Homeಅಂಕಣಗಳುಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಾವನ್ನು ಸಂಭ್ರಮಿಸುವ ಮನಸ್ಥಿತಿ: ಮೂಲ ಮತ್ತು ಮೂಲೋತ್ಪಾಟನೆ

ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ

- Advertisement -
- Advertisement -

ಸಂಪಾದಕೀಯ |
ಸೋಮವಾರ ಬೆಳಗ್ಗೆ ನಾಡಿನ ಅತ್ಯಂತ ಪ್ರಮುಖ ಬರಹಗಾರ, ನಾಟಕಕಾರ, ಬಹುಮುಖ ಪ್ರತಿಭೆ ಗಿರೀಶ್ ಕಾರ್ನಾಡ್ ಇಲ್ಲವಾದರು. ಸಂತಾಪಸೂಚಕ ಸಂದೇಶಗಳ ಅಲೆಯೊಂದಿಗೆ ಸಮಾಜದ ಇನ್ನೊಂದು ಕರಾಳ ಮುಖವೂ ನಮ್ಮೆದುರಿಗೆ ರಾಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡ್ ಅವರ ಸಾವನ್ನು ಸಂಭ್ರಮಿಸುವ ಹಲವಾರು ಪೋಸ್ಟ್‍ಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಗೌರಿ ಲಂಕೇಶ್ ಹತ್ಯೆಯಾದಾಗಲೂ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದವು.
ಎಲ್ಲೋ ಒಂದೋ ಎರಡೋ ಇಂತಹ ಪೋಸ್ಟ್‍ಗಳು ಕಂಡುಬಂದಿದ್ದರೆ ಸಮಾಜದಲ್ಲಿ ಕೆಲವು ವಿಕೃತ ಮನಸ್ಥಿತಿಗಳು ಇದ್ದೇ ಇರುತ್ತಾರೆ ಎಂದು ಸುಮ್ಮನಾಗಬಹುದಿತ್ತು. ಆದರೆ ಇಂತಹವರ ಸಂಖ್ಯೆ ಸುಮ್ಮನಾಗುವಷ್ಟು ವಿರಳವಾಗಿಲ್ಲ. ಹಾಗೂ ಇಂಥವರನ್ನು ಬೈದು, ಸಮಾಜಕ್ಕೆ, ಧರ್ಮಕ್ಕೆ ನೀವು ಕಳಂಕ ಎಂದು ಹೇಳಿಯೂ ಸುಮ್ಮನಾಗುವ ಹಾಗಿಲ್ಲ.
ಗಿರೀಶ್ ಕಾರ್ನಾಡ್ ಅವರು ಒಬ್ಬ ಚಿಂತಕರಾಗಿದ್ದರು, ಅವರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಸಮಾಜಕ್ಕೆ ತಮ್ಮ ಕರ್ತವ್ಯವವನ್ನು ತಮ್ಮದೇ ಆದ ರೀತಿಯಲ್ಲಿ ನಿಭಾಯಿಸುತ್ತಿದ್ದರು. ಕೋಮು ಸೌಹಾರ್ದತೆಯ ಬಗ್ಗೆ, ಜಾತ್ಯತೀತತೆಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದವರಾಗಿದ್ದರು. ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸುವುದಕ್ಕೆ ಎಂದೂ ಹಿಂಜರಿಯಲಿಲ್ಲ. ಅದೇ ಕಾರಣಕ್ಕೆ ಅವರಿಗೆ ಕೆಲವರಿಂದ ವಿರೋಧವೂ ವ್ಯಕ್ತವಾಗಿತ್ತು. ಆದರೆ ಅವರ ಸಾವನ್ನು ಸಂಭ್ರಮಿಸುವವರು ಕೇವಲ ಅವರ ವಿರೋಧಿಗಳಾಗಿಲ್ಲ ಹಾಗೂ ಪ್ರಜಾತಂತ್ರ, ಸಮಾನತೆ, ಉದಾರತೆಯಂತಹ ಆಶಯಗಳನ್ನೇ ವಿರೋಧಿಸುವವರಾಗಿದ್ದಾರೆ. ಅಂತಹವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿರುವುದರಿಂದ ಅವರನ್ನು, ಈ ವಿಕೃತ ಸಂಭ್ರಮವನ್ನು ಮೊದಲು ನಾವು ಒಂದು ವಾಸ್ತವ ಮತ್ತು ಗಂಭೀರ ಸಮಸ್ಯೆ ಎಂದು ಒಪ್ಪಿಕೊಳ್ಳಬೇಕಿದೆ. ಇಲ್ಲಿ ಕಾಣಿಸುತ್ತಿರುವುದು ಸಮಾಜದ ವಿಕೃತಿ.
ಕಾರ್ನಾಡ್ ಅವರು ಹಿಂದೂ ಧರ್ಮದ ವಿರೋಧಿಯಾಗಿದ್ದರು ಹಾಗೂ ಧರ್ಮದ ವಿರೋಧಿ ಸಾವನ್ನು ಸಂಭ್ರಮಿಸುವುದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ಈ ಸಾವನ್ನು ಸಂಭ್ರಮಿಸಿದವರ ವಾದ.
ಧರ್ಮಾತ್ಮ, ಧರ್ಮ-ಕರ್ಮ, ಮಾನವೀಯತೆಯೇ ಧರ್ಮ, ದಯವೇ ಧರ್ಮ ಇತ್ಯಾದಿಗಳೆಲ್ಲಾ ಧರ್ಮವಾಗಿದ್ದರೆ ಕಾರ್ನಾಡ್ ಅವರು ಧರ್ಮದ ಪರ ಇರುವವರಾಗಿರುತ್ತಿದ್ದರು ಎಂಬ ಮಾತನ್ನು ನಾವು ಹೇಳುವುದು ಪ್ರಯೋಜನವಾಗುತ್ತಿಲ್ಲ. ಬಲಿ ಚಕ್ರವರ್ತಿ ಮತ್ತು ಅಸುರರನ್ನು (ಯಾರು ಅಸುರರು ಎಂಬುದಕ್ಕೆ ಬದಲಾದ ವ್ಯಾಖ್ಯಾನವಿರುವಾಗ) ಕೊಂದದ್ದಕ್ಕೆ ಹಬ್ಬ ಆಚರಿಸುತ್ತಿರುವ ಸಂಸ್ಕೃತಿಯೂ ಈ ದೇಶದಲ್ಲಿದೆ. ಅದನ್ನೇ ‘ಅಧಾರ್ಮಿಕರು’ ಸಮರ್ಥನೆಯಾಗಿ ಬಳಸುತ್ತಿದ್ದಾರೆ.
ನಮ್ಮ ಸಮಾಜವನ್ನು ನಿರ್ಮಿಸುವಲ್ಲಿ ಧರ್ಮವು ಸಕಾರಾತ್ಮಕ ಪಾತ್ರವನ್ನೇ ನಿರ್ವಹಿಸಿದೇ ಅಂತೇನಲ್ಲ. ಆದರೆ ಅದರ ಪಾತ್ರವಂತೂ ಅತ್ಯಂತ ದೊಡ್ಡದು. ಬಡತನ ಮತ್ತು ಅಭದ್ರತೆಯಿಂದ ಬಳಲುತ್ತ ಸಿನಿಕತೆಯನ್ನು ಮೈಗೂಡಿಸಿಕೊಂಡ ನಮ್ಮ ಸಮಾಜದಲ್ಲಿ ಇವುಗಳನ್ನು ಮತ್ತು ಎಲ್ಲೋ ಹುದುಗಿರುವ ದ್ವೇಷವನ್ನೂ ಬಳಸಿಕೊಂಡು ಮಾಡುತ್ತಿರುವ ರಾಜಕಾರಣಕ್ಕೆ ಪ್ರಗತಿಪರರು ಇದುವರೆಗೆ ನೀಡಿರುವ ಉತ್ತರ ಸಾಕಾಗುವುದಿಲ್ಲ ಎಂಬುದನ್ನಷ್ಟೇ ಇವೆಲ್ಲವೂ ತೋರುತ್ತಿದೆ. ಅವರು ದ್ವೇಷವನ್ನು ಬಿತ್ತಿಬಳಸಿದರೆ ನಾವುಗಳು ಭಾರತವು ಎಂದಿಗೂ ಸೌಹಾರ್ದದ ನಾಡಾಗಿತ್ತು, ಕೋಮು ದ್ವೇಷ, ದಳ್ಳುರಿ ಎಂದಿಗೂ ಇದ್ದಿಲ್ಲ, ಹಿಂದೂ ಧರ್ಮ ಅಹಿಂಸೆಯ ಪ್ರತೀಕ ಎನ್ನುವ ಅರೆಸತ್ಯಗಳಿಂದ ಎದುರಿಸಲಾಗುವುದಿಲ್ಲ. ಹಾಗೂ ಹಿಂದು ಧರ್ಮವೆಂದರೆ ಜಾತಿ ತಾರತಮ್ಯ, ಹಿಂದು ಧರ್ಮವೆಂದರೆ ಕಂದಾಚಾರ ಮತ್ತು ಶೋಷಣೆ ಎನ್ನುವುದಷ್ಟೇ ಸರಿಯಲ್ಲ. ಈ ಎಲ್ಲಾ ವಾದಗಳನ್ನು ನಾವು ಮೀರಬೇಕಿದೆ. ಹಾಗೂ ಸಮಾಜವನ್ನು ನಿರ್ಮಿಸುವುದರಲ್ಲಿ ಧರ್ಮ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದು ಒಪ್ಪಿಕೊಂಡು ಅದರ ಮರ್ಮವನ್ನು ಅರಿಯುವ ಪ್ರಯತ್ನವನ್ನೂ ಮಾಡಬೇಕಿದೆ. ಬೇರೊಂದು ಧರ್ಮವೇ ದೇಶದ ಅತಿದೊಡ್ಡ ಶತ್ರು ಎಂದು ನಂಬಿಸಿ, ದ್ವೇಷವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯವಾಗಿ ಗೆಲ್ಲುತ್ತಿರುವಾಗ ಅದನ್ನು ವಿರೋಧಿಸಿದ ಕಾರ್ನಾಡರಂತಹ ಚೇತನಗಳು ಇಲ್ಲವಾದಾಗ ಕಾಣಿಸಿಕೊಳ್ಳುವ ಸಂಭ್ರಮ ನಮಗೆ ಅಚ್ಚರಿ/ಆಘಾತವನ್ನಷ್ಟೇ ಮೂಡಿಸಬಾರದು. ಈ ಮನುಷ್ಯತ್ವ ವಿರೋಧಿ ಶಕ್ತಿಗಳು ಧರ್ಮದ ಪರಿಕಲ್ಪನೆಯನ್ನು ತಿರುಚಿ, ಧರ್ಮದ ಅರ್ಥವನ್ನು ಸಂಕುಚಿತಗೊಳಿಸಿ, ಧರ್ಮದ ಪಾಲನೆಯೆಂದರೆ ಅನ್ಯ ಧರ್ಮದ ವಿರೋಧ ಎಂದು ನಂಬಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿವೆ. ಇಂತಹ ಸಂದರ್ಭದಲ್ಲಿ ನಾವು ಧಾರ್ಮಿಕತೆಯ ವರ್ಸಸ್ ಜಾತ್ಯತೀತತೆ ಎಂದಾಗಿಬಿಟ್ಟಿರುವ ಸರಳ ಬೈನರಿಗಳನ್ನು ಕೈಬಿಡಬೇಕಿದೆ. ಸಾವನ್ನು ಸಂಭ್ರಮಿಸಿದವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡದೇ ಅರಿವು ಮೂಡಿಸಬೇಕಿದೆ.
ಗಿರೀಶ ಕಾರ್ನಾಡ ಅವರು ನಮ್ಮ ದೇಶದ ಇತಿಹಾಸ ಮತ್ತು ಪುರಾಣಗಳನ್ನು ಆಳವಾಗಿ ಅಭ್ಯಸಿಸಿ ಸಾಹಿತ್ಯವನ್ನು ಸೃಷ್ಟಿಸಿದ ವ್ಯಕ್ತಿ. ಅವರ ಸಾಹಿತ್ಯದಲ್ಲೇ ಅವರ ಸಾವನ್ನು ಸಂಭ್ರಮಿಸುತ್ತಿರುವವರಿಗೆ ಸಾಕಷ್ಟು ಉತ್ತರಗಳು ಸಿಗುತ್ತವೆ. ನಾಡಿಗೆ ಈ ಚೇತನ ನೀಡಿದ ಕೊಡುಗೆಗಳನ್ನು ಸಂಭ್ರಮಿಸೋಣ. ಇನ್ನೊಮ್ಮೆ ಯಾರ ಸಾವನ್ನೂ ಸಂಭ್ರಮಿಸದ ಸಮಾಜವನ್ನು ಸೃಷ್ಟಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...