Homeಮುಖಪುಟಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

ಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

- Advertisement -
- Advertisement -

ಭಾರತದ ಮಾನವ ಹಕ್ಕುಗಳ ಆತಂಕಕಾರಿ ಪರಿಸ್ಥಿತಿ ಈಗಾಗಲೇ ಜಗತ್ತಿನ ಮುಂದೆ ಬಯಲಾಗಿರುವಂಥದ್ದು. ಒಂದೆಡೆ ತೀವ್ರ ಬಲಪಂಥೀಯ ದುಷ್ಕರ್ಮಿಗಳಿಂದ ದಲಿತರು, ಅಲ್ಪಸಂಖ್ಯಾತರು ಮತ್ತು ಇನ್ನಿತರ ತಳಸಮುದಾಯಗಳ ಜನರು ಹಲ್ಲೆಗೀಡಾಗುತ್ತಿದ್ದರೆ ಮತ್ತೊಂದೆಡೆ ಪ್ರಭುತ್ವ ಮತ್ತು ನ್ಯಾಯಾಂಗಗಳೂ ಕೂಡಾ ಮಾನವ ಹಕ್ಕುಗಳ ಹರಣಕ್ಕೆ ಕಾರಣವಾಗುತ್ತಿರುವ ದುರಂತಮಯ ಸನ್ನಿವೇಶ ನಮ್ಮೆದುರಿಗಿದೆ. ಭೀಮಾ ಕೋರೆಗಾಂವ್ ಕಾರ್ಯಕ್ರಮ ನಡೆಸಿದ ಕಾರಣಕ್ಕೆ ಹಲವು ನ್ಯಾಯವಾದಿಗಳೂ ಸೇರಿದಂತೆ ಹಿರಿಯ ಸಾಮಾಜಿಕ ಕಾರ್ಯಕರ್ತರನ್ನು ಒಂದೆಡೆ ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿರಿಸಲಾಗಿದ್ದರೆ, ರಾಜದ್ರೋಹದ ಪ್ರಕರಣದಡಿ ಅನಗತ್ಯವಾದ ಆರೋಪಗಳನ್ನು ಹೊರಿಸಿ ಬಂಧಿಸಲಾಗಿರುವ ಸಾಹಿತಿಗಳು, ಬುದ್ಧಿಜೀವಿಗಳು, ಹೋರಾಟಗಾರರ ಪಟ್ಟಿಯಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕವಿ, ಹೋರಾಟಗಾರ ವರವರರಾವ್ ಅವರಿಂದ ಹಿಡಿದು (ಈಚೆಗಷ್ಟೇ ಅನಾರೋಗ್ಯದ ಕಾರಣಕ್ಕೆ ಇವರಿಗೆ 6 ತಿಂಗಳ ಜಾಮೀನನ್ನು ನೀಡಲಾಗಿದೆ) ಭಾರತದ ಅತ್ಯಂತ ಪ್ರಖರ ಚಿಂತಕ, ದಲಿತ ಲೇಖಕರಲ್ಲೊಬ್ಬರಾದ ಆನಂದ್ ತೇಲ್ತುಂಬ್ಡೆಯವರ ತನಕ ಎಲ್ಲರನ್ನೂ ಇಂದು ಸರಳುಗಳ ಹಿಂದಿರಿಸಲಾಗಿರುವುದು ಈ ದೇಶದ ಪ್ರಜಾತಂತ್ರದ ದುಸ್ಥಿತಿಗೆ ಸಾಕ್ಷಿಯಾಗಿದೆ.

ಮೊದಲಿಗೂ ಮತ್ತು ಈಗಲೂ ಈ ಪಟ್ಟಿಯಲ್ಲಿ ಹಲವು ಮಹಿಳೆಯರ ಹೆಸರುಗಳೂ ಸೇರಿವೆ. ಭೀಮಾ ಕೋರೆಗಾಂವ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ಶೋಮಾ ಸೆನ್, ನ್ಯಾಯವಾದಿ ಸುಧಾ ಭಾರದ್ವಾಜ್ ಮುಂತಾದವರ ಬಂಧನವಾಗಿ ವರ್ಷಗಳೇ ಕಳೆದವು. ನಾಗರಿಕತ್ವ ತಿದ್ದುಪಡಿ ಕಾಯ್ದೆಯ ಕರಾಳತೆಯ ವಿರುದ್ಧ ದನಿಯೆತ್ತಿದವರು ಕೇಂದ್ರ ಸರ್ಕಾರ ಮತ್ತು ಗೃಹ ಇಲಾಖೆಗಳ ತದನಂತರದ ಬಲಿಪಶುಗಳಾದರೆ, ಇದೀಗ ರೈತ ಹೋರಾಟಗಾರರು ಮತ್ತವರ ಬೆಂಬಲಿಗರ ಸರದಿ.

ಸುಪ್ರಿಯಾ ಶರ್ಮ

ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ವಾರ್ಷಿಕ ವರದಿಯ ಪ್ರಕಾರ, 2020-21ರ ನಡುವಿನ ಮಾನವ ಹಕ್ಕುಗಳ ಉಲ್ಲಂಘನೆಯು 2020ರ ವರ್ಷದ ಆರಂಭದಿಂದಲೇ ಶುರುವಾಯಿತು. ಸಿಎಎ ವಿರೋಧಿ ಹೋರಾಟವನ್ನು ಅಮಾನ್ಯಗೊಳಿಸಲು ದೆಹಲಿಯಲ್ಲಿ ಸಂಘಪರಿವಾರ ಪ್ರೇರಿತವಾದ ಗಲಭೆಗಳಲ್ಲಿ ಸುಮಾರು 53 ಜನರು ಸತ್ತು ಅಪಾರ ಆಸ್ತಿಪಾಸ್ತಿ ನಷ್ಟವಾಯಿತು. ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ ಆ ಗಲಭೆಯನ್ನು ಸೃಷ್ಟಿಸಿದ ಆರೋಪದಲ್ಲಿ ಹಲವು ತಿಂಗಳುಗಳ ಕಾಲ ಬಂಧನಗಳು ಮತ್ತು ಬಂಧನದ ಭಯಾತಂಕಗಳನ್ನು ಹುಟ್ಟಿಸುವ ಕೆಲಸಗಳು ರಾಜಧಾನಿಯಲ್ಲಿ ಮತ್ತು ಇತರ ಹಲವು ನಗರಗಳಲ್ಲಿ ನಡೆದವು. ಸುಪ್ರಿಯಾ ಶರ್ಮ, ಸಂಗೀತಾ ಬರೂಹಾ, ರಾಣಾ ಅಯೂಬ್ ಮುಂತಾದ ಪತ್ರಕರ್ತೆಯರನ್ನೂ ಒಳಗೊಂಡು ಹಲವರನ್ನು ಆರೋಪಿಸಲಾಯಿತು.

ಕೋವಿಡ್‌ನ ಸಂದರ್ಭದಲ್ಲೂ ಕೂಡಾ ಹಲವು ಬಗೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದವೆಂದು ಹ್ಯೂಮನ್ ರೈಟ್ಸ್ ವಾಚ್‌ನ ದಕ್ಷಿಣ ಏಷ್ಯಾದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಉಲ್ಲೇಖಿಸುತ್ತಾರೆ. ಹಾಗೆಯೇ ಜಮ್ಮು ಕಾಶ್ಮೀರದ ವಿಶೇಷಾಧಿಕಾರ ಕಾಯ್ದೆಯನ್ನು ತೆಗೆದುಹಾಕಲಾದ ಸಂದರ್ಭದಲ್ಲೂ ಸಾರ್ವಜನಿಕ ಭದ್ರತಾ ಕಾಯ್ದೆಯ ಅಡಿಯಲ್ಲಿ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ನಡೆದ ಕಾನೂನು ಉಲ್ಲಂಘನೆಗಳ ದೊಡ್ಡಪಟ್ಟಿಯನ್ನೇ ನೀಡುತ್ತಾರೆ. ರಾಜಕೀಯ ಪ್ರೇರಿತ ಹಲ್ಲೆಗಳು, ಗೃಹಬಂಧನಗಳಿಂದ ಹಿಡಿದು ಇಂಟರ್ನೆಟ್ ಕಡಿತದ ತನಕ ಇದು ವಿಸ್ತರಿಸುತ್ತದೆ.

ಸಂಗೀತಾ ಬರೂಹಾ

ಈಚೆಗಷ್ಟೇ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಂಗಳೂರಿನ 21 ವರ್ಷದ ಪ್ರಕೃತಿ ಪ್ರೇಮಿ, ಸಾಮಾಜಿಕ ಕಳಕಳಿಯ ಪರಿಸರ ಕಾರ್ಯಕರ್ತೆ, ವಿದ್ಯಾರ್ಥಿನಿ ದಿಶಾ ರವಿಯ ಪ್ರಕರಣ ಈ ಎಲ್ಲದಕ್ಕೆ ಒಂದು ಜ್ವಲಂತ ನಿದರ್ಶನವಾಗಿದ್ದರೆ ಹರ್ಯಾಣದ ದಲಿತ ಸಾಮಾಜಿಕ ಕಾರ್ಯಕರ್ತೆ ನೌದೀಪ್ ಕೌರ್ ಪ್ರಕರಣ ಈ ಬಂಧನದ ಸರಣಿಗಳು ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಗೊಳಿಸುತ್ತಿವೆ. ದಿಶಾ ರವಿ ಪ್ರಕರಣದಲ್ಲಿ ಆಕೆಯ ಜಾಮೀನು ಮತ್ತು ಸುರಕ್ಷತೆಯ ಮನವಿಗಳನ್ನೂ ಪುರಸ್ಕರಿಸದೆ, ಈ ಹಿಂದೆಂದೂ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಿಲ್ಲದ ಸರಳವಾದ ವಿದ್ಯಾರ್ಥಿನಿಯೊಬ್ಬಳನ್ನು ನ್ಯಾಯಾಂಗ ಬಂಧನಕ್ಕೂ ನೀಡದೆ ಪೊಲೀಸ್ ಕಸ್ಟಡಿಗೆ ನೀಡಿದ್ದು ಅತ್ಯಂತ ಆಘಾತಕಾರಿಯಾಗಿತ್ತು. ಆಕೆಯ ಮೇಲೆ ಹೊರಿಸಲಾದ ಆರೋಪಗಳನ್ನು ನೋಡಿದರೆ, ಯೋಗ, ಚಹಾ ಮತ್ತು ಸರ್ಕಾರದ ರೈತವಿರೋಧಿ ನೀತಿಗಳನ್ನು ವಿಡಂಬನಾತ್ಮಕವಾಗಿ ಬಳಸಿ ಜಾಲತಾಣಗಳಲ್ಲಿ ಆಕೆ ಮಾಡಿದ ಕಮೆಂಟ್‌ಗಳೇ ದೇಶದ ಭದ್ರತೆಗೆ ಈಗಿರುವ ಅತಿದೊಡ್ಡ ಅಪಾಯವೆಂಬಂತೆ ಸರ್ಕಾರ ಬಿಂಬಿಸಲು ನೋಡುತ್ತಿದೆ.

ನೌದೀಪ್ ಕೌರ್

ಇಡೀ ವಿಶ್ವಕ್ಕೆ ಗೊತ್ತಿರುವ ಗ್ರೇಟ್ ಥನ್‌ಬರ್ಗ್ ಅವರ ಟೂಲ್‌ಕಿಟ್ ಟ್ವೀಟನ್ನು ಸರ್ಕಾರದ ವಿರುದ್ಧದ ಷಡ್ಯಂತ್ರ ಎಂಬ ಮಟ್ಟಕ್ಕೆ ಮೋದಿ ಸರ್ಕಾರ ತೆಗೆದುಕೊಂಡು ಹೋಗುತ್ತದೆಂದರೆ ಯಾವ ಮಟ್ಟದ ಫ್ಯಾಸಿಸ್ಟ್ ಪ್ರವೃತ್ತಿ ಆಡಳಿತದಲ್ಲಿ ಬೆಳೆದಿದೆಯೆಂಬುದು ತಿಳಿಯುತ್ತದೆ. ಹಾಗೆಯೇ ನೌದೀಪ್ ಎಂಬ ಹರ್ಯಾಣದ ಕುಂಡಲಿಯ ಯುವತಿಯ ಬಂಧನದ ಪ್ರಕರಣವೂ ಕೂಡಾ. ಅಲ್ಲಿನ ದಲಿತ ಮತ್ತು ಕಾರ್ಮಿಕರ ಸಮುದಾಯವನ್ನು ಸಂಘಟಿಸುತ್ತಾ, ಅದರೊಂದಿಗೆ ರೈತ ಆಂದೋಲನವನ್ನು ಬೆಸೆಯಲೆಂದು ಕೆಲಸ ಮಾಡುತ್ತಿದ್ದ ಸಂಘಟನೆಯ ನೌದೀಪ್ ಕೌರ್‌ರನ್ನು ಜನವರಿ ತಿಂಗಳ 12ರಂದು ಬಿಜೆಪಿ ಆಡಳಿತದಲ್ಲಿರುವ ಹರ್ಯಾಣದ ಪೊಲೀಸರು ಬಂಧಿಸಿದ್ದರು. ಆಕೆಯ ಮೇಲೆ ರಾಜದ್ರೋಹ, ದೇಶದ ಭದ್ರತೆಗೆ ಧಕ್ಕೆಯಂತಹವನ್ನೂ ಒಳಗೊಂಡು ಹೊರಿಸಲಾಗಿರುವ ಹಲವು ಆರೋಪಗಳ ಗಹನತೆಗೂ ಆಕೆಯ ಸಾಮಾಜಿಕ ಕೆಲಸಗಳ ಹಿನ್ನೆಲೆಗೂ ಅರ್ಥಾತ್ ಸಂಬಂಧವಿಲ್ಲ. ಇದನ್ನೇ ಆಕೆಯ ತಾಯಿ ಮತ್ತು ಮಗಳ ಹೋರಾಟಕ್ಕೆ ಸದಾ ಬೆಂಗಾವಲಾಗಿ ನಿಂತಿರುವ ಸಬರ್‌ಜೀತ್ ಕೌರ್ ಅವರೂ ಕೂಡಾ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಷ್ಟಾಗಿಯೂ ಆಕೆಗೆ ಜಾಮೀನು ದೊರೆಯಲು ಹೆಚ್ಚೂ ಕಡಿಮೆ ಎರಡು ತಿಂಗಳ ಸಮಯ ಬೇಕಾಯಿತು. ರೈತ ಆಂದೋಲನದ ವಾಸ್ತವಗಳನ್ನು ಬಿಚ್ಚಿಟ್ಟ ಪತ್ರಕರ್ತರ ಬಂಧನಗಳನ್ನೂ ನಾವು ನೋಡುತ್ತಿದ್ದೇವೆ.

ರಾಣಾ ಅಯೂಬ್

ಇದೇ ಸಂದರ್ಭದಲ್ಲಿ, ಇವೆಲ್ಲ ಬಂಧನಗಳ ಕಥೆಗಳಾದರೆ, ಬಂಧನಕ್ಕೊಳಗಾಗದೆ ರಾಜಾರೋಶವಾಗಿ ತಿರುಗಾಡುತ್ತಿರುವವರ ಇನ್ನೊಂದು ಮಗ್ಗುಲಿನ ಹಲವು ಕಥೆಗಳಿವೆ. ನಿಜಕ್ಕೂ ಕಾನೂನು ಉಲ್ಲಂಘನೆಯ ಕೆಲಸ ಮಾಡಿದ, ರೈತ ಆಂದೊಲನದಲ್ಲಿರಲಿ, ಸಿಎಎ ಹೋರಾಟದ ಸಂದರ್ಭದ ಗಲಭೆಯಲ್ಲಿರಲಿ ವಿಡಿಯೋ ಸಾಕ್ಷಾಧಾರಗಳ ಸಮೇತ ಕಂಡಿರುವ ಸಂಘಪರಿವಾರದ ಗೂಂಡಾಗಳು, ಜನಪ್ರತಿನಿಧಿಗಳು, ಅವರ ಬೆಂಬಲಿಗರ ಮೇಲೆ ಬಂಧನವಿರಲಿ ಒಂದು ಪ್ರಕರಣ ಕೂಡಾ ದಾಖಲಾಗಿಲ್ಲ ಎಂಬುದು ಆತಂಕದ ವಿಚಾರವಲ್ಲವೇ?
ಒಟ್ಟಿನಲ್ಲಿ ಬಂಧನಗಳ ವರಸೆಯಲ್ಲಿ ಸಾಮಾಜಿಕ ಕಾರ್ಯಕರ್ತೆರು, ಪತ್ರಕರ್ತೆಯರನ್ನೂ ಮೊದಲುಗೊಂಡು ಅನೇಕ ಮಹಿಳೆಯರನ್ನೂ ಬಲಿಪಶುವಾಗಿಸಲು ನೋಡುತ್ತಿರುವ ಸರ್ಕಾರದ ಇಂತಹ ಪ್ರಯತ್ನಗಳಿಗೆ ಈ ಎಲ್ಲ ದಿಟ್ಟ ಮಹಿಳೆಯರು ಗಟ್ಟಿಯಾಗಿ ಎದುರು ನಿಂತಿರುವುದು ಮತ್ತು ದಿಶಾ ರವಿ ಪ್ರಕರಣದಲ್ಲಿ ಮತ್ತು ಪ್ರಿಯಾ ರಮಣಿಯವರ ಪ್ರಕರಣಗಳಲ್ಲಿ ನ್ಯಾಯಾಧೀಶರು ವ್ಯಕ್ತಪಡಿಸಿರುವ ಸ್ಪಷ್ಟವಾದ ಅನಿಸಿಕೆಗಳ ಹಾಗೆ ಅವರನ್ನು ಬೆಂಬಲಿಸುವ ದನಿಗಳೂ ಸಹಾ ಕೇಳಿಬರುತ್ತಿರುವುದು ಸಮಾಧಾನದ ಸಂಗತಿ.

ಮಲ್ಲಿಗೆ

ಮಲ್ಲಿಗೆ
ಸಾಮಾಜಿಕ ಕಾರ್ಯಕರ್ತೆ, ಕರ್ನಾಟಕ ಜನಶಕ್ತಿಯ ಸಕ್ರಿಯ ಸದಸ್ಯರು


ಇದನ್ನೂ ಓದಿ: ಪ್ರಧಾನಿಗಳೇ ಎಂಎಸ್‌ಪಿ ಎಲ್ಲಿದೆ ತೋರಿಸಿ?: ಇಂದಿನಿಂದ ರಾಜ್ಯದಲ್ಲಿ ಆಂದೋಲನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...