Homeಅಂಕಣಗಳುಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ

- Advertisement -
- Advertisement -

ಸಂಪಾದಕೀಯ |
ಸೋಮವಾರ ಬೆಳಗ್ಗೆ ನಾಡಿನ ಅತ್ಯಂತ ಪ್ರಮುಖ ಬರಹಗಾರ, ನಾಟಕಕಾರ, ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್ ಇಲ್ಲವಾದರು. ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡ್ ಅವರ ಸಾವನ್ನು ಸಂಭ್ರಮಿಸುವ ಹಲವಾರು ಪೋಸ್ಟ್‍ಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಗೌರಿ ಲಂಕೇಶ್ ಹತ್ಯೆಯಾದಾಗಲೂ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದವು.
ಎಲ್ಲೋ ಒಂದೋ ಎರಡೋ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದರೆ ಸಮಾಜದಲ್ಲಿ ಕೆಲವು ವಿಕೃತ ಮನಸ್ಥಿತಿಗಳು ಇದ್ದೇ ಇರುತ್ತಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ಇಂತಹವರ ಸಂಖ್ಯೆ ಸುಮ್ಮನಾಗುವಷ್ಟು ವಿರಳವಾಗಿಲ್ಲ. ಹಾಗೂ ಇಂಥವರನ್ನು ಬೈದು, ಸಮಾಜಕ್ಕೆ, ಧರ್ಮಕ್ಕೆ ನೀವು ಕಳಂಕ ಎಂದು ಹೇಳಿಯೂ ಸುಮ್ಮನಾಗುವ ಹಾಗಿಲ್ಲ.
ಗಿರೀಶ್ ಕಾರ್ನಾಡ್ ಅವರು ಒಬ್ಬ ಚಿಂತಕರಾಗಿದ್ದರು, ಅವರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಸಮಾಜಕ್ಕೆ ತಮ್ಮ ಕರ್ತವ್ಯವವನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಿದ್ದರು. ಕೋಮು ಸೌಹಾರ್ದತೆಯ ಬಗ್ಗೆ, ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದವರಾಗಿದ್ದರು. ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವುದಕ್ಕೆ ಎಂದೂ ಹಿಂಜರಿಯಲಿಲ್ಲ. ಅದೇ ಕಾರಣಕ್ಕೆ ಅವರಿಗೆ ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೆ ಅವರ ಸಾವನ್ನು ಸಂಭ್ರಮಿಸುವವರು ಕೇವಲ ಅವರ ವಿರೋಧಿಗಳಾಗಿಲ್ಲ ಹಾಗೂ ಪ್ರಜಾತಂತ್ರ, ಸಮಾನತೆ, ಉದಾರತೆಯಂತಹ ಆಶಯಗಳನ್ನೇ ವಿರೋಧಿಸುವವರಾಗಿದ್ದಾರೆ. ಅಂತಹವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿರುವುದರಿಂದ ಅವರನ್ನು, ಈ ವಿಕೃತ ಸಂಭ್ರಮವನ್ನು ಮೊದಲು ನಾವು ಒಂದು ವಾಸ್ತವ ಮತ್ತು ಗಂಭೀರ ಸಮಸ್ಯೆ ಎಂದು ಒಪ್ಪಿಕೊಳ್ಳಬೇಕಿದೆ. ಇಲ್ಲಿ ಕಾಣಿಸುತ್ತಿರುವುದು ಸಮಾಜದ ವಿಕೃತಿ.
ಕಾರ್ನಾಡ್ ಅವರು ಹಿಂದೂ ಧರ್ಮದ ವಿರೋಧಿಯಾಗಿದ್ದರು ಹಾಗೂ ಧರ್ಮದ ವಿರೋಧಿ ಸಾವನ್ನು ಸಂಭ್ರಮಿಸುವುದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ಈ ಸಾವನ್ನು ಸಂಭ್ರಮಿಸಿದವರ ವಾದ.
ಧರ್ಮಾತ್ಮ, ಧರ್ಮ-ಕರ್ಮ, ಮಾನವೀಯತೆಯೇ ಧರ್ಮ, ದಯವೇ ಧರ್ಮ ಇತ್ಯಾದಿಗಳೆಲ್ಲಾ ಧರ್ಮವಾಗಿದ್ದರೆ ಕಾರ್ನಾಡ್ ಅವರು ಧರ್ಮದ ಪರ ಇರುವವರಾಗಿರುತ್ತಿದ್ದರು ಎಂಬ ಮಾತನ್ನು ನಾವು ಹೇಳುವುದು ಪ್ರಯೋಜನವಾಗುತ್ತಿಲ್ಲ. ಬಲಿ ಚಕ್ರವರ್ತಿ ಮತ್ತು ಅಸುರರನ್ನು (ಯಾರು ಅಸುರರು ಎಂಬುದಕ್ಕೆ ಬದಲಾದ ವ್ಯಾಖ್ಯಾನವಿರುವಾಗ) ಕೊಂದದ್ದಕ್ಕೆ ಹಬ್ಬ ಆಚರಿಸುತ್ತಿರುವ ಸಂಸ್ಕೃತಿಯೂ ಈ ದೇಶದಲ್ಲಿದೆ. ಅದನ್ನೇ ‘ಅಧಾರ್ಮಿಕರು’ ಸಮರ್ಥನೆಯಾಗಿ ಬಳಸುತ್ತಿದ್ದಾರೆ.
ನಮ್ಮ ಸಮಾಜವನ್ನು ನಿರ್ಮಿಸುವಲ್ಲಿ ಧರ್ಮವು ಸಕಾರಾತ್ಮಕ ಪಾತ್ರವನ್ನೇ ನಿರ್ವಹಿಸಿದೇ ಅಂತೇನಲ್ಲ. ಆದರೆ ಅದರ ಪಾತ್ರವಂತೂ ಅತ್ಯಂತ ದೊಡ್ಡದು. ಬಡತನ ಮತ್ತು ಅಭದ್ರತೆಯಿಂದ ಬಳಲುತ್ತ ಸಿನಿಕತೆಯನ್ನು ಮೈಗೂಡಿಸಿಕೊಂಡ ನಮ್ಮ ಸಮಾಜದಲ್ಲಿ ಇವುಗಳನ್ನು ಮತ್ತು ಎಲ್ಲೋ ಹುದುಗಿರುವ ದ್ವೇಷವನ್ನೂ ಬಳಸಿಕೊಂಡು ಮಾಡುತ್ತಿರುವ ರಾಜಕಾರಣಕ್ಕೆ ಪ್ರಗತಿಪರರು ಇದುವರೆಗೆ ನೀಡಿರುವ ಉತ್ತರ ಸಾಕಾಗುವುದಿಲ್ಲ ಎಂಬುದನ್ನಷ್ಟೇ ಇವೆಲ್ಲವೂ ತೋರುತ್ತಿದೆ. ಅವರು ದ್ವೇಷವನ್ನು ಬಿತ್ತಿಬಳಸಿದರೆ ನಾವುಗಳು ಭಾರತವು ಎಂದಿಗೂ ಸೌಹಾರ್ದದ ನಾಡಾಗಿತ್ತು, ಕೋಮು ದ್ವೇಷ, ದಳ್ಳುರಿ ಎಂದಿಗೂ ಇದ್ದಿಲ್ಲ, ಹಿಂದೂ ಧರ್ಮ ಅಹಿಂಸೆಯ ಪ್ರತೀಕ ಎನ್ನುವ ಅರೆಸತ್ಯಗಳಿಂದ ಎದುರಿಸಲಾಗುವುದಿಲ್ಲ. ಹಾಗೂ ಹಿಂದು ಧರ್ಮವೆಂದರೆ ಜಾತಿ ತಾರತಮ್ಯ, ಹಿಂದು ಧರ್ಮವೆಂದರೆ ಕಂದಾಚಾರ ಮತ್ತು ಶೋಷಣೆ ಎನ್ನುವುದಷ್ಟೇ ಸರಿಯಲ್ಲ. ಈ ಎಲ್ಲಾ ವಾದಗಳನ್ನು ನಾವು ಮೀರಬೇಕಿದೆ. ಹಾಗೂ ಸಮಾಜವನ್ನು ನಿರ್ಮಿಸುವುದರಲ್ಲಿ ಧರ್ಮ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದು ಒಪ್ಪಿಕೊಂಡು ಅದರ ಮರ್ಮವನ್ನು ಅರಿಯುವ ಪ್ರಯತ್ನವನ್ನೂ ಮಾಡಬೇಕಿದೆ. ಬೇರೊಂದು ಧರ್ಮವೇ ದೇಶದ ಅತಿದೊಡ್ಡ ಶತ್ರು ಎಂದು ನಂಬಿಸಿ, ದ್ವೇಷವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯವಾಗಿ ಗೆಲ್ಲುತ್ತಿರುವಾಗ ಅದನ್ನು ವಿರೋಧಿಸಿದ ಕಾರ್ನಾಡರಂತಹ ಚೇತನಗಳು ಇಲ್ಲವಾದಾಗ ಕಾಣಿಸಿಕೊಳ್ಳುವ ಸಂಭ್ರಮ ನಮಗೆ ಅಚ್ಚರಿ/ಆಘಾತವನ್ನಷ್ಟೇ ಮೂಡಿಸಬಾರದು. ಈ ಮನುಷ್ಯತ್ವ ವಿರೋಧಿ ಶಕ್ತಿಗಳು ಧರ್ಮದ ಪರಿಕಲ್ಪನೆಯನ್ನು ತಿರುಚಿ, ಧರ್ಮದ ಅರ್ಥವನ್ನು ಸಂಕುಚಿತಗೊಳಿಸಿ, ಧರ್ಮದ ಪಾಲನೆಯೆಂದರೆ ಅನ್ಯ ಧರ್ಮದ ವಿರೋಧ ಎಂದು ನಂಬಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿವೆ. ಇಂತಹ ಸಂದರ್ಭದಲ್ಲಿ ನಾವು ಧಾರ್ಮಿಕತೆಯ ವರ್ಸಸ್ ಜಾತ್ಯತೀತತೆ ಎಂದಾಗಿಬಿಟ್ಟಿರುವ ಸರಳ ಬೈನರಿಗಳನ್ನು ಕೈಬಿಡಬೇಕಿದೆ. ಸಾವನ್ನು ಸಂಭ್ರಮಿಸಿದವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡದೇ ಅರಿವು ಮೂಡಿಸಬೇಕಿದೆ.
ಗಿರೀಶ ಕಾರ್ನಾಡ ಅವರು ನಮ್ಮ ದೇಶದ ಇತಿಹಾಸ ಮತ್ತು ಪುರಾಣಗಳನ್ನು ಆಳವಾಗಿ ಅಭ್ಯಸಿಸಿ ಸಾಹಿತ್ಯವನ್ನು ಸೃಷ್ಟಿಸಿದ ವ್ಯಕ್ತಿ. ಅವರ ಸಾಹಿತ್ಯದಲ್ಲೇ ಅವರ ಸಾವನ್ನು ಸಂಭ್ರಮಿಸುತ್ತಿರುವವರಿಗೆ ಸಾಕಷ್ಟು ಉತ್ತರಗಳು ಸಿಗುತ್ತವೆ. ನಾಡಿಗೆ ಈ ಚೇತನ ನೀಡಿದ ಕೊಡುಗೆಗಳನ್ನು ಸಂಭ್ರಮಿಸೋಣ. ಇನ್ನೊಮ್ಮೆ ಯಾರ ಸಾವನ್ನೂ ಸಂಭ್ರಮಿಸದ ಸಮಾಜವನ್ನು ಸೃಷ್ಟಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...