಕೆಂಬ ಬಯಕೆ ಅವರದ್ದು ಎಂಬುದು ಎಷ್ಟೋ ಜನರ ತಿಳಿವಳಿಕೆಯ ಭಾಗವಾಗದಿರುವುದು ದುಃಖದ ಸಂಗತಿಯಾಗಿದೆ. ಈ ತಿಂಗಳ ಭಾಗಶಃ ಚಂದ್ರಗ್ರಹಣ, ಮುಂದಿನ ಐದು ಶತಮಾನಗಳಲ್ಲಿಯೇ ದೀರ್ಘವಾದ ಚಂದ್ರ ಗ್ರಹಣ ಎಂಬ ಲೆಕ್ಕಚಾರವನ್ನು ಖಗೋಳ ವಿಜ್ಞಾನದಿಂದ ತಿಳಿಯಲಾಗಿದೆ. ಶತಮಾನಗಳಷ್ಟು ಭಯಪಡಿಸುವ ಮೂಢನಂಬಿಕೆಗಳನ್ನು ಇದರ ಸುತ್ತ ಈಗ ಹುಟ್ಟು ಹಾಕುತ್ತಾರೋ ಏನೋ?

ಭೂಮಿ ಸೂರ್ಯನ ಸುತ್ತ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿರಬೇಕಾದರೆ, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದುಹೋಗುವಾಗ, ಈ ಮೂರೂ ಆಕಾಶಕಾಯಗಳು ಒಂದೇ ಸರಳ ರೇಖೆಯಲ್ಲಿ ಬರುತ್ತವೆ. ಇಂತಹ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಮರೆಮಾಚುತ್ತದೆ, ಆಗ ಸೂರ್ಯನ ಬೆಳಕು ಭೂಮಿಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಬೀಳುವುದಿಲ್ಲ. ಇದು ಸೂರ್ಯ ಗ್ರಹಣ. ಸೂರ್ಯ ಗ್ರಹಣ ಅಮಾವಾಸ್ಯೆಯ ದಿನದಂದೇ ನಡೆಯುತ್ತದೆ. ಆದರೆ, ಇದೇ ರೀತಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದುಹೋಗುವಾಗ, ಆ ಸಮಯದಲ್ಲೂ ಮೂರು ಆಕಾಶಕಾಯಗಳು ಸರಳ ರೇಖೆಯಲ್ಲಿ ಬರುತ್ತವೆ. ಆದರೆ ಇಲ್ಲಿ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹುಣ್ಣಿಮೆಯ ಚಂದ್ರನನ್ನು ಭೂಮಿಯ ನೆರಳು ಆವರಿಸುತ್ತಾ ಹೋಗುತ್ತದೆ. ಇದು ಚಂದ್ರ ಗ್ರಹಣ. ಚಂದ್ರ ಗ್ರಹಣ ಹುಣ್ಣಿಮೆಯಂದೇ ನಡೆಯುತ್ತದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ (ಸರಳ ರೇಖೆಯಲ್ಲಿ), ಸೂರ್ಯಗ್ರಹಣ ಮತ್ತು ಅಮಾವಾಸ್ಯೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ (ಸರಳ ರೇಖೆಯಲ್ಲಿ), ಚಂದ್ರಗ್ರಹಣ ಮತ್ತು ಹುಣ್ಣಿಮೆ. ಹಾಗಾದರೆ, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುತ್ತವೆಯಾ? ಇಲ್ಲಾ, ಇದಕ್ಕೆ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುತ್ತಿರುವ ಕಕ್ಷೆ (Orbit).

ಭೂಮಿ ಸೂರ್ಯನ ಸುತ್ತು ಸುತ್ತುತ್ತಿರುವ ಕಕ್ಷೆಯು ಮತ್ತು ಚಂದ್ರ ಭೂಮಿಯ ಸುತ್ತು ಸುತ್ತುತ್ತಿರುವ ಕಕ್ಷೆಯು ಒಂದೆ ಸಮತಲದಲ್ಲಿ ಇಲ್ಲ. ಈ ಎರಡೂ ಕಕ್ಷೆಗಳು ಸುಮಾರು ಐದು ಡಿಗ್ರಿಯಷ್ಟು ಓರೆಯಾಗಿದ್ದು, ಎರಡು ಬಿಂದುಗಳಲ್ಲಿ ಮಾತ್ರ ಸಂಧಿಸುತ್ತವೆ (Intercepts). ಗ್ರಹಣಗಳು ನಡೆಯಬೇಕಾದರೆ ಅದಕ್ಕಿರುವ ಮೂಲ ನಿಯಮ: ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಇರುವ ಸಂದರ್ಭ ಬರಬೇಕಿರುವುದು. ಇಂತಹ ಸಂದರ್ಭ ಉಂಟಾಗಬೇಕೆಂದರೆ, ಚಂದ್ರನು ತನ್ನ ಕಕ್ಷೆಯಲ್ಲಿ ಸುತ್ತುವಾಗ, ಭೂಮಿಯ ಕಕ್ಷೆಯ ಸಮತಲದಲ್ಲಿ (Ecliptic Plane) ಸಂಧಿಸುವ ಬಿಂದುಗಳಲ್ಲಿ ಅದು ಬಂದಾಗ ಹಾಗೂ ಆಗ ಅಮಾವಾಸ್ಯೆ ಅಥವಾ ಹುಣ್ಣಿಮೆ ಇದ್ದರೆ ಮಾತ್ರ ಗ್ರಹಣಗಳು ನಡೆಯಲು ಸಾಧ್ಯ. ಈ ಕಾರಣದಿಂದ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುವುದಿಲ್ಲ ಹಾಗೂ ಗ್ರಹಣಗಳು ವಿರಳವಾಗಿರುವುದು. ಆದರೆ, ಭೂಮಿ ಮತ್ತು ಚಂದ್ರನ ಚಲನೆಗಳನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಗ್ರಹಿಸಲು ಸಾಧ್ಯವಾಗಿರುವುದರಿಂದ ನಿಖರವಾಗಿ ಯಾವಾಗ ಗ್ರಹಣಗಳು ನಡೆಯುತ್ತವೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ.

ಸೂರ್ಯ ಗ್ರಹಣವನ್ನು ವೀಕ್ಷಿಸುವಾಗ ಕೆಲವು ಸುರಕ್ಷತಾ ಮೆನ್ನೆಚ್ಚರಿಕೆಯನ್ನು ವಹಿಸಲೇಬೇಕಾಗಿರುತ್ತದೆ. ಸಾಮಾನ್ಯವಾಗಿ ಸೂರ್ಯನನ್ನು ಎಂದೂ ಬರಿಗಣ್ಣಿನಲ್ಲಿ ನೋಡುವುದು ತಪ್ಪು. ಮನುಷ್ಯನ ಅಂಗಗಳಲ್ಲಿ ಕಣ್ಣು ಅತೀ ಸೂಕ್ಷ್ಮವಾದದ್ದು. ಸೂರ್ಯನ ತೀಕ್ಷ್ಣವಾದ ಕಿರಣಗಳು ಕಣ್ಣಿನ ರೆಟಿನಾವನ್ನು ಹಾಳು ಮಾಡುವ ಸಂಭವವಿರುತ್ತದೆ. ಯಾವುದೇ ಸಮಯದಲ್ಲೂ ಕೂಡ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಗ್ರಹಣದ ಸಮಯದಲ್ಲೂ ಕೂಡು ಭೂಮಿಯ ಜೀವರಾಶಿಗೆ ತೊಂದರೆ ಮಾಡವ ಯಾವ ಹಾನಿಕಾರಕ
ಕಿರಣಗಳೂ ಸುರ್ಯನಿಂದ ಬರುವುದಿಲ್ಲ. ಇವೆಲ್ಲವೂ ಕೇವಲ ಕಪೋಲಕಲ್ಪಿತವಾದವು. ಗ್ರಹಣಗಳು ಕೇವಲ ಸಾಪೇಕ್ಷವಾದ (relative) ಘಟನೆಗಳು. ಗ್ರಹಣದ ಸಮಯದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನಲ್ಲಿ ಯಾವುದೇ ಭೌತಿಕವಾದ ಬದಲಾವಣೆಗಳೂ ನಡೆಯುವುದಿಲ್ಲ. ಇದು ಕೇವಲ ನೆರಳು ಬೆಳಕಿನ ಆಟ. ಸೂರ್ಯನನ್ನು ನಾವು ಎಂದಿಗೂ ನೇರ ಕಣ್ಣುಗಳಿಂದ ನೋಡಬಾರದು, ಅದು ಗ್ರಹಣದ ಸಮಯಕ್ಕೂ ಅನ್ವಯವಾಗುತ್ತದೆ. ಸೂರ್ಯನನ್ನು ನೋಡಬೇಕಾದರೆ, ಪ್ರಮಾಣೀಕರಿಸಲಾದ ಸೌರ ಕನ್ನಡಕವನ್ನು ಬಳಸಿ ನೋಡುವುದು ಸುರಕ್ಷಿತ. ಗ್ರಹಣದ ಸಮಯದಲ್ಲೂ ಕೂಡ ಸೌರ ಕನ್ನಡಕದ ಮೂಲಕವೇ ಸೂರ್ಯ ಗ್ರಹಣವನ್ನು ನೋಡಬೇಕು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಬಳಸಿದರೆ, ಅವುಗಳಿಗೂ ಸೂಕ್ತವಾದ ಸೌರ ಶೋಧಕ (Sun Filters) ಅಳವಡಿಸಿಯೇ ನೋಡಬೇಕು. ಆದರೆ, ಚಂದ್ರಗ್ರಹಣ ಇದಕ್ಕೆ ವ್ಯತಿರಿಕ್ತವಾದದ್ದು. ಎಲ್ಲಾ ವಿಧದ ಚಂದ್ರ ಗ್ರಹಣಗಳನ್ನು ಬರಿಗಣ್ಣಿನಿಂದಲೇ ನೋಡಬಹುದು. ಕೆಲವು ಸಮಯಗಳಲ್ಲಿ ಹುಣ್ಣಿಮೆಯ ಚಂದ್ರ ಪ್ರಕಾಶಮಾನವಾಗಿ ಇರುವುದರಿಂದ ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳಲ್ಲಿ ನೋಡಬೇಕಾದರೆ ಚಂದ್ರ ಶೋಧಕಗಳನ್ನು (Moon Filters) ಬಳಸುತ್ತಾರೆ.

ಈ ತಿಂಗಳ ನವೆಂಬರ್ 19ರಂದು ಹುಣ್ಣಿಮೆ. ಅಂದು ಆಗಸದಲ್ಲಿ ಭಾಗಶಃ ಚಂದ್ರ ಗ್ರಹಣ (Partial Lunar Eclipse) ಗೋಚರಿಸಲಿದೆ. ಈ ಗ್ರಹಣವನ್ನು ಅಮೆರಿಕಾ, ಯುರೋಪ್, ಪೂರ್ವ ಎಷ್ಯಾ ಹಾಗೂ ಆಸ್ಟ್ರೇಲಿಯಾ ಖಂಡಗಳಲ್ಲಿ ನೋಡಬಹುದಾಗಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಂದ್ರ ಹುಟ್ಟುವಾಗ ಈ ಗ್ರಹಣವನ್ನು ನೋಡಬಹುದಾಗಿರುತ್ತದೆ. ದಕ್ಷಿಣ ಭಾರತದಿಂದ ಈ ಗ್ರಹಣ ಗೋಚರಿಸುವುದಿಲ್ಲ. ಈ ಗ್ರಹಣದ ವಿಶೇಷ ಎಂದರೆ ಇದು ಮುಂದಿನ ಸುಮಾರು ಐದು ಶತಮಾನಗಳಲ್ಲಿ ನಡೆಯಬಹುದಾದ ಭಾಗಶಃ ಚಂದ್ರಗ್ರಹಣಗಳಲ್ಲಿಯೇ ಅತ್ಯಂತ ದೀರ್ಘವಾದದ್ದು. ಈ ಕಾರಣದಿಂದು ಈ ಭಾಗಶಃ ಚಂದ್ರ ಗ್ರಹಣ ಹೆಚ್ಚು ಸುದ್ದಿಯಲ್ಲಿದೆ. ಭಾಗಶಃ ಏಕೆಂದರೆ, ಚಂದ್ರ ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಶೇ.97 ಭಾಗದಲ್ಲಿ ಬೀಳುತ್ತಿರುತ್ತದೆ. ಶೇ. 100 ಭಾಗದಲ್ಲಿ ಬಿದ್ದಿದ್ದರೆ ಅದು ಪೂರ್ಣಚಂದ್ರ ಗ್ರಹಣವಾಗುತ್ತಿತ್ತು.

1451ರಿಂದ 2650ರವರೆಗೆ ಗೋಚರಿಸಿರುವ/ಗೋಚರಿಸಲಿರುವ ದೀರ್ಘವಾದ ಭಾಗಶಃ ಚಂದ್ರ ಗ್ರಹಣಗಳನ್ನು, ಅವುಗಳ ಅವಧಿಗೆ ಅನುಸಾರವಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ.

1. 19.11.2021- 6 ಗಂಟೆ 2 ನಿಮಿಷ
2. 30.11.2039- 6 ಗಂಟೆ 0 ನಿಮಿಷ
3. 11.12.2057- 5 ಗಂಟೆ 59 ನಿಮಿಷ
4. 22.12.2075- 5 ಗಂಟೆ 58 ನಿಮಿಷ
5. 9.10.2489- 6 ಗಂಟೆ 0 ನಿಮಿಷ

ಮೇಲಿನ ಪಟ್ಟಿಗಳಲ್ಲಿ ನವೆಂಬರ್ 2021ರ ಭಾಗಶಃ ಚಂದ್ರ ಗ್ರಹಣ ಐದು ಶತಮಾನಗಳಲ್ಲಿಯೇ ದೀರ್ಘವಾದದ್ದು ಎಂಬುವುದು ತಿಳಿಯುತ್ತದೆ. ಈ ಹಿಂದೆ ಅಂದರೆ 2003ರ ನವೆಂಬರ್ ೯ರಂದು ನಡೆದ ಚಂದ್ರ ಗ್ರಹಣದ ಅವಧಿ 6 ಗಂಟೆ 3 ನಿಮಿಷಗಳಷ್ಟಿತ್ತು. ಆದರೆ, ಅದು ಭಾಗಶಃ ಚಂದ್ರ ಗ್ರಹಣವಾಗಿರದೆ, ಪೂರ್ಣ ಚಂದ್ರ ಗ್ರಹಣವಾಗಿತ್ತು.
ಈ ಕಾರಣಗಳಿಂದ ನವೆಂಬರ್ 19, 2021ರ ಭಾಗಶಃ ಚಂದ್ರ ಗ್ರಹಣ 15ನೇ ಶತಮಾನದಿಂದಲೂ ನಡೆದಿರುವ ಬಾಗಶಃ ಚಂದ್ರ ಗ್ರಹಣದಲ್ಲಿಯೇ ಅತ್ಯಂತ ದೀರ್ಘವಾದದ್ದು. ಇಂತಹದೇ ದೀರ್ಘವಾದ ಭಾಗಶಃ ಚಂದ್ರ ಗ್ರಹಣ ಮತ್ತೊಮ್ಮೆ ನಡೆಯವುದು ಫೆಬ್ರವರಿ 8, 2669ರಲ್ಲಿ!


ಇದನ್ನೂ ಓದಿ: ಬೆಳ್ಳಿಚುಕ್ಕಿ; ವಿಶ್ವದ ಪ್ರಥಮ ಬೆಳಕು – CMBR

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...