Homeಮುಖಪುಟಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

ಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

- Advertisement -
- Advertisement -

ಕರಾವಳಿಯ ಅತ್ಯಂತ ಭೀಕರ ಕೋಮುಗಲಭೆ ನಡೆದ ಸುರತ್ಕಲ್ ಸುತ್ತಮುತ್ತಲಿನ ಕೋಮುಗಲಭೆಗಳು, ಕೊಲೆಗಳು ಅಲ್ಲಿಗೇ ನಿಲ್ಲಲಿಲ್ಲ. ಅದು ಇಂದಿನ ವರೆಗೂ ಮುಂದುವರಿದಿದೆ. ಕೃಷ್ಣಾಪುರ-ಕಾಟಿಪಳ್ಳ ಪ್ರದೇಶಗಳಲ್ಲಿ ಮತ್ತೆ ಮತ್ತೆ ಘರ್ಷಣೆಗಳು ನಡೆಯುತ್ತಾ ಬಂದಿವೆ. ಇದಕ್ಕೆ ಒಂದು ಪ್ರಮುಖ ಕಾರಣವೂ ಇದೆ. ಈ ಪ್ರದೇಶದಲ್ಲಿ ಇರುವುದು ಹೆಚ್ಚಾಗಿ ಬಂದರು ನಿರ್ಮಾಣದ ವೇಳೆ ನಿರಾಶ್ರಿತರಾದವರ ಮನೆಗಳು. ಸರಕಾರ ಅವರಿಗೆ ಸೈಟುಗಳನ್ನು ಹಂಚುವಾಗ ಹಿಂದೂ ಮತ್ತು ಮುಸ್ಲಿಮರಿಗೆ ಮಿಶ್ರ ಮಾಡಿ ಹಂಚಬೇಕಿತ್ತು. ಆದರೆ, ಅದು ಕೆಲವು ಬ್ಲಾಕ್‌ಗಳಲ್ಲಿ ಕೇವಲ ಹಿಂದೂಗಳಿಗೆ ಮತ್ತು ಕೆಲವು ಬ್ಲಾಕ್‌ಗಳಲ್ಲಿ ಮುಸ್ಲಿಮರಿಗೆ ಮಾತ್ರ ಸೈಟುಗಳನ್ನು ಹಂಚಿತ್ತು. ಪರಿಣಾಮವಾಗಿ ಯಾವುದೇ ಕೋಮು ಉದ್ವಿಗ್ನತೆ ಉಂಟಾದಾಗ ಈ ಎರಡು ಪ್ರದೇಶಗಳು ಎರಡು ದೇಶಗಳಂತೆ ಕಂಡು, ಎರಡೂ ಕಡೆ ಜನರು ಜಮಾಯಿಸುತ್ತಾರೆ.

ಅಲ್ಲದೇ, ಬಂದರು ಆದ ಬಳಿಕ ಪಣಂಬೂರು, ಕುಳಾಯಿ, ಸುರತ್ಕಲ್, ನೆರೆಯ ಕಾನ, ಬಾಳ ಮುಂತಾದ ಕಡೆ ಎಂಆರ್‌ಪಿಎಲ್ ಸಹಿತ ಹಲವು ಚಿಕ್ಕದೊಡ್ಡ ಉದ್ದಿಮೆಗಳ ಜೊತೆ ಹಲವಾರು ರೀತಿಯ ದಂಧೆಗಳು ಆರಂಭವಾಗಿದ್ದವು. ಹಾಗಾಗಿ ವಹಿವಾಟು ಸಂಬಂಧಿ ವೈಯಕ್ತಿಕ ದ್ವೇಷಗಳೂ ಕೋಮುಗಲಾಟೆಗೆ ಕಾರಣಗಳಾಗುತ್ತಿದ್ದವು.

ಸುರತ್ಕಲ್‌ ಪ್ರದೇಶದಲ್ಲಿ ಮತ್ತೆ ನಡೆದ ಘಟನೆಯೆಂದರೆ 2006ಲ್ಲಿ ನಡೆದ ಮಾರ್ಬಲ್ ಅಂಗಡಿಯೊಂದರ ಮಾಲಕನಾಗಿದ್ದ ಸುಖಾನಂದ ಶೆಟ್ಟಿ ಕೊಲೆ. ಮೂಲತಃ ಮುಲ್ಕಿಯ ಶೆಟ್ಟಿ  ಹಿಂದೂತ್ವವಾದಿ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದು, ಗೋವು ಸಾಗಾಟಗಾರರ ಮೇಲೆ ದಾಳಿ, ಲವ್ ಜೆಹಾದ್ ವಿಷಯದಲ್ಲಿ ಹಲ್ಲೆ ಮುಂತಾಗಿ ಯುವಕರಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದ ವ್ಯಕ್ತಿ. ಈತನನ್ನು ಸುರತ್ಕಲ್ ಸಮೀಪದ ಕುಳಾಯಿ ಹೊನ್ನಕಟ್ಟೆಯಲ್ಲಿದ್ದ ಆತನ ಮಾರ್ಬಲ್ ಅಂಗಡಿಗೆ ಕಾರಿನಲ್ಲಿ ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿತ್ತು. ಈ ಪ್ರಕರಣದ ವಿಚಾರಣೆ ಕೆಲವರ್ಷ ನಡೆದು 17 ಆರೋಪಿಗಳಿಗೆ ಖುಲಾಸೆಯಾಗಿತ್ತು. ಇವರಲ್ಲಿ ಕೆಲವರು ಬಾಡಿಗೆ ಹತ್ಯೆಯಿಂದ ಹಿಡಿದು ಹಲವು ರೀತಿಯ ಕ್ರಿಮಿನಲ್ ಕೃತ್ಯಗಳಲ್ಲಿ ಬಾಗಿಯಾದ ಪಕ್ಕಾ ರೌಡಿಗಳಿದ್ದರು. ಈ ಪ್ರಕರಣದಲ್ಲಿಯೂ ಘರ್ಷಣೆಯ ಕಿಚ್ಚು ಹೊತ್ತಿದ್ದು, ಎಜೆ ಆಸ್ಪತ್ರೆ ಬಳಿ ಗೋಲಿಬಾರ್ ಕೂಡಾ ನಡೆದಿತ್ತು. ಗಲಭೆಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಇವರಲ್ಲಿ ಒಬ್ಬನಾದ ಕಬೀರ್ ಎಂಬಾತನನ್ನು ಗುರುಪುರ ಬಳಿ ಬೈಕಿಗೆ ಕಾರು ಡಿಕ್ಕಿ ಹೊಡೆಸಿ, ನಂತರ ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಯಿತು. ಬಾಡಿಗೆ ಹಂತಕನೆಂದು ಕುಖ್ಯಾತಿ ಗಳಿಸಿದ್ದ ಮುಲ್ಕಿ ರಫೀಕ್ ಯಾನೆ ಕೊಳಚೆಕಂಬ್ಳ ರಫೀಕ್‌ನನ್ನು ತಮಿಳುನಾಡಿನಿಂದ ಪೊಲೀಸರು ಬಂಧಿಸಿತಂದಿದ್ದರು. ನಂತರ ಈತ ಮಣಿಪಾಲದ ಬಳಿ ರೈಲು ನಿಲ್ದಾಣದ ಎದುರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಇನ್ನೊಬ್ಬ ರೌಡಿ ಮಾಡೂರು ಯೂಸುಫ್ ಅಥವಾ ಇಸುಬುನನ್ನು ಮಂಗಳೂರು ಜೈಲಿನಲ್ಲಿ ಸಹಕೈದಿಗಳು ಕೊಂದಿದ್ದರು. ಬುಲೆಟ್ ಸುಧೀರ್ ಎಂಬಾತ ಕುಂದಾಪುರದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.

ಇದರ ಅರ್ಥವೆಂದರೆ, ಕರಾವಳಿಯಲ್ಲಿ ನಡೆಯುವ ಕೋಮುಗಲಭೆಗಳು, ಕೊಲೆಗಳು ನೇರವಾಗಿ ಧರ್ಮಕ್ಕೆ ಸಂಬಂಧಿಸಿದವುಗಳಲ್ಲ. ಅವು ಧರ್ಮರಾಜಕಾರಣ ಮತ್ತು ಎರಡು ನಂಬರ್ ದಂಧೆಗಳಿಗೆ, ಇತರ ವ್ಯವಹಾರಗಳಿಗೆ ಸಂಬಂಧಿಸಿದವುಗಳಾಗಿವೆ. ಇಲ್ಲಿ ನಡೆದ ಎಲ್ಲಾ ಕೋಮು ಗಲಭೆ ಮತ್ತು ಆ ಸಂಬಂಧಿ ಕೊಲೆಗಳ ವಿಷಯವನ್ನು ಬರೆಯುತ್ತಾ ಹೋದರೆ, ಒಂದು ಪುಸ್ತಕವನ್ನೇ ಬರೆಯಬೇಕಾದೀತು.  ಸುರತ್ಕಲ್‌ ಪರಿಸರದಲ್ಲಿ 2018ರಲ್ಲಿಯೇ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಂಬಾತನ ಕೊಲೆ ನಡೆದಿದ್ದರೆ, ಪ್ರತೀಕಾರವೋ ಎಂಬಂತೆ ಕೆಲದಿನಗಳಲ್ಲೇ ಕೊಟ್ಟಾರ ಚೌಕಿಯಲ್ಲಿ ಬಶೀರ್ ಎಂಬಾತನ ಕೊಲೆ ನಡೆದಿತ್ತು.

ಇಲ್ಲಿ ಇನ್ನೊಂದು ವಿಷಯವನ್ನು ಇಲ್ಲಿ ಉಲ್ಲೇಖಿಸಬೇಕು. ಎಲ್ಲಾ ಪ್ರಕರಣಗಳಲ್ಲಿ ರಾಜಕೀಯ ಮಧ್ಯಪ್ರವೇಶದಿಂದ ಪೊಲೀಸರು ಪಕ್ಷಪಾತದ ಆರೋಪಕ್ಕೆ ಗುರಿಯಾಗಿ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಮುಂತಾದ ಘಟನೆಗಳು ನಡೆದಿದ್ದವು. ಸುರತ್ಕಲ್ ಠಾಣೆಯಂತೂ ಹಲವಾರು ಬಾರಿ ಗುಂಪು ಮುತ್ತಿಗೆಗೆ ಗುರಿಯಾಗಿದೆ.

ಆದುದರಿಂದ ಇಲ್ಲಿ ಎಲ್ಲಾ ಪ್ರಕರಣಗಳನ್ನು ಕಾಲಾನುಕ್ರಮದಲ್ಲಿ ಹೇಳಲು ಹೋಗದೆ, ಅತ್ಯಂತ ಸೂಕ್ಷ್ಮವಾದ ಕೆಲವು ಪ್ರದೇಶಗಳು ಮತ್ತು ಅವುಗಳಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಎಲ್ಲಾ ಘಟನೆಗಳು ಒಂದೇ ಮಾದರಿ (ಮೋಡಸ್ ಒಪೆರಾಂಡಿ)ಯಲ್ಲಿ ನಡೆದಿದ್ದು, ಎರಡೂ ಕೋಮುಗಳು ಮತ್ತು ಅವುಗಳನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಒಂದೇ ರೀತಿ ಇರುವುದರಿಂದ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುವ ಅಗತ್ಯವಿಲ್ಲ.

ಸುರತ್ಕಲ್‌ನಂತೆ ಕೋಮುಸೂಕ್ಷ್ಮವಾಗಿದ್ದು, ಹಲವಾರು ಕೊಲೆ ಮತ್ತು ಪ್ರತೀಕಾರದ ಕೊಲೆಗಳಿಗೆ ಸಾಕ್ಷಿಯಾಗಿರುವುದೆಂದರೆ, ಪೊಳಲಿ ಮತ್ತು ಮಾಡೂರು ಪರಿಸರ. ಇಲ್ಲಿ ಏನಾದರೂ ಆರಂಭವಾದರೆ, ಅದು ಬಜ್ಪೆ, ಬಿ.ಸಿ.ರೋಡು, ಮಾರಿಪಳ್ಳ, ಫರಂಗಿಪೇಟೆ ಮುಂತಾದ ಕಡೆಗಳಿಗೆ ವ್ಯಾಪಿಸುತ್ತದೆ. ವರ್ಷಗಳ ಹಿಂದೆ ಇಲ್ಲಿ ಪೊಳಲಿ ಕಮಲಾಕ್ಷ ಎಂಬಾತನ ಕೊಲೆ ನಡೆದಿತ್ತು. ಕಾಟಿಪಳ್ಳ-ಕೃಷ್ಣಾಪುರದಂತೆಯೇ ಮಾಡೂರಿನಲ್ಲಿ ಮುಸ್ಲಿಂ ಬಾಹುಳ್ಯವಿದ್ದರೆ, ಸುತ್ತಲೂ ಹಿಂದೂ ಬಾಹುಳ್ಯವಿದೆ. ನಂತರ ನಾಗೇಶ ಶೆಟ್ಟಿಗಾರ್ ಎಂಬಾತನ ಕೊಲೆ ನಡೆಯಿತು. ತಕ್ಷಣವೇ ಮಂಗಳೂರಿನ ಜಪ್ಪು ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆ ನಡೆದಿತ್ತು. ಇದು ಪ್ರತೀಕಾರಾರ್ಥ ಕೊಲೆ ಎಂದು ಹೇಳಲಾಗಿತ್ತು.

ನಂತರ ಎಲ್ಲರನ್ನೂ ಬೆಚ್ಚಿ ಬೀಳಿಸಿದ ಘಟನೆ ಎಂದರೆ, ಮಾಡೂರಿನ ಕಾಂಗ್ರೆಸ್ ನಾಯಕ ಮತ್ತು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರನ್ನು ಅವರ ಕಚೇರಿಯಲ್ಲಿಯೇ, ಅವರ ಹೆಂಡತಿ ಮಕ್ಕಳ ಕಣ್ಣೆದುರೇ, ಭೀಕರವಾಗಿ ಕೊಚ್ಚಿ ಕೊಲ್ಲಲಾಗಿತ್ತು. ಈ ಪ್ರಕರಣದ ಆರೋಪಿಗಳೆಂದರೆ ಪೊಳಲಿ ಅನಂತು ಮತ್ತು ಇತರರು. ಮಾಡೂರು ಇಸುಬು ಕೊಲೆ ಪ್ರಕರಣವನ್ನು ಹಿಂದೆ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಬಿಡುಗಡೆ ಹೊಂದಿದ ಅನಂತುವನ್ನು ಹಿಂದೂತ್ವವಾದಿ ಸಂಘಟನೆಗಳು ಮಂಗಳೂರಿನಿಂದ ಪೊಳಲಿಗೆ ಮೆರವಣಿಗೆಯಲ್ಲಿ ಒಯ್ದಿದ್ದರು. ನಂತರ ಒಂಟಿಯಾಗಿ ಹೋಗುತ್ತಿದ್ದ ಆತನನ್ನು ಪ್ರತೀಕಾರವಾಗಿ ಕೊಲ್ಲಲಾಗಿತ್ತು. ಬೆನ್ನಲ್ಲೇ ಜಬ್ಬಾರ್ ಹತ್ಯೆಯಲ್ಲಿ ಶಾಮೀಲಾಗಿದ್ದನೆನ್ನಲಾದ ಸಂತೋಷ ಯಾನೆ ಕ್ಯಾಂಡಲ್ ಸಂತು ಎಂಬಾತನ ಕೊಲೆಯೂ ನಡೆದಿತ್ತು. ಈ ರೀತಿಯ ಕೊಲೆಗಳ ಸರಣಿ ಉಳ್ಳಾಲ ಮತ್ತಿತರ ಕಡೆಗಳಲ್ಲೂ ನಡೆದಿದ್ದು, ಕೋಮು ವಿಷ ಎಷ್ಟರ ಮಟ್ಟಿಗೆ ಹರಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. (ಇನ್ನಷ್ಟು ಕೋಮುಸಂಬಂಧಿ ಘಟನೆಗಳು ಮತ್ತು ಹುನ್ನಾರಗಳ ವಿವರ ಮುಂದೆ ನೋಡೋಣ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...