Homeರಾಷ್ಟ್ರೀಯಪ್ರತಿ ಭಾರತೀಯರನ್ನು ಸರಾಸರಿ ಐದು ವರ್ಷ ಮುಂಚಯೆ ಕೊಲ್ಲುತ್ತಿರುವ ‘ವಾಯು ಮಾಲಿನ್ಯ’!

ಪ್ರತಿ ಭಾರತೀಯರನ್ನು ಸರಾಸರಿ ಐದು ವರ್ಷ ಮುಂಚಯೆ ಕೊಲ್ಲುತ್ತಿರುವ ‘ವಾಯು ಮಾಲಿನ್ಯ’!

ಲಕ್ನೊ ನಿವಾಸಿಗಳು ತಮ್ಮ ಆಯುಷ್ಯದ 9.5 ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ

- Advertisement -
- Advertisement -

ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಸರಾಸರಿ ಭಾರತೀಯ ನಿವಾಸಿಗಳು ತಮ್ಮ ಜೀವನದ ಐದು ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಚಿಕಾಗೋ ವಿಶ್ವವಿದ್ಯಾನಿಲಯದ (ಇಪಿಐಸಿ) ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ವರದಿ ಮಾಡಿದೆ. ಈ ವರದಿಯು, ದೆಹಲಿಯಲ್ಲಿ ಪ್ರಸ್ತುತ ಮಾಲಿನ್ಯದ ಮಟ್ಟವು ಮುಂದುವರಿದರೆ ಅಲ್ಲಿ ವಾಸಿಸುವ ಜನರು 10 ವರ್ಷಗಳವರೆಗೆ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ ಎಂದು ಸೂಚಿಸಿದೆ.

ವಿಶ್ವದ ಇತರ ಎಲ್ಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ವಾಯು ಮಾಲಿನ್ಯದ ಅತಿ ಹೆಚ್ಚು ಆರೋಗ್ಯದ ಹೊರೆಯನ್ನು ಎದುರಿಸುತ್ತಿದೆ ಎಂದು ವರದಿ ಹೇಳಿದೆ. ಇದಕ್ಕೆ ಕಾರಣ ಹೆಚ್ಚಿನ ಜನಸಂಖ್ಯೆ ಮತ್ತು ಹೆಚ್ಚಿನ ಕಣಗಳ ಮಾಲಿನ್ಯದ ಸಾಂದ್ರತೆ ಎಂದು ವರದಿಯೂ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ, ಸರಾಸರಿ ವಾರ್ಷಿಕ ‘PM2.5’ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ ಐದು ಮೈಕ್ರೋಗ್ರಾಂಗಳಿಗಿಂತ ಹೆಚ್ಚಿರಬಾರದು. ಆದರೆ ದೆಹಲಿಯಲ್ಲಿ ಸರಾಸರಿ ವಾರ್ಷಿಕ PM2.5 ಸಾಂದ್ರತೆಯೆಯೂ 21 ಪಟ್ಟು ಹೆಚ್ಚು ಹೊಂದಿದೆ. ದೆಹಲಿಯ ‘PM2.5’ ಸಾಂದ್ರತೆಯು ಪ್ರತಿ ಘನ ಮೀಟರ್‌ಗೆ 107 ಮೈಕ್ರೋಗ್ರಾಂಗಳನ್ನು ಮೀರಿದೆ.

‘PM2.5’ ಎಂಬುವುದು 2.5 ಮೈಕ್ರೊಮೀಟರ್‌ಗಳಿಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳನ್ನು ಸೂಚಿಸುತ್ತದೆ. ಇದು ಮಾನವ ಕೂದಲುಗಿಂತ 100 ಪಟ್ಟು ಹೆಚ್ಚು ತೆಳ್ಳಗಿರುತ್ತದೆ. ವಾತಾವರಣದಲ್ಲಿ ನಡೆಯುವ ಇಂಧನ ಮತ್ತು ರಾಸಾಯನಿಕ ಕ್ರಿಯೆಗಳನ್ನು ಸುಡುವ ಪರಿಣಾಮವಾಗಿ ಈ ಕಣಗಳು ರೂಪುಗೊಳ್ಳುತ್ತವೆ.

2013 ರಿಂದ ವಿಶ್ವದ ಮಾಲಿನ್ಯದಲ್ಲಿ 44% ನಷ್ಟು ಹೆಚ್ಚಳವು ಭಾರತದಿಂದ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದು WHO ಮಾರ್ಗಸೂಚಿಗಳಿಗಿಂತ ಸುಮಾರು 11 ಪಟ್ಟು ಹೆಚ್ಚಾಗಿದೆ.

ಕಳೆದ ಎರಡು ದಶಕಗಳಲ್ಲಿ ಕೈಗಾರಿಕೀಕರಣ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ ಭಾರತದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ. ಜನಸಂಖ್ಯೆ ಬೆಳವಣಿಗೆಯು ಮತ್ತೊಂದು ಪ್ರಮುಖ ಅಂಶವಾಗಿದ್ದು, ಇದರಿಂದಾಗಿ ಶಕ್ತಿ ಮತ್ತು ಪಳೆಯುಳಿಕೆ ಇಂಧನ ಬಳಕೆಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತಿದೆ.

ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ: 5 ಸ್ಟಾರ್‌ ಹೋಟೆಲ್‌ನಲ್ಲಿ ಕುಳಿತ‍ ಜನ ರೈತರನ್ನು ದೂಷಿಸುತ್ತಿದ್ದಾರೆ- ಸುಪ್ರೀಂ ತರಾಟೆ

130 ಕೋಟಿ ಭಾರತೀಯರು ವಾರ್ಷಿಕ ಸರಾಸರಿ ಕಣಗಳ ಮಾಲಿನ್ಯದ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾರ್ಗಸೂಚಿಗಳನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 63% ಕ್ಕಿಂತ ಹೆಚ್ಚು ಜನಸಂಖ್ಯೆಯು ಭಾರತದ ಸ್ವಯಂ ರಾಷ್ಟ್ರೀಯ ವಾಯು ಗುಣಮಟ್ಟದ ಮಾನದಂಡವಾದ ಪ್ರತಿ ಘನ ಮೀಟರ್‌ಗೆ 40 ಮೈಕ್ರೋಗ್ರಾಂಗಳನ್ನು ಮೀರುವ ಪ್ರದೇಶಗಳಲ್ಲಿದೆ.

ಸಿಂದೂ-ಗಂಗಾ ಬಯಲು ಪ್ರದೇಶವು 50 ಕೋಟಿಗೂ ಹೆಚ್ಚು ಭಾರತೀಯರ ನೆಲೆಯಾಗಿದ್ದು, ಇದು ಭಾರತದ ಅತ್ಯಂತ ಕಲುಷಿತ ಪ್ರದೇಶವಾಗಿದೆ. ಹೊಸ ವರದಿಯ ಪ್ರಕಾರ, ಇಲ್ಲಿ ವಾಸಿಸುವ ಜನರು ತಮ್ಮ ಜೀವಿತಾವಧಿಯ 7.6 ವರ್ಷಗಳನ್ನು ಕಳೆದುಕೊಳ್ಳುತ್ತಾರೆ. ನಿರ್ದಿಷ್ಟವಾಗಿ ಲಕ್ನೋ ನಿವಾಸಿಗಳು ತಮ್ಮ ಜೀವನದ 9.5 ವರ್ಷಗಳನ್ನು ಕಳೆದುಕೊಳ್ಳುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ವಾಸಿಸುವ ಜನರು ವಾಯುಮಾಲಿನ್ಯದಿಂದಾಗಿ ಹೆಚ್ಚಿನ ಜೀವಿತಾವಧಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಪಾಕ್ ಕಾರಣ ಎಂದ ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ವಾಯು ಮಾಲಿನ್ಯವು ಜಾಗತಿಕವಾಗಿ 2.2 ವರ್ಷಗಳ ಜೀವಿತಾವಧಿಯನ್ನು ಕಸಿಯುತ್ತಿದೆ ಎಂದು ವರದಿ ತಿಳಿಸಿದೆ. ಇದನ್ನು ಧೂಮಾಪಾನ ಮಾಡಿದ ಪರಿಣಾಮಕ್ಕೆ ಹೋಲಿಸಬಹುದಾಗಿದೆ. ವಾಯು ಮಾಲಿನ್ಯದಿಂದ ಆಲ್ಕೋಹಾಲ್ ಬಳಕೆ ಮತ್ತು ಅಸುರಕ್ಷಿತ ನೀರು ಬಳಸಿ ಮೃತಪಡುವುದಕ್ಕಿಂತ ಮೂರು ಪಟ್ಟು ಹೆಚ್ಚು ಜನರು ಅಸುನೀಗುತ್ತಿದ್ದಾರೆ. ಎಚ್‌ಐವಿ ಏಡ್ಸ್‌ ರೋಗಕ್ಕೆ ಸಾಯುವುದಕ್ಕಿಂತ ಆರು ಪಟ್ಟು ಹೆಚ್ಚು ಜನರು ವಾಯು ಮಾಲಿನ್ಯದಿಂದ ಮೃತಪಡುತ್ತಾರೆ. ಸಂಘರ್ಷ ಮತ್ತು ಭಯೋತ್ಪಾದನೆಯಲ್ಲಿ ಮೃತಪಡುವುದಕ್ಕಿಂತ 89 ಪಟ್ಟು ಹೆಚ್ಚಿನ ಜನರು ವಾಯು ಮಾಲಿನ್ಯದಿಂದ ಮೃತಪಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...