Homeಚಳವಳಿಅಗಲಿದ ಮಲೆನಾಡಿನ ಮೌನಿ ಹೋರಾಟಗಾರ ಹೂವಪ್ಪ....

ಅಗಲಿದ ಮಲೆನಾಡಿನ ಮೌನಿ ಹೋರಾಟಗಾರ ಹೂವಪ್ಪ….

- Advertisement -
- Advertisement -

ಪ್ರಭುತ್ವದ ಮುಳ್ಳು-ಕಂಟೆಗಳಿಗೆ ಎದುರಾಗಿ ಸೆಣೆಸಿದ ಹೂವಿನಂತಹ ಹೃದಯದ ಹೂವಪ್ಪ ವಕೀಲರು ನಿನ್ನೆ ನಿಧನ ಹೊಂದಿದ್ದಾರೆ. ಕೊರೋನಾದಿಂದ ಚೇತರಿಸಿಕೊಂಡ ಅವರು ನಂತರ ಹೃದಯ ಸಂಬಂಧಿ ಕಾಯಿಲೆಗೆ ಪ್ರಾಣ ಬಿಟ್ಟಿದ್ದಾರೆ.

‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ತುಂಗಾ ಉಳಿಸಿ ಚಳುವಳಿ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಬಾಬಾ ಬುಡನ್‌ಗಿರಿ ಹೋರಾಟದಲ್ಲಿ ಹೂವಪ್ಪ ತುಂಬ ಕ್ರಿಯಾಶೀಲರಾಗಿದ್ದರು. ಹೋರಾಟಗಾರರ ಮೇಲೆ ಪ್ರಭುತ್ವ ಹಾಕುತ್ತಿದ್ದ ನಕಲಿ ಕೇಸುಗಳ ವಿರುದ್ಧ ಒಬ್ಬ ವಕೀಲರಾಗಿ ಅವರು ತುಂಬ ಕೆಲಸ ಮಾಡಿದ್ದಾರೆ’ ಎನ್ನುತ್ತಾರೆ ಅವರನ್ನು ಬಹು ವರ್ಷಗಳಿಂದ ಬಲ್ಲ ಹೋರಾಟದ ಒಡನಾಡಿ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್..

ಅತ್ಯಂತ ಸಂಭಾವಿತರಾಗಿದ್ದ ಹೂವಪ್ಪ ಯಾರಿಗೂ ಎಂದಿಗೂ ಕೇಡು ಬಗೆಯಲಿಲ್ಲ. ಸದಾ ನಗುಮೊಗದಲ್ಲೇ ವಿರೋಧಿಗಳನ್ನು ಮಾತನಾಡಿಸುತ್ತಿದ್ದ ಮನುಷ್ಯ. ಆದರೂ ಕೊರೋನಾ ಅವರನ್ನು ನುಂಗಿಕೊಂಡು ಬಿಟ್ಟಿದೆ. ಅದಕ್ಕೆ ಇನ್ನೆಷ್ಟು ಸಾವುಗಳು ಬೇಕೋ? ಹೊಣೆಗೇಡಿ ಸರ್ಕಾರಗಳು ತಂದಿಟ್ಟ ಆಪತ್ತಿಗೆ ಹೋರಾಟದ ಗೆಳೆಯ ಹೂವಪ್ಪ ಕೂಡ ಬಲಿಯಾಗಿ ಬಿಟ್ಟ ಎನ್ನುವುದನ್ನು ಅತ್ಯಂತ ರೋಷದಿಂದಲೇ ಹೇಳುತ್ತಿದ್ದೇನೆ. ಕಳೆದ 25 ವರ್ಷ ಜನಪರ ಕ್ರಾಂತಿಕಾರಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಗೆಳೆಯ ಹೂವಪ್ಪ. ದೊಡ್ಡ ಜನಪ್ರಿಯತೆ ಇದ್ದಾಗಿಯೂ ಯಾವುದೇ ರೀತಿಯ ರಾಜಕಾರಣದ ಆಮಿಷಕ್ಕೂ ಬಲಿಯಾಗದೆ ಪ್ರಾಮಾಣಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಪ್ರಾಮಾಣಿಕ ಹೋರಾಟಗಾರ ಅನ್ನೋ ಮಾತಿಗೆ ಮುಕುಟ ಪ್ರಾಯವೇ ಆಗಿದ್ದರು ಹೂವಪ್ಪ. ಬಡ ವಕೀಲನಾಗಿ ಸದಾ ಬಡವರ ಪರ ದುಡಿಯುವ ವ್ಯಕ್ತಿಯಾಗಿದ್ದರು. ಚಿಕ್ಕಮಗಳೂರು ಸುತ್ತ ಮುತ್ತ ಚಳುವಳಿಯ ಕಾರ್ಯಕರ್ತರು ಪೋಲಿಸ್ ಏನ್ಕೌಂಟರ್‌ಗಳಿಗೆ ಒಳಗಾದಾಗ ತನ್ನ ಜೊತೆಗಿನ ಸಂಗಾತಿಗಳನ್ನು ಕರೆದಕೊಂಡು ಹೋಗಿ ಸುಳ್ಳು ಏನ್ಕೌಂಟರ್‌ಗೆ ಸಂಬಂಧಿಸಿ ಸತ್ಯ ಶೋಧನೆ ಬಯಲಿಗೆಳೆಯಲು ಪ್ರಯತ್ನಿಸಿದ್ದರು. ಆಮೂಲಕ ಚಿಕ್ಕಮಗಳೂರಿನ ಈ ಪುಟ್ಟ ಲಾಯರ್, ಜನಪರ ಕ್ರಾಂತಿಕಾತಿ ಲಾಯರ್ ಎಂದೇ ಖ್ಯಾತಿ ಹೊಂದಿದ್ದರು’ ಎಂದು ಅವರನ್ನು ಹತ್ತಿರದಿಂದ ಬಲ್ಲ ದೇಶಾದ್ರಿ ಹೊಸ್ಮನೆ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ನಾಡಿನ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗು ದಮನಿತರ ಮೇಲಿನ ಅನ್ಯಾಯಗಳ ವಿರುದ್ಧ ಅವರು ನಿಂತಿದ್ದರು. ಅದಕ್ಕಾಗಿ ರಾಜ್ಯದ ಹಲವೆಡೆಗಳಲ್ಲಿ ಓಡಾಡಿದ್ದರು. ಸರ್ಕಾರದ ಪಡೆಗಳು ಹೋರಾಟನಿರತ ಜನರ ಮೇಲೆ ನಡೆಸಿದ್ದ ಎನ್ ಕೌಂಟರ್ ಹೆಸರಿನ ಕಗ್ಗೊಲೆಗಳನ್ನು ಜನರೆದುರು ಸತ್ಯಶೋಧನೆಗಳ ಮೂಲಕ ಬಯಲುಗೊಳಿಸುವ ಕಾರ್ಯ ಮಾಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ದನಿಯೆತ್ತುತ್ತಾ ಬಂದವರಾಗಿದ್ದರು. ನಾಡಿನಲ್ಲಿ ನಡೆದ ಹಲವಾರು ಅಕ್ರಮ, ದೌರ್ಜನ್ಯಗಳ ವಿರುದ್ಧ ಸತ್ಯಶೋಧನಾ ತಂಡಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು’ ಎಂದು ‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ತುಂಗಾ ಉಳಿಸಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ನಂದಕುಮಾರ್ ಕೆ.ಎಸ್. ತಮ್ಮ ಫೇಸ್‌ಬುಕ್‌ನಲ್ಲಿ ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಳಸೇಶ್ವರ ಇನಾಮು ಭೂಮಿ, ಮೀಸಲು ಅರಣ್ಯ, ರಕ್ಷಿತಾರಣ್ಯ ಹೆಸರಿನಲ್ಲಿ ಆದಿವಾಸಿ ಮತ್ತಿತರ ಜನಸಾಮಾನ್ಯರ ಎತ್ತಂಗಡಿಗಳನ್ನು, ಅಪಾಯಕಾರಿ ಪರಿಸರ ವಿನಾಶಗಳನ್ನು, ಭಾರಿ ಕಾರ್ಪೋರೇಟುಗಳ ಕೊಳ್ಳೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಜನರ ಹೋರಾಟದ ಭಾಗವಾಗಿ ಸಕ್ರಿಯರಾಗಿ ಕೆಲಸ ಮಾಡಿದ್ದರು ಹೂವಪ್ಪ.

ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಹೇಳಲಾಗದ ಹತ್ತು ಹಲವು ಪ್ರತ್ಯಕ್ಷ ಹಾಗೂ ಪರೋಕ್ಷ ದೌರ್ಜನ್ಯ, ಅಪಮಾನ ಸಹಿಸಿ ಹೋರಾಡುತ್ತಾ ಬಹಳ ಕಷ್ಟದಿಂದ ಶಿಕ್ಷಿತರಾಗಿ ವಕೀಲರಾದವರು ಹೂವಪ್ಪ.

ಹೂವಪ್ಪ ದುಡಿಯುವ ಜನರ ಸಂಗಾತಿಯಾಗಿದ್ದರು. ದಲಿತ ದಮನಿತರ ನೋವಿನ ದನಿಯಾಗಿದ್ದರು, ಸಮಾಜ ಬದಲಾವಣೆಯ ಕ್ರಾಂತಿಕಾರಿ ಪ್ರಜಾತಾಂತ್ರಿಕ ಆಶೋತ್ತರಗಳನ್ನು ಹೃದಯದಲ್ಲಿಟ್ಟು ಕೊಂಡ ಸಹೃದಯ ಹೋರಾಟಗಾರರಾಗಿದ್ದರು. ಜಾತಿ ವಿನಾಶದ ಕಾರ್ಯಕರ್ತರಾಗಿದ್ದ ಹೂವಪ್ಪ. ವರ್ಗ, ಜಾತಿ, ಲಿಂಗ, ವರ್ಣಭೇಧಗಳ ವಿರುದ್ಧವಿದ್ದ ಮಾನವೀಯ ಕಳಕಳಿಯವರಾಗಿದ್ದರು.

ದುಡಿಯುವ ಜನತೆ ತನ್ನ ಒಂದು ದನಿಯನ್ನು ಕಳೆದುಕೊಂಡಿದೆ. ದಲಿತ, ಆದಿವಾಸಿ, ಅಲ್ಪ ಸಂಖ್ಯಾತ, ದಮನಿತರು ತಮ್ಮ ಹೋರಾಟದ ಸಂಗಾತಿಯನ್ನು ಕಳೆದುಕೊಂಡಿದ್ದಾರೆ.
ಅವರ ಬಾಳ ಸಂಗಾತಿ, ಪುಟ್ಟ ಮಗಳು ಹಾಗೂ ಕುಟುಂಬ ವರ್ಗದವರ ದುಃಖದಲ್ಲಿ ಪಾಲ್ಗೊಳ್ಳುತ್ತಾ ಭೌತಿಕವಾಗಿ ಅಗಲಿದ ಹೂವಪ್ಪರಿಗೆ ಶ್ರದ್ದಾಂಜಲಿ ಸಲ್ಲಿಸೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಜನಪರ ಹೋರಾಟಗಾರ, ವಕೀಲ ಹೂವಪ್ಪ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಾಮ್ರೇಡ್ ಹೂವಪ್ಪ ಅವರ ಜನಪರ ಕಾಳಜಿಯ ಬಗ್ಗೆ ಈಗ ತಾನೆ ಗೊತ್ತಾಗಿದೆ.
    *ಹೋರಾಟದ ಒಡನಾಡಿ ಹೂವಪ್ಪ* ಅವರಿಗೆ ಹೃದಯ ಪೂರ್ವಕ ಶ್ರದ್ಧಾಂಜಲಿ.

LEAVE A REPLY

Please enter your comment!
Please enter your name here

- Advertisment -

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...