Homeಚಳವಳಿಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

- Advertisement -
- Advertisement -

ಸಂಕ್ರಮಣಕ್ಕೆ ಮೂರು ದಿನದ ಮೊದಲು ಸಾಹಿತ್ಯ ಸಂಕ್ರಮಣ ಸರ್ಕಸ್ ಡೇರೆಯ ಊರುಗೋಲು ಕುಸಿದಿದೆ. ಈ ಸರ್ಕಸ್ ಡೇರೆಯಲ್ಲಿ ಹಲವು ವೇಷಗಳು ಪಾತ್ರಗಳಾಗಿ ಜೀವತಳೆದು ಕನ್ನಡ ಸಾಹಿತ್ಯ ಲೋಕದೊಳಗೆ ಲವಲವಿಕೆ ಸೃಷ್ಟಿಸಿದ್ದವು. ಕಾವ್ಯ, ನಾಟಕ, ಲಘುಧಾಟಿಯ ಸ್ವಗತಗಳು, ಹೋರಾಟದ ಹೆಜ್ಜೆಗಳು, ಆಗೀಗ ಕಚಗುಳಿ ಕೊಡುವ ಮೊನಚು ಮಾತಿನ ವ್ಯಂಗ್ಯ… ರಾಜಕೀಯ ಬದ್ಧತೆಯ ಸ್ಪಷ್ಟ ಕಲ್ಪನೆ ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸೆಳೆತಗಳಾಗಿದ್ದವು. ಇದೆಲ್ಲದರ ಕೇಂದ್ರವೃತ್ತದ ಊರುಗೋಲು ಚಂಪಾ ಆಗಿದ್ದರು. ಭಾಷೆಯ ಸೊಗಸು ಆಡುವುದರಲ್ಲಷ್ಟೆ ಅಲ್ಲ ಬರೆಯುವುದರಲ್ಲೂ ಇದೆ ಎಂಬುದನ್ನ ಸಾಬೀತುಪಡಿಸಿದವರು.

ದೇಶ-ವಿದೇಶ ಸುತ್ತಿ ಬಂದರೂ, ಬೆಂಗಳೂರು ವಾಸದಲ್ಲಿದ್ದರು ಅವರ ಬಾಯೊಳಗೆ, ಬರಹದೊಳಗೆ ಹಾವೇರಿ ಹತ್ತಿಮತ್ತೂರಿನ ತಿರುಳ್ನುಡಿಯ ತೀಕ್ಷಣತೆಯನ್ನೇ ಉಳಿಸಿಕೊಂಡಿದ್ದರು. ಭಾಷೆಯನ್ನ ಕಾವ್ಯದ ಹಾಗೆ ಆಡುತ್ತಿದ್ದ ಚಂಪಾ ಅವರು ತಮ್ಮ ನಾಟಕ-ಕಾವ್ಯಗಳಲ್ಲಿ ಭಾಷೆಯ ವ್ಯಂಗ್ಯ, ದ್ವನಿ-ಕಾಕುಗಳನ್ನು ಸೊಗಸಾಗಿ ಹೆಣೆಯುತ್ತಿದ್ದರು. ಇಂದಿಗೂ ಅವರ ನಾಟಕಗಳ ದೊಡ್ಡ ಶಕ್ತಿ ಭಾಷೆಯೇ ಆಗಿದೆ. ಬೇರೆ ನಾಟಕಕಾರರು ಜಾನಪದ-ಪುರಾಣ-ಮಹಾಕಾವ್ಯಗಳೊಳಗೆ ಹೊಕ್ಕು ತಮ್ಮ ಅಭಿವ್ಯಕ್ತಿಗೆ ಪಾತ್ರಗಳನ್ನು, ಸನ್ನಿವೇಶ, ಸಂಗತಿ-ಸಂದರ್ಭಗಳನ್ನು ಹೆಕ್ಕಿ ತಂದರೆ ಚಂಪಾ ಮಾತ್ರ ಭಾಷೆಯೊಳಗೆ ಪಾತ್ರ-ನಾಟಕೀಯತೆಯನ್ನು ಹುಡುಕುತ್ತಿದ್ದರು. ಗೋಕರ್ಣದ ಗೌಡಶ್ಯಾನಿ ನಾಟಕವೊಂದನ್ನು ಹೊರತುಪಡಿಸಿ ಉಳಿದೆಲ್ಲ ನಾಟಕಗಳ ಸಂವೇದನೆ ಇರೋದೆ ಚಂಪಾ ಅವರ ಕ್ರಿಯಾಶೀಲತೆಗೆ ಕೈಗನ್ನಡಿ.

‘ಸರ್ ನಾಟಕಕಾರರಾಗಿ ನಿಮ್ಮ ಭಾಷೆ ಮತ್ತು ಅದರೊಳಗಿನ ನಾಟಕೀಯತೆ ನನಗೆ ಇಷ್ಟ’ ಎಂದೊಮ್ಮೆ ಅವರಿಗೆ ಹೇಳಿದಾಗ ನಗುತ್ತಲೇ…. ‘ನೀವು ನಾಟಕದವರು ಭಾಳ ಡಿಸ್ಟನ್ಸ್ ಮಾಡತಿರೆಪಾ… ಕೊರಿಯಾಗಿ ಉಳಿಸೀರಿ’ ಅಂತ ತಮ್ಮ ಯಾವತ್ತಿನ ಧಾಟಿಯೊಳಗ ಹೇಳಿದಾಗ ಯಾಕೋ ರಂಗಭೂಮಿಯವರ ಮ್ಯಾಲ ಅತೃಪ್ತರಾಗಿದಾರೆ ಅನಿಸಿತ್ತು. ಅವರ ಕುಂಟಕುಂಟ ಕುರುವತ್ತಿ ನಾಟಕವು ಕರ್ನಾಟಕ ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗ ಕಂಡಿದೆ. ಅಪ್ಪ, ಕೊಡೆ, ಗುರ್ತಿನವರು, ಟಿಂಗರ ಬುಡ್ಡಣ್ಣ ನಾಟಕಗಳು ವಿಶಿಷ್ಟ ಶೈಲಿಯ ವಿನ್ಯಾಸ ಹೊಂದಿರುವ ನಾಟಕಗಳು. ಆದರೂ ಅವರು ತಮಗೆ ತಾವೇ ಕೊರಿ ಅಂದುಕೊಂಡದ್ದು ನನಗೆ ಯಾವತ್ತು ಕಾಡುತ್ತಿತ್ತು. ಫನ್ ಮಾಡುತ್ತಲೇ ಮಾತಿಗಾರಂಭಿಸಿ ಕಟ್ಟಕಡೆಯದ್ದೊಂದು ಕಡಕ್ ಫನ್ ಜೊತೆಗೆ ಮಾತು ಮುಗಿಸುತ್ತಿದ್ದ ಚಂಪಾ ಇಂದು ಎನ್ನುವುದನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿರುತ್ತಿತ್ತು.

ನನಗೆ ಯಾವತ್ತೂ ನಿಮ್ಮ ನೆನಪೇ ಭಾಷೆ. ಆ ಭಾಷೆಯ ಬಂಧುಗಳು ನಾವು. ಅದಕ್ಕೂ ಮಿಗಿಲು ನಿಮ್ಮ ಬಂಡಾಯ ಪ್ರವೃತ್ತಿ ನನ್ನಂಥ ಅನೇಕರಿಗೆ ಮಾದರಿ. ನೀವೇ ಬರೆದಿದ್ದೀರಿ ಸರ್
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.

ನಿಮಗೆ ಬುದ್ದ ಬಸವ ಬಾಬಾಸಾಹೇಬ ನಮನಗಳು ಸರ್…

  • ಮಹಾದೇವ ಹಡಪದ ನಟುವರ

(ರಂಗಕರ್ಮಿಗಳು, ಆಟ-ಮಾಟ ಸಾಂಸ್ಕೃತಿಕ ಪಥ ಎಂಬ ನಾಟಕ ತಂಡವನ್ನು ಹುಟ್ಟು ಹಾಕಿ ಸಕ್ರಿಯವಾಗಿದ್ದಾರೆ.)


ಇದನ್ನೂ ಓದಿ; ನುಡಿನಮನ: ಕಳಚಿತು ಜನಪರ ಚಳವಳಿಯ ಮತ್ತೊಂದು ಕೊಂಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...