Homeನಿಜವೋ ಸುಳ್ಳೋವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

- Advertisement -
- Advertisement -

ದಿ ಕ್ವಿಂಟ್ ಪೋರ್ಟಲ್‍ನವರು ಮೊದಲ ನಾಲ್ಕು ಹಂತಗಳಲ್ಲಿ ನಡೆದ ಮತದಾನ ಪ್ರಮಾಣ ಮತ್ತು ಏಣಿಕೆಯಾದ ಮತಗಳ ಸಂಖ್ಯೆಯನ್ನು ಕೂಲಂಕುಶವಾಗಿ ಪರಿಗಣಿಸಿದಾಗ ದಿಗ್ಭ್ರಮೆಗೊಳಿಸುವ ವಿಚಾರ ಹೊರಬಂದಿದೆ. 373 ಕ್ಷೇತ್ರಗಳಲ್ಲಿ ವೋಟ್ ಆದ ಮತಗಳಿಗೂ, ಎಣಿಕೆ ಆದ ಮತಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೆ ಇಲ್ಲಿವರೆಗೆ ಈ ಕುರಿತು ಸ್ಪಷ್ಟನೆ ನೀಡದ ಚುನಾವಣಾ ಆಯೋಗ, ತನ್ನ ವೆಬ್‍ಸೈಟಿನಿಂದ ಮಾಹಿತಿ-ಅಂಕಿಅಂಶಗಳನ್ನೇ ತೆಗೆದು ಹಾಕುವ ದುಸ್ಸಾಹಸ ಮಾಡುವ ಮೂಲಕ ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ…..

ಚುನಾವಣಾ ಅಯೋಗವೇ ಅಧಿಕೃತವಾಗಿ ಸಾರ್ವಜನಿಕರಿಗೆಂದೇ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದ ಎರಡು ಸೆಟ್ ಅಂಕಿ-ಸಂಖ್ಯೆಗಳನ್ನು ತೆಗೆದುಕೊಂಡು ಈ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿದೆ. ಮೊದಲ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳಲ್ಲಿ ಜನರು ವೋಟ್ ಮಾಡಿದ್ದ ಮತಗಳು ಮತ್ತು ಮೇ 23ರಂದು ಕೌಂಟ್ ಆದ ಮತಗಳಲ್ಲಿ ಸಾಕಷ್ಟು ವ್ಯತ್ಯಾಸ ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದೆ.

ತಮಿಳುನಾಡಿನ ಕಂಚೀಪುರಂ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 12,14,036 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,32,417 ಮತಗಳು! ಈ ಹೆಚ್ಚುವರಿ 18,331 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಧರ್ಮಪುರಿ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 11,94, 440 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,12,311 ಮತಗಳು! ಈ ಹೆಚ್ಚುವರಿ 17,871 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಪೆರಂಬದೂರು ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 13,88,666 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 14,03,178 ಮತಗಳು! ಈ ಹೆಚ್ಚುವರಿ 14,512 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಇವು ಮೊದಲ ಹಂತದಲ್ಲಿ ನಡೆದ 373 ಕೇತ್ರಗಳಲ್ಲಿ ಅತಿ ಹೆಚ್ಚು ಪ್ರಮಾಣದ ವ್ಯತ್ಯಾಸ ತೋರಿಸಿದ 4 ಕ್ಷೇತ್ರಗಳು. ಹೀಗೇ ಇನ್ನು 220 ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ‘ಉದ್ಭವಿಸಿದರೆ’, ಉಳಿದ ಕ್ಷೇತ್ರಗಳಲ್ಲಿ ಅವು ವೋಟ್ ಆಗಿದ್ದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿವೆ!

ಆಯೋಗದ ವೆಬ್‍ಸೈಟಿನಿಂದ ‘ಡೇಟಾ’ ಮಾಯ!

ಚುನಾವಣಾ ಆಯೋಗವು ಮೊದಲ ನಾಲ್ಕು ಹಂತಗಳ ಡೇಟಾವನ್ನು ಪ್ರಕಟಿಸಿ, ಇವು ಪರಿಪೂರ್ಣ ಅಂಕಿಅಂಶಗಳು ಎಂದು ಸಾರಿತ್ತು. ಹಾಗಾಗಿ ಕ್ವಿಂಟ್ ಪೋರ್ಟಲ್ ಈ ಡೇಟಾದ ಆಧಾರದಲ್ಲೇ ಪರೀಕ್ಷೆ ನಡೆಸಿತು. ಯಾವಾಗ ದೊಡ್ಡ ವ್ಯತ್ಯಾಸಗಳು ಕಂಡವೋ, ಕ್ವಿಂಟ್ ಈ ಕುರಿತಾಗಿ ಆಯೋಗವನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸದ ಆಯೋಗವು, ತನ್ನ ವೆಬ್‍ಸೈಟಿನಿಂದ ಈ ಎಲ್ಲ ಅಂಕಿಅಂಶಗಳನ್ನು ತೆಗೆದು ಹಾಕುವ ಮೂಲಕ ಜನರ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕ್ವಿಂಟ್ ತಾನು ಆಯೋಗದ ವೆಬ್‍ಸೈಟಿನಿಂದ ಡೌನ್‍ಲೋಡ್ ಮಾಡಿದ ಅಂಕಿಅಂಶಗಳು ಮತ್ತು ಪತ್ತೆ ಮಾಡಿದ ವ್ಯತ್ಯಾಸಗಳ ಕಾಪಿಗಳನ್ನು ಮೇಲ್ ಮೂಲಕ ಇನ್ನೊಮ್ಮೆ ಆಯೋಗಕ್ಕೆ ಕಳಿಸಿತು. ಈವರೆಗೂ ಆಯೋಗದಿಂದ ಉತ್ತರವೇ ಇಲ್ಲ!

ಮೇ 23ರ ಚುನಾವಣೆ ಮುಗಿದು 6-7 ದಿನಗಳಾದರೂ (ಮೇ 27ರಂದು) ಉಳಿದೆಲ್ಲ ಕ್ಷೇತ್ರಗಳ ವೋಟ್ ಆದ ಡೇಟಾವನ್ನು ಕಂಪೈಲ್ ಮಾಡಲಾಗಿಲ್ಲ ಎಂಬ ಸಬೂಬನ್ನೂ ಆಯೋಗ ನೀಡಿದೆ. ಯಾಕೆ ಸಂಪೂರ್ಣ ಮತ ಎಣಿಕೆ ಮುಗಿದ ಏಳು ದಿನವಾದರೂ ಡೇಟಾವನ್ನು ಕಂಪೈಲ್ ಮಾಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಈ ಕುರಿತಂತೆ ಕ್ವಿಂಟ್ ಜೊತೆ ಮಾತಾಡಿರುವ ಮಾಜಿ ಚುನಾವಣಾ ಆಯುಕ್ತ ರಾವತ್ ಅವರು. ‘ಇದೊಂದು ಗಂಭೀರ ವಿಷಯ. ನಾನು ಆಯುಕ್ತನಾಗಿದ್ದಾಗ ಇಂಥದ್ದು ಎಂದೂ ಸಂಭವಿಸರಲೇ ಇಲ್ಲ. ಆಯೋಗ ಇದಕ್ಕೆ ಸ್ಪಷ್ಟನೆ ನೀಡಲೇಬೇಕು’ ಎಂದು ಒತ್ತಾಯಿಸಿದ್ದಾರೆ. ಇತರ ಮಾಜಿ ಆಯುಕ್ತರಾದ ಗೋಪಾಲಸ್ವಾಮಿ, ಖುರೇಶಿ ಮತ್ತು ಬ್ರಹ್ಮಾ ಅವರು ಕೂಡ ಆಯೋಗ ಇದಕ್ಕೆಲ್ಲ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಚಲಾವಣೆಯಾದ ಮತಗಳಿಗಿಂತ ಕೌಂಟ್ ಆದ ಮತಗಳೆ ಹೆಚ್ಚು 

ಇಲ್ಲಿ ಆಯೋಗ ಈ ನಾಲ್ಕು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವ ಹೊಣೆ ಹೊರಬೇಕು:

ಮೊದಲ 4 ಹಂತದ ಮತದಾನದಲ್ಲಿ ಮತದಾನವಾದ ಅಂತಿಮ ಅಂಕಿಅಂಶಗಳು ಎಂದು ಆಯೋಗ ತನ್ನ ವೆಬ್‍ಸೈಟಿನಲ್ಲಿ ಅಪ್‍ಲೋಡ್ ಮಾಡಿದ್ದು ಏಕೆ?
ದಿಡೀರ್ ಎಂದು ಈ ಡೇಟಾವನ್ನು ವೆಬ್‍ಸೈಟಿನಿಂದ ತೆಗೆದದ್ದು ಏಕೆ?
ಈ ಗಂಭಿರ ವ್ಯತ್ಯಾಸಗಳ ಕುರಿತು ಆಯೋಗ ಏಕೆ ಉತ್ತರಿಸುತ್ತಿಲ್ಲ? ಅದಕ್ಕೆ ಇದರಲ್ಲಿ ಮುಚ್ಚಿಡುವಂತಾದ್ದು ಏನಾದರೂ ಇದೆಯೇ?
ಈ ದೊಡ್ಡ ವ್ಯತ್ಯಾಸಗಳು ಕಂಡುಬರಲು ಕಾರಣವೇನು? ಇವಿಎಂಗಳು ದೋಷಪೂರಿತವಾಗಿವೆಯೇ?

(ಆಧಾರ: ದಿ ಕ್ವಿಂಟ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...