Homeಅಂಕಣಗಳುಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳೋ? ಆಳುವವರ ಸಾಕು ನಾಯಿಗಳೋ?

- Advertisement -
- Advertisement -

ಹಂಗಾರ ಅಧಿಕಾರ ದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಸುದ್ದಿಯ ಮೂಲವೇ ಈ ಸಲದ ಸುದ್ದಿ. ಸುದ್ದಿ ಎಲ್ಲಿಂದ ಬರತದ ಅನ್ನೋದು ಬಲ್ಲಿರೇನಯ್ಯ? ಮೊನ್ನೆ ಏನಾತಪಾ ಅಂದರ ವಿಶ್ವದ ಅತಿ ಶ್ರೀಮಂತರ ಪೈಕಿ ಒಬ್ಬರಾದ ಜೆಫರಿ ಬೆಜೋಸ್ ಅನ್ನೋ ಅಮೇಜಾನ್ ಕಂಪನಿ ಮಾಲಿಕರು ದೆಹಲಿಗೆ ಬಂದಿದ್ದರು.

ಪ್ರತಿ ಸಾರಿ ಸಾಹುಕಾರರು ಬಂದಾಗ ಸರಕಾರಿ ಸಾಲಿಗೆ ಸಾಹೇಬರು ಬಂದಾಗ ಹುಡುಗರು ನೀಟಾಗಿ ಸಮವಸ್ತ್ರ ಹಕ್ಕೊಂಡು, ಸಾಲಾಗಿ ನಿಂತು ನಮಸ್ಕಾರ ಅಂತಾರಲ್ಲ, ಹಂಗ ಪ್ರಧಾನ ಮಂತ್ರಿ ಆದಿಯಾಗಿ ಎಲ್ಲ ಮಂತ್ರಿವರೇಣ್ಯರು ನಿಲ್ಲತಿದ್ದರು. ಐಟಿ, ಬಿಟಿ, ಕೋಟಿ, ಚೀಟಿ, ರೋಟಿ ಕಂಪನಿಗಳ ಮಾಲಿಕರು ಅವರ ಕೈಕುಲುಕಿ ನಮಗೊಂದಿಷ್ಟು ಕೂಲಿ ಕೊಡಿ ಅಂತ ಅಂತಿದ್ದರು. ಆದರ ಈ ಸಲೆ ಮಾತ್ರ ಮನಿಷಾನ್ನ ಯಾರು ಭೇಟಿ ಆಗಲಿಲ್ಲ. ಅವರು ನಮ್ಮ ದೇಶದಾಗ ಸಾವಿರ ಕೋಟಿ ಡಾಲರ್ ಬಂಡವಾಳ ಹೂಡಿ ಲಕ್ಷಾಂತರ ಜನರಿಗೆ ಉದ್ಯೋಗ ಕೊಡತೇನಿ ಅಂದರು. ಆದರೂ ಸಹಿತ ಯಾರೂ ಅವರ ಸಂಗತೆ ಮಾತಾಡಲಿಲ್ಲ. ಹೋಗಲಿ, ಕೇಂದ್ರ ಹಣಕಾಸು ಸಚಿವರು ಅವರು ಬಂಡವಾಳ ಹೂಡೋದೇನು ನಮ್ಮ ಮ್ಯಾಲ ಉಪಕಾರ ಮಾಡಲಿಕ್ಕೆ ಹತ್ತಿಲ್ಲ, ಅಂತ ಒಂದು ಡ್ಯಾಷ್ ಡ್ಯಾಷ್ ನೋಟ ಬೀರಿದರು. ಏ ಅಮ್ಮೀಜಾನ್, ಈ ಇಂಡಿಯಾಕ್ಕ ಹೋಗೋ ಐಡಿಯಾ ಕೊಟ್ಟವ ಯಾವಾನವಾ ಅಂತ ಅವರು ತಮ್ಮ ಕಚೇರಿ ಒಳಗ ಜೋರಾಗಿ ಕೂಗಾಡಿರಬೇಕು.

ಆ ಅಂತರಜಾಲಿಯ ಮ್ಯಾಲೆ ನಮ್ಮನ್ನಾಳುವವರ ರಂಜಿಷ್ಗೆ ಕಾರಣ ಏನು ಇದ್ದಿರಬಹುದು? ಬೇಜೋಸ್ ಅವರು ನೆಹರೂ ಜಾಕೆಟ್ ಹಕ್ಕೊಂಡು ಮಹಾತ್ಮಾಗಾಂಧಿ ಸಮಾಧಿಗೆ ಭೇಟಿ ನೀಡಿದ್ದರು. ಅದೂ ಒಂದು ಕಾರಣ ಇರಬಹುದು ಅಂತ ಮೋಷಾ ವಿರೋಧಿಗಳು ಹೇಳಿಕೋತ ಅಡ್ಯಾಡಲಿಕ್ಕೆ ಹತ್ಯಾರಂತ.

ಆದರ ಖರೇ ಸಿಟ್ಟು ಯಾಕಂದರ ಅಮೇರಿಕದ ವಾಷಿಂಗಟನ್ ಪೋಸ್ಟ್ ಪತ್ರಿಕೆ ವರದಿಗಾರರು, ಅಂಕಣಕಾರರು ಭಾರತದ ಸರಕಾರದ ಬಗ್ಗೆ ಸಕಾರಣ ಟೀಕೆ ಮಾಡಿ ಒಂದಿಷ್ಟು ಸುದ್ದಿ ಬರದಾರ. ಬೇಜೋಸ್ ಅವರು ಆ ಪತ್ರಿಕೆ ಮಾಲಿಕರು. ಅಷ್ಟ.

ನಾಕಾಣಿ ಅನ್ನೋ ಹೆಸರಿಟ್ಟುಕೊಂಡಿರುವ ಆಳುವ ಪಕ್ಷದ ನಾಯಕರೊಬ್ಬರು ಮೊನ್ನೆ ರಾತ್ರೋ ರಾತ್ರಿ ಫೇಮಸ್ ಆದರು. ಅವರು ಮಾಡಿದ್ದಿಷ್ಟೇ. ಅವರು ಟ್ವೀಟು ಮಾಡಿದರು. ನಾವು ಸಣ್ಣವರಿದ್ದಾಗ ಕೆಲಸ ಇಲ್ಲದ ಬಡಿಗ್ಯಾ ಮಗಾ ಕೂಡಲಿಕ್ಕೆ ಮೂರು ಮಣಿ ಮಾಡಿದ್ದನಂತ ಅಂತ ಒಂದು ಗಾದಿ ಮಾತು ಇತ್ತು. ಈಗ ಅದು ಬದಲಾಗಿ. ಮಾಡಲಿಕ್ಕೆ ಕೆಲಸ ಇರಲಾರದವರು ಟ್ವೀಟು ಮಾಡಿದ್ದರಂತ ಅಂತ ಆಗೇದ. ಈ ಚೌಥಾಯಿಯಾ ಅನ್ನೋರು ಬೇಜೋಸ್ ಅವರ ಹೆಸರಿಗೆ ಟ್ವೀಟು ಮಾಡಿದರು. “ನೀವು ಇಲ್ಲಿ ಬಂದು ನಮ್ಮ ದೇಶ ಛಲೋ ಅಂದರ ಸಾಲಂಗಿಲ್ಲ. ಅದನ್ನ ಹೋಗಿ ವಾಷಿಂಗಟನ್ನಿನ ನಿಮ್ಮ ನೌಕರರಿಗೆ ಹೇಳಿರಿ” ಅದರ ಅರ್ಥ ಏನಂದರ ವಾಪೋ ಪತ್ರಿಕೆ ಮೋಷಾ ಸರಕಾರದ ಬಗ್ಗೆ ದನಾತ್ಮಕವಾಗಿ ಬರೀಬೇಕು ಅಂತ. ಅವರ ಪ್ರಕಾರ ಅತಳ ಪತಳ ರಸಾತಳದಾಗಿನ ಯಾರೂ ನಮ್ಮ ಸರಕಾರವನ್ನು ಟೀಕೆ ಮಾಡಬಾರದು. ಚಿಕಿತ್ಸಕ ದೃಷ್ಟಿಯಿಂದ ನೋಡಬಾರದು. ಎಲ್ಲರೂ ಉಘೇ ಉಘೇ ಅನ್ನಬೇಕು.

ಅದನ್ನ ನೋಡಿ, ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಂಡ ಪತ್ರಿಕೆಯ ಜಾಗತಿಕ ಅಭಿಪ್ರಾಯ ವಿಭಾಗದ ಸಂಪಾದಕ ಎಲ್ಲೀ ಲೋಪೆಜ್ ಅವರು ಸಟಕ್ಕನ ಉತ್ತರ ಕೊಟ್ಟರು. “ಜೆಫ್ ಬೆಜೋಸ್ ಅವರು ನಮ್ಮ ಪತ್ರಿಕೆಯೊಳಗ ನಾವು ಏನು ಬರೀಬೇಕು ಅಂತ ಹೇಳಿಕೊಡಂಗಿಲ್ಲ” ಅಂತ. ಅದರ ಅರ್ಥ ನಿಮ್ಮ ದೇಶದಾಗ ನೀವು ಪತ್ರಿಕೆ ಮಾಲಿಕರ ಮಾತು ಕೇಳಿ ಸುದ್ದಿ ಬರೀತೀರಿ ಅಂತನೂ ಆಗಬಹುದು. “ಸ್ವತಂತ್ರ ಪತ್ರಿಕೋದ್ಯಮದ ಕೆಲಸ ಅಂದರೆ ಸರಕಾರಕ್ಕ ಬೆಣ್ಣಿ ಹಚ್ಚೋದಲ್ಲ. ನಾವೇನು ತಪ್ಪು ಮಾಡ್ತಿಲ್ಲ. ಭಾರತದ ಪ್ರಜಾಪ್ರಭುತ್ವದ ತತ್ವ ಭಂಗವಾಗದ ಹಂಗ ನಾವು ಸುದ್ದಿ ಮಾಡ್ತಿದ್ದೇವೆ” ಅಂತ ಒಂದು ಸ್ಪಷ್ಟೀಕರಣನೂ ಕೊಟ್ಟರು.

ಇದನ್ನ ನೋಡಿದರ ಅಮೇರಿಕೆ ಪತ್ರಿಕೋದ್ಯಮದ ದಂತ ಕಥೆ ಎನ್ನಲಾದ ವಾಷಿಂಗಟನ್ ಪೋಸ್ಟಿನ ಮಾಜಿ ಸಂಪಾದಕ ಬೆನಜಮಿನ್ ಬ್ರ್ಯಾಡಲೀ ಅವರ ನೆನಪು ಆಗತದ.

ಅಧ್ಯಕ್ಷ ರಿಚರ್ಡ ನಿಕ್ಸನ್ ಅವರನ್ನ ಕುರ್ಚಿಯಿಂದ ಇಳಿಸಲಿಕ್ಕೆ ಕಾರಣರಾದ ವಾಟರ್ ಗೇಟ ಹಗರಣದ ವರದಿಗಾರರಾದ ಬಾಬ್ ವುಡವರ್ಡ್ ಹಾಗೂ ಕಾರ್ಲ್ ಬರ್ನಸ್ಟೀನ್ ಅವರನ್ನು ಬೆನ್ ಅವರು ಅತ್ಯಂತ ಕಷ್ಟದ ದಿನಗಳಲ್ಲಿ ಬೆಂಬಲಿಸಿದರು. ಆಳುವವರಿಂದ, ತಮ್ಮ ವೃತ್ತಿಯ ಇತರರಿಂದ, ಕುಟುಂಬದಿಂದ, ಇನ್ಯಾವುದೋ ಮೂಲದಿಂದ ಬೆದರಿಕೆ, ಆಮಿಷಗಳು ಬಂದರೂ ಸಹ ಅವರು ಹಿಂಜರಿಯಲಿಲ್ಲ. `ನನ್ನನ್ನು ಎಲ್ಲರೂ ಪ್ರೀತಿಸಲಿ ಎನ್ನುವುದು ಪತ್ರಕರ್ತನ ಧ್ಯೇಯ ಆಗಿರಬಾರದು. ಅವನ ಜೀವನದ ಒಂದೇ ಒಂದು ಗುರಿ- ಸತ್ಯದ ಹುಡುಕಾಟ ಹಾಗೂ ಅದನ್ನು ಜಗತ್ತಿನ ಮುಂದ ಜಾಹೀರು ಪಡಿಸೋದು ಆಗಿರಬೇಕು’ ಅಂತ ತಮ್ಮನ್ನು ವಿಚಾರಣೆಗೆ ಗುರಿಪಡಿಸಿದ ಸಂಸತ್ ಸಮಿತಿಯ ಎದುರು ಹೇಳಿದರು. ಸರಿ ಸುಮಾರು ಮೂವತ್ತು ವರ್ಷ ಪತ್ರಿಕೆಯ ಸಂಪಾದಕರಾಗಿದ್ದ ಬೆನ್ ಅವರು ಕೆಲವು ವರ್ಷಗಳ ಹಿಂದೆ ತೀರಿಹೋದರು.

ಹಂಗಾರ ಅಧಿಕಾರದಾಗ ಇದ್ದವರು ಏನು ಮಾಡಿದರೂ ಸುದ್ದಿಮನೆಯವರು ಸುಮ್ಮನೇ ಇರಬೇಕ? ಅವರು ಬೇಕಾದ್ದು ಮಾತಾಡಿದರೂ ಜೀ ಹುಜೂರ್ ಅನ್ನಬೇಕ? ಸುದ್ದಿ ಬರಬೇಕಾದ್ದು ಎಲ್ಲಿಂದ? ಅಧಿಕಾರಸ್ಥರಿಂದನೋ ಅಥವಾ ಸಾಮಾನ್ಯ ಜನರಿಂದನೋ?

ಜರ್ಮನಿಯಲ್ಲಿ ಹಿಟ್ಲರ್ ಏನೂ ತಪ್ಪು ಮಾಡದ ಆರು ಲಕ್ಷ ಜನ ಯಹೂದಿಗಳನ್ನ ಕೊಂದಾಗ, ಇದಿ ಅಮೀನ ಅವರು ಪ್ರಾಯದ ಯುವಕರ ಮಾಂಸ ಬೇಯಿಸಿ ತಿಂದಾಗ, ಪೋಲ್ ಪೋಟ್ ಅವರು ಚಾಳೀಸು ಹಾಕಿದ ಎಲ್ಲರಿಗೂ ಗುಂಡು ಹಾಕಿರಿ ಅಂತ ಆದೇಶ ಕೊಟ್ಟಾಗ, ಫ್ರೆಂಚ ಸರಕಾರ ಆಫ್ರಿಕಾದ ತನ್ನ ಕಾಲನಿಗಳಲ್ಲಿ ಕರಿಯರನ್ನು ಬಿಡಾಡಿ ದನಗಳಂತೆ ಬಹಿರಂಗ ಹರಾಜು ಹಾಕಿ ಮಾರಾಟ ಮಾಡಿದಾಗ, ಅಮೇರಿಕಾದಾಗ ಗುಲಾಮರನ್ನು ಹತ್ತಿ ಹೂವು ಕದ್ದಿದ್ದಕ್ಕಾಗಿ ಚೌರಸ್ತಾಗಳಲ್ಲಿ ಬೆಂಕಿ ಹಚ್ಚಿದಾಗ, ಇಂಗ್ಲಂಡಿನಲ್ಲಿ ಕೂಲಿ ಮಾಡೋ ಮಹಿಳೆಯರನ್ನ ಮಾಟಗಾತಿಯರು ಅಂತ ಹೇಳಿ ಆರೋಪಿಸಿ ಕೂಟಿನಲ್ಲಿ ಸುಟ್ಟಾಗ, ಅಲ್ಲಿನ ಪತ್ರಿಕೆಗಳು ಸುಮ್ಮನೇ ಇದ್ದದ್ದನ್ನು ನಾವು ಈಗ ಮೆಚ್ಚುತ್ತೇವೋ, ದೂರುತ್ತೇವೋ?

ಧರಾಸನಾ ಉಪ್ಪಿನ ಕಾರಖಾನೆಯೊಳಗ ಶಾಂತಿಯುತ ಪ್ರತಿಭಟನಾಕಾರರನ್ನು ಬ್ರಿಟಿಷರು ಸಾಲು ಹಚ್ಚಿ ಹೊಡೆದು ತಲೆ ಒಡೆದಾಗ ಪತ್ರಿಕರ್ತ ವಿನ್ಸ್ ವಾಕರ್ ಅವರು `ಭಯಂಕರ ಹಿಂಸೆ, ಮಾನವ ಹಕ್ಕುಗಳ ದಮನ’ ಅಂತ ಬರೆದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಕೆಲವು ಬ್ರಿಟಿಷ ಪತ್ರಿಕೆಗಳೇ `ಅತಿರೇಕದ ಹಿಂಸೆ’ ಅಂತ ಬರೆದವು. ಹಂಗಾರ ಅವರು ಸರಕಾರದ ವಿರುದ್ಧ ಬರೆದದ್ದು ತಪ್ಪೇ? ಪತ್ರಿಕಾ ಧರ್ಮಕ್ಕೆ ಮಾಡಿದ ದ್ರೋಹವೇ?

ಈಗ ಜಗತ್ ಪ್ರಸಿದ್ಧವಾಗಿರುವ, ಬೆನ್ ಬ್ರ್ಯಾಡಲೀ ಅವರು ಐವತ್ತು ವರ್ಷ ಹಿಂದೆ ನೀಡಿದ ಹೇಳಿಕೆಯೊಂದನ್ನ ಗಮನಿಸೋಣ.

“ಮಾಧ್ಯಮಗಳು ತಮ್ಮನ್ನು ತಾವು ಪ್ರಜಾಪ್ರಭುತ್ವದ ಕಾವಲು ನಾಯಿ ಅಂತ ತಿಳಿದುಕೊಂಡಿರುತ್ತವೆ. ಆದರೆ ಆಳುವವರು ಮಾಧ್ಯಮ ತಮ್ಮ ಸಾಕುನಾಯಿಯಾಗಿರಬೇಕು ಅಂದುಕೊಂಡಿರುತ್ತಾರೆ”. ಇದರಲ್ಲಿ ನಾವು ಏನನ್ನು ನಂಬುತ್ತೇವೋ ಅದು ನಮ್ಮ ಪ್ರಜಾಪ್ರಭುತ್ವದ ವಿಕಾಸವನ್ನು, ನಮ್ಮ ನಾಳೆಗಳನ್ನ, ನಿರ್ಧರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...