Homeಅಂಕಣಗಳುಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ

- Advertisement -
- Advertisement -

ಸಂಪಾದಕೀಯ |
ಸೋಮವಾರ ಬೆಳಗ್ಗೆ ನಾಡಿನ ಅತ್ಯಂತ ಪ್ರಮುಖ ಬರಹಗಾರ, ನಾಟಕಕಾರ, ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್ ಇಲ್ಲವಾದರು. ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡ್ ಅವರ ಸಾವನ್ನು ಸಂಭ್ರಮಿಸುವ ಹಲವಾರು ಪೋಸ್ಟ್‍ಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಗೌರಿ ಲಂಕೇಶ್ ಹತ್ಯೆಯಾದಾಗಲೂ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದವು.
ಎಲ್ಲೋ ಒಂದೋ ಎರಡೋ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದರೆ ಸಮಾಜದಲ್ಲಿ ಕೆಲವು ವಿಕೃತ ಮನಸ್ಥಿತಿಗಳು ಇದ್ದೇ ಇರುತ್ತಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ಇಂತಹವರ ಸಂಖ್ಯೆ ಸುಮ್ಮನಾಗುವಷ್ಟು ವಿರಳವಾಗಿಲ್ಲ. ಹಾಗೂ ಇಂಥವರನ್ನು ಬೈದು, ಸಮಾಜಕ್ಕೆ, ಧರ್ಮಕ್ಕೆ ನೀವು ಕಳಂಕ ಎಂದು ಹೇಳಿಯೂ ಸುಮ್ಮನಾಗುವ ಹಾಗಿಲ್ಲ.
ಗಿರೀಶ್ ಕಾರ್ನಾಡ್ ಅವರು ಒಬ್ಬ ಚಿಂತಕರಾಗಿದ್ದರು, ಅವರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಸಮಾಜಕ್ಕೆ ತಮ್ಮ ಕರ್ತವ್ಯವವನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಿದ್ದರು. ಕೋಮು ಸೌಹಾರ್ದತೆಯ ಬಗ್ಗೆ, ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದವರಾಗಿದ್ದರು. ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವುದಕ್ಕೆ ಎಂದೂ ಹಿಂಜರಿಯಲಿಲ್ಲ. ಅದೇ ಕಾರಣಕ್ಕೆ ಅವರಿಗೆ ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೆ ಅವರ ಸಾವನ್ನು ಸಂಭ್ರಮಿಸುವವರು ಕೇವಲ ಅವರ ವಿರೋಧಿಗಳಾಗಿಲ್ಲ ಹಾಗೂ ಪ್ರಜಾತಂತ್ರ, ಸಮಾನತೆ, ಉದಾರತೆಯಂತಹ ಆಶಯಗಳನ್ನೇ ವಿರೋಧಿಸುವವರಾಗಿದ್ದಾರೆ. ಅಂತಹವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿರುವುದರಿಂದ ಅವರನ್ನು, ಈ ವಿಕೃತ ಸಂಭ್ರಮವನ್ನು ಮೊದಲು ನಾವು ಒಂದು ವಾಸ್ತವ ಮತ್ತು ಗಂಭೀರ ಸಮಸ್ಯೆ ಎಂದು ಒಪ್ಪಿಕೊಳ್ಳಬೇಕಿದೆ. ಇಲ್ಲಿ ಕಾಣಿಸುತ್ತಿರುವುದು ಸಮಾಜದ ವಿಕೃತಿ.
ಕಾರ್ನಾಡ್ ಅವರು ಹಿಂದೂ ಧರ್ಮದ ವಿರೋಧಿಯಾಗಿದ್ದರು ಹಾಗೂ ಧರ್ಮದ ವಿರೋಧಿ ಸಾವನ್ನು ಸಂಭ್ರಮಿಸುವುದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ಈ ಸಾವನ್ನು ಸಂಭ್ರಮಿಸಿದವರ ವಾದ.
ಧರ್ಮಾತ್ಮ, ಧರ್ಮ-ಕರ್ಮ, ಮಾನವೀಯತೆಯೇ ಧರ್ಮ, ದಯವೇ ಧರ್ಮ ಇತ್ಯಾದಿಗಳೆಲ್ಲಾ ಧರ್ಮವಾಗಿದ್ದರೆ ಕಾರ್ನಾಡ್ ಅವರು ಧರ್ಮದ ಪರ ಇರುವವರಾಗಿರುತ್ತಿದ್ದರು ಎಂಬ ಮಾತನ್ನು ನಾವು ಹೇಳುವುದು ಪ್ರಯೋಜನವಾಗುತ್ತಿಲ್ಲ. ಬಲಿ ಚಕ್ರವರ್ತಿ ಮತ್ತು ಅಸುರರನ್ನು (ಯಾರು ಅಸುರರು ಎಂಬುದಕ್ಕೆ ಬದಲಾದ ವ್ಯಾಖ್ಯಾನವಿರುವಾಗ) ಕೊಂದದ್ದಕ್ಕೆ ಹಬ್ಬ ಆಚರಿಸುತ್ತಿರುವ ಸಂಸ್ಕೃತಿಯೂ ಈ ದೇಶದಲ್ಲಿದೆ. ಅದನ್ನೇ ‘ಅಧಾರ್ಮಿಕರು’ ಸಮರ್ಥನೆಯಾಗಿ ಬಳಸುತ್ತಿದ್ದಾರೆ.
ನಮ್ಮ ಸಮಾಜವನ್ನು ನಿರ್ಮಿಸುವಲ್ಲಿ ಧರ್ಮವು ಸಕಾರಾತ್ಮಕ ಪಾತ್ರವನ್ನೇ ನಿರ್ವಹಿಸಿದೇ ಅಂತೇನಲ್ಲ. ಆದರೆ ಅದರ ಪಾತ್ರವಂತೂ ಅತ್ಯಂತ ದೊಡ್ಡದು. ಬಡತನ ಮತ್ತು ಅಭದ್ರತೆಯಿಂದ ಬಳಲುತ್ತ ಸಿನಿಕತೆಯನ್ನು ಮೈಗೂಡಿಸಿಕೊಂಡ ನಮ್ಮ ಸಮಾಜದಲ್ಲಿ ಇವುಗಳನ್ನು ಮತ್ತು ಎಲ್ಲೋ ಹುದುಗಿರುವ ದ್ವೇಷವನ್ನೂ ಬಳಸಿಕೊಂಡು ಮಾಡುತ್ತಿರುವ ರಾಜಕಾರಣಕ್ಕೆ ಪ್ರಗತಿಪರರು ಇದುವರೆಗೆ ನೀಡಿರುವ ಉತ್ತರ ಸಾಕಾಗುವುದಿಲ್ಲ ಎಂಬುದನ್ನಷ್ಟೇ ಇವೆಲ್ಲವೂ ತೋರುತ್ತಿದೆ. ಅವರು ದ್ವೇಷವನ್ನು ಬಿತ್ತಿಬಳಸಿದರೆ ನಾವುಗಳು ಭಾರತವು ಎಂದಿಗೂ ಸೌಹಾರ್ದದ ನಾಡಾಗಿತ್ತು, ಕೋಮು ದ್ವೇಷ, ದಳ್ಳುರಿ ಎಂದಿಗೂ ಇದ್ದಿಲ್ಲ, ಹಿಂದೂ ಧರ್ಮ ಅಹಿಂಸೆಯ ಪ್ರತೀಕ ಎನ್ನುವ ಅರೆಸತ್ಯಗಳಿಂದ ಎದುರಿಸಲಾಗುವುದಿಲ್ಲ. ಹಾಗೂ ಹಿಂದು ಧರ್ಮವೆಂದರೆ ಜಾತಿ ತಾರತಮ್ಯ, ಹಿಂದು ಧರ್ಮವೆಂದರೆ ಕಂದಾಚಾರ ಮತ್ತು ಶೋಷಣೆ ಎನ್ನುವುದಷ್ಟೇ ಸರಿಯಲ್ಲ. ಈ ಎಲ್ಲಾ ವಾದಗಳನ್ನು ನಾವು ಮೀರಬೇಕಿದೆ. ಹಾಗೂ ಸಮಾಜವನ್ನು ನಿರ್ಮಿಸುವುದರಲ್ಲಿ ಧರ್ಮ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದು ಒಪ್ಪಿಕೊಂಡು ಅದರ ಮರ್ಮವನ್ನು ಅರಿಯುವ ಪ್ರಯತ್ನವನ್ನೂ ಮಾಡಬೇಕಿದೆ. ಬೇರೊಂದು ಧರ್ಮವೇ ದೇಶದ ಅತಿದೊಡ್ಡ ಶತ್ರು ಎಂದು ನಂಬಿಸಿ, ದ್ವೇಷವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯವಾಗಿ ಗೆಲ್ಲುತ್ತಿರುವಾಗ ಅದನ್ನು ವಿರೋಧಿಸಿದ ಕಾರ್ನಾಡರಂತಹ ಚೇತನಗಳು ಇಲ್ಲವಾದಾಗ ಕಾಣಿಸಿಕೊಳ್ಳುವ ಸಂಭ್ರಮ ನಮಗೆ ಅಚ್ಚರಿ/ಆಘಾತವನ್ನಷ್ಟೇ ಮೂಡಿಸಬಾರದು. ಈ ಮನುಷ್ಯತ್ವ ವಿರೋಧಿ ಶಕ್ತಿಗಳು ಧರ್ಮದ ಪರಿಕಲ್ಪನೆಯನ್ನು ತಿರುಚಿ, ಧರ್ಮದ ಅರ್ಥವನ್ನು ಸಂಕುಚಿತಗೊಳಿಸಿ, ಧರ್ಮದ ಪಾಲನೆಯೆಂದರೆ ಅನ್ಯ ಧರ್ಮದ ವಿರೋಧ ಎಂದು ನಂಬಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿವೆ. ಇಂತಹ ಸಂದರ್ಭದಲ್ಲಿ ನಾವು ಧಾರ್ಮಿಕತೆಯ ವರ್ಸಸ್ ಜಾತ್ಯತೀತತೆ ಎಂದಾಗಿಬಿಟ್ಟಿರುವ ಸರಳ ಬೈನರಿಗಳನ್ನು ಕೈಬಿಡಬೇಕಿದೆ. ಸಾವನ್ನು ಸಂಭ್ರಮಿಸಿದವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡದೇ ಅರಿವು ಮೂಡಿಸಬೇಕಿದೆ.
ಗಿರೀಶ ಕಾರ್ನಾಡ ಅವರು ನಮ್ಮ ದೇಶದ ಇತಿಹಾಸ ಮತ್ತು ಪುರಾಣಗಳನ್ನು ಆಳವಾಗಿ ಅಭ್ಯಸಿಸಿ ಸಾಹಿತ್ಯವನ್ನು ಸೃಷ್ಟಿಸಿದ ವ್ಯಕ್ತಿ. ಅವರ ಸಾಹಿತ್ಯದಲ್ಲೇ ಅವರ ಸಾವನ್ನು ಸಂಭ್ರಮಿಸುತ್ತಿರುವವರಿಗೆ ಸಾಕಷ್ಟು ಉತ್ತರಗಳು ಸಿಗುತ್ತವೆ. ನಾಡಿಗೆ ಈ ಚೇತನ ನೀಡಿದ ಕೊಡುಗೆಗಳನ್ನು ಸಂಭ್ರಮಿಸೋಣ. ಇನ್ನೊಮ್ಮೆ ಯಾರ ಸಾವನ್ನೂ ಸಂಭ್ರಮಿಸದ ಸಮಾಜವನ್ನು ಸೃಷ್ಟಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...