Homeಮುಖಪುಟಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

ಹೋರಾಟಗಾರ್ತಿಯರ ಮೇಲೆ ಹಲ್ಲೆ ಮತ್ತು ಬಂಧನ ಕುಸಿಯುತ್ತಿರುವ ಪ್ರಜಾತಂತ್ರಕ್ಕೆ ಸಾಕ್ಷಿ

- Advertisement -
- Advertisement -

ಭಾರತದ ಮಾನವ ಹಕ್ಕುಗಳ ಆತಂಕಕಾರಿ ಪರಿಸ್ಥಿತಿ ಈಗಾಗಲೇ ಜಗತ್ತಿನ ಮುಂದೆ ಬಯಲಾಗಿರುವಂಥದ್ದು. ಒಂದೆಡೆ ತೀವ್ರ ಬಲಪಂಥೀಯ ದುಷ್ಕರ್ಮಿಗಳಿಂದ ದಲಿತರು, ಅಲ್ಪಸಂಖ್ಯಾತರು ಮತ್ತು ಇನ್ನಿತರ ತಳಸಮುದಾಯಗಳ ಜನರು ಹಲ್ಲೆಗೀಡಾಗುತ್ತಿದ್ದರೆ ಮತ್ತೊಂದೆಡೆ ಪ್ರಭುತ್ವ ಮತ್ತು ನ್ಯಾಯಾಂಗಗಳೂ ಕೂಡಾ ಮಾನವ ಹಕ್ಕುಗಳ ಹರಣಕ್ಕೆ ಕಾರಣವಾಗುತ್ತಿರುವ ದುರಂತಮಯ ಸನ್ನಿವೇಶ ನಮ್ಮೆದುರಿಗಿದೆ. ಭೀಮಾ ಕೋರೆಗಾಂವ್ ಕಾರ್ಯಕ್ರಮ ನಡೆಸಿದ ಕಾರಣಕ್ಕೆ ಹಲವು ನ್ಯಾಯವಾದಿಗಳೂ ಸೇರಿದಂತೆ ಹಿರಿಯ ಸಾಮಾಜಿಕ ಕಾರ್ಯಕರ್ತರನ್ನು ಒಂದೆಡೆ ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿರಿಸಲಾಗಿದ್ದರೆ, ರಾಜದ್ರೋಹದ ಪ್ರಕರಣದಡಿ ಅನಗತ್ಯವಾದ ಆರೋಪಗಳನ್ನು ಹೊರಿಸಿ ಬಂಧಿಸಲಾಗಿರುವ ಸಾಹಿತಿಗಳು, ಬುದ್ಧಿಜೀವಿಗಳು, ಹೋರಾಟಗಾರರ ಪಟ್ಟಿಯಲ್ಲಿ ಅತ್ಯಂತ ಹಿರಿಯ ವಯಸ್ಸಿನ ಕವಿ, ಹೋರಾಟಗಾರ ವರವರರಾವ್ ಅವರಿಂದ ಹಿಡಿದು (ಈಚೆಗಷ್ಟೇ ಅನಾರೋಗ್ಯದ ಕಾರಣಕ್ಕೆ ಇವರಿಗೆ 6 ತಿಂಗಳ ಜಾಮೀನನ್ನು ನೀಡಲಾಗಿದೆ) ಭಾರತದ ಅತ್ಯಂತ ಪ್ರಖರ ಚಿಂತಕ, ದಲಿತ ಲೇಖಕರಲ್ಲೊಬ್ಬರಾದ ಆನಂದ್ ತೇಲ್ತುಂಬ್ಡೆಯವರ ತನಕ ಎಲ್ಲರನ್ನೂ ಇಂದು ಸರಳುಗಳ ಹಿಂದಿರಿಸಲಾಗಿರುವುದು ಈ ದೇಶದ ಪ್ರಜಾತಂತ್ರದ ದುಸ್ಥಿತಿಗೆ ಸಾಕ್ಷಿಯಾಗಿದೆ.

ಮೊದಲಿಗೂ ಮತ್ತು ಈಗಲೂ ಈ ಪಟ್ಟಿಯಲ್ಲಿ ಹಲವು ಮಹಿಳೆಯರ ಹೆಸರುಗಳೂ ಸೇರಿವೆ. ಭೀಮಾ ಕೋರೆಗಾಂವ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾದ ಶೋಮಾ ಸೆನ್, ನ್ಯಾಯವಾದಿ ಸುಧಾ ಭಾರದ್ವಾಜ್ ಮುಂತಾದವರ ಬಂಧನವಾಗಿ ವರ್ಷಗಳೇ ಕಳೆದವು. ನಾಗರಿಕತ್ವ ತಿದ್ದುಪಡಿ ಕಾಯ್ದೆಯ ಕರಾಳತೆಯ ವಿರುದ್ಧ ದನಿಯೆತ್ತಿದವರು ಕೇಂದ್ರ ಸರ್ಕಾರ ಮತ್ತು ಗೃಹ ಇಲಾಖೆಗಳ ತದನಂತರದ ಬಲಿಪಶುಗಳಾದರೆ, ಇದೀಗ ರೈತ ಹೋರಾಟಗಾರರು ಮತ್ತವರ ಬೆಂಬಲಿಗರ ಸರದಿ.

ಸುಪ್ರಿಯಾ ಶರ್ಮ

ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ವಾರ್ಷಿಕ ವರದಿಯ ಪ್ರಕಾರ, 2020-21ರ ನಡುವಿನ ಮಾನವ ಹಕ್ಕುಗಳ ಉಲ್ಲಂಘನೆಯು 2020ರ ವರ್ಷದ ಆರಂಭದಿಂದಲೇ ಶುರುವಾಯಿತು. ಸಿಎಎ ವಿರೋಧಿ ಹೋರಾಟವನ್ನು ಅಮಾನ್ಯಗೊಳಿಸಲು ದೆಹಲಿಯಲ್ಲಿ ಸಂಘಪರಿವಾರ ಪ್ರೇರಿತವಾದ ಗಲಭೆಗಳಲ್ಲಿ ಸುಮಾರು 53 ಜನರು ಸತ್ತು ಅಪಾರ ಆಸ್ತಿಪಾಸ್ತಿ ನಷ್ಟವಾಯಿತು. ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ ಆ ಗಲಭೆಯನ್ನು ಸೃಷ್ಟಿಸಿದ ಆರೋಪದಲ್ಲಿ ಹಲವು ತಿಂಗಳುಗಳ ಕಾಲ ಬಂಧನಗಳು ಮತ್ತು ಬಂಧನದ ಭಯಾತಂಕಗಳನ್ನು ಹುಟ್ಟಿಸುವ ಕೆಲಸಗಳು ರಾಜಧಾನಿಯಲ್ಲಿ ಮತ್ತು ಇತರ ಹಲವು ನಗರಗಳಲ್ಲಿ ನಡೆದವು. ಸುಪ್ರಿಯಾ ಶರ್ಮ, ಸಂಗೀತಾ ಬರೂಹಾ, ರಾಣಾ ಅಯೂಬ್ ಮುಂತಾದ ಪತ್ರಕರ್ತೆಯರನ್ನೂ ಒಳಗೊಂಡು ಹಲವರನ್ನು ಆರೋಪಿಸಲಾಯಿತು.

ಕೋವಿಡ್‌ನ ಸಂದರ್ಭದಲ್ಲೂ ಕೂಡಾ ಹಲವು ಬಗೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದವೆಂದು ಹ್ಯೂಮನ್ ರೈಟ್ಸ್ ವಾಚ್‌ನ ದಕ್ಷಿಣ ಏಷ್ಯಾದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಉಲ್ಲೇಖಿಸುತ್ತಾರೆ. ಹಾಗೆಯೇ ಜಮ್ಮು ಕಾಶ್ಮೀರದ ವಿಶೇಷಾಧಿಕಾರ ಕಾಯ್ದೆಯನ್ನು ತೆಗೆದುಹಾಕಲಾದ ಸಂದರ್ಭದಲ್ಲೂ ಸಾರ್ವಜನಿಕ ಭದ್ರತಾ ಕಾಯ್ದೆಯ ಅಡಿಯಲ್ಲಿ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ನಡೆದ ಕಾನೂನು ಉಲ್ಲಂಘನೆಗಳ ದೊಡ್ಡಪಟ್ಟಿಯನ್ನೇ ನೀಡುತ್ತಾರೆ. ರಾಜಕೀಯ ಪ್ರೇರಿತ ಹಲ್ಲೆಗಳು, ಗೃಹಬಂಧನಗಳಿಂದ ಹಿಡಿದು ಇಂಟರ್ನೆಟ್ ಕಡಿತದ ತನಕ ಇದು ವಿಸ್ತರಿಸುತ್ತದೆ.

ಸಂಗೀತಾ ಬರೂಹಾ

ಈಚೆಗಷ್ಟೇ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಂಗಳೂರಿನ 21 ವರ್ಷದ ಪ್ರಕೃತಿ ಪ್ರೇಮಿ, ಸಾಮಾಜಿಕ ಕಳಕಳಿಯ ಪರಿಸರ ಕಾರ್ಯಕರ್ತೆ, ವಿದ್ಯಾರ್ಥಿನಿ ದಿಶಾ ರವಿಯ ಪ್ರಕರಣ ಈ ಎಲ್ಲದಕ್ಕೆ ಒಂದು ಜ್ವಲಂತ ನಿದರ್ಶನವಾಗಿದ್ದರೆ ಹರ್ಯಾಣದ ದಲಿತ ಸಾಮಾಜಿಕ ಕಾರ್ಯಕರ್ತೆ ನೌದೀಪ್ ಕೌರ್ ಪ್ರಕರಣ ಈ ಬಂಧನದ ಸರಣಿಗಳು ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಗೊಳಿಸುತ್ತಿವೆ. ದಿಶಾ ರವಿ ಪ್ರಕರಣದಲ್ಲಿ ಆಕೆಯ ಜಾಮೀನು ಮತ್ತು ಸುರಕ್ಷತೆಯ ಮನವಿಗಳನ್ನೂ ಪುರಸ್ಕರಿಸದೆ, ಈ ಹಿಂದೆಂದೂ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಿಲ್ಲದ ಸರಳವಾದ ವಿದ್ಯಾರ್ಥಿನಿಯೊಬ್ಬಳನ್ನು ನ್ಯಾಯಾಂಗ ಬಂಧನಕ್ಕೂ ನೀಡದೆ ಪೊಲೀಸ್ ಕಸ್ಟಡಿಗೆ ನೀಡಿದ್ದು ಅತ್ಯಂತ ಆಘಾತಕಾರಿಯಾಗಿತ್ತು. ಆಕೆಯ ಮೇಲೆ ಹೊರಿಸಲಾದ ಆರೋಪಗಳನ್ನು ನೋಡಿದರೆ, ಯೋಗ, ಚಹಾ ಮತ್ತು ಸರ್ಕಾರದ ರೈತವಿರೋಧಿ ನೀತಿಗಳನ್ನು ವಿಡಂಬನಾತ್ಮಕವಾಗಿ ಬಳಸಿ ಜಾಲತಾಣಗಳಲ್ಲಿ ಆಕೆ ಮಾಡಿದ ಕಮೆಂಟ್‌ಗಳೇ ದೇಶದ ಭದ್ರತೆಗೆ ಈಗಿರುವ ಅತಿದೊಡ್ಡ ಅಪಾಯವೆಂಬಂತೆ ಸರ್ಕಾರ ಬಿಂಬಿಸಲು ನೋಡುತ್ತಿದೆ.

ನೌದೀಪ್ ಕೌರ್

ಇಡೀ ವಿಶ್ವಕ್ಕೆ ಗೊತ್ತಿರುವ ಗ್ರೇಟ್ ಥನ್‌ಬರ್ಗ್ ಅವರ ಟೂಲ್‌ಕಿಟ್ ಟ್ವೀಟನ್ನು ಸರ್ಕಾರದ ವಿರುದ್ಧದ ಷಡ್ಯಂತ್ರ ಎಂಬ ಮಟ್ಟಕ್ಕೆ ಮೋದಿ ಸರ್ಕಾರ ತೆಗೆದುಕೊಂಡು ಹೋಗುತ್ತದೆಂದರೆ ಯಾವ ಮಟ್ಟದ ಫ್ಯಾಸಿಸ್ಟ್ ಪ್ರವೃತ್ತಿ ಆಡಳಿತದಲ್ಲಿ ಬೆಳೆದಿದೆಯೆಂಬುದು ತಿಳಿಯುತ್ತದೆ. ಹಾಗೆಯೇ ನೌದೀಪ್ ಎಂಬ ಹರ್ಯಾಣದ ಕುಂಡಲಿಯ ಯುವತಿಯ ಬಂಧನದ ಪ್ರಕರಣವೂ ಕೂಡಾ. ಅಲ್ಲಿನ ದಲಿತ ಮತ್ತು ಕಾರ್ಮಿಕರ ಸಮುದಾಯವನ್ನು ಸಂಘಟಿಸುತ್ತಾ, ಅದರೊಂದಿಗೆ ರೈತ ಆಂದೋಲನವನ್ನು ಬೆಸೆಯಲೆಂದು ಕೆಲಸ ಮಾಡುತ್ತಿದ್ದ ಸಂಘಟನೆಯ ನೌದೀಪ್ ಕೌರ್‌ರನ್ನು ಜನವರಿ ತಿಂಗಳ 12ರಂದು ಬಿಜೆಪಿ ಆಡಳಿತದಲ್ಲಿರುವ ಹರ್ಯಾಣದ ಪೊಲೀಸರು ಬಂಧಿಸಿದ್ದರು. ಆಕೆಯ ಮೇಲೆ ರಾಜದ್ರೋಹ, ದೇಶದ ಭದ್ರತೆಗೆ ಧಕ್ಕೆಯಂತಹವನ್ನೂ ಒಳಗೊಂಡು ಹೊರಿಸಲಾಗಿರುವ ಹಲವು ಆರೋಪಗಳ ಗಹನತೆಗೂ ಆಕೆಯ ಸಾಮಾಜಿಕ ಕೆಲಸಗಳ ಹಿನ್ನೆಲೆಗೂ ಅರ್ಥಾತ್ ಸಂಬಂಧವಿಲ್ಲ. ಇದನ್ನೇ ಆಕೆಯ ತಾಯಿ ಮತ್ತು ಮಗಳ ಹೋರಾಟಕ್ಕೆ ಸದಾ ಬೆಂಗಾವಲಾಗಿ ನಿಂತಿರುವ ಸಬರ್‌ಜೀತ್ ಕೌರ್ ಅವರೂ ಕೂಡಾ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಷ್ಟಾಗಿಯೂ ಆಕೆಗೆ ಜಾಮೀನು ದೊರೆಯಲು ಹೆಚ್ಚೂ ಕಡಿಮೆ ಎರಡು ತಿಂಗಳ ಸಮಯ ಬೇಕಾಯಿತು. ರೈತ ಆಂದೋಲನದ ವಾಸ್ತವಗಳನ್ನು ಬಿಚ್ಚಿಟ್ಟ ಪತ್ರಕರ್ತರ ಬಂಧನಗಳನ್ನೂ ನಾವು ನೋಡುತ್ತಿದ್ದೇವೆ.

ರಾಣಾ ಅಯೂಬ್

ಇದೇ ಸಂದರ್ಭದಲ್ಲಿ, ಇವೆಲ್ಲ ಬಂಧನಗಳ ಕಥೆಗಳಾದರೆ, ಬಂಧನಕ್ಕೊಳಗಾಗದೆ ರಾಜಾರೋಶವಾಗಿ ತಿರುಗಾಡುತ್ತಿರುವವರ ಇನ್ನೊಂದು ಮಗ್ಗುಲಿನ ಹಲವು ಕಥೆಗಳಿವೆ. ನಿಜಕ್ಕೂ ಕಾನೂನು ಉಲ್ಲಂಘನೆಯ ಕೆಲಸ ಮಾಡಿದ, ರೈತ ಆಂದೊಲನದಲ್ಲಿರಲಿ, ಸಿಎಎ ಹೋರಾಟದ ಸಂದರ್ಭದ ಗಲಭೆಯಲ್ಲಿರಲಿ ವಿಡಿಯೋ ಸಾಕ್ಷಾಧಾರಗಳ ಸಮೇತ ಕಂಡಿರುವ ಸಂಘಪರಿವಾರದ ಗೂಂಡಾಗಳು, ಜನಪ್ರತಿನಿಧಿಗಳು, ಅವರ ಬೆಂಬಲಿಗರ ಮೇಲೆ ಬಂಧನವಿರಲಿ ಒಂದು ಪ್ರಕರಣ ಕೂಡಾ ದಾಖಲಾಗಿಲ್ಲ ಎಂಬುದು ಆತಂಕದ ವಿಚಾರವಲ್ಲವೇ?
ಒಟ್ಟಿನಲ್ಲಿ ಬಂಧನಗಳ ವರಸೆಯಲ್ಲಿ ಸಾಮಾಜಿಕ ಕಾರ್ಯಕರ್ತೆರು, ಪತ್ರಕರ್ತೆಯರನ್ನೂ ಮೊದಲುಗೊಂಡು ಅನೇಕ ಮಹಿಳೆಯರನ್ನೂ ಬಲಿಪಶುವಾಗಿಸಲು ನೋಡುತ್ತಿರುವ ಸರ್ಕಾರದ ಇಂತಹ ಪ್ರಯತ್ನಗಳಿಗೆ ಈ ಎಲ್ಲ ದಿಟ್ಟ ಮಹಿಳೆಯರು ಗಟ್ಟಿಯಾಗಿ ಎದುರು ನಿಂತಿರುವುದು ಮತ್ತು ದಿಶಾ ರವಿ ಪ್ರಕರಣದಲ್ಲಿ ಮತ್ತು ಪ್ರಿಯಾ ರಮಣಿಯವರ ಪ್ರಕರಣಗಳಲ್ಲಿ ನ್ಯಾಯಾಧೀಶರು ವ್ಯಕ್ತಪಡಿಸಿರುವ ಸ್ಪಷ್ಟವಾದ ಅನಿಸಿಕೆಗಳ ಹಾಗೆ ಅವರನ್ನು ಬೆಂಬಲಿಸುವ ದನಿಗಳೂ ಸಹಾ ಕೇಳಿಬರುತ್ತಿರುವುದು ಸಮಾಧಾನದ ಸಂಗತಿ.

ಮಲ್ಲಿಗೆ

ಮಲ್ಲಿಗೆ
ಸಾಮಾಜಿಕ ಕಾರ್ಯಕರ್ತೆ, ಕರ್ನಾಟಕ ಜನಶಕ್ತಿಯ ಸಕ್ರಿಯ ಸದಸ್ಯರು


ಇದನ್ನೂ ಓದಿ: ಪ್ರಧಾನಿಗಳೇ ಎಂಎಸ್‌ಪಿ ಎಲ್ಲಿದೆ ತೋರಿಸಿ?: ಇಂದಿನಿಂದ ರಾಜ್ಯದಲ್ಲಿ ಆಂದೋಲನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...