ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಳೇ ಶಿಡೇನೂರು ಗ್ರಾಮದಲ್ಲಿ ಜಮೀನು ವಿಚಾರದಲ್ಲಿ ಶಾಸಕ ನೆಹರು ಓಲೇಕಾರ ಮತ್ತು ಅವರ ಪುತ್ರ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಒಬ್ಬರು ಮಹಿಳೆ ಸೇರಿದಂತೆ ದಲಿತ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ 70 ವರ್ಷದ ಪಾಂಡಪ್ಪ ಕಬ್ಬೂರು, 65 ವರ್ಷದ ಗಂಗವ್ವ ಕಬ್ಬೂರು, ವರ್ಷದ 41 ಹನುಮಂತಪ್ಪ ಬಡಿಗೇರ್ ಮತ್ತು 72 ವರ್ಷದ ಗುರುಶಾಂತಪ್ಪ ಲಮಾಣಿ ಅವರನ್ನು ಬ್ಯಾಡಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಆಸ್ಪತ್ರೆ ಎದುರು ಜಮಾಯಿಸಿದ ಗ್ರಾಮಸ್ಥರು ಬಿಜೆಪಿ ಶಾಸಕ ನೆಹರು ಓಲೇಕಾರ ವಿರುದ್ಧ ಘೋಷಣೆ ಕೂಗಿ ಶಾಸಕ ಹಾಗೂ ಅವರ ಪುತ್ರ ಮಂಜುನಾಥ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ‘ಇದು ಕುಪ್ಪಳ್ಳಿ ಕಹಳೆ’-ಪಠ್ಯಪುಸ್ತಕ ಹಗರಣ ವಿರೋಧಿಸಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಹಂಸಲೇಖ
2007-08 ರಲ್ಲಿ ರಾಜ್ಯ ಸರ್ಕಾರ 29 ದಲಿತ ಕುಟುಂಬಗಳಿಗೆ ತಲಾ ಒಂದು ಎಕರೆ 15 ಗುಂಟೆಗಳನ್ನು ನೀಡಿತ್ತು. ಗ್ರಾಮದ ಶೇಖರಗೌಡ ಪಾಟೀಲ ಎಂಬುವರು ದಲಿತ ಕುಟುಂಬಗಳಿಗೆ ನೀಡಿರುವ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಶಾಸಕರ ಮಗ ಮಂಜುನಾಥ್ ಅವರಿಗೆ ಬೆಂಬಲ ನೀಡಿದ್ದು, 15 ಗುಂಟೆ ಜಮೀನು ಬಿಟ್ಟು ನೀಡುವಂತೆ ದಲಿತ ಕುಟುಂಬಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಂಗಳವಾರವೂ ಮಂಜುನಾಥ್ ಗ್ರಾಮಕ್ಕೆ ಭೇಟಿ ನೀಡಿದ್ದು, ಜಮೀನು ಬಿಟ್ಟುಕೊಡುವಂತೆ ಕಿರುಕುಳ ನೀಡಿದ್ದಾರೆ. ಬಳಿಕ ನಾಲ್ವರು ವಿಷ ಸೇವಿಸಿದ್ದಾರೆ ಎಂದಿದ್ದಾರೆ. ಆದರೆ, ಶಾಸಕ ನೆಹರು ಓಲೇಕಾರ ಆರೋಪವನ್ನು ನಿರಾಕರಿಸಿದ್ದು, ಘಟನೆಯ ಹಿಂದೆ ಬ್ಯಾಡಗಿಯ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಅವರ ಕೈವಾಡವಿದೆ. ರೈತರನ್ನು ಅವರು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
#FIR against 4 members of a #Dalit family 4 attempting suicide alleging #BJP MLA Nehru Olekar & his son R harassing them over land issue #Haveri.MLA:land was allotted 2them near crematorium & they wanted different land. During survey of the land, they attempted suicide cops. pic.twitter.com/12QHqsDSKG
— Imran Khan (@KeypadGuerilla) June 15, 2022
ಆತ್ಮಹತ್ಯೆಗೆ ಯತ್ನಿಸಿದ ನಾಲ್ವರ ಮೇಲೆ ಬುಧವಾರ ಪ್ರಕರಣ ದಾಖಲಾಗಿದೆ.
ಘಟನೆಯನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್, “ದಲಿತರಿಗೆ ಮಂಜೂರಾಗಿದ್ದ ಅಲ್ಪ ಭೂಮಿಯಲ್ಲೂ ಬಿಜೆಪಿ ಶಾಸಕ ನೆಹರು ಓಲೆಕಾರ್ ಕುಟುಂಬಕ್ಕೆ ಪಾಲು ಬೇಕಂತೆ! ಸಿಎಂ ಬಸವರಾಜ ಬೊಮ್ಮಾಯಿಯವರೇ, ನಿಮ್ಮದೇ ಜಿಲ್ಲೆಯಲ್ಲಿ ನಡೆದ ದೌರ್ಜನ್ಯವಿದು. ಸಿನೆಮಾ ನೋಡುವುದಷ್ಟೇ ಅಲ್ಲ, ಇಲ್ಲೂ ಸ್ವಲ್ಪ ನೋಡಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ದಲಿತರಿಗೆ ರಕ್ಷಣೆ ಕೊಡಿ. ಅವರ ಚಿಕಿತ್ಸೆ ಜವಾಬ್ದಾರಿಯನ್ನ ಸರ್ಕಾರವೇ ಹೊರಬೇಕು” ಎಂದಿದೆ.
ದಲಿತರಿಗೆ ಮಂಜೂರಾಗಿದ್ದ ಅಲ್ಪ ಭೂಮಿಯಲ್ಲೂ ಬಿಜೆಪಿ ಶಾಸಕ ನೆಹರು ಓಲೆಕಾರ್ ಕುಟುಂಬಕ್ಕೆ ಪಾಲು ಬೇಕಂತೆ!@BSBommai ಅವರೇ, ನಿಮ್ಮದೇ ಜಿಲ್ಲೆಯಲ್ಲಿ ನಡೆದ ದೌರ್ಜನ್ಯವಿದು. ಸಿನೆಮಾ ನೋಡುವುದಷ್ಟೇ ಅಲ್ಲ, ಇಲ್ಲೂ ಸ್ವಲ್ಪ ನೋಡಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ದಲಿತರಿಗೆ ರಕ್ಷಣೆ ಕೊಡಿ. ಅವರ ಚಿಕಿತ್ಸೆ ಜವಾಬ್ದಾರಿಯನ್ನ ಸರ್ಕಾರವೇ ಹೊರಬೇಕು pic.twitter.com/y5Ud9d2JS0
— Karnataka Congress (@INCKarnataka) June 15, 2022
ಇದನ್ನೂ ಓದಿ: ಪಠ್ಯಪುಸ್ತಕ ಹಗರಣ ಅಪ್ಡೇಟ್ | ಬಿಜೆಪಿಗರೆ ನೀವು ತುಕ್ಡೆ ಗ್ಯಾಂಗಿನ ನಾಯಕರು: ಸಿದ್ದರಾಮಯ್ಯ ಆಕ್ರೊಶ
What is going on in our state?
CM sir, please see what is happening in your state.
You can witness cinemas later. First you attend burning problems of weaker sections.