Homeಕರ್ನಾಟಕಗ್ರಾಮ್ಯ ಸೊಗಡಿನಲ್ಲಿ ಬಿಜೆಪಿಗರನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

ಗ್ರಾಮ್ಯ ಸೊಗಡಿನಲ್ಲಿ ಬಿಜೆಪಿಗರನ್ನು ಹಾಸ್ಯದ ಮೂಲಕವೇ ತರಾಟೆಗೆ ತೆಗೆದುಕೊಂಡ ಶಾಸಕ ಶಿವಲಿಂಗೇಗೌಡ

- Advertisement -
- Advertisement -

ಸಮ್ಮಿಶ್ರ ಸರ್ಕಾರದ ಶಾಸಕರ ರಾಜಿನಾಮೆಯ ಪ್ರಹಸನ ಈಗ ವಿಧಾನಸಭೆಯ ಅಂಗಳಕ್ಕೆ ಬಂದಿದ್ದು ಚರ್ಚೆ ನಡೆಯುತ್ತಿದೆ. ಬಿಜೆಪಿಯವರಿಗೆ ವಿಶ್ವಾಸ ಮತಯಾಚನೆಯ ಪ್ರಕ್ರಿಯೆ ಬೇಗ ನಡೆಯಬೆಕೆಂಬ ಕಾತರವಾದರೆ, ಆಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಈ ದಿನ ಕಳೆದರೆ ಎರಡು ದಿನ ಸಮಾಯಾವಕಾಶ ಸಿಗುವುದರಿಂದ ಮುಂದೆ ತಮ್ಮ ಸರ್ಕಾರ ಉಳಿಸಿಕೊಳ್ಳಬಹುದೆಂಬ ಯೋಚನೆ.

ಬಿಜೆಪಿಯ ಆಪರೇಷನ್ ಕಮಲದಂತಹ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಹಲವರು ಮಾತಾಡಿದ್ದರು. ಈ ಸಂದರ್ಭದಲ್ಲಿ ಅರಸಿಕೆರೆಯ ಶಾಸಕ ಶಿವಲಿಂಗೇಗೌಡರವರು ಹಾಸ್ಯ ಮಿಶ್ರಿತವಾಗಿ ರಾಜಕೀಯದ ಇತಿಹಾಸವನ್ನು ನೆನಪಿಸುತ್ತಾ ಸಭೆಯನ್ನು ಉದ್ದೇಶಿ ಮಾತನಾಡಿದರು. ತಮ್ಮ ಇಂಗ್ಲೀಷ್ ಭಾಷೆಯ ಜ್ಞಾನದ ಬಗ್ಗೆ ಕೆಣಕಿದಾಗ ನಾನು ಇಂಗ್ಲಿಷ್ ನಲ್ಲಿ ಪ್ರವೀಣನಲ್ಲ. ನನಗೆ ಬರುವ ಇಂಗ್ಲಿಷ್ ನಲ್ಲಿ ಬಾಂಬೆಯಲ್ಲಿ ಮಾತಾಡಿದ್ದೆ. ಇಲ್ಲಿ ಕನ್ನಡದಲ್ಲಿ ಮಾತಾನಾಡುತ್ತೇನೆ ಅದರ ಬಗ್ಗೆ ತಾವು ಚಿಂತೆ ಮಾಡಬೇಡಿ ಎಂದು ಹೇಳುತ್ತಲೆ ಭಾಷಣ ಆರಂಭಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಾಜಕೀಯ ನಾಟಕವನ್ನ ನೋಡಿ ಜನ ಚೀ ತೂ ಎಂದು ಉಗಿಯುತ್ತಿದ್ದಾರೆ. ನೇರವಾಗಿ ಯಾರಿಗೆ ಉಗಿಯುತ್ತಿದ್ದಾರೆ ಎಂಬುದನ್ನು ನೀವೆ ಊಹಿಸಿಕೊಳ್ಳಬಹದು ಎಂದರು. ಅತೃಪ್ತ ಶಾಸಕರೇ ನಮ್ಮನ್ನ ಬಾಂಬೆಗೆ ಬನ್ನಿ ಅಂದಿದ್ದರು. ಅದರಲ್ಲಿ ಗೋಪಾಲಯ್ಯನವರೇ ಫೋನ್ ಮಾಡಿದ್ದರು. ಅದಕ್ಕಾಗಿ ನಾವು ಹೋದೆವು.

ಆದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೋಟೆಲ್ ಅಲ್ಲಿ ರೂಮ್ ಬುಕ್ ಮಾಡಿದ್ದರೂ, ನಮಗೆ ಸ್ನಾನ ಮಾಡೋಕೆ ಬಿಟ್ಟಿಲ್ಲ. ಅಲ್ಲಿ ಬಿಜೆಪಿನ ಸರ್ಕಾರ ಇದೆ. ಹೋಗಿರೋದು ನಾಲ್ಕು ಜನ ನೀವು ಹೇಂಗಯ್ಯ 144 ಸೆಕ್ಷನ್ ಜಾರಿ ಮಾಡಿದ್ದೀರಿ? ಆದರೆ ನಾವು ಡಿಕೆಶಿ ಮಳೆಯಲ್ಲಿಯೇ ಟೀ ಕುಡಿದು, ತಿಂದಿ ತಿಂದು ಬಂದೆವು. ಇದಕ್ಕೆ ಯಾರನ್ನು ನಾವು ಕೇಳಬೇಕು? ಏನು ಮಾಡುತ್ತಿದೆ ಸೆಂಟ್ರಲ್ ಗರ್ಮೆಂಟು. ಏನ್ ಮಾಡ್ತಿದ್ದಾರೆ ಗೃಹ ಸಚಿವರು.

ನಾವು ಇಬ್ಬರು ಸಚಿವರು, ಇಬ್ಬರು ಶಾಸಕರು ಹೋದರೆ ಬಂದು ಮಾತಾಡಿಸುವಷ್ಟು ಸೌಜನ್ಯ ಇಲ್ಲ ಅಲ್ಲಿನ ಸರ್ಕಾರಕ್ಕೆ. ಆ ಹೋಟೆಲ್ ನ ಒಳಗೆ ಬಿಜೆಪಿ ಸಚಿವರು, ಶಾಸಕರು ತುಂಬಿಕೊಂಡಿದ್ದರು. ಈ ಆಟಕ್ಕೆ, ಈ ಕುತಂತ್ರಕ್ಕೆ, ಈ ಘನಕಾರ್ಯಕ್ಕೆ ಕನ್ನಡಿ ಬೇರೆ ಬೇಕಾ ಬಿಜೆಪಿಯವರೆ? ಭಾರೀ ಭಾರೀ ಬೇಕಲ್ವ ಕನ್ನಡಿ ನಿಮಗೆ? ಸಮ್ಮಿಶ್ರ ಸರ್ಕಾರ ಕೆಟ್ಟ ಕೆಲಸ ಮಾಡಿದ್ದರೆ, ಅಪವಿತ್ರ ಕೆಲಸ ಆಗಿದ್ದರೆ ಅದರ ಬಗ್ಗೆ ಚರ್ಚೆಗಿಡಿ. ಅದನ್ನು ಬಿಟ್ಟು ಯಾಕೆ ರಾಜೀನಾಮೆ ಕೊಡಿಸಿದ್ದೀರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇವತ್ತು ನಮ್ಮ ನಾಯಕರಾದ ಕುಮಾರಸ್ವಾಮಿಯವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆರೋಪಿ ಸ್ಥಾನದಿಂದ ವಿಮುಕ್ತರಾಗಬೇಕು. ಯಾವ 15 ಜನ ಶಾಸಕರು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಈ ಸದನದಿಂದ ಅವರಿಗೆ ನಾವು ಕೇಳಬೇಕು? ಈ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಲಿಲ್ಲವೇ? ಅನುದಾನ ಸಿಕ್ಕಲಿಲ್ಲವೇ? ಅದಕ್ಕೆ ಈ ಸದನದ ಮೂಲಕ ಜನರಿಗೆ ನಾವು ಉತ್ತರ ಕೊಡಬೇಕಿದೆ.

ಅದಕ್ಕೆ ನಾವು ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಬೇಕಿದೆ. ಇನ್ನು ಸಮ್ಮಿಶ್ರ ಸರ್ಕಾರ ನಮ್ಮ ಕರ್ನಾಟಕದಲ್ಲಿ ಮಾತ್ರ ಇದೆಯೇ? ಬೇರೆ ರಾಜ್ಯಗಳಲ್ಲಿ ಇಲ್ಲವೇ? ಗೋವಾದಲ್ಲಿ ಬಿಜೆಪಿಯವರು ಕಡಿಮೆ ಸ್ಥಾನದಲ್ಲಿದ್ದರು ಅವರು ಮುಖ್ಯಮಂತ್ರಿಯಾಗಲಿಲ್ಲವೇ? ದೇಶದಲ್ಲಿ ಎಷ್ಟು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಇವೆ ಅಲ್ಲವೇ? ಕೇವಲ 37 ಇರುವವರಿಗೆ 80 ಜನ ಇರುವವರು ಮುಖ್ಯಮಂತ್ರಿ ಸ್ಥಾನ ಕೊಟ್ಟುಬಿಟ್ಟಿದ್ದಾರೆ ಎಂದು ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬೇಕು. ಅದಕ್ಕೆ ಸಮಯ ಬೇಕಿದೆ. ಈ ದೇಶದಲ್ಲಿ ಇದು ಒಂದೇ ಸರ್ಕಾರವೇ ಎಂದು ತರಾಟೆಗೆ ತೆಗೆದುಕೊಂಡರು. ಹಿಂದೆ ವಾಜಪೇಯಿಯವರ ಸರ್ಕಾರ ಇದೇ ರೀತಿಯ ಬಿಕ್ಕಟ್ಟು ಇದ್ದಾಗ 10 ತಿಂಗಳ ಕಾಲ ಚರ್ಚೆಯಾಯಿತು ಎಂಬುದು ನೆನಪಿಸಿಕೊಟ್ಟರು.

ಹಳ್ಳಿಯ ಗ್ರಾಮ್ಯ ಭಾಷೆಯಲ್ಲಿ ಮುಂದುವರೆಸಿದ ಅವರು ಹಳ್ಳಿಯ ಕಡೆ ಎತ್ತುಗಳನ್ನು ಮಾರಿದರೆ ಚೀಟಿಕೊಡುತ್ತಾರೆ ಆದರೆ ಶಾಸಕರನ್ನು ಕರೆದುಕೊಂಡರೆ ಅದೇನು ಕೊಡೋದೇ ಇಲ್ಲ ಅದಕ್ಕಿಂತ ಕಡೆಯಾಗಿ ಹೋಗಿದ್ಧಾರೆ ಶಾಸಕರು ಎಂದರು. ಬಿಜೆಪಿ ಮಾಡುತ್ತಿರುವ ಎಲ್ಲಾ ಕುತಂತ್ರಗಳಿಗೂ ಯಾವ ಕನ್ನಡಿಯೂ ಬೇಕಿಲ್ಲ ಜನರಿಗೆಲ್ಲ ತಿಳಿದಿದೆ. ನಾನು ಮುಖ್ಯಮಂತ್ರಿ ಯವರ ಸ್ಥಾನ ಉಳಿದರೆ ತಿರುಪತಿಗೆ ಒಂದು ಕೋಟಿ ಕೊಡುವುದಾಗಿ ಬೇಡಿಕೊಂಡು ಹೊರಬಂದೆ ಒಂದು ಗುಳ್ಳೆನರಿ ಎಡದಿಂದ ಬಲಕ್ಕೆ ಹೋಯಿತು ನಾನು ಒಳ್ಳೆಯದಾಗುತ್ತದೆ ಅಂದುಕೊಂಡೆ ಆದರೆ ನಮ್ಮ ಸ್ನೇಹಿತರಿಗೆ ಪೋನಾಯಿಸಿದರೆ ಎಮ್.ಟಿ.ಬಿ ನಾಗರಾಜ್ ಗುಳ್ಳೆನರಿ ತರ ತಪ್ಪಿಸಿಕೊಂಡಿದ್ದರು ಎಂದು ಹೇಳುವ ಮೂಲಕ ಸಭೆ ನಗೆ ಗಡಲಲ್ಲಿ ತೇಲುವಂತೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ಸಂಧರ್ಭದಲ್ಲಿ ಸದಸ್ಯರನ್ನ ಕಿಡ್ನಾಪ್ ಮಾಡೋತರ ಶಾಸಕರನ್ನ ಕಿಡ್ನಾಪ್ ಮಾಡಿದ್ದಾರೆ. ಶಾಸಕ ಶ್ರೀಮಂತ್ ಪಾಟೀಲ್ ಗೆ ಆರೋಗ್ಯ ಸರಿಯಿಲ್ಲ ಅಂತ ಅಡ್ಮಿಟ್ ಮಾಡಿದ ಹಾಗೆ ಎಲ್ಲಾ 15 ಅತೃಪ್ತ ಶಾಸಕರನ್ನು ಅಡ್ಮಿಟ್ ಮಾಡಬೇಕಿತ್ತು ಎಂದರು. ಪ್ರತಿ ಬಾರಿ ಕುಟುಂಬ ರಾಜಕಾರಣ ಎಂದು ದೇವೇಗೌಡರ ಕುಟುಂಬವನ್ನು ಹೇಳುತ್ತೀರಿ, ಕುಟುಂಬ ರಾಜಕಾರಣವಿಲ್ಲದ ಒಂದಾದರೂ ರಾಜಕೀಯ ಪಕ್ಷವಿದ್ದರೆ ಚರ್ಚೆಗೆ ಬನ್ನಿ ಎಂದು ವಿರೋಧ ಪಕ್ಷದವರನ್ನು ಆಹ್ವಾನಿಸಿದರು.

ಇನ್ನು ಸರ್ಕಾರ ಇವತ್ತು ಬಿದ್ದೋಯಿತು, ನಾಳೆ ಬಿದ್ದೋಯಿುತು, ಢಮಾರ್ ಅಂತ ಎಲ್ಲ ಚರ್ಚೆ ಮಾಡ್ತೀರಿ ಏನ್ರಿ ಇದು. ನಾವು ಒಂದು ಪಕ್ಷದ ಚಿಹ್ನೆಯ ಕೆಳಗೆ ಗೆದ್ದರೆ ಅದು ನಮಗೆ ತಾಯಿ ಇದ್ದ ಹಾಗೆ. ಆ ಅತೃಪ್ತರು ನಾವು ಕಾಂಗ್ರೇಸ್ ಅಲ್ಲೇ ಇದ್ದೇವೆ ಮುಖ್ಯಮಂತ್ರಿಗಳಿಗೆ ವಿರೋಧ ಎಂದು ಹೇಳುತ್ತಾರೆ. ಆದರೆ ಬನ್ನಿ ಹದಿನೈದು ಜನ ಶಾಸಕರ ಕ್ಷೇತ್ರಕ್ಕೆ ಕೊಟ್ಟ ಅನುದಾನದ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು .

ಬೇರೆ ಸಮಯದಲ್ಲಿ ನಾವು ಮಾತಾಡಲು ಇಷ್ಟು ಸಮಯ ನೀವು ಕೊಡಲ್ಲ. ಇವತ್ತು ನಾನು ಏನು ಮಾತನಾಡಿದರು ಸುಮ್ಮನೆ ಇರುತ್ತೀರಿ ಅದಕ್ಕೆ ನಾನು ಚಚ್ಚುತ್ತಿದ್ದೀನಿ ಎಂದು ಹೇಳಿ ಸಭೆಯನ್ನು ನಗೆ ಗಡಲಲ್ಲಿ ತೇಲಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...