Homeಚಳವಳಿಅಗಲಿದ ಮಲೆನಾಡಿನ ಮೌನಿ ಹೋರಾಟಗಾರ ಹೂವಪ್ಪ....

ಅಗಲಿದ ಮಲೆನಾಡಿನ ಮೌನಿ ಹೋರಾಟಗಾರ ಹೂವಪ್ಪ….

- Advertisement -
- Advertisement -

ಪ್ರಭುತ್ವದ ಮುಳ್ಳು-ಕಂಟೆಗಳಿಗೆ ಎದುರಾಗಿ ಸೆಣೆಸಿದ ಹೂವಿನಂತಹ ಹೃದಯದ ಹೂವಪ್ಪ ವಕೀಲರು ನಿನ್ನೆ ನಿಧನ ಹೊಂದಿದ್ದಾರೆ. ಕೊರೋನಾದಿಂದ ಚೇತರಿಸಿಕೊಂಡ ಅವರು ನಂತರ ಹೃದಯ ಸಂಬಂಧಿ ಕಾಯಿಲೆಗೆ ಪ್ರಾಣ ಬಿಟ್ಟಿದ್ದಾರೆ.

‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ತುಂಗಾ ಉಳಿಸಿ ಚಳುವಳಿ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಬಾಬಾ ಬುಡನ್‌ಗಿರಿ ಹೋರಾಟದಲ್ಲಿ ಹೂವಪ್ಪ ತುಂಬ ಕ್ರಿಯಾಶೀಲರಾಗಿದ್ದರು. ಹೋರಾಟಗಾರರ ಮೇಲೆ ಪ್ರಭುತ್ವ ಹಾಕುತ್ತಿದ್ದ ನಕಲಿ ಕೇಸುಗಳ ವಿರುದ್ಧ ಒಬ್ಬ ವಕೀಲರಾಗಿ ಅವರು ತುಂಬ ಕೆಲಸ ಮಾಡಿದ್ದಾರೆ’ ಎನ್ನುತ್ತಾರೆ ಅವರನ್ನು ಬಹು ವರ್ಷಗಳಿಂದ ಬಲ್ಲ ಹೋರಾಟದ ಒಡನಾಡಿ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್..

ಅತ್ಯಂತ ಸಂಭಾವಿತರಾಗಿದ್ದ ಹೂವಪ್ಪ ಯಾರಿಗೂ ಎಂದಿಗೂ ಕೇಡು ಬಗೆಯಲಿಲ್ಲ. ಸದಾ ನಗುಮೊಗದಲ್ಲೇ ವಿರೋಧಿಗಳನ್ನು ಮಾತನಾಡಿಸುತ್ತಿದ್ದ ಮನುಷ್ಯ. ಆದರೂ ಕೊರೋನಾ ಅವರನ್ನು ನುಂಗಿಕೊಂಡು ಬಿಟ್ಟಿದೆ. ಅದಕ್ಕೆ ಇನ್ನೆಷ್ಟು ಸಾವುಗಳು ಬೇಕೋ? ಹೊಣೆಗೇಡಿ ಸರ್ಕಾರಗಳು ತಂದಿಟ್ಟ ಆಪತ್ತಿಗೆ ಹೋರಾಟದ ಗೆಳೆಯ ಹೂವಪ್ಪ ಕೂಡ ಬಲಿಯಾಗಿ ಬಿಟ್ಟ ಎನ್ನುವುದನ್ನು ಅತ್ಯಂತ ರೋಷದಿಂದಲೇ ಹೇಳುತ್ತಿದ್ದೇನೆ. ಕಳೆದ 25 ವರ್ಷ ಜನಪರ ಕ್ರಾಂತಿಕಾರಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಗೆಳೆಯ ಹೂವಪ್ಪ. ದೊಡ್ಡ ಜನಪ್ರಿಯತೆ ಇದ್ದಾಗಿಯೂ ಯಾವುದೇ ರೀತಿಯ ರಾಜಕಾರಣದ ಆಮಿಷಕ್ಕೂ ಬಲಿಯಾಗದೆ ಪ್ರಾಮಾಣಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಪ್ರಾಮಾಣಿಕ ಹೋರಾಟಗಾರ ಅನ್ನೋ ಮಾತಿಗೆ ಮುಕುಟ ಪ್ರಾಯವೇ ಆಗಿದ್ದರು ಹೂವಪ್ಪ. ಬಡ ವಕೀಲನಾಗಿ ಸದಾ ಬಡವರ ಪರ ದುಡಿಯುವ ವ್ಯಕ್ತಿಯಾಗಿದ್ದರು. ಚಿಕ್ಕಮಗಳೂರು ಸುತ್ತ ಮುತ್ತ ಚಳುವಳಿಯ ಕಾರ್ಯಕರ್ತರು ಪೋಲಿಸ್ ಏನ್ಕೌಂಟರ್‌ಗಳಿಗೆ ಒಳಗಾದಾಗ ತನ್ನ ಜೊತೆಗಿನ ಸಂಗಾತಿಗಳನ್ನು ಕರೆದಕೊಂಡು ಹೋಗಿ ಸುಳ್ಳು ಏನ್ಕೌಂಟರ್‌ಗೆ ಸಂಬಂಧಿಸಿ ಸತ್ಯ ಶೋಧನೆ ಬಯಲಿಗೆಳೆಯಲು ಪ್ರಯತ್ನಿಸಿದ್ದರು. ಆಮೂಲಕ ಚಿಕ್ಕಮಗಳೂರಿನ ಈ ಪುಟ್ಟ ಲಾಯರ್, ಜನಪರ ಕ್ರಾಂತಿಕಾತಿ ಲಾಯರ್ ಎಂದೇ ಖ್ಯಾತಿ ಹೊಂದಿದ್ದರು’ ಎಂದು ಅವರನ್ನು ಹತ್ತಿರದಿಂದ ಬಲ್ಲ ದೇಶಾದ್ರಿ ಹೊಸ್ಮನೆ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ನಾಡಿನ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗು ದಮನಿತರ ಮೇಲಿನ ಅನ್ಯಾಯಗಳ ವಿರುದ್ಧ ಅವರು ನಿಂತಿದ್ದರು. ಅದಕ್ಕಾಗಿ ರಾಜ್ಯದ ಹಲವೆಡೆಗಳಲ್ಲಿ ಓಡಾಡಿದ್ದರು. ಸರ್ಕಾರದ ಪಡೆಗಳು ಹೋರಾಟನಿರತ ಜನರ ಮೇಲೆ ನಡೆಸಿದ್ದ ಎನ್ ಕೌಂಟರ್ ಹೆಸರಿನ ಕಗ್ಗೊಲೆಗಳನ್ನು ಜನರೆದುರು ಸತ್ಯಶೋಧನೆಗಳ ಮೂಲಕ ಬಯಲುಗೊಳಿಸುವ ಕಾರ್ಯ ಮಾಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ದನಿಯೆತ್ತುತ್ತಾ ಬಂದವರಾಗಿದ್ದರು. ನಾಡಿನಲ್ಲಿ ನಡೆದ ಹಲವಾರು ಅಕ್ರಮ, ದೌರ್ಜನ್ಯಗಳ ವಿರುದ್ಧ ಸತ್ಯಶೋಧನಾ ತಂಡಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು’ ಎಂದು ‘ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ತುಂಗಾ ಉಳಿಸಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ನಂದಕುಮಾರ್ ಕೆ.ಎಸ್. ತಮ್ಮ ಫೇಸ್‌ಬುಕ್‌ನಲ್ಲಿ ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಳಸೇಶ್ವರ ಇನಾಮು ಭೂಮಿ, ಮೀಸಲು ಅರಣ್ಯ, ರಕ್ಷಿತಾರಣ್ಯ ಹೆಸರಿನಲ್ಲಿ ಆದಿವಾಸಿ ಮತ್ತಿತರ ಜನಸಾಮಾನ್ಯರ ಎತ್ತಂಗಡಿಗಳನ್ನು, ಅಪಾಯಕಾರಿ ಪರಿಸರ ವಿನಾಶಗಳನ್ನು, ಭಾರಿ ಕಾರ್ಪೋರೇಟುಗಳ ಕೊಳ್ಳೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಜನರ ಹೋರಾಟದ ಭಾಗವಾಗಿ ಸಕ್ರಿಯರಾಗಿ ಕೆಲಸ ಮಾಡಿದ್ದರು ಹೂವಪ್ಪ.

ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಹೇಳಲಾಗದ ಹತ್ತು ಹಲವು ಪ್ರತ್ಯಕ್ಷ ಹಾಗೂ ಪರೋಕ್ಷ ದೌರ್ಜನ್ಯ, ಅಪಮಾನ ಸಹಿಸಿ ಹೋರಾಡುತ್ತಾ ಬಹಳ ಕಷ್ಟದಿಂದ ಶಿಕ್ಷಿತರಾಗಿ ವಕೀಲರಾದವರು ಹೂವಪ್ಪ.

ಹೂವಪ್ಪ ದುಡಿಯುವ ಜನರ ಸಂಗಾತಿಯಾಗಿದ್ದರು. ದಲಿತ ದಮನಿತರ ನೋವಿನ ದನಿಯಾಗಿದ್ದರು, ಸಮಾಜ ಬದಲಾವಣೆಯ ಕ್ರಾಂತಿಕಾರಿ ಪ್ರಜಾತಾಂತ್ರಿಕ ಆಶೋತ್ತರಗಳನ್ನು ಹೃದಯದಲ್ಲಿಟ್ಟು ಕೊಂಡ ಸಹೃದಯ ಹೋರಾಟಗಾರರಾಗಿದ್ದರು. ಜಾತಿ ವಿನಾಶದ ಕಾರ್ಯಕರ್ತರಾಗಿದ್ದ ಹೂವಪ್ಪ. ವರ್ಗ, ಜಾತಿ, ಲಿಂಗ, ವರ್ಣಭೇಧಗಳ ವಿರುದ್ಧವಿದ್ದ ಮಾನವೀಯ ಕಳಕಳಿಯವರಾಗಿದ್ದರು.

ದುಡಿಯುವ ಜನತೆ ತನ್ನ ಒಂದು ದನಿಯನ್ನು ಕಳೆದುಕೊಂಡಿದೆ. ದಲಿತ, ಆದಿವಾಸಿ, ಅಲ್ಪ ಸಂಖ್ಯಾತ, ದಮನಿತರು ತಮ್ಮ ಹೋರಾಟದ ಸಂಗಾತಿಯನ್ನು ಕಳೆದುಕೊಂಡಿದ್ದಾರೆ.
ಅವರ ಬಾಳ ಸಂಗಾತಿ, ಪುಟ್ಟ ಮಗಳು ಹಾಗೂ ಕುಟುಂಬ ವರ್ಗದವರ ದುಃಖದಲ್ಲಿ ಪಾಲ್ಗೊಳ್ಳುತ್ತಾ ಭೌತಿಕವಾಗಿ ಅಗಲಿದ ಹೂವಪ್ಪರಿಗೆ ಶ್ರದ್ದಾಂಜಲಿ ಸಲ್ಲಿಸೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಜನಪರ ಹೋರಾಟಗಾರ, ವಕೀಲ ಹೂವಪ್ಪ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಾಮ್ರೇಡ್ ಹೂವಪ್ಪ ಅವರ ಜನಪರ ಕಾಳಜಿಯ ಬಗ್ಗೆ ಈಗ ತಾನೆ ಗೊತ್ತಾಗಿದೆ.
    *ಹೋರಾಟದ ಒಡನಾಡಿ ಹೂವಪ್ಪ* ಅವರಿಗೆ ಹೃದಯ ಪೂರ್ವಕ ಶ್ರದ್ಧಾಂಜಲಿ.

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...