Homeಮುಖಪುಟಶಿಕ್ಷಣವನ್ನು ವೇಗವಾಗಿ ವ್ಯಾಪಾರ ಮಾಡಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ತರುತ್ತಿದೆ; ರಮೇಶ್ ಪಟ್ನಾಯಕ್

ಶಿಕ್ಷಣವನ್ನು ವೇಗವಾಗಿ ವ್ಯಾಪಾರ ಮಾಡಲು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ತರುತ್ತಿದೆ; ರಮೇಶ್ ಪಟ್ನಾಯಕ್

- Advertisement -
- Advertisement -

ಬಿಜೆಪಿ ಸತತವಾಗಿ ಎರಡನೆ ಬಾರಿ ಅಧಿಕಾರಕ್ಕೆ ಬಂದಿದೆ. ಕಳೆದ ಆಳ್ವಿಕೆಯ ಕಾಲದಲ್ಲಿ ಶಿಕ್ಷಣ ನೀತಿಯ ಮೇಲೆ ಸುಬ್ರಮಣೀಯನ್ ಕಮಿಟಿಯನ್ನು ನೇಮಿಸಿ ಅದು ನೀಡಿದ ವರದಿಯನ್ನು ಪಡೆದುಕೊಂಡು ಸುಮ್ಮನೆ ಇಟ್ಟುಕೊಂಡಿತ್ತು. ಮತ್ತೆ 2017 ಜೂನ್‍ನಲ್ಲಿ ಪ್ರಸ್ತುತ ಕಸ್ತೂರಿ ರಂಗನ್ ಸಮಿತಿಯನ್ನು ನೇಮಿಸಿತು. ಈ ಕಮಿಟಿ 2018 ಡಿಸೆಂಬರ್ 15ರಂದು(ಚುನಾವಣೆಗೂ ಮುಂಚೆ) ಸರ್ಕಾರಕ್ಕೆ ತಲುಪಿಸಿದರೂ ಸಹ ಸರ್ಕಾರ ಮಾತ್ರ ಸುಮಾರು ಆರು ತಿಂಗಳ ನಂತರ ಚುನಾವಣೆಯ ನಂತರ 2019 ಮೇ 31ರಂದು ಬಿಡುಗಡೆ ಮಾಡಿತು.

ಆಶ್ಚರ್ಯಕರವಾದ ವಿಷಯವೇನೆಂದರೆ ತಯಾರಾದ ವರದಿಯನ್ನು ಬಿಡುಗಡೆ ಮಾಡಲು ಆರು ತಿಂಗಳು ತೆಗೆದುಕೊಂಡ ಸರ್ಕಾರ , ಜನಸಾಮಾನ್ಯರಿಗೆ ಮಾತ್ರ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಒಂದು ತಿಂಗಳು ಮಾತ್ರ ಕಾಲಾವಕಾಶ ನೀಡಿತು. ಈ ವರದಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಲಭ್ಯವಿದೆ. ಕನಿಷ್ಠ ತೆಲುಗು ತಮಿಳು , ಕನ್ನಡದಂತಹ ಷೆಡ್ಯೂಲ್ ಭಾಷೆಗಳಲ್ಲಿಯೂ ಸಹ ಲಭ್ಯವಿಲ್ಲ. ವರದಿಯನ್ನು ಎಲ್ಲಾ ಭಾಷೆಗಳಲ್ಲೂ ಅನುವಾದ ಮಾಡಲೂ ಕನಿಷ್ಟ ಮೂರು ತಿಂಗಳ ಸಮಯ ನೀಡಬೇಕೆಂದು ದೇಶದ್ಯಾಂತ ಅನೇಕ ಶಿಕ್ಷಣಕ್ಷೇತ್ರದ ಸಂಸ್ಥೆಗಳು ಸರ್ಕಾರಕ್ಕೆ ಆಗ್ರಹಿಸಿವೆ. ಆದರೆ ಸರ್ಕಾರ ಏನು ಮಾಡುತ್ತದೆಯೋ ಕಾದು ನೋಡಬೇಕಿದೆ.

ಕಸ್ತೂರಿ ರಂಗನ್ ಸಮಿತಿ, ಅದು ರೂಪಿಸಿದ ವರದಿಗೆ ‘ರಾಷ್ಟ್ರೀಯ ಶಿಕ್ಷಣ ನೀತಿಯ ಚೌಕಟ್ಟು 2019’ ಎಂದು ಹೆಸರಿಟ್ಟರೂ ಅದು ನಿಜಕ್ಕೆ ಅದು ಚೌಕಟ್ಟಿನ ವಿಧಾನವಲ್ಲ. ಅದು ಶಿಕ್ಷಣ ರಂಗದ ಅಭಿವೃದ್ಧಿಯ ಮೇಲೆ ಒಂದು ವರದಿ ಮಾತ್ರ. ಒಂದು ಕಡೆ ಶಿಕ್ಷಣ ವ್ಯಾಪಾರದ ಬಗ್ಗೆ ಅಸ್ಫಷ್ಟತೆ, ಮತ್ತೊಂದು ಕಡೆ ತೀವ್ರವಾದ ಅಧಿಕಾರ ಕೇಂದ್ರಿಕರಣ ಈ ವರದಿಯಲ್ಲಿ ಪ್ರಧಾನವಾಗಿ ಕಾಣಿಸುತ್ತಿದೆ. ಅಧಿಕಾರ ಕೇಂದ್ರಿಕರಣ ಅತ್ತ ಮಾರುಕಟ್ಟೆಗೆ ಇತ್ತ ಮನುವಾದ ನವೀಕರಣಕ್ಕೆ ಹೆಚ್ಚು ಅವಶ್ಯಕ ಎಂಬ ವಿಷಯ ತಿಳಿದಿರುವುದೆ ಆಗಿದೆ.

ಈ ವರದಿಯಲ್ಲಿ ಶಿಕ್ಷಣನೀತಿ ವ್ಯಾಖ್ಯಾನದಲ್ಲಿಯೇ ಒಂದು ವಕ್ರಮಾರ್ಗ ಕಾಣಿಸುತ್ತಿದೆ. ಸಂವಿಧಾನದ ಮೌಲ್ಯಗಳನ್ನು ನೀಡುವ ಶಿಕ್ಷಣ ಎಂದು ಸೂಚಿಸಿದಾಗ್ಯೂ ಜಾತ್ಯತೀತ, ಸಮಾಜವಾದ ಎನ್ನುವ ಪದಗಳು ಒಟ್ಟಾರೆ ವರದಿಯಲ್ಲೇ ಕಾಣಿಸಲಿಲ್ಲ. ಪ್ರಸ್ತುತ ಆಡಳಿತಪಕ್ಷ ಬಿ.ಜೆ.ಪಿ ಆ ಪದಗಳನ್ನು ಸಂವಿಧಾನದಿಂದಲೇ ತೆಗೆದುಹಾಕಬೇಕೆಂದು ನೋಡುತ್ತಿರುವುದು ತಿಳಿದ ವಿಷಯವೇ. ಸಾಮಾಜಿಕ ನ್ಯಾಯ ಎಂಬ ವಿಷಯವು ಸಹ ಒಂದು ನೀತಿ ಹೇಳಿಕೆಯಾಗಿ ಕಾಣಿಸದು.

ದೇಶದಲ್ಲಿನ ಭಾಷೆ, ಸಂಸ್ಕøತಿಗಳ ವೈವಿಧ್ಯತೆಯ ಬಗ್ಗೆ ಪ್ರಮುಖವಾಗಿ ನಿರ್ಧಿಷ್ಟಪಡಿಸಿದ ವರದಿಯ ಕೊನೆಗೆ ಸಂಸ್ಕøತ, ಹಿಂದಿಗಳನ್ನು ತಲೆಮೇಲೆ ಕೂರಿಸಿಕೊಂಡಿದೆ. ವರದಿ ಈ ದೇಶದ ಜನರ ಐಕ್ಯತೆಯನ್ನು ಅನೇಕ ಏಳುಬೀಳುಗಳಿಂದ ಕಾಪಾಡುತ್ತಾ ಬಂದಿರುವ ‘ಭಿನ್ನತೆಯಲ್ಲಿ ಏಕತೆ’ ಎಂಬ ಘೋಷವಾಕ್ಯವನ್ನು ಏಕೋ ಹೇಳಬಾರದ ವಿಷಯ ಎಂಬಂತೆ ನೋಡಿದೆ. ಸೂಕ್ಷ್ಮವಾಗಿ ನೋಡಿದರೆ ಸುಧಾರಣಾ ಚಳುವಳಿ, ಸ್ವಾತಂತ್ರ್ಯ ಚಳುವಳಿಯಿಂದ ಉದಯಿಸಿದ ಸಂವೇದನೆಗಳು, ಅಭಿವ್ಯಕ್ತಿ ಭಾವಗಳನ್ನು ಬಿಜೆಪಿಯ ರೀತಿಯಲ್ಲಿಯೇ ಈ ವರದಿ ತಿರಸ್ಕರಿಸಿದೆ.

ಪ್ರಾಚೀನ ನಾಗರೀಕತೆಯನ್ನು ಅದು ಸಾಧಿಸಿದ ವಿಜಯಗಳನ್ನು ಹೆಚ್ಚು ಹೊಗಳುವ ವರದಿ ಮಧ್ಯಯುಗೀನ ಇತಿಹಾಸ ಮತ್ತು ಅದು ಸಾಧಿಸಿದ ನಾಗರೀಕತೆಯ ಮೇಲೆ ಕಳ್ಳಗಣ್ಣು ಹಾಕಿದೆ. ಮಧ್ಯಯುಗದ ಇತಿಹಾಸವನ್ನು ಮುಸ್ಲೀಂ ಚರಿತ್ರೆಯಾಗಿ ನೋಡುವ ಸಂಘಪರಿವಾರದ ನೋಟವೇ ಈ ವರದಿಯಲ್ಲಿ ಕಾಣಿಸುತ್ತದೆ.

ಒಂದು ಶಿಕ್ಷಣ ನೀತಿಗೆ ಸಂಬಂಧಿಸಿದ ವರದಿಯನ್ನು ಪರಿಶೀಲಿಸಲು ಪ್ರಸ್ತುತ ಕಾಲದಲ್ಲಿ ಕೆಲವು ಮಾನದಂಡಗಳನ್ನು ಉಪಯೋಗಿಸಬೇಕಾಗುತ್ತದೆ. ಅವು 1) ಶಿಕ್ಷಣವ್ಯಾಪಾರ ನಿಷೇಧ, 2)ಜಾತಿ, ಧರ್ಮ, ಪ್ರಾಂತ್ಯ, ಲಿಂಗ, ಭಾಷಾ ಆಧಿಪತ್ಯವಾದಗಳ ನಿರಾಕರಣೆ, 3) ಶಿಕ್ಷಣ ವ್ಯಾಪಾರದ ಜಾಗತೀಕರಣ-ವಿಶ್ವ ವಾಣಿಜ್ಯ ಸಂಸ್ಥೆಯಲ್ಲಿ ಭಾರತ ಶಿಕ್ಷಣ ರಂಗವನ್ನು ಸೇರಿಸುವುದನ್ನು ವಿರೋಧಿಸುವುದು, ಒಕ್ಕೂಟ ಸ್ಪೂರ್ತಿಯನ್ನು ಹೊಂದಿರುವುದು. 5) ವಿದ್ಯಾರ್ಥಿಗಳ ಶಿಕ್ಷಕರ ಹಕ್ಕುಗಳು, ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಬೆಂಬಲ, 6)ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವ, 7) ಪ್ರಾಥಮಿಕ ಹಂತದಲ್ಲಿ ಎಲ್ಲರಿಗೂ ಶಿಕ್ಷಣ, ಸಮಾನ ಗುಣಮಟ್ಟದ ಶಿಕ್ಷಣ , ಉನ್ನತ ಶಿಕ್ಷಣದ ಹಂತದಲ್ಲಿ ರಾಜ್ಯ ಆರ್ಥಿಕ ಸ್ಥಿತಿಯ ಮೇಲೆ ಸಾಮಾಜಿಕ ನ್ಯಾಯವನ್ನಾಧರಿಸಿ ಸಮಾನ ಅವಕಾಶಗಳನ್ನು ಕಲ್ಪಿಸುವುದು, 8) ಹಕ್ಕುಗಳ ಸ್ವಾಯತ್ತತೆಗೆ ಬೇಕಾದ ಸಂಪನ್ಮೂಲಗಳ ಜೋಡಣೆ, 9)ದೇಶ, ಭಾಷಾ ಸಂಸ್ಕøತಿಗಳೊಂದಿಗೆ ಇರುವ ವೈವಿದ್ಯತೆಯನ್ನು ಗಮನಿಸುವುದು ಗೌರವಿಸುವುದು , ಪ್ರಜಾತಾಂತ್ರಿಕಗೊಳಿಸುವುದು. 10) ವ್ಯಕ್ತಿ ವಿಕಾಸ, ಸಾಮಾಜಿಕ ಪ್ರಗತಿಯ ಗುರಿಗಳೊಂದಿಗೆ ಶಿಕ್ಷಣ ವಸ್ತು, ಪ್ರಕ್ರಿಯೆ, ರೂಪಕಲ್ಪನೆ 11) ಸರ್ಕಾರಗಳು ಶಿಕ್ಷಣಕ್ಕೆ ಅವಶ್ಯಕವಾದ ಅನುದಾನವನ್ನು ಅಂದರೆ ಕನಿಷ್ಠ ಜಿಡಿಪಿಯಲ್ಲಿ 6%ರಷ್ಟನ್ನು ನಿಗಧಿಪಡಿಸಬೇಕು. ಮೇಲೆ ಹೇಳಿದ ಪ್ರಶ್ನೆಗಳಿಗೆ ನೇರ ಉತ್ತರಗಳು ಈ ವರದಿಯಲ್ಲಿ ಬರಿಸುವುದೇ ಕಷ್ಟ. ಶಿಕ್ಷಣ ವ್ಯಾಪಾರದ ಮೇಲೆ ಈ ವರದಿ ತೆಗೆದುಕೊಂಡ ವಿಧಾನವನ್ನು ಮೊದಲಿಗೆ ಪರಿಶೀಲಿಸೋಣ.

ಶಿಕ್ಷಣ ವ್ಯಾಪಾರವನ್ನು ಈ ವರದಿ ತೀವ್ರವಾಗಿ ಖಂಡಿಸಿದೆ. ಆದರೆ, ಶಿಕ್ಷಣ ವ್ಯಾಪಾರ ನಿಷೇದಕ್ಕೆ ಅವಶ್ಯವಾದ ಶಿಫಾರಸ್ಸುಗಳನ್ನು ಮಾಡಲಾಗಿಲ್ಲ. ಪ್ರಸ್ತುತ ವರದಿಯ ವಿಷಯಕ್ಕೆ ಬಂದರೆ ಲಾಭ ಮಾಡಿಕೊಳ್ಳುವುದನ್ನು ಸಹ ಈ ವರದಿ ವಿರೋಧಿಸುತ್ತದೆ. ಈ ವರದಿಯ ಪ್ರಕಾರ ಲಾಭಾಪೇಕ್ಷೆ ಇಲ್ಲದ ಸಂಸ್ಥೆಗಳು (ನಾಟ್ ಫಾರ್ ಪ್ರಾಫಿಟ್ ಸಂಸ್ಥೆಗಳು) ಮಾತ್ರವೇ ಶಿಕ್ಷಣ ಸಂಸ್ಥೆಗಳನ್ನು ನಡೆಸಬೇಕು. ಅಂದರೆ ಫೀಸು ವಸೂಲಿ ಮಾಡಬಾರದು ಅಥವಾ ವಸೂಲು ಮಾಡಿದರೂ ಲಾಭ ಮಾಡಿಕೊಳ್ಳಬಾರದು. ಈ ಪ್ರತಿಪಾದನೆಯನ್ನು ಸರ್ಕಾರ ಅನುಮೋದಿಸುತ್ತದೆ ಎಂದು ಅಂದುಕೊಳ್ಳಲಾರೆವು. ಈ ಶಿಫಾರಸ್ಸನ್ನು ಅನುಮೋದಿಸಿ ನೀತಿ ಪತ್ರದಲ್ಲಿ ಈ ಅಂಶವನ್ನು ಸೇರಿಸಿದರು, ಜಾರಿಯಾಗುವ ವೇಳೆಗೆ ಯಾವುದಕ್ಕೂ ಬಾರದಂತಾಗುವಂತಾಗುತ್ತದೆ ಎಂದು ರುಜುವಾಗುತ್ತದೆ.

ಲಾಭಕ್ಕಾಗಿ ಅಲ್ಲದೆ ನಿರ್ವಹಣೆಗಾಗಿ ಶುಲ್ಕಗಳನ್ನು ವಸೂಲು ಮಾಡಿಕೊಳ್ಳಬಹುದು ಎನ್ನುವ ಒಂದು ಸಡಿಲಿಕೆ ಸಾಕು, ನಮ್ಮ ಶಿಕ್ಷಣ ವರ್ತಕರು ಸಾಧಿಸದೆ ಇರುವುದು ಏನು ಉಳಿಯಲಾರದು. ಇವರು ಚಿಕ್ಕ ಕಟ್ಟಿಕೆ ತುಂಡು ಸಿಕ್ಕರೂ ಸಹ ಸಪ್ತ ಸಮುದ್ರಗಳನ್ನು ದಾಟುತ್ತಾರೆ. ಶಾಲಾ, ಕಾಲೇಜುಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನು ‘ಫರ್ ಫ್ರಾಫಿಟ್’ ಸಂಸ್ಥೆಗಳು ಸ್ಥಾಪಿಸಬಾರದೆಂದು, ಸ್ವಯಂಸೇವಕ ಸಂಸ್ಥೆಗಳು ಮಾತ್ರವೇ ನಿರ್ವಹಿಸಬೇಕೆಂದು ನಿಬಂಧನೆ ವಿದಿಸಿದರೂ, ಅವಶ್ಯಕತೆಗೆ ತಕ್ಕಂತೆ ಶುಲ್ಕು ವಸೂಲು ಮಾಡಬಹುದೆಂಬ ಸಡಲಿಕೆ ಅವರಿಗೆ ಸಾಕು.

ನಾರಾಯಣ, ಚೈತನ್ಯ ಅಂತಹ ಸಂಸ್ಥೆಗಳು ಸ್ವಯಂಸೇವಕ ಸಂಸ್ಥೆಗಳಾಗಿ ತಲೆ ಎತ್ತುತ್ತಿವೆ. ತಮ್ಮ ವ್ಯಾಪಾರವನ್ನು ಸಲೀಸಾಗಿ ಸಾಗಿಸಿಕೊಳ್ಳುತ್ತವೆ. ಶಿಕ್ಷಣ ವ್ಯಾಪಾರವನ್ನು ನಿಷೇಧಿಸಬೇಕೆಂದರೆ ವಿವಿಧ ರೂಪಗಳಲ್ಲಿರುವ ಶುಲ್ಕಗಳನ್ನು ಇತರ ವಸೂಲಿಗಳನ್ನು ನಿಷೇಧಿಸುವುದೊಂದೆ ಮಾರ್ಗ. ಅಂದರೆ ಯಾವುದೇ ಶುಲ್ಕಗಳನ್ನು ವಸೂಲು ಮಾಡದೆ ತಮ್ಮ ಸ್ವಂತ ಸಂಪನ್ಮೂಲಗಳಿಂದ ಉಚಿತವಾಗಿ ಶಿಕ್ಷಣ ನೀಡುವ ಸ್ವಯಂಸೇವಾ ಸಂಸ್ಥೆಗಳಿಗೆ ಮಾತ್ರವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ, ನಿರ್ವಹಿಸುವ ಅವಕಾಶ ನೀಡಬೇಕು. ಆದರೆ ಮೊದಲಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲಾ ಶುಲ್ಕಗಳನ್ನು ರದ್ದುಗೊಳಿಸಬೇಕು ಎನ್ನುವುದು ಸ್ಫಷ್ಟ. ನಂತರ ಯಾವ ರೂಪದಲ್ಲಿ ಶುಲ್ಕ ವಸೂಲಿ ಮಾಡಿದರು ಅದನ್ನು ಶಿಕ್ಷಣದ ವ್ಯಾಪಾರವೆಂದು ಪರಿಗಣಿಸಬೇಕು.

ಶಿಕ್ಷಣವ್ಯಾಪಾರ ಮಾಡುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಮುಚ್ಚಿ ಹಾಕಬೇಕು ಇಲ್ಲ ಅವಶ್ಯಕತೆ ಬಿದ್ದರೆ , ಸಂಧರ್ಭ ಬಂದರೆ ಭಾರತ ಸಂವಿಧಾನ 19(6) ಅಧಿಕಾರವನ್ನು ಉಪಯೋಗಿಸಿ ರಾಷ್ಟ್ರೀಯತೆ ಮಾಡಬೇಕು. ಮತಪರವಾದ, ಭಾಷಾಪರವಾದ ಅಲ್ಪಸಂಖ್ಯಾತರಿಗೆ ಸಂವಿಧಾನ ಕಲ್ಪಿಸಿದ ರಕ್ಷಣೆಗಳಿಗೆ ಅನುಗುಣವಾಗಿ ರಿಯಾಯಿತಿ ಕಲ್ಪಿಸಬೇಕು. ಆದರೆ ಶಿಕ್ಷಣ ಸಂಸ್ಥೆಗಳನ್ನು ಲಾಭಾಪೇಕ್ಷತೆ ಇಲ್ಲದ ವ್ಯವಸ್ಥೆಗಳಾಗಿ ನಡೆಸುವುದಕ್ಕಾಗಿ ಮಾತ್ರವೆ ಅನುಮತಿ ನೀಡಬೇಕು. ಪರಿಶೀಲಿಸಿ ನೋಡಿದಾಗ ನಮಗೆ ತಿಳಿಯುವುದೇನೆಂದರೆ , ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಮಾತ್ರವೇ ಕೊಡಬೇಕಾದ ರಿಯಾಯತಿಗಳನ್ನು ಈ ವರದಿ ಎಲ್ಲರಿಗೂ ನೀಡಿದೆ. ಸೇವಾ ಮನೋಭಾವದಿಂದ ನಡೆಯುವ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಮುಂದೆ ಬಂದು ಶಾಲೆಗಳನ್ನು ನಿರ್ವಹಿಸುತ್ತವೆಂದು ವರದಿ ಭಾವಿಸಿದೆ. ಇದು ಒಂದು ವಾಸ್ತವಕ್ಕೆ ದೂರವಾದ ವಾದ. ಈ ವಾದದ ಮೇಲೆ ನೀಡಿದ ರಿಯಾಯಿತಿ ನಿಜಕ್ಕೂ ವ್ಯಾಪಾರ ಸಂಸ್ಥೆಗಳು ತಮ್ಮ ಸಂಕುಚಿತ ಪ್ರಯೋಜನಗಳಿಗೆ, ಲಾಭಗಳ ಬೇಟೆಗೆ ಉಪಯೋಗಿಸುತ್ತವೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ.

ರಮೇಶ್ ಪಟ್ನಾಯಕ್

ಅಖಿಲ ಭಾರತ ಶಿಕ್ಷಣಹಕ್ಕು ವೇದಿಕೆಯ ಸಂಚಾಲಕರು

ಅನುವಾದ; ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಕೃಪೆ-ಪ್ರಜಾಶಕ್ತಿ ದಿನಪತ್ರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...