Homeಚಳವಳಿಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

- Advertisement -
- Advertisement -

ಸಂಕ್ರಮಣಕ್ಕೆ ಮೂರು ದಿನದ ಮೊದಲು ಸಾಹಿತ್ಯ ಸಂಕ್ರಮಣ ಸರ್ಕಸ್ ಡೇರೆಯ ಊರುಗೋಲು ಕುಸಿದಿದೆ. ಈ ಸರ್ಕಸ್ ಡೇರೆಯಲ್ಲಿ ಹಲವು ವೇಷಗಳು ಪಾತ್ರಗಳಾಗಿ ಜೀವತಳೆದು ಕನ್ನಡ ಸಾಹಿತ್ಯ ಲೋಕದೊಳಗೆ ಲವಲವಿಕೆ ಸೃಷ್ಟಿಸಿದ್ದವು. ಕಾವ್ಯ, ನಾಟಕ, ಲಘುಧಾಟಿಯ ಸ್ವಗತಗಳು, ಹೋರಾಟದ ಹೆಜ್ಜೆಗಳು, ಆಗೀಗ ಕಚಗುಳಿ ಕೊಡುವ ಮೊನಚು ಮಾತಿನ ವ್ಯಂಗ್ಯ… ರಾಜಕೀಯ ಬದ್ಧತೆಯ ಸ್ಪಷ್ಟ ಕಲ್ಪನೆ ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸೆಳೆತಗಳಾಗಿದ್ದವು. ಇದೆಲ್ಲದರ ಕೇಂದ್ರವೃತ್ತದ ಊರುಗೋಲು ಚಂಪಾ ಆಗಿದ್ದರು. ಭಾಷೆಯ ಸೊಗಸು ಆಡುವುದರಲ್ಲಷ್ಟೆ ಅಲ್ಲ ಬರೆಯುವುದರಲ್ಲೂ ಇದೆ ಎಂಬುದನ್ನ ಸಾಬೀತುಪಡಿಸಿದವರು.

ದೇಶ-ವಿದೇಶ ಸುತ್ತಿ ಬಂದರೂ, ಬೆಂಗಳೂರು ವಾಸದಲ್ಲಿದ್ದರು ಅವರ ಬಾಯೊಳಗೆ, ಬರಹದೊಳಗೆ ಹಾವೇರಿ ಹತ್ತಿಮತ್ತೂರಿನ ತಿರುಳ್ನುಡಿಯ ತೀಕ್ಷಣತೆಯನ್ನೇ ಉಳಿಸಿಕೊಂಡಿದ್ದರು. ಭಾಷೆಯನ್ನ ಕಾವ್ಯದ ಹಾಗೆ ಆಡುತ್ತಿದ್ದ ಚಂಪಾ ಅವರು ತಮ್ಮ ನಾಟಕ-ಕಾವ್ಯಗಳಲ್ಲಿ ಭಾಷೆಯ ವ್ಯಂಗ್ಯ, ದ್ವನಿ-ಕಾಕುಗಳನ್ನು ಸೊಗಸಾಗಿ ಹೆಣೆಯುತ್ತಿದ್ದರು. ಇಂದಿಗೂ ಅವರ ನಾಟಕಗಳ ದೊಡ್ಡ ಶಕ್ತಿ ಭಾಷೆಯೇ ಆಗಿದೆ. ಬೇರೆ ನಾಟಕಕಾರರು ಜಾನಪದ-ಪುರಾಣ-ಮಹಾಕಾವ್ಯಗಳೊಳಗೆ ಹೊಕ್ಕು ತಮ್ಮ ಅಭಿವ್ಯಕ್ತಿಗೆ ಪಾತ್ರಗಳನ್ನು, ಸನ್ನಿವೇಶ, ಸಂಗತಿ-ಸಂದರ್ಭಗಳನ್ನು ಹೆಕ್ಕಿ ತಂದರೆ ಚಂಪಾ ಮಾತ್ರ ಭಾಷೆಯೊಳಗೆ ಪಾತ್ರ-ನಾಟಕೀಯತೆಯನ್ನು ಹುಡುಕುತ್ತಿದ್ದರು. ಗೋಕರ್ಣದ ಗೌಡಶ್ಯಾನಿ ನಾಟಕವೊಂದನ್ನು ಹೊರತುಪಡಿಸಿ ಉಳಿದೆಲ್ಲ ನಾಟಕಗಳ ಸಂವೇದನೆ ಇರೋದೆ ಚಂಪಾ ಅವರ ಕ್ರಿಯಾಶೀಲತೆಗೆ ಕೈಗನ್ನಡಿ.

‘ಸರ್ ನಾಟಕಕಾರರಾಗಿ ನಿಮ್ಮ ಭಾಷೆ ಮತ್ತು ಅದರೊಳಗಿನ ನಾಟಕೀಯತೆ ನನಗೆ ಇಷ್ಟ’ ಎಂದೊಮ್ಮೆ ಅವರಿಗೆ ಹೇಳಿದಾಗ ನಗುತ್ತಲೇ…. ‘ನೀವು ನಾಟಕದವರು ಭಾಳ ಡಿಸ್ಟನ್ಸ್ ಮಾಡತಿರೆಪಾ… ಕೊರಿಯಾಗಿ ಉಳಿಸೀರಿ’ ಅಂತ ತಮ್ಮ ಯಾವತ್ತಿನ ಧಾಟಿಯೊಳಗ ಹೇಳಿದಾಗ ಯಾಕೋ ರಂಗಭೂಮಿಯವರ ಮ್ಯಾಲ ಅತೃಪ್ತರಾಗಿದಾರೆ ಅನಿಸಿತ್ತು. ಅವರ ಕುಂಟಕುಂಟ ಕುರುವತ್ತಿ ನಾಟಕವು ಕರ್ನಾಟಕ ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗ ಕಂಡಿದೆ. ಅಪ್ಪ, ಕೊಡೆ, ಗುರ್ತಿನವರು, ಟಿಂಗರ ಬುಡ್ಡಣ್ಣ ನಾಟಕಗಳು ವಿಶಿಷ್ಟ ಶೈಲಿಯ ವಿನ್ಯಾಸ ಹೊಂದಿರುವ ನಾಟಕಗಳು. ಆದರೂ ಅವರು ತಮಗೆ ತಾವೇ ಕೊರಿ ಅಂದುಕೊಂಡದ್ದು ನನಗೆ ಯಾವತ್ತು ಕಾಡುತ್ತಿತ್ತು. ಫನ್ ಮಾಡುತ್ತಲೇ ಮಾತಿಗಾರಂಭಿಸಿ ಕಟ್ಟಕಡೆಯದ್ದೊಂದು ಕಡಕ್ ಫನ್ ಜೊತೆಗೆ ಮಾತು ಮುಗಿಸುತ್ತಿದ್ದ ಚಂಪಾ ಇಂದು ಎನ್ನುವುದನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿರುತ್ತಿತ್ತು.

ನನಗೆ ಯಾವತ್ತೂ ನಿಮ್ಮ ನೆನಪೇ ಭಾಷೆ. ಆ ಭಾಷೆಯ ಬಂಧುಗಳು ನಾವು. ಅದಕ್ಕೂ ಮಿಗಿಲು ನಿಮ್ಮ ಬಂಡಾಯ ಪ್ರವೃತ್ತಿ ನನ್ನಂಥ ಅನೇಕರಿಗೆ ಮಾದರಿ. ನೀವೇ ಬರೆದಿದ್ದೀರಿ ಸರ್
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.

ನಿಮಗೆ ಬುದ್ದ ಬಸವ ಬಾಬಾಸಾಹೇಬ ನಮನಗಳು ಸರ್…

  • ಮಹಾದೇವ ಹಡಪದ ನಟುವರ

(ರಂಗಕರ್ಮಿಗಳು, ಆಟ-ಮಾಟ ಸಾಂಸ್ಕೃತಿಕ ಪಥ ಎಂಬ ನಾಟಕ ತಂಡವನ್ನು ಹುಟ್ಟು ಹಾಕಿ ಸಕ್ರಿಯವಾಗಿದ್ದಾರೆ.)


ಇದನ್ನೂ ಓದಿ; ನುಡಿನಮನ: ಕಳಚಿತು ಜನಪರ ಚಳವಳಿಯ ಮತ್ತೊಂದು ಕೊಂಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...