Homeಮುಖಪುಟಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

ಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

- Advertisement -
- Advertisement -

ಕರಾವಳಿಯ ಅತ್ಯಂತ ಭೀಕರ ಕೋಮುಗಲಭೆ ನಡೆದ ಸುರತ್ಕಲ್ ಸುತ್ತಮುತ್ತಲಿನ ಕೋಮುಗಲಭೆಗಳು, ಕೊಲೆಗಳು ಅಲ್ಲಿಗೇ ನಿಲ್ಲಲಿಲ್ಲ. ಅದು ಇಂದಿನ ವರೆಗೂ ಮುಂದುವರಿದಿದೆ. ಕೃಷ್ಣಾಪುರ-ಕಾಟಿಪಳ್ಳ ಪ್ರದೇಶಗಳಲ್ಲಿ ಮತ್ತೆ ಮತ್ತೆ ಘರ್ಷಣೆಗಳು ನಡೆಯುತ್ತಾ ಬಂದಿವೆ. ಇದಕ್ಕೆ ಒಂದು ಪ್ರಮುಖ ಕಾರಣವೂ ಇದೆ. ಈ ಪ್ರದೇಶದಲ್ಲಿ ಇರುವುದು ಹೆಚ್ಚಾಗಿ ಬಂದರು ನಿರ್ಮಾಣದ ವೇಳೆ ನಿರಾಶ್ರಿತರಾದವರ ಮನೆಗಳು. ಸರಕಾರ ಅವರಿಗೆ ಸೈಟುಗಳನ್ನು ಹಂಚುವಾಗ ಹಿಂದೂ ಮತ್ತು ಮುಸ್ಲಿಮರಿಗೆ ಮಿಶ್ರ ಮಾಡಿ ಹಂಚಬೇಕಿತ್ತು. ಆದರೆ, ಅದು ಕೆಲವು ಬ್ಲಾಕ್‌ಗಳಲ್ಲಿ ಕೇವಲ ಹಿಂದೂಗಳಿಗೆ ಮತ್ತು ಕೆಲವು ಬ್ಲಾಕ್‌ಗಳಲ್ಲಿ ಮುಸ್ಲಿಮರಿಗೆ ಮಾತ್ರ ಸೈಟುಗಳನ್ನು ಹಂಚಿತ್ತು. ಪರಿಣಾಮವಾಗಿ ಯಾವುದೇ ಕೋಮು ಉದ್ವಿಗ್ನತೆ ಉಂಟಾದಾಗ ಈ ಎರಡು ಪ್ರದೇಶಗಳು ಎರಡು ದೇಶಗಳಂತೆ ಕಂಡು, ಎರಡೂ ಕಡೆ ಜನರು ಜಮಾಯಿಸುತ್ತಾರೆ.

ಅಲ್ಲದೇ, ಬಂದರು ಆದ ಬಳಿಕ ಪಣಂಬೂರು, ಕುಳಾಯಿ, ಸುರತ್ಕಲ್, ನೆರೆಯ ಕಾನ, ಬಾಳ ಮುಂತಾದ ಕಡೆ ಎಂಆರ್‌ಪಿಎಲ್ ಸಹಿತ ಹಲವು ಚಿಕ್ಕದೊಡ್ಡ ಉದ್ದಿಮೆಗಳ ಜೊತೆ ಹಲವಾರು ರೀತಿಯ ದಂಧೆಗಳು ಆರಂಭವಾಗಿದ್ದವು. ಹಾಗಾಗಿ ವಹಿವಾಟು ಸಂಬಂಧಿ ವೈಯಕ್ತಿಕ ದ್ವೇಷಗಳೂ ಕೋಮುಗಲಾಟೆಗೆ ಕಾರಣಗಳಾಗುತ್ತಿದ್ದವು.

ಸುರತ್ಕಲ್‌ ಪ್ರದೇಶದಲ್ಲಿ ಮತ್ತೆ ನಡೆದ ಘಟನೆಯೆಂದರೆ 2006ಲ್ಲಿ ನಡೆದ ಮಾರ್ಬಲ್ ಅಂಗಡಿಯೊಂದರ ಮಾಲಕನಾಗಿದ್ದ ಸುಖಾನಂದ ಶೆಟ್ಟಿ ಕೊಲೆ. ಮೂಲತಃ ಮುಲ್ಕಿಯ ಶೆಟ್ಟಿ  ಹಿಂದೂತ್ವವಾದಿ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದು, ಗೋವು ಸಾಗಾಟಗಾರರ ಮೇಲೆ ದಾಳಿ, ಲವ್ ಜೆಹಾದ್ ವಿಷಯದಲ್ಲಿ ಹಲ್ಲೆ ಮುಂತಾಗಿ ಯುವಕರಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದ ವ್ಯಕ್ತಿ. ಈತನನ್ನು ಸುರತ್ಕಲ್ ಸಮೀಪದ ಕುಳಾಯಿ ಹೊನ್ನಕಟ್ಟೆಯಲ್ಲಿದ್ದ ಆತನ ಮಾರ್ಬಲ್ ಅಂಗಡಿಗೆ ಕಾರಿನಲ್ಲಿ ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿತ್ತು. ಈ ಪ್ರಕರಣದ ವಿಚಾರಣೆ ಕೆಲವರ್ಷ ನಡೆದು 17 ಆರೋಪಿಗಳಿಗೆ ಖುಲಾಸೆಯಾಗಿತ್ತು. ಇವರಲ್ಲಿ ಕೆಲವರು ಬಾಡಿಗೆ ಹತ್ಯೆಯಿಂದ ಹಿಡಿದು ಹಲವು ರೀತಿಯ ಕ್ರಿಮಿನಲ್ ಕೃತ್ಯಗಳಲ್ಲಿ ಬಾಗಿಯಾದ ಪಕ್ಕಾ ರೌಡಿಗಳಿದ್ದರು. ಈ ಪ್ರಕರಣದಲ್ಲಿಯೂ ಘರ್ಷಣೆಯ ಕಿಚ್ಚು ಹೊತ್ತಿದ್ದು, ಎಜೆ ಆಸ್ಪತ್ರೆ ಬಳಿ ಗೋಲಿಬಾರ್ ಕೂಡಾ ನಡೆದಿತ್ತು. ಗಲಭೆಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಇವರಲ್ಲಿ ಒಬ್ಬನಾದ ಕಬೀರ್ ಎಂಬಾತನನ್ನು ಗುರುಪುರ ಬಳಿ ಬೈಕಿಗೆ ಕಾರು ಡಿಕ್ಕಿ ಹೊಡೆಸಿ, ನಂತರ ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಯಿತು. ಬಾಡಿಗೆ ಹಂತಕನೆಂದು ಕುಖ್ಯಾತಿ ಗಳಿಸಿದ್ದ ಮುಲ್ಕಿ ರಫೀಕ್ ಯಾನೆ ಕೊಳಚೆಕಂಬ್ಳ ರಫೀಕ್‌ನನ್ನು ತಮಿಳುನಾಡಿನಿಂದ ಪೊಲೀಸರು ಬಂಧಿಸಿತಂದಿದ್ದರು. ನಂತರ ಈತ ಮಣಿಪಾಲದ ಬಳಿ ರೈಲು ನಿಲ್ದಾಣದ ಎದುರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಇನ್ನೊಬ್ಬ ರೌಡಿ ಮಾಡೂರು ಯೂಸುಫ್ ಅಥವಾ ಇಸುಬುನನ್ನು ಮಂಗಳೂರು ಜೈಲಿನಲ್ಲಿ ಸಹಕೈದಿಗಳು ಕೊಂದಿದ್ದರು. ಬುಲೆಟ್ ಸುಧೀರ್ ಎಂಬಾತ ಕುಂದಾಪುರದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.

ಇದರ ಅರ್ಥವೆಂದರೆ, ಕರಾವಳಿಯಲ್ಲಿ ನಡೆಯುವ ಕೋಮುಗಲಭೆಗಳು, ಕೊಲೆಗಳು ನೇರವಾಗಿ ಧರ್ಮಕ್ಕೆ ಸಂಬಂಧಿಸಿದವುಗಳಲ್ಲ. ಅವು ಧರ್ಮರಾಜಕಾರಣ ಮತ್ತು ಎರಡು ನಂಬರ್ ದಂಧೆಗಳಿಗೆ, ಇತರ ವ್ಯವಹಾರಗಳಿಗೆ ಸಂಬಂಧಿಸಿದವುಗಳಾಗಿವೆ. ಇಲ್ಲಿ ನಡೆದ ಎಲ್ಲಾ ಕೋಮು ಗಲಭೆ ಮತ್ತು ಆ ಸಂಬಂಧಿ ಕೊಲೆಗಳ ವಿಷಯವನ್ನು ಬರೆಯುತ್ತಾ ಹೋದರೆ, ಒಂದು ಪುಸ್ತಕವನ್ನೇ ಬರೆಯಬೇಕಾದೀತು.  ಸುರತ್ಕಲ್‌ ಪರಿಸರದಲ್ಲಿ 2018ರಲ್ಲಿಯೇ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಂಬಾತನ ಕೊಲೆ ನಡೆದಿದ್ದರೆ, ಪ್ರತೀಕಾರವೋ ಎಂಬಂತೆ ಕೆಲದಿನಗಳಲ್ಲೇ ಕೊಟ್ಟಾರ ಚೌಕಿಯಲ್ಲಿ ಬಶೀರ್ ಎಂಬಾತನ ಕೊಲೆ ನಡೆದಿತ್ತು.

ಇಲ್ಲಿ ಇನ್ನೊಂದು ವಿಷಯವನ್ನು ಇಲ್ಲಿ ಉಲ್ಲೇಖಿಸಬೇಕು. ಎಲ್ಲಾ ಪ್ರಕರಣಗಳಲ್ಲಿ ರಾಜಕೀಯ ಮಧ್ಯಪ್ರವೇಶದಿಂದ ಪೊಲೀಸರು ಪಕ್ಷಪಾತದ ಆರೋಪಕ್ಕೆ ಗುರಿಯಾಗಿ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಮುಂತಾದ ಘಟನೆಗಳು ನಡೆದಿದ್ದವು. ಸುರತ್ಕಲ್ ಠಾಣೆಯಂತೂ ಹಲವಾರು ಬಾರಿ ಗುಂಪು ಮುತ್ತಿಗೆಗೆ ಗುರಿಯಾಗಿದೆ.

ಆದುದರಿಂದ ಇಲ್ಲಿ ಎಲ್ಲಾ ಪ್ರಕರಣಗಳನ್ನು ಕಾಲಾನುಕ್ರಮದಲ್ಲಿ ಹೇಳಲು ಹೋಗದೆ, ಅತ್ಯಂತ ಸೂಕ್ಷ್ಮವಾದ ಕೆಲವು ಪ್ರದೇಶಗಳು ಮತ್ತು ಅವುಗಳಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಎಲ್ಲಾ ಘಟನೆಗಳು ಒಂದೇ ಮಾದರಿ (ಮೋಡಸ್ ಒಪೆರಾಂಡಿ)ಯಲ್ಲಿ ನಡೆದಿದ್ದು, ಎರಡೂ ಕೋಮುಗಳು ಮತ್ತು ಅವುಗಳನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಒಂದೇ ರೀತಿ ಇರುವುದರಿಂದ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುವ ಅಗತ್ಯವಿಲ್ಲ.

ಸುರತ್ಕಲ್‌ನಂತೆ ಕೋಮುಸೂಕ್ಷ್ಮವಾಗಿದ್ದು, ಹಲವಾರು ಕೊಲೆ ಮತ್ತು ಪ್ರತೀಕಾರದ ಕೊಲೆಗಳಿಗೆ ಸಾಕ್ಷಿಯಾಗಿರುವುದೆಂದರೆ, ಪೊಳಲಿ ಮತ್ತು ಮಾಡೂರು ಪರಿಸರ. ಇಲ್ಲಿ ಏನಾದರೂ ಆರಂಭವಾದರೆ, ಅದು ಬಜ್ಪೆ, ಬಿ.ಸಿ.ರೋಡು, ಮಾರಿಪಳ್ಳ, ಫರಂಗಿಪೇಟೆ ಮುಂತಾದ ಕಡೆಗಳಿಗೆ ವ್ಯಾಪಿಸುತ್ತದೆ. ವರ್ಷಗಳ ಹಿಂದೆ ಇಲ್ಲಿ ಪೊಳಲಿ ಕಮಲಾಕ್ಷ ಎಂಬಾತನ ಕೊಲೆ ನಡೆದಿತ್ತು. ಕಾಟಿಪಳ್ಳ-ಕೃಷ್ಣಾಪುರದಂತೆಯೇ ಮಾಡೂರಿನಲ್ಲಿ ಮುಸ್ಲಿಂ ಬಾಹುಳ್ಯವಿದ್ದರೆ, ಸುತ್ತಲೂ ಹಿಂದೂ ಬಾಹುಳ್ಯವಿದೆ. ನಂತರ ನಾಗೇಶ ಶೆಟ್ಟಿಗಾರ್ ಎಂಬಾತನ ಕೊಲೆ ನಡೆಯಿತು. ತಕ್ಷಣವೇ ಮಂಗಳೂರಿನ ಜಪ್ಪು ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆ ನಡೆದಿತ್ತು. ಇದು ಪ್ರತೀಕಾರಾರ್ಥ ಕೊಲೆ ಎಂದು ಹೇಳಲಾಗಿತ್ತು.

ನಂತರ ಎಲ್ಲರನ್ನೂ ಬೆಚ್ಚಿ ಬೀಳಿಸಿದ ಘಟನೆ ಎಂದರೆ, ಮಾಡೂರಿನ ಕಾಂಗ್ರೆಸ್ ನಾಯಕ ಮತ್ತು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರನ್ನು ಅವರ ಕಚೇರಿಯಲ್ಲಿಯೇ, ಅವರ ಹೆಂಡತಿ ಮಕ್ಕಳ ಕಣ್ಣೆದುರೇ, ಭೀಕರವಾಗಿ ಕೊಚ್ಚಿ ಕೊಲ್ಲಲಾಗಿತ್ತು. ಈ ಪ್ರಕರಣದ ಆರೋಪಿಗಳೆಂದರೆ ಪೊಳಲಿ ಅನಂತು ಮತ್ತು ಇತರರು. ಮಾಡೂರು ಇಸುಬು ಕೊಲೆ ಪ್ರಕರಣವನ್ನು ಹಿಂದೆ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಬಿಡುಗಡೆ ಹೊಂದಿದ ಅನಂತುವನ್ನು ಹಿಂದೂತ್ವವಾದಿ ಸಂಘಟನೆಗಳು ಮಂಗಳೂರಿನಿಂದ ಪೊಳಲಿಗೆ ಮೆರವಣಿಗೆಯಲ್ಲಿ ಒಯ್ದಿದ್ದರು. ನಂತರ ಒಂಟಿಯಾಗಿ ಹೋಗುತ್ತಿದ್ದ ಆತನನ್ನು ಪ್ರತೀಕಾರವಾಗಿ ಕೊಲ್ಲಲಾಗಿತ್ತು. ಬೆನ್ನಲ್ಲೇ ಜಬ್ಬಾರ್ ಹತ್ಯೆಯಲ್ಲಿ ಶಾಮೀಲಾಗಿದ್ದನೆನ್ನಲಾದ ಸಂತೋಷ ಯಾನೆ ಕ್ಯಾಂಡಲ್ ಸಂತು ಎಂಬಾತನ ಕೊಲೆಯೂ ನಡೆದಿತ್ತು. ಈ ರೀತಿಯ ಕೊಲೆಗಳ ಸರಣಿ ಉಳ್ಳಾಲ ಮತ್ತಿತರ ಕಡೆಗಳಲ್ಲೂ ನಡೆದಿದ್ದು, ಕೋಮು ವಿಷ ಎಷ್ಟರ ಮಟ್ಟಿಗೆ ಹರಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. (ಇನ್ನಷ್ಟು ಕೋಮುಸಂಬಂಧಿ ಘಟನೆಗಳು ಮತ್ತು ಹುನ್ನಾರಗಳ ವಿವರ ಮುಂದೆ ನೋಡೋಣ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...