Homeಚಳವಳಿಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

ಇಲ್ಲೇ ಇದ್ದೀರಿ ನಮ್ಮ ನೆನಪಿನ ಗುದ್ದಿನೊಳಗೆ: ಚಂಪಾರವರಿಗೆ ನುಡಿನಮನ

- Advertisement -
- Advertisement -

ಸಂಕ್ರಮಣಕ್ಕೆ ಮೂರು ದಿನದ ಮೊದಲು ಸಾಹಿತ್ಯ ಸಂಕ್ರಮಣ ಸರ್ಕಸ್ ಡೇರೆಯ ಊರುಗೋಲು ಕುಸಿದಿದೆ. ಈ ಸರ್ಕಸ್ ಡೇರೆಯಲ್ಲಿ ಹಲವು ವೇಷಗಳು ಪಾತ್ರಗಳಾಗಿ ಜೀವತಳೆದು ಕನ್ನಡ ಸಾಹಿತ್ಯ ಲೋಕದೊಳಗೆ ಲವಲವಿಕೆ ಸೃಷ್ಟಿಸಿದ್ದವು. ಕಾವ್ಯ, ನಾಟಕ, ಲಘುಧಾಟಿಯ ಸ್ವಗತಗಳು, ಹೋರಾಟದ ಹೆಜ್ಜೆಗಳು, ಆಗೀಗ ಕಚಗುಳಿ ಕೊಡುವ ಮೊನಚು ಮಾತಿನ ವ್ಯಂಗ್ಯ… ರಾಜಕೀಯ ಬದ್ಧತೆಯ ಸ್ಪಷ್ಟ ಕಲ್ಪನೆ ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸೆಳೆತಗಳಾಗಿದ್ದವು. ಇದೆಲ್ಲದರ ಕೇಂದ್ರವೃತ್ತದ ಊರುಗೋಲು ಚಂಪಾ ಆಗಿದ್ದರು. ಭಾಷೆಯ ಸೊಗಸು ಆಡುವುದರಲ್ಲಷ್ಟೆ ಅಲ್ಲ ಬರೆಯುವುದರಲ್ಲೂ ಇದೆ ಎಂಬುದನ್ನ ಸಾಬೀತುಪಡಿಸಿದವರು.

ದೇಶ-ವಿದೇಶ ಸುತ್ತಿ ಬಂದರೂ, ಬೆಂಗಳೂರು ವಾಸದಲ್ಲಿದ್ದರು ಅವರ ಬಾಯೊಳಗೆ, ಬರಹದೊಳಗೆ ಹಾವೇರಿ ಹತ್ತಿಮತ್ತೂರಿನ ತಿರುಳ್ನುಡಿಯ ತೀಕ್ಷಣತೆಯನ್ನೇ ಉಳಿಸಿಕೊಂಡಿದ್ದರು. ಭಾಷೆಯನ್ನ ಕಾವ್ಯದ ಹಾಗೆ ಆಡುತ್ತಿದ್ದ ಚಂಪಾ ಅವರು ತಮ್ಮ ನಾಟಕ-ಕಾವ್ಯಗಳಲ್ಲಿ ಭಾಷೆಯ ವ್ಯಂಗ್ಯ, ದ್ವನಿ-ಕಾಕುಗಳನ್ನು ಸೊಗಸಾಗಿ ಹೆಣೆಯುತ್ತಿದ್ದರು. ಇಂದಿಗೂ ಅವರ ನಾಟಕಗಳ ದೊಡ್ಡ ಶಕ್ತಿ ಭಾಷೆಯೇ ಆಗಿದೆ. ಬೇರೆ ನಾಟಕಕಾರರು ಜಾನಪದ-ಪುರಾಣ-ಮಹಾಕಾವ್ಯಗಳೊಳಗೆ ಹೊಕ್ಕು ತಮ್ಮ ಅಭಿವ್ಯಕ್ತಿಗೆ ಪಾತ್ರಗಳನ್ನು, ಸನ್ನಿವೇಶ, ಸಂಗತಿ-ಸಂದರ್ಭಗಳನ್ನು ಹೆಕ್ಕಿ ತಂದರೆ ಚಂಪಾ ಮಾತ್ರ ಭಾಷೆಯೊಳಗೆ ಪಾತ್ರ-ನಾಟಕೀಯತೆಯನ್ನು ಹುಡುಕುತ್ತಿದ್ದರು. ಗೋಕರ್ಣದ ಗೌಡಶ್ಯಾನಿ ನಾಟಕವೊಂದನ್ನು ಹೊರತುಪಡಿಸಿ ಉಳಿದೆಲ್ಲ ನಾಟಕಗಳ ಸಂವೇದನೆ ಇರೋದೆ ಚಂಪಾ ಅವರ ಕ್ರಿಯಾಶೀಲತೆಗೆ ಕೈಗನ್ನಡಿ.

‘ಸರ್ ನಾಟಕಕಾರರಾಗಿ ನಿಮ್ಮ ಭಾಷೆ ಮತ್ತು ಅದರೊಳಗಿನ ನಾಟಕೀಯತೆ ನನಗೆ ಇಷ್ಟ’ ಎಂದೊಮ್ಮೆ ಅವರಿಗೆ ಹೇಳಿದಾಗ ನಗುತ್ತಲೇ…. ‘ನೀವು ನಾಟಕದವರು ಭಾಳ ಡಿಸ್ಟನ್ಸ್ ಮಾಡತಿರೆಪಾ… ಕೊರಿಯಾಗಿ ಉಳಿಸೀರಿ’ ಅಂತ ತಮ್ಮ ಯಾವತ್ತಿನ ಧಾಟಿಯೊಳಗ ಹೇಳಿದಾಗ ಯಾಕೋ ರಂಗಭೂಮಿಯವರ ಮ್ಯಾಲ ಅತೃಪ್ತರಾಗಿದಾರೆ ಅನಿಸಿತ್ತು. ಅವರ ಕುಂಟಕುಂಟ ಕುರುವತ್ತಿ ನಾಟಕವು ಕರ್ನಾಟಕ ರಂಗಭೂಮಿಯಲ್ಲಿ ಸಾವಿರಾರು ಪ್ರಯೋಗ ಕಂಡಿದೆ. ಅಪ್ಪ, ಕೊಡೆ, ಗುರ್ತಿನವರು, ಟಿಂಗರ ಬುಡ್ಡಣ್ಣ ನಾಟಕಗಳು ವಿಶಿಷ್ಟ ಶೈಲಿಯ ವಿನ್ಯಾಸ ಹೊಂದಿರುವ ನಾಟಕಗಳು. ಆದರೂ ಅವರು ತಮಗೆ ತಾವೇ ಕೊರಿ ಅಂದುಕೊಂಡದ್ದು ನನಗೆ ಯಾವತ್ತು ಕಾಡುತ್ತಿತ್ತು. ಫನ್ ಮಾಡುತ್ತಲೇ ಮಾತಿಗಾರಂಭಿಸಿ ಕಟ್ಟಕಡೆಯದ್ದೊಂದು ಕಡಕ್ ಫನ್ ಜೊತೆಗೆ ಮಾತು ಮುಗಿಸುತ್ತಿದ್ದ ಚಂಪಾ ಇಂದು ಎನ್ನುವುದನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿರುತ್ತಿತ್ತು.

ನನಗೆ ಯಾವತ್ತೂ ನಿಮ್ಮ ನೆನಪೇ ಭಾಷೆ. ಆ ಭಾಷೆಯ ಬಂಧುಗಳು ನಾವು. ಅದಕ್ಕೂ ಮಿಗಿಲು ನಿಮ್ಮ ಬಂಡಾಯ ಪ್ರವೃತ್ತಿ ನನ್ನಂಥ ಅನೇಕರಿಗೆ ಮಾದರಿ. ನೀವೇ ಬರೆದಿದ್ದೀರಿ ಸರ್
ಸತ್ತವರು ಎಲ್ಲಿ ಹೋಗುತ್ತಾರೆ?
ಸತ್ತವರು ಎಲ್ಲೂ ಹೋಗುವುದಿಲ್ಲ…
ಇದ್ದವರ ನೆನಪಿನ ಗುದ್ದಿನಲ್ಲಿ
ಗುದ್ದಲಿಯಾಗುತ್ತಾರೆ.

ನಿಮಗೆ ಬುದ್ದ ಬಸವ ಬಾಬಾಸಾಹೇಬ ನಮನಗಳು ಸರ್…

  • ಮಹಾದೇವ ಹಡಪದ ನಟುವರ

(ರಂಗಕರ್ಮಿಗಳು, ಆಟ-ಮಾಟ ಸಾಂಸ್ಕೃತಿಕ ಪಥ ಎಂಬ ನಾಟಕ ತಂಡವನ್ನು ಹುಟ್ಟು ಹಾಕಿ ಸಕ್ರಿಯವಾಗಿದ್ದಾರೆ.)


ಇದನ್ನೂ ಓದಿ; ನುಡಿನಮನ: ಕಳಚಿತು ಜನಪರ ಚಳವಳಿಯ ಮತ್ತೊಂದು ಕೊಂಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....