Homeಅಂಕಣಗಳುಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ

- Advertisement -
- Advertisement -

ಸಂಪಾದಕೀಯ |
ಸೋಮವಾರ ಬೆಳಗ್ಗೆ ನಾಡಿನ ಅತ್ಯಂತ ಪ್ರಮುಖ ಬರಹಗಾರ, ನಾಟಕಕಾರ, ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್ ಇಲ್ಲವಾದರು. ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡ್ ಅವರ ಸಾವನ್ನು ಸಂಭ್ರಮಿಸುವ ಹಲವಾರು ಪೋಸ್ಟ್‍ಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಗೌರಿ ಲಂಕೇಶ್ ಹತ್ಯೆಯಾದಾಗಲೂ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದವು.
ಎಲ್ಲೋ ಒಂದೋ ಎರಡೋ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದರೆ ಸಮಾಜದಲ್ಲಿ ಕೆಲವು ವಿಕೃತ ಮನಸ್ಥಿತಿಗಳು ಇದ್ದೇ ಇರುತ್ತಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ಇಂತಹವರ ಸಂಖ್ಯೆ ಸುಮ್ಮನಾಗುವಷ್ಟು ವಿರಳವಾಗಿಲ್ಲ. ಹಾಗೂ ಇಂಥವರನ್ನು ಬೈದು, ಸಮಾಜಕ್ಕೆ, ಧರ್ಮಕ್ಕೆ ನೀವು ಕಳಂಕ ಎಂದು ಹೇಳಿಯೂ ಸುಮ್ಮನಾಗುವ ಹಾಗಿಲ್ಲ.
ಗಿರೀಶ್ ಕಾರ್ನಾಡ್ ಅವರು ಒಬ್ಬ ಚಿಂತಕರಾಗಿದ್ದರು, ಅವರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಸಮಾಜಕ್ಕೆ ತಮ್ಮ ಕರ್ತವ್ಯವವನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಿದ್ದರು. ಕೋಮು ಸೌಹಾರ್ದತೆಯ ಬಗ್ಗೆ, ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದವರಾಗಿದ್ದರು. ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವುದಕ್ಕೆ ಎಂದೂ ಹಿಂಜರಿಯಲಿಲ್ಲ. ಅದೇ ಕಾರಣಕ್ಕೆ ಅವರಿಗೆ ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೆ ಅವರ ಸಾವನ್ನು ಸಂಭ್ರಮಿಸುವವರು ಕೇವಲ ಅವರ ವಿರೋಧಿಗಳಾಗಿಲ್ಲ ಹಾಗೂ ಪ್ರಜಾತಂತ್ರ, ಸಮಾನತೆ, ಉದಾರತೆಯಂತಹ ಆಶಯಗಳನ್ನೇ ವಿರೋಧಿಸುವವರಾಗಿದ್ದಾರೆ. ಅಂತಹವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿರುವುದರಿಂದ ಅವರನ್ನು, ಈ ವಿಕೃತ ಸಂಭ್ರಮವನ್ನು ಮೊದಲು ನಾವು ಒಂದು ವಾಸ್ತವ ಮತ್ತು ಗಂಭೀರ ಸಮಸ್ಯೆ ಎಂದು ಒಪ್ಪಿಕೊಳ್ಳಬೇಕಿದೆ. ಇಲ್ಲಿ ಕಾಣಿಸುತ್ತಿರುವುದು ಸಮಾಜದ ವಿಕೃತಿ.
ಕಾರ್ನಾಡ್ ಅವರು ಹಿಂದೂ ಧರ್ಮದ ವಿರೋಧಿಯಾಗಿದ್ದರು ಹಾಗೂ ಧರ್ಮದ ವಿರೋಧಿ ಸಾವನ್ನು ಸಂಭ್ರಮಿಸುವುದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ಈ ಸಾವನ್ನು ಸಂಭ್ರಮಿಸಿದವರ ವಾದ.
ಧರ್ಮಾತ್ಮ, ಧರ್ಮ-ಕರ್ಮ, ಮಾನವೀಯತೆಯೇ ಧರ್ಮ, ದಯವೇ ಧರ್ಮ ಇತ್ಯಾದಿಗಳೆಲ್ಲಾ ಧರ್ಮವಾಗಿದ್ದರೆ ಕಾರ್ನಾಡ್ ಅವರು ಧರ್ಮದ ಪರ ಇರುವವರಾಗಿರುತ್ತಿದ್ದರು ಎಂಬ ಮಾತನ್ನು ನಾವು ಹೇಳುವುದು ಪ್ರಯೋಜನವಾಗುತ್ತಿಲ್ಲ. ಬಲಿ ಚಕ್ರವರ್ತಿ ಮತ್ತು ಅಸುರರನ್ನು (ಯಾರು ಅಸುರರು ಎಂಬುದಕ್ಕೆ ಬದಲಾದ ವ್ಯಾಖ್ಯಾನವಿರುವಾಗ) ಕೊಂದದ್ದಕ್ಕೆ ಹಬ್ಬ ಆಚರಿಸುತ್ತಿರುವ ಸಂಸ್ಕೃತಿಯೂ ಈ ದೇಶದಲ್ಲಿದೆ. ಅದನ್ನೇ ‘ಅಧಾರ್ಮಿಕರು’ ಸಮರ್ಥನೆಯಾಗಿ ಬಳಸುತ್ತಿದ್ದಾರೆ.
ನಮ್ಮ ಸಮಾಜವನ್ನು ನಿರ್ಮಿಸುವಲ್ಲಿ ಧರ್ಮವು ಸಕಾರಾತ್ಮಕ ಪಾತ್ರವನ್ನೇ ನಿರ್ವಹಿಸಿದೇ ಅಂತೇನಲ್ಲ. ಆದರೆ ಅದರ ಪಾತ್ರವಂತೂ ಅತ್ಯಂತ ದೊಡ್ಡದು. ಬಡತನ ಮತ್ತು ಅಭದ್ರತೆಯಿಂದ ಬಳಲುತ್ತ ಸಿನಿಕತೆಯನ್ನು ಮೈಗೂಡಿಸಿಕೊಂಡ ನಮ್ಮ ಸಮಾಜದಲ್ಲಿ ಇವುಗಳನ್ನು ಮತ್ತು ಎಲ್ಲೋ ಹುದುಗಿರುವ ದ್ವೇಷವನ್ನೂ ಬಳಸಿಕೊಂಡು ಮಾಡುತ್ತಿರುವ ರಾಜಕಾರಣಕ್ಕೆ ಪ್ರಗತಿಪರರು ಇದುವರೆಗೆ ನೀಡಿರುವ ಉತ್ತರ ಸಾಕಾಗುವುದಿಲ್ಲ ಎಂಬುದನ್ನಷ್ಟೇ ಇವೆಲ್ಲವೂ ತೋರುತ್ತಿದೆ. ಅವರು ದ್ವೇಷವನ್ನು ಬಿತ್ತಿಬಳಸಿದರೆ ನಾವುಗಳು ಭಾರತವು ಎಂದಿಗೂ ಸೌಹಾರ್ದದ ನಾಡಾಗಿತ್ತು, ಕೋಮು ದ್ವೇಷ, ದಳ್ಳುರಿ ಎಂದಿಗೂ ಇದ್ದಿಲ್ಲ, ಹಿಂದೂ ಧರ್ಮ ಅಹಿಂಸೆಯ ಪ್ರತೀಕ ಎನ್ನುವ ಅರೆಸತ್ಯಗಳಿಂದ ಎದುರಿಸಲಾಗುವುದಿಲ್ಲ. ಹಾಗೂ ಹಿಂದು ಧರ್ಮವೆಂದರೆ ಜಾತಿ ತಾರತಮ್ಯ, ಹಿಂದು ಧರ್ಮವೆಂದರೆ ಕಂದಾಚಾರ ಮತ್ತು ಶೋಷಣೆ ಎನ್ನುವುದಷ್ಟೇ ಸರಿಯಲ್ಲ. ಈ ಎಲ್ಲಾ ವಾದಗಳನ್ನು ನಾವು ಮೀರಬೇಕಿದೆ. ಹಾಗೂ ಸಮಾಜವನ್ನು ನಿರ್ಮಿಸುವುದರಲ್ಲಿ ಧರ್ಮ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದು ಒಪ್ಪಿಕೊಂಡು ಅದರ ಮರ್ಮವನ್ನು ಅರಿಯುವ ಪ್ರಯತ್ನವನ್ನೂ ಮಾಡಬೇಕಿದೆ. ಬೇರೊಂದು ಧರ್ಮವೇ ದೇಶದ ಅತಿದೊಡ್ಡ ಶತ್ರು ಎಂದು ನಂಬಿಸಿ, ದ್ವೇಷವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯವಾಗಿ ಗೆಲ್ಲುತ್ತಿರುವಾಗ ಅದನ್ನು ವಿರೋಧಿಸಿದ ಕಾರ್ನಾಡರಂತಹ ಚೇತನಗಳು ಇಲ್ಲವಾದಾಗ ಕಾಣಿಸಿಕೊಳ್ಳುವ ಸಂಭ್ರಮ ನಮಗೆ ಅಚ್ಚರಿ/ಆಘಾತವನ್ನಷ್ಟೇ ಮೂಡಿಸಬಾರದು. ಈ ಮನುಷ್ಯತ್ವ ವಿರೋಧಿ ಶಕ್ತಿಗಳು ಧರ್ಮದ ಪರಿಕಲ್ಪನೆಯನ್ನು ತಿರುಚಿ, ಧರ್ಮದ ಅರ್ಥವನ್ನು ಸಂಕುಚಿತಗೊಳಿಸಿ, ಧರ್ಮದ ಪಾಲನೆಯೆಂದರೆ ಅನ್ಯ ಧರ್ಮದ ವಿರೋಧ ಎಂದು ನಂಬಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿವೆ. ಇಂತಹ ಸಂದರ್ಭದಲ್ಲಿ ನಾವು ಧಾರ್ಮಿಕತೆಯ ವರ್ಸಸ್ ಜಾತ್ಯತೀತತೆ ಎಂದಾಗಿಬಿಟ್ಟಿರುವ ಸರಳ ಬೈನರಿಗಳನ್ನು ಕೈಬಿಡಬೇಕಿದೆ. ಸಾವನ್ನು ಸಂಭ್ರಮಿಸಿದವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡದೇ ಅರಿವು ಮೂಡಿಸಬೇಕಿದೆ.
ಗಿರೀಶ ಕಾರ್ನಾಡ ಅವರು ನಮ್ಮ ದೇಶದ ಇತಿಹಾಸ ಮತ್ತು ಪುರಾಣಗಳನ್ನು ಆಳವಾಗಿ ಅಭ್ಯಸಿಸಿ ಸಾಹಿತ್ಯವನ್ನು ಸೃಷ್ಟಿಸಿದ ವ್ಯಕ್ತಿ. ಅವರ ಸಾಹಿತ್ಯದಲ್ಲೇ ಅವರ ಸಾವನ್ನು ಸಂಭ್ರಮಿಸುತ್ತಿರುವವರಿಗೆ ಸಾಕಷ್ಟು ಉತ್ತರಗಳು ಸಿಗುತ್ತವೆ. ನಾಡಿಗೆ ಈ ಚೇತನ ನೀಡಿದ ಕೊಡುಗೆಗಳನ್ನು ಸಂಭ್ರಮಿಸೋಣ. ಇನ್ನೊಮ್ಮೆ ಯಾರ ಸಾವನ್ನೂ ಸಂಭ್ರಮಿಸದ ಸಮಾಜವನ್ನು ಸೃಷ್ಟಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...