Homeಮುಖಪುಟಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

- Advertisement -
- Advertisement -

ಆಗಸದ ಅಲೆಮಾರಿಗಳ ನೆರಳು ಬೆಳಕಿನಾಟವೇ ಗ್ರಹಣ. ಗ್ರಹಣದ ಸಮಯದಲ್ಲಿ ತಾರ್ಕಿಕ ನಿಲುವುಗಳಿಲ್ಲದ, ಅಸಂಬದ್ಧವಾದ ಮೂಡ ನಂಬಿಕೆಗಳನ್ನು ಮೂಟೆಗಟ್ಟಲೆ ಜನರ ಮನಸ್ಸಿನಲ್ಲಿ ತುರುಕುವ ಕೆಲಸವನ್ನು ಇಂದಿಗೂ ಹಲವು ಮಾಧ್ಯಮಗಳೂ ಮತ್ತು ಕೆಲವು ಸಂಸ್ಥೆಗಳು ನಡೆಸುತ್ತಲೇ ಬಂದಿದ್ದಾರೆ. ಜನಗಳು ಭಯಭೀತರಾಗಿ ಕುರುಡು ಭಕ್ತಿಯಿಂದ ತಮ್ಮ ಹತ್ತಿರ ಬಂದು ಒಂದಷ್ಟು ದುಡ್ಡು ಚೆಲ್ಲಬೇಕೆಂಬ ಬಯಕೆ ಅವರದ್ದು ಎಂಬುದು ಎಷ್ಟೋ ಜನರ ತಿಳಿವಳಿಕೆಯ ಭಾಗವಾಗದಿರುವುದು ದುಃಖದ ಸಂಗತಿಯಾಗಿದೆ. ಈ ತಿಂಗಳ ಭಾಗಶಃ ಚಂದ್ರಗ್ರಹಣ, ಮುಂದಿನ ಐದು ಶತಮಾನಗಳಲ್ಲಿಯೇ ದೀರ್ಘವಾದ ಚಂದ್ರ ಗ್ರಹಣ ಎಂಬ ಲೆಕ್ಕಚಾರವನ್ನು ಖಗೋಳ ವಿಜ್ಞಾನದಿಂದ ತಿಳಿಯಲಾಗಿದೆ. ಶತಮಾನಗಳಷ್ಟು ಭಯಪಡಿಸುವ ಮೂಢನಂಬಿಕೆಗಳನ್ನು ಇದರ ಸುತ್ತ ಈಗ ಹುಟ್ಟು ಹಾಕುತ್ತಾರೋ ಏನೋ?

ಭೂಮಿ ಸೂರ್ಯನ ಸುತ್ತ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿರಬೇಕಾದರೆ, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದುಹೋಗುವಾಗ, ಈ ಮೂರೂ ಆಕಾಶಕಾಯಗಳು ಒಂದೇ ಸರಳ ರೇಖೆಯಲ್ಲಿ ಬರುತ್ತವೆ. ಇಂತಹ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಮರೆಮಾಚುತ್ತದೆ, ಆಗ ಸೂರ್ಯನ ಬೆಳಕು ಭೂಮಿಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಬೀಳುವುದಿಲ್ಲ. ಇದು ಸೂರ್ಯ ಗ್ರಹಣ. ಸೂರ್ಯ ಗ್ರಹಣ ಅಮಾವಾಸ್ಯೆಯ ದಿನದಂದೇ ನಡೆಯುತ್ತದೆ. ಆದರೆ, ಇದೇ ರೀತಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದುಹೋಗುವಾಗ, ಆ ಸಮಯದಲ್ಲೂ ಮೂರು ಆಕಾಶಕಾಯಗಳು ಸರಳ ರೇಖೆಯಲ್ಲಿ ಬರುತ್ತವೆ. ಆದರೆ ಇಲ್ಲಿ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹುಣ್ಣಿಮೆಯ ಚಂದ್ರನನ್ನು ಭೂಮಿಯ ನೆರಳು ಆವರಿಸುತ್ತಾ ಹೋಗುತ್ತದೆ. ಇದು ಚಂದ್ರ ಗ್ರಹಣ. ಚಂದ್ರ ಗ್ರಹಣ ಹುಣ್ಣಿಮೆಯಂದೇ ನಡೆಯುತ್ತದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ (ಸರಳ ರೇಖೆಯಲ್ಲಿ), ಸೂರ್ಯಗ್ರಹಣ ಮತ್ತು ಅಮಾವಾಸ್ಯೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ (ಸರಳ ರೇಖೆಯಲ್ಲಿ), ಚಂದ್ರಗ್ರಹಣ ಮತ್ತು ಹುಣ್ಣಿಮೆ. ಹಾಗಾದರೆ, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುತ್ತವೆಯಾ? ಇಲ್ಲಾ, ಇದಕ್ಕೆ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುತ್ತಿರುವ ಕಕ್ಷೆ (Orbit).

ಭೂಮಿ ಸೂರ್ಯನ ಸುತ್ತು ಸುತ್ತುತ್ತಿರುವ ಕಕ್ಷೆಯು ಮತ್ತು ಚಂದ್ರ ಭೂಮಿಯ ಸುತ್ತು ಸುತ್ತುತ್ತಿರುವ ಕಕ್ಷೆಯು ಒಂದೆ ಸಮತಲದಲ್ಲಿ ಇಲ್ಲ. ಈ ಎರಡೂ ಕಕ್ಷೆಗಳು ಸುಮಾರು ಐದು ಡಿಗ್ರಿಯಷ್ಟು ಓರೆಯಾಗಿದ್ದು, ಎರಡು ಬಿಂದುಗಳಲ್ಲಿ ಮಾತ್ರ ಸಂಧಿಸುತ್ತವೆ (Intercepts). ಗ್ರಹಣಗಳು ನಡೆಯಬೇಕಾದರೆ ಅದಕ್ಕಿರುವ ಮೂಲ ನಿಯಮ: ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಇರುವ ಸಂದರ್ಭ ಬರಬೇಕಿರುವುದು. ಇಂತಹ ಸಂದರ್ಭ ಉಂಟಾಗಬೇಕೆಂದರೆ, ಚಂದ್ರನು ತನ್ನ ಕಕ್ಷೆಯಲ್ಲಿ ಸುತ್ತುವಾಗ, ಭೂಮಿಯ ಕಕ್ಷೆಯ ಸಮತಲದಲ್ಲಿ (Ecliptic Plane) ಸಂಧಿಸುವ ಬಿಂದುಗಳಲ್ಲಿ ಅದು ಬಂದಾಗ ಹಾಗೂ ಆಗ ಅಮಾವಾಸ್ಯೆ ಅಥವಾ ಹುಣ್ಣಿಮೆ ಇದ್ದರೆ ಮಾತ್ರ ಗ್ರಹಣಗಳು ನಡೆಯಲು ಸಾಧ್ಯ. ಈ ಕಾರಣದಿಂದ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುವುದಿಲ್ಲ ಹಾಗೂ ಗ್ರಹಣಗಳು ವಿರಳವಾಗಿರುವುದು. ಆದರೆ, ಭೂಮಿ ಮತ್ತು ಚಂದ್ರನ ಚಲನೆಗಳನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಗ್ರಹಿಸಲು ಸಾಧ್ಯವಾಗಿರುವುದರಿಂದ ನಿಖರವಾಗಿ ಯಾವಾಗ ಗ್ರಹಣಗಳು ನಡೆಯುತ್ತವೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ.

ಸೂರ್ಯ ಗ್ರಹಣವನ್ನು ವೀಕ್ಷಿಸುವಾಗ ಕೆಲವು ಸುರಕ್ಷತಾ ಮೆನ್ನೆಚ್ಚರಿಕೆಯನ್ನು ವಹಿಸಲೇಬೇಕಾಗಿರುತ್ತದೆ. ಸಾಮಾನ್ಯವಾಗಿ ಸೂರ್ಯನನ್ನು ಎಂದೂ ಬರಿಗಣ್ಣಿನಲ್ಲಿ ನೋಡುವುದು ತಪ್ಪು. ಮನುಷ್ಯನ ಅಂಗಗಳಲ್ಲಿ ಕಣ್ಣು ಅತೀ ಸೂಕ್ಷ್ಮವಾದದ್ದು. ಸೂರ್ಯನ ತೀಕ್ಷ್ಣವಾದ ಕಿರಣಗಳು ಕಣ್ಣಿನ ರೆಟಿನಾವನ್ನು ಹಾಳು ಮಾಡುವ ಸಂಭವವಿರುತ್ತದೆ. ಯಾವುದೇ ಸಮಯದಲ್ಲೂ ಕೂಡ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಗ್ರಹಣದ ಸಮಯದಲ್ಲೂ ಕೂಡು ಭೂಮಿಯ ಜೀವರಾಶಿಗೆ ತೊಂದರೆ ಮಾಡವ ಯಾವ ಹಾನಿಕಾರಕ
ಕಿರಣಗಳೂ ಸುರ್ಯನಿಂದ ಬರುವುದಿಲ್ಲ. ಇವೆಲ್ಲವೂ ಕೇವಲ ಕಪೋಲಕಲ್ಪಿತವಾದವು. ಗ್ರಹಣಗಳು ಕೇವಲ ಸಾಪೇಕ್ಷವಾದ (relative) ಘಟನೆಗಳು. ಗ್ರಹಣದ ಸಮಯದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನಲ್ಲಿ ಯಾವುದೇ ಭೌತಿಕವಾದ ಬದಲಾವಣೆಗಳೂ ನಡೆಯುವುದಿಲ್ಲ. ಇದು ಕೇವಲ ನೆರಳು ಬೆಳಕಿನ ಆಟ. ಸೂರ್ಯನನ್ನು ನಾವು ಎಂದಿಗೂ ನೇರ ಕಣ್ಣುಗಳಿಂದ ನೋಡಬಾರದು, ಅದು ಗ್ರಹಣದ ಸಮಯಕ್ಕೂ ಅನ್ವಯವಾಗುತ್ತದೆ. ಸೂರ್ಯನನ್ನು ನೋಡಬೇಕಾದರೆ, ಪ್ರಮಾಣೀಕರಿಸಲಾದ ಸೌರ ಕನ್ನಡಕವನ್ನು ಬಳಸಿ ನೋಡುವುದು ಸುರಕ್ಷಿತ. ಗ್ರಹಣದ ಸಮಯದಲ್ಲೂ ಕೂಡ ಸೌರ ಕನ್ನಡಕದ ಮೂಲಕವೇ ಸೂರ್ಯ ಗ್ರಹಣವನ್ನು ನೋಡಬೇಕು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಬಳಸಿದರೆ, ಅವುಗಳಿಗೂ ಸೂಕ್ತವಾದ ಸೌರ ಶೋಧಕ (Sun Filters) ಅಳವಡಿಸಿಯೇ ನೋಡಬೇಕು. ಆದರೆ, ಚಂದ್ರಗ್ರಹಣ ಇದಕ್ಕೆ ವ್ಯತಿರಿಕ್ತವಾದದ್ದು. ಎಲ್ಲಾ ವಿಧದ ಚಂದ್ರ ಗ್ರಹಣಗಳನ್ನು ಬರಿಗಣ್ಣಿನಿಂದಲೇ ನೋಡಬಹುದು. ಕೆಲವು ಸಮಯಗಳಲ್ಲಿ ಹುಣ್ಣಿಮೆಯ ಚಂದ್ರ ಪ್ರಕಾಶಮಾನವಾಗಿ ಇರುವುದರಿಂದ ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳಲ್ಲಿ ನೋಡಬೇಕಾದರೆ ಚಂದ್ರ ಶೋಧಕಗಳನ್ನು (Moon Filters) ಬಳಸುತ್ತಾರೆ.

ಈ ತಿಂಗಳ ನವೆಂಬರ್ 19ರಂದು ಹುಣ್ಣಿಮೆ. ಅಂದು ಆಗಸದಲ್ಲಿ ಭಾಗಶಃ ಚಂದ್ರ ಗ್ರಹಣ (Partial Lunar Eclipse) ಗೋಚರಿಸಲಿದೆ. ಈ ಗ್ರಹಣವನ್ನು ಅಮೆರಿಕಾ, ಯುರೋಪ್, ಪೂರ್ವ ಎಷ್ಯಾ ಹಾಗೂ ಆಸ್ಟ್ರೇಲಿಯಾ ಖಂಡಗಳಲ್ಲಿ ನೋಡಬಹುದಾಗಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಂದ್ರ ಹುಟ್ಟುವಾಗ ಈ ಗ್ರಹಣವನ್ನು ನೋಡಬಹುದಾಗಿರುತ್ತದೆ. ದಕ್ಷಿಣ ಭಾರತದಿಂದ ಈ ಗ್ರಹಣ ಗೋಚರಿಸುವುದಿಲ್ಲ. ಈ ಗ್ರಹಣದ ವಿಶೇಷ ಎಂದರೆ ಇದು ಮುಂದಿನ ಸುಮಾರು ಐದು ಶತಮಾನಗಳಲ್ಲಿ ನಡೆಯಬಹುದಾದ ಭಾಗಶಃ ಚಂದ್ರಗ್ರಹಣಗಳಲ್ಲಿಯೇ ಅತ್ಯಂತ ದೀರ್ಘವಾದದ್ದು. ಈ ಕಾರಣದಿಂದು ಈ ಭಾಗಶಃ ಚಂದ್ರ ಗ್ರಹಣ ಹೆಚ್ಚು ಸುದ್ದಿಯಲ್ಲಿದೆ. ಭಾಗಶಃ ಏಕೆಂದರೆ, ಚಂದ್ರ ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಶೇ.97 ಭಾಗದಲ್ಲಿ ಬೀಳುತ್ತಿರುತ್ತದೆ. ಶೇ. 100 ಭಾಗದಲ್ಲಿ ಬಿದ್ದಿದ್ದರೆ ಅದು ಪೂರ್ಣಚಂದ್ರ ಗ್ರಹಣವಾಗುತ್ತಿತ್ತು.

1451ರಿಂದ 2650ರವರೆಗೆ ಗೋಚರಿಸಿರುವ/ಗೋಚರಿಸಲಿರುವ ದೀರ್ಘವಾದ ಭಾಗಶಃ ಚಂದ್ರ ಗ್ರಹಣಗಳನ್ನು, ಅವುಗಳ ಅವಧಿಗೆ ಅನುಸಾರವಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ.

1. 19.11.2021- 6 ಗಂಟೆ 2 ನಿಮಿಷ
2. 30.11.2039- 6 ಗಂಟೆ 0 ನಿಮಿಷ
3. 11.12.2057- 5 ಗಂಟೆ 59 ನಿಮಿಷ
4. 22.12.2075- 5 ಗಂಟೆ 58 ನಿಮಿಷ
5. 9.10.2489- 6 ಗಂಟೆ 0 ನಿಮಿಷ

ಮೇಲಿನ ಪಟ್ಟಿಗಳಲ್ಲಿ ನವೆಂಬರ್ 2021ರ ಭಾಗಶಃ ಚಂದ್ರ ಗ್ರಹಣ ಐದು ಶತಮಾನಗಳಲ್ಲಿಯೇ ದೀರ್ಘವಾದದ್ದು ಎಂಬುವುದು ತಿಳಿಯುತ್ತದೆ. ಈ ಹಿಂದೆ ಅಂದರೆ 2003ರ ನವೆಂಬರ್ ೯ರಂದು ನಡೆದ ಚಂದ್ರ ಗ್ರಹಣದ ಅವಧಿ 6 ಗಂಟೆ 3 ನಿಮಿಷಗಳಷ್ಟಿತ್ತು. ಆದರೆ, ಅದು ಭಾಗಶಃ ಚಂದ್ರ ಗ್ರಹಣವಾಗಿರದೆ, ಪೂರ್ಣ ಚಂದ್ರ ಗ್ರಹಣವಾಗಿತ್ತು.
ಈ ಕಾರಣಗಳಿಂದ ನವೆಂಬರ್ 19, 2021ರ ಭಾಗಶಃ ಚಂದ್ರ ಗ್ರಹಣ 15ನೇ ಶತಮಾನದಿಂದಲೂ ನಡೆದಿರುವ ಬಾಗಶಃ ಚಂದ್ರ ಗ್ರಹಣದಲ್ಲಿಯೇ ಅತ್ಯಂತ ದೀರ್ಘವಾದದ್ದು. ಇಂತಹದೇ ದೀರ್ಘವಾದ ಭಾಗಶಃ ಚಂದ್ರ ಗ್ರಹಣ ಮತ್ತೊಮ್ಮೆ ನಡೆಯವುದು ಫೆಬ್ರವರಿ 8, 2669ರಲ್ಲಿ!


ಇದನ್ನೂ ಓದಿ: ಬೆಳ್ಳಿಚುಕ್ಕಿ; ವಿಶ್ವದ ಪ್ರಥಮ ಬೆಳಕು – CMBR

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...