ಕೊರೊನಾ ಕಾಲದ ಆಪದ್ಬಾಂಧವನಾಗಿದ್ದ ಬಹುಭಾಷಾ ನಟ, ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಮತ್ತೊಮ್ಮೆ ತಾವು ನಿಜ ಜೀವನದ ಹೀರೋ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ಮನೆಗಳನ್ನು ತಲುಪುವಲ್ಲಿ ನಟ ಸೋನು ಸೂದ್ ಚಾರಿಟಿ ಸಂಸ್ಥೆ ಸಹಾಯಕಕೆ ನಿಂತಿದೆ. ಅಲ್ಲಿನ ವಿದ್ಯಾರ್ಥಿಗಳು ಸೂಕ್ತವಾಗಿ ಗಡಿಗಳನ್ನು ತಲುಪಲು, ಅಲ್ಲಿಂದ ದೇಶಕ್ಕೆ ಬರುವಲ್ಲಿ ಇವರು ಸಹಾಯ ಮಾಡುತ್ತಿದ್ದಾರೆ. ಸೋನು ಸೂದ್ ಅವರ ತಂಡದ ಕಾರ್ಯವನ್ನು ಶ್ಲಾಘಿಸಿ ಹಲವರು ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
“ಉಕ್ರೇನ್ನಲ್ಲಿರುವ ನಮ್ಮ ವಿದ್ಯಾರ್ಥಿಗಳಿಗೆ ಇದು ಕಷ್ಟದ ಸಮಯ ಮತ್ತು ಇಲ್ಲಿಯವರೆಗಿನ ನನ್ನ ಕೆಲಸಗಳಲ್ಲಿ ಅತೀ ಕಠಿಣ ಕೆಲಸ ಇದು. ಆದರೆ, ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳಿಗೆ ಗಡಿ ದಾಟಿ ಸುರಕ್ಷಿತ ಪ್ರದೇಶಕ್ಕೆ ಹೋಗಲು ಸಹಾಯ ಮಾಡಿದ್ದೇವೆ. ಇದಕ್ಕಾಗಿ ಪ್ರಯತ್ನಿಸುತ್ತಲೇ ಇರೋಣ. ಅವರಿಗೆ ನಮ್ಮ ಅವಶ್ಯಕತೆಯಿದೆ” ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ನಟ ಸೋನು ಸೂದ್ ಕಾರನ್ನು ವಶಕ್ಕೆ ಪಡೆದ ಪೊಲೀಸರು
Tough times for our students in Ukraine & probably my toughest assignment till date. Fortunately we managed to help many students cross the border to safe territory. Lets keep trying. They need us. Thank You @eoiromania🇮🇳 @IndiaInPoland @meaindia for your prompt help.
Jai Hind🇮🇳 https://t.co/q9oJ428pHu— sonu sood (@SonuSood) March 2, 2022
ಕೋವಿಡ್ ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡಿದ್ದಕ್ಕಾಗಿ ಸೋನು ಸೂದ್ ಜನರ ಮನಗೆದ್ದಿದ್ದರು. ಅಂದಿನಿಂದ ಅವರು ಜನರಿಗಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಗಳಿಸಿದ್ದಾರೆ. ಈಗ ಯುದ್ಧ ಪೀಡಿತ ಉಕ್ರೇನ್ನ ಹಲವು ನಗರಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ನಟ ಮತ್ತು ಆತನ ತಂಡ ಈಗ ಸಹಾಯ ಮಾಡುತ್ತಿದೆ.
That's my job.
I am glad that I was able to do my bit,
Big thank you to Government of India for all the support.
Jai hind 🇮🇳 https://t.co/KWhf7R4pP9— sonu sood (@SonuSood) March 2, 2022
It’s so nice to see our Real Hero @sonusood helping hundreds of students stuck in Ukraine to cross borders and reach safe places. Heroes like him keep the faith in humanity alive. #Indiansinukraine pic.twitter.com/cmKLZhMsyY
— ललित अग्रवाल 🇮🇳 (@LalitAgarwalla_) March 2, 2022
ತಮ್ಮ ಟ್ವಿಟರ್ ಖಾತೆಯಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ವಿವರಿಸಿರುವ ನಟ ಸೋನು ಸೂದ್, “ಸ್ಥಳೀಯ ಟ್ಯಾಕ್ಸಿಗಳನ್ನು ವಿದ್ಯಾರ್ಥಿಗಳಿರುವ ಸ್ಥಳಕ್ಕೆ ಕಳುಹಿಸಲಾಗುತ್ತದೆ, ಅಲ್ಲಿಂದ ಅವರನ್ನು ಖಾರ್ಕಿವ್ನ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ಅವರು ರೈಲಿನಲ್ಲಿ ಎಲ್ವಿವ್ ನಗರದ ಸುರಕ್ಷಿತ ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಬಳಿಕ ಅವರನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ” ಎಂದಿದ್ದಾರೆ. ಪ್ರತಿಯೊಂದು ಹಂತಗಳನ್ನು ನಟ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಡೇಟ್ ಮಾಡುತ್ತಿದ್ದಾರೆ.
Keep it up@SonuSood @mssirsa @narendramodi #SaveIndianStudents #UkraineRussiaWar pic.twitter.com/GYWFgpEtQI
— 8 Crore MSMEs & 25 crore Farmers are backbone (@sme1965) March 2, 2022
ಇದನ್ನೂ ಓದಿ: ‘ಕಾಲವೆ ಕಥೆ ಹೇಳುತ್ತದೆ!’ – ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ
Good proud Indian..
His motivation is PM of India Modiji..
Good charities to be encouraged
Jai hindh