Homeಚಳವಳಿಹಂಸಲೇಖರ ಸಾಂಸ್ಕೃತಿಕ ಪ್ರತಿರೋಧಕ್ಕೆ ಸ್ವಾಗತಾರ್ಹ ಜನಸ್ಪಂದನೆ

ಹಂಸಲೇಖರ ಸಾಂಸ್ಕೃತಿಕ ಪ್ರತಿರೋಧಕ್ಕೆ ಸ್ವಾಗತಾರ್ಹ ಜನಸ್ಪಂದನೆ

ಹಿಂಸಾ ಪ್ರವೃತ್ತಿ, ಒಡೆದು ಆಳುವ ನೀತಿ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ಹಂಸಲೇಖ ಅವರು, “ನೇಯುವ, ಬೆಸೆಯುವ” ಪರಿಭಾಷೆಯನ್ನು ಬಳಸುತ್ತಿದ್ದಾರೆ..

- Advertisement -
- Advertisement -

ಯುಗಧರ್ಮದ ಸಮಸ್ಯೆಗಳಿಗೆ ಸ್ಪಂದಿಸುವ, ಸಂವಾದಕ್ಕೆ ತೆರೆದುಕೊಂಡು, ಅದನ್ನು ಬೆಳೆಸಿ ತನ್ನ ಸಹನಾಗರಿಕರ ಜಾಗೃತಿಗಾಗಿ ತಮ್ಮ ಕಲೆಯನ್ನು ದುಡಿಸಿಕೊಳ್ಫ್ಳುವ ಕಲಾವಿದರು ವಿರಳವಾಗುತ್ತಿದ್ದರೂ ಅಂತವರು ನಮ್ಮ ನಡುವೆ ಉಳಿದಿರುವುದಕ್ಕೆ ಹಲವು ಉದಾಹಣೆಗಳಿವೆ. ಅಂತಹ ಕಲಾವಿದರ ಪ್ರತಿಭೆಯನ್ನು ಜನರು ಗೌರವಿಸುವ ಕಾರಣ್ಕಕ್ಕಾಗಿಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ, ಫ್ಯಾಸಿಸ್ಟ್ ಶಕ್ತಿಗಳು ಅಂತಹ ಕಲಾವಿದರಿಗೆ ನಿರ್ಬಂಧಗಳನ್ನು ಹೇರುವ ಮಾರ್ಗಗಳನ್ನು ಹುಡುಕುತ್ತಿರುತ್ತವೆ. ಹಾಸ್ಯ ಕಲಾವಿದರಾದ ಮನಾವರ್ ಫಾರೂಖಿ, ಕುನಾಲ್ ಕಾಮ್ರಾ ಅವರ ಕಾರ್ಯಕ್ರಮಗಳನ್ನು ರದ್ದು ಮಾಡುವುದರ ಹಿಂದೆ ಕಲಾವಿದನ ಮೇಲೆ ಪ್ರಭುತ್ವಕ್ಕಿರುವ ಭಯವನ್ನು ಕಾಣಬಹುದು. ಇಂತಹ ಸಂದರ್ಭಗಳಲ್ಲಿ ಬಹುಸಂಖ್ಯೆಯ ಜನರು ಕಲಾವಿದನ ಬೆನ್ನಿಗೆ ನಿಂತರೆ, ಆತನ ಪ್ರತಿರೋಧದ ನೆಲೆಗಳು ಮತ್ತಷ್ಟು ದಿಟ್ಟವಾಗಿ ಮೂಡಿಬರುತ್ತವೆ. ನಾಡಿನ ಪ್ರಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿಚಾರದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದೆ.

ಹಂಸಲೇಖ ಅವರು ಮೈಸೂರಿನಲ್ಲಿ ಮಾತನಾಡುತ್ತಾ ಮಾಂಸಾಹಾರದ ಕುರಿತು, ಪೇಜಾವರ ಮಠದ ದಿವಂಗತ ವಿಶ್ವೇಶ ತೀರ್ಥ ಸ್ವಾಮೀಜಿಯವರ ಕುರಿತು ಆಡಿದ ಮಾತುಗಳು ವಿವಾದಕ್ಕೆ ಕಾರಣವಾದವು. “ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮವು ಮೇಲ್ಜಾತಿಗಳ ದೊಡ್ಡಸ್ತಿಕೆ ಪ್ರದರ್ಶನ ಆಗಬಾರದು” ಎಂಬುದು ಹಂಸಲೇಖ ಅವರ ಮಾತಿನ ಆಶಯವಾಗಿತ್ತು. “ದಲಿತರ ಮನೆಗೆ ಬಲಿತರು ಬರುವುದಲ್ಲ. ಬಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಅದು ನಿಜವಾದ ಸಮಾನತೆ” ಎಂದಿದ್ದ ಹಂಸಲೇಖರು ಪೇಜಾವರ ಶ್ರೀಗಳು ದಲಿತ ಕೇರಿಗಳಿಗೆ ಭೇಟಿ ನೀಡುತ್ತಿದ್ದನ್ನು ಉಲ್ಲೇಖಿಸಿದ್ದರು. ಈ ಕುರಿತು ಮಾತನಾಡುತ್ತಾ ಪ್ರಾಸಂಗಿಕವಾಗಿ, “ದಲಿತರು ಕೊಡುವ ಆಹಾರವನ್ನು ತಿನ್ನುತ್ತಾರಾ, ಕುರಿ ಕೋಳಿ ರಕ್ತವನ್ನು ಫ್ರೈ ಮಾಡಿಕೊಟ್ಟರೆ ತಿನ್ನುತ್ತಾರಾ?” ಎಂದು ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಯಿತು. ಸ್ವಾಮೀಜಿಯವರಿಗೆ ಅವಮಾನಿಸಲಾಗಿದೆ ಎಂದು ಬಿಂಬಿಸಲಾಯಿತು. ವಿವಾದ ಭುಗಿಲೆದ್ದ ಬಳಿಕ ಹಂಸಲೇಖ ಅವರು ಕ್ಷಮೆಯನ್ನೂ ಯಾಚಿಸಿದರು. ಈ ನಡುವೆ ಮಾಂಸಾಹಾರದ ಕುರಿತು ಮಹಿಳೆಯೊಬ್ಬರು ತೋರಿದ ಅಸಹನೆ, ‘ಮಾಂಸಾಹಾರ-ಸಸ್ಯಾಹಾರ’ದ ಚರ್ಚೆಗೆ ನಾಂದಿಯಾಯಿತು. ಹಂಸಲೇಖ ಅವರು ಕ್ಷಮೆಯಾಚಿಸಿದ ಬಳಿಕವೂ ಅವರನ್ನು ಪೀಡಿಸುವ ಕೆಲಸ ಮುಂದುವರಿಯಿತು. “ಬೃಂದಾವನಕ್ಕೆ ಬಂದು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದು, ಬ್ರಾಹ್ಮಣ್ಯದ, ಒಂದು ವರ್ಗದ ಸವರ್ಣೀಯರ ಅಹಂಕಾರದ ಪ್ರತಿರೂಪದಂತೆ ನಾಡಿನ ಜನತೆಗೆ ಭಾಸವಾಯಿತು. ದೊಡ್ಡ ಮಟ್ಟದಲ್ಲಿ ಜನರು ಹಂಸಲೇಖರ ಪರ ನಿಂತರು. ಈ ನಡುವೆ ಪ್ರಕರಣವೂ ದಾಖಲಾಗಿ, ಹಂಸಲೇಖರು ಬಸವನಗುಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಹೇಳಿಕೆಯನ್ನು ನೀಡಿಬಂದರು. ನವೆಂಬರ್ 26ರ ಸಂವಿಧಾನ ದಿನದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಸೇರಿದ ಜನರು ಹಂಸಲೇಖರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು. ಬಸವನಗುಡಿ ಪೊಲೀಸರ ವರ್ತನೆಯನ್ನು ಖಂಡಿಸಿದರು.

ಪ್ರಕರಣ ಇಷ್ಟು ಚರ್ಚೆಯಾದ ನಂತರದಲ್ಲಿ ಹಂಸಲೇಖ ಅವರು ನೀಡಿರುತ್ತಿರುವ ಪ್ರತಿಮಾತ್ಮಕ ಪ್ರತಿಕ್ರಿಯೆಗಳು ಕೋಮು ವಿಷಮತೆ ಬಿತ್ತುವ ರಾಜಕಾರಣವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ಸುಳ್ಳಲ್ಲ. “ಸುಧಾರಣೆಯ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ ಅವರು ‘ಹಿಟ್ ರನ್ ಕೇಸ್’ ಆಗಲಿಲ್ಲ. ಸಂವಿಧಾನ ಆಶಯಗಳನ್ನು ಸ್ಮರಿಸಿದರು. “ಪೂಜ್ಯ ಕನ್ನಡಿಗರೇ, ನಿಮ್ಮ ಪ್ರೀತಿ ನನಗೆ ತಲುಪಿದೆ” ಎಂದು ಪತ್ರ ಬರೆದರು. ಪ್ರೀತಿ ಆವೇಶಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು. ತನ್ನ ಬೆನ್ನ ಹಿಂದೆ ನಿಂತ ಬಹುದೊಡ್ಡ ಜನಸಮೂಹವನ್ನು ನೆನೆದರು. ಮುಂದುವರಿದ ಹಂಸಲೇಖರು, ಸಂವಿಧಾನ ಗೀತೆಯನ್ನು ಹಂಚಿಕೊಂಡರು.

“ನಾನು, ನೀನು, ನಮಗಾಗಿರೋದೇ ಕಾನೂನು,
ನಾವೂನು, ನೀವೂನು ಕಾನೂನಡಿಯಲಿ ಬಾಳೋಣು”
ಬಾಳೋಣು, ಬೆಳೆಯೋಣು, ಬಾಂಧವ್ಯವನೇ ಕಣ್ಣೋಣು
ಜೀವನ ವಿಧಾನಯಾನ, ಸಮತಾ ಪ್ರಧಾನ ಗಾನ
ಬಹುತ್‌ ಭಾರತದ ಬೃಹತ್ ಸಂವಿಧಾನ
ಓ ಬಡವರ ಗೀತೆ, ಓ ಬಹುಜನ ಮಾತೆ
ಓ ಬಡವರ ಗೀತೆ, ಓ ಬಹುಜನ ಮಾತೆ
ಅಕ್ಷರ ರೂಪದ ಶಾಂತಿಯ ದನಿಯ
ಪ್ರಜಾಪ್ರಭುತ್ವದ ಇನ್‌ಸ್ಟಿಟ್ಯೂಷನ್‌
“ವಂದೇ ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”
“ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”
“ವಂದೇ ಇಂಡಿಯನ್‌ ಕಾನ್‌ಸ್ಟಿಟ್ಯೂಷನ್‌”
– ಎಂದು ಹಂಸಲೇಖರು ಬರೆದರು. ವಿವಾದದ ಬಳಿಕ ಸರಿಗಮಪ ಕಾರ್ಯಕ್ರಮಕ್ಕೆ ತೆರಳಿದ ಅವರು, ಶಾಂತಿ, ಸಹಬಾಳ್ವೆ, ಸಹೋದರತೆ, ಪ್ರೀತಿಯ ಸಂದೇಶಗಳನ್ನು ಸಾರಿದ ಬೌದ್ಧತ್ವವನ್ನು ತಮ್ಮ ವಸ್ತ್ರಾಲಂಕಾರದಲ್ಲಿ ಢಾಳಾಗಿ ತೋರಿಸಿಕೊಂಡರು.

ಲೇಖಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ, “ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿ ಉಳಿಸೋಣ” ಎಂದು ಪುನರುಚ್ಚರಿಸಿದರು. ಹಂಸಲೇಖರ ಜೊತೆ ನಾಡಿನ ಜನರು ನಿಂತು, ಒಬ್ಬ ಕಲಾವಿದನ ನೋವಿಗೆ ಸ್ಪಂದಿಸಿದ್ದೇ ಇದಕ್ಕೆಲ್ಲ ಕಾರಣ.

ಹಂಸಲೇಖರು ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿಯ ಬಗ್ಗೆ ಮಾತನಾಡುತ್ತಾರೆ. ಬುದ್ಧ, ಬಸವ, ಭೀಮ ಅನುಯಾಯಿಗಳ ಜೊತೆಯಲ್ಲಿ, ಬುದ್ಧ ಮತ್ತು ಅಂಬೇಡ್ಕರ್‌ ಪ್ರತಿಮೆಯ ಮುಂದೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರ ರಚನಾತ್ಮಕ ಸಾಂಸ್ಕೃತಿಕ ಪ್ರತಿರೋಧವು ಆಪ್ತವಾಗುತ್ತದೆ. ಹಿಂಸೆಯನ್ನು ಎಂದಿಗೂ ಪ್ರಚೋದಿಸದ ಅವರು ‘ನೆಲದ ಪದ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ನಾವು ನೇಯುವ ಕೆಲಸ ಮಾಡೋಣ. ಹರಿಯುವುದು ಬೇಡ. ಮನಸ್ಸುಗಳನ್ನು, ಹೃದಯಗಳನ್ನು ಬೆಸೆಯೋಣ” ಎಂದು ನುಡಿದಿದ್ದಾರೆ. ರಾಷ್ಟ್ರಪಿತ ಗಾಂಧೀಜಿಯವರನ್ನು ‘ಹರಾಮಿ’ ಎನ್ನುವ, ಅಂತಹ ಹೇಳಿಕೆಗಳಿಗೆ ಶಿಳ್ಳೆ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಹಿಂಸಾ ಪ್ರವೃತ್ತಿ, ಒಡೆದು ಆಳುವ ನೀತಿ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ಹಂಸಲೇಖ ಅವರು, “ನೇಯುವ, ಬೆಸೆಯುವ” ಪರಿಭಾಷೆಯನ್ನು ಬಳಸುತ್ತಿದ್ದಾರೆ ಎಂಬುದು ಮುಖ್ಯ. ಸಂವಿಧಾನ ವಿರೋಧಿ ಕೃತ್ಯಗಳನ್ನು ಪ್ರಭುತ್ವವೇ ಸಮರ್ಥಿಸುವ ಕಾಲಘಟ್ಟದಲ್ಲಿ ಈ ಮಾತುಗಳನ್ನು ಹಂಸಲೇಖ ಅವರು ಆಡುತ್ತಿದ್ದಾರೆಂಬುದು ಮುಖ್ಯ.

ಹಿಂಸೆಯನ್ನು ಅಹಿಂಸೆಯಿಂದಷ್ಟೇ ಮಣಿಸಬಹುದು ಎಂಬ ಬಹುದೊಡ್ಡ ಸಂದೇಶವನ್ನು ಸಾರಿದ ಗಾಂಧಿ ಮಾರ್ಗವನ್ನು ತುಳಿದು ರೈತರು ಗೆದ್ದಂತೆ, ‘ನೇಯುವ’ ಕೆಲಸದಿಂದ ಜನಮಾನಸವನ್ನು ಹಂಸಲೇಖರು ಗೆಲ್ಲುತ್ತಿದ್ದಾರೆ. ಸಾಂಸ್ಕೃತಿಕ ಪ್ರತಿರೋಧವನ್ನು ಸೃಜನಾತ್ಮಕವಾಗಿ ದಾಖಸುತ್ತಿದ್ದಾರೆ. ಹಂಸಲೇಖ ಅವರು ಒಂದು ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಅದೇ ಮಾರ್ಗದಲ್ಲಿ ಕನ್ನಡ ಚಿತ್ರರಂಗದ ಸಂವೇದನಾಶೀಲ ಮನಸ್ಸುಗಳೂ ಚಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ.


ಇದನ್ನೂ ಓದಿರಿ: ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...