Homeಮುಖಪುಟಒಳಮೀಸಲಾತಿ: ಬಾಣಲೆಯಿಂದ ಬೆಂಕಿಗೆ ಹಾರುವುದು ಬೇಡ.. - ಕರಿಯಪ್ಪ ಗುಡಿಮನಿ

ಒಳಮೀಸಲಾತಿ: ಬಾಣಲೆಯಿಂದ ಬೆಂಕಿಗೆ ಹಾರುವುದು ಬೇಡ.. – ಕರಿಯಪ್ಪ ಗುಡಿಮನಿ

ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿ ಪರ ಹೋರಾಟಗಾರರ ಮೈತುಂಬಾ ಬಾಸುಂಡೆ ಬರುವಂತೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರ ಯಾರದಾಗಿತ್ತು?

- Advertisement -
- Advertisement -

ಆದಿಮ ಕಾಲದ ಮಾದಿಗರು ಸಮಾಜದ ಬ್ರಾಹ್ಮಣ್ಯೀಕರಣದಿಂದ ಅಸ್ಪೃಶ್ಯರಾದರು. ಗಾಂಧೀಜಿಯವರಿಂದ ಹರಿಜನರಾದರು. ಅಂಬೇಡ್ಕರರಿಂದ ಸ್ವಾಭಿಮಾನಿ ದಲಿತರಾದರು. ಹಲವು ಪರಿಶಿಷ್ಟ ಜಾತಿಗಳಲ್ಲಿಂದು ಮಾದಿಗರು ಸಹ ಒಂದು ಸಮುದಾಯವಾಗಿದೆ.

ಮಾದಿಗ ಸಮುದಾಯವು ಸ್ವತಂತ್ರಪೂರ್ವದಲ್ಲಿ ಜಂಡಾ ಹಿಡಿದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಮುದಾಯವಾಗಿದೆ. ಆದರೆ ಸ್ವಾತಂತ್ರ್ಯದ ನಂತರದ ರಾಜಕೀಯದಲ್ಲಿ ಮಾದಿಗ ಸಮುದಾಯವನ್ನು ಬೆಲೆಯಿಲ್ಲದ, ನೆಲೆಯಿಲ್ಲದ ಸಮುದಾಯವನ್ನಾಗಿ ಮಾಡಲಾಗಿದೆ. ಇಂದಿಗೂ ಕೃಷಿ ಭೂಮಿ ರಹಿತರಾಗಿರುವ ಮಾದಿಗ ಸಮುದಾಯ ಜಮೀನ್ದಾರರ ಕೈ ಕೆಳಗೆ ನರಳುತ್ತಿದೆ. ಉತ್ತರ ಕರ್ನಾಟಕದಲ್ಲಂತು ಇದು ಎದ್ದು ಕಾಣುವ ಸಂಗತಿಯಾಗಿದೆ. ಬೆನ್ನಿಗೆ ನಿಲ್ಲದ ಸಹೋದರ ಸಮುದಾಯಗಳು, ಕೈಗೆ ಅಧಿಕಾರ ನೀಡದ ರಾಜಕೀಯ ಪಕ್ಷಗಳು, ನಿಷ್ಟೆ ಇಲ್ಲದ ಸಮುದಾಯದ ಮುಖಂಡರು, ಅಸ್ಪೃಶ್ಯತೆಯನ್ನು ಮೆರೆಯುವ ಮೇಲ್ವರ್ಗಗಳು. ಹೀಗೆ ಎತ್ತ ನೋಡಿದರೂ ಅಡ್ಡಗಾಲುಗಳು. ನಮ್ಮ ಹಾಸಿಗೆಯಲ್ಲಿ ನಾವೇ ಕಾಲು ಚಾಚದ ಸ್ಥಿತಿ.

ಇಂತಹ ಪರಿಸ್ಥಿತಿಯಲ್ಲಿ ಎಂದಿಗೂ ಮಾದಿಗರ ಪರ ನಿಲ್ಲದ ವಿವಿಧ ಭ್ರಷ್ಟ ರಾಜಕಾರಣಿಗಳ ಮನೆಯ ಹೆಬ್ಬಾಗಿಲುಗಳಲ್ಲಿ ನಮ್ಮ ಸಮುದಾಯದ ಮುಖಂಡರುಗಳಿಂದು ನಿಂತಿದ್ದಾರೆ. ಮತ್ತಷ್ಟೂ ಹಾದಿ ತಪ್ಪಿ ಅಸ್ಪೃಶ್ಯತೆಯನ್ನು ನಮ್ಮ ಮಾದಿಗರ ಮೇಲೆ ಹೇರಿದ ಬ್ರಾಹ್ಮಣ್ಯದ ತವರು ಸ್ಥಾನ ಸಂಘಪರಿವಾರ, ಆರೆಸ್ಸೆಸ್ ದ್ವಾರದ ಮುಂದೆ ಹೋರಾಟ ಮಾಡದೇ, ಒಳಮೀಸಲಾತಿಯ ಧರ್ಮಭಿಕ್ಷೆ ಬೇಡಲು ನಿಂತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿ ಪರ ಹೋರಾಟಗಾರರ ಮೈತುಂಬಾ ಬಾಸುಂಡೆ ಬರುವಂತೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರ ಯಾರದಾಗಿತ್ತು? ಇದು ಖಂಡಿತವಾಗಿಯೂ ಮಾದಿಗ ಸಮುದಾಯದಲ್ಲಿನ ಪ್ರಾಮಾಣಿಕ ಹೋರಾಟಗಾರರಿಗೆ ಚಿಂತೆಗೀಡು ಮಾಡಿದೆ.

ಇಂದು ಮಾದಿಗ ಸಮುದಾಯ ತನ್ನೊಳಗೂ ಹಾಗೂ ಹೊರಗೂ ಪ್ರಾಮಾಣಿಕ ಹೋರಾಟಗಾರರನ್ನು ಕಂಡುಕೊಳ್ಳಬೇಕಿದೆ. ಸದಾ ಚುನಾವಣಾ ರಾಜಕೀಯ ಹಿತಾಸಕ್ತಿಯನ್ನೇ ಬಯಸುವ ದಲಿತ ರಾಜಕಾರಣಿಗಳ ವಿರುದ್ಧವೂ ನಿಲ್ಲಬೇಕಿದೆ. ನಮ್ಮ ಸಂಕಟಗಳು ಬೆಟ್ಟದಷ್ಟಿರುವಾಗ ಆ ಬೆಟ್ಟವನ್ನು ನೆಲಸಮಗೊಳಿಸಲು ಒಳಮೀಸಲಾತಿ ಜಾರಿಯಾಗಲೇಬೇಕಿದೆ.

ಮೊದಲು ಸದಾಶಿವ ಆಯೋಗದ ವರದಿ ಬಹಿರಂಗಗೊಳ್ಳಬೇಕು. ಕಾಲ್ಪನಿಕ ಸೋರಿಕೆ ವಿಚಾರಗಳನ್ನು ಬದಿಗಿಟ್ಟು ಸಾರ್ವಜನಿಕ ಚರ್ಚೆಗಳಾಗಬೇಕು. ಇಡೀ 101 ದಲಿತ ಜಾತಿಗಳ ಪ್ರತಿನಿಧಿಗಳು ಒಂದೆಡೆ ಕುಳಿತು ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸಿ ಒಳಮೀಸಲಾತಿ ಜಾರಿಗೊಳ್ಳುವ ಸರಿಯಾದ ಕ್ರಮಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಒಳಮೀಸಲಾತಿ ದಲಿತರ ಒಗ್ಗಟ್ಟನ್ನು ಮುರಿಯುತ್ತದೆ ಎಂಬ ಕಾಲ್ಪನಿಕ ಭಯದೊಂದಿಗೆ ಗುದ್ದಾಡದೆ, ಅದನ್ನು ಬಗೆಹರಿಸಿಕೊಂಡು ಮುಂದೆ ದಲಿತ ಜಾತಿಗಳು ಖಾಸಗಿ ಮೀಸಲಾತಿಗಾಗಿ ಹೋರಾಡಬೇಕು. ಸಮಸಮಾಜದೆಡಗೆ ನಮ್ಮ ನಡಿಗೆ ಆದಷ್ಟು ಬೇಗ ಮತ್ತೆ ಗಟ್ಟಿಗೊಳ್ಳಬೇಕು.

  • ಕರಿಯಪ್ಪ ಗುಡಿಮನಿ

(ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಗುಡಿಮನಿಯವರು ಮೂರ್ನಾಲ್ಕು ದಶಕಗಳಿಂದ  ದಲಿತ, ಎಡಪಂಥೀಯ ಚಳುವಳಿಯಲ್ಲಿ ಸಕ್ರಿಯವಾಗಿರುವವರು. ಬಳ್ಳಾರಿ ಭಾಗದ ಭೂಹೋರಾಟದಲ್ಲಿ ಪ್ರಧಾನವಾಗಿ ಮಾದಿಗ ಸಮುದಾಯದ ಜೊತೆ, ಆದರೆ ಎಲ್ಲಾ ಜಾತಿಗಳಿಗೆ ಸೇರಿದ ಶೋಷಿತರ ಪರವಾದ ಯಶಸ್ವಿ ಹೋರಾಟಗಳನ್ನು ಸಂಘಟಿಸಸಿದವರು.)


ಇದನ್ನೂ ಓದಿ: ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...