Homeಕರ್ನಾಟಕಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ... : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

ಸುಷ್ಮಾ ಸ್ವರಾಜ್‍ ರಿಗೊಂದು ಕಂಬನಿ… : ಜೊತೆಗೆ ಸುಷ್ಮಾ ಸ್ವರಾಜ್ ಸುತ್ತ ಹೆಣೆಯಲ್ಪಟ್ಟ ಕತೆಗಳು

- Advertisement -
- Advertisement -

ಆರು ಸಲ ಸಂಸದರಾಗಿ, ನಾಲ್ಕು ಸಲ ಶಾಸಕಿಯಾಗಿ, ಎರಡು ಸಲ ಸಚಿವೆಯಾಗಿ ಕೆಲಸ ಮಾಡಿದ ಸುಷ್ಮಾ ಸ್ವರಾಜ್ ತೀರಿಕೊಂಡಿದ್ದಾರೆ. ಭಾರತದ ಪುರುಷಕೇಂದ್ರಿತ ರಾಜಕಾರಣದಲ್ಲಿ ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡಿದ್ದು ಪ್ರಶಂಸಾರ್ಹ. ವಿದೇಶಾಂಗ ಸಚಿವೆ ಆಗಿದ್ದಾಗ ಹಲವು ಜನರ ಚಿಕಿತ್ಸೆಗೆ ಅವರು ನೆರವಾದರು, ಅಪ್ಪಟ ದೇಶಪ್ರೇಮಿಯಾಗಿದ್ದರು ಇತ್ಯಾದಿ ವಿವರಗಳನ್ನು ನಮ್ಮ ಮಾಧ್ಯಮಗಳು ಕೊಂಚ ಉತ್ಪ್ರೇಕ್ಷೆಯಿಂದಲೇ ವರದಿ ಮಾಡುತ್ತಿವೆ ಅನಿಸುತ್ತಿದೆ.

ಅದರಲ್ಲೂ ಕರ್ನಾಟಕದ ಜೊತೆಗಿನ ಅವರ ಸಂಬಂಧದ ಕುರಿತು ‘ಅದೊಂದು ಆದರ್ಶದ ರಾಜಕೀಯ’ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಆತ್ಮವಂಚನೆಯ ವರದಿ, ಹೊಗಳಿಕೆಗಳು ನಾಡಿನ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಬಾರದು ಎಂಬ ಕಾರಣಕ್ಕೆ ಇಲ್ಲಿ ಕೆಲವು ವಾಸ್ತವಗಳನ್ನು ನಿಮ್ಮ ಮುಂದೆ ಇಡಲೇಬೇಕಾಗಿದೆ.

ಅವರ ‘ಅಪ್ಪಟ ದೇಶಪ್ರೇಮ’ ಆರೆಸ್ಸೆಸ್ ಮಾದರಿಯದ್ದಾಗಿತ್ತೇ ಹೊರತು ಅದೆಂದೂ ವಿಶಾಲ ಭಾರತದ ಸರ್ವಜನರನ್ನೂ ಒಳಗೊಳ್ಳುವ ಭಾರತದ ಬಗೆಗಿನ ಪ್ರೇಮವಾಗಿರಲಿಲ್ಲ; ಅದು ಹಿಂದೂ ರಾಷ್ಟ್ರವೆಂಬ ಮತಾಂಧ ಪರಿಕಲ್ಪನೆಯ ಭಾಗವಾಗಿ ಅರಳಿದ ‘ದೇಶಪ್ರೇಮ’ವಾಗಿತ್ತಷ್ಟೇ. ಇನ್ನು ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರು ರಾಜಕೀಯ ಮಾಡುವುದು ಕಷ್ಟಸಾಧ್ಯ. ಆದರೆ ಇತರೆಲ್ಲಾ ಪಕ್ಷಗಳ ಮಹಿಳಾ ರಾಜಕಾರಣಿಗಳಂತೆ ಮಹಿಳೆಯರ ಮೇಲೆ ತಮ್ಮ ಪಕ್ಷದವರಿಂದಲೇ ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಅದರು ವಿರುದ್ಧ ಇವರು ದನಿಯೆತ್ತಿದ್ದು ಕಂಡುಬಂದಿಲ್ಲ.

2004ರಲ್ಲಿ ಯುಪಿಎಗೆ ಬಹುಮತ ಬಂದು ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಹುದ್ದೆ ಸಿಗುವ ಸಾಧ್ಯತೆಯಿದ್ದಾಗ ಬಿಜೆಪಿ ಮತ್ತು ಸಂಘ ಪರಿವಾರದಿಂದ ತೀವ್ರ ವಿರೋಧ ವ್ಯಕ್ತವಾಗಿತು. ಆಗ ಸಂಘ ಪರಿವಾರ ಬಳಸಿಕೊಂಡಿದ್ದು ಹಣೆ ತುಂಬ ಕುಂಕುಮ ಇಡುವ ‘ಮಾದರಿ’ ಹಿಂದೂ ಮಹಿಳೆ ಸುಷ್ಮಾರನ್ನು. ‘ಸೋನಿಯಾ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುವೆ, ಜೀವನಪರ್ಯಂತ ಬಿಳಿ ಸೀರೆ ಉಡುವೆ’ ಹೀಗೆಲ್ಲ ಅಸಹ್ಯ ಮಾತಾಡಿದ ಸುಷ್ಮಾರನ್ನು ಧೀಮಂತ ನಾಯಕಿ ಎಂದು ಹೇಗೆ ಕರೆಯುವುದು? ಸೋನಿಯಾರನ್ನು ತಡೆಯುವ ಭರದಲ್ಲಿ ಅವರು ತಮಗೆ ತಾವೇ ಅವಮಾನ ಮಾಡಿಕೊಡಿದ್ದರು.

ಕರ್ನಾಟಕದ ಜೊತೆಗೆ ಅವರಿಗೆ ತುಂಬ ಆತ್ಮೀಯ ಸಂಬಂಧ ಇತ್ತು, ಕರ್ನಾಟಕದ ಬಗ್ಗೆ ಅಪಾರ ಕಾಳಜಿ ಇತ್ತು ಎಂದೆಲ್ಲ ನಮ್ಮ ಮಾಧ್ಯಮಗಳು ಹೇಳಿವೆ, ಹೇಳುತ್ತಲೇ ಇವೆ. ಹೌದು ಅವರಿಗೆ ಬಳ್ಳಾರಿಯೊಂದಿಗೆ ಅವರಿಗೆ ‘ಆತ್ಮೀಯ’ ಒಡನಾಟವಿತ್ತೇ ವಿನಃ ಇಡೀ ಕರ್ನಾಟಕದೊಂದಿಗೆ ಅಲ್ಲ. ಬಳ್ಳಾರಿಯ ಜೊತೆಗಿನ ಒಡನಾಟ ಬಳ್ಳಾರಿಯ ಕಾಳಜಿಯಿಂದ ಮೂಡಿದ್ದಲ್ಲ, ಅದು ಸ್ವಾರ್ಥದಿಂದ ಕೂಡಿದ್ದಾಗಿತ್ತು ಅಷ್ಟೇ…

1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದಾಗ ಅವರ ವಿರುದ್ಧ ಸುಷ್ಮಾರನ್ನು ಕಣಕ್ಕಿಳಿಸಲಾಗಿತು. ‘ಸೋನಿಯಾ ವಿದೇಶಿ ಮಹಿಳೆ’ ಎಂದೆಲ್ಲ ಈ ‘ಅಪ್ಪಟ’ ದೇಶೀ ನಾರಿ ಕೂಗಾಡಿಕೊಂಡರೂ 56 ಸಾವಿರ ಮತಗಳಿಂದ ಸೋತರು. ಆಗಲೇ ಅವರಿಗೆ ಬಳ್ಳಾರಿಯ ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು ಥರದವರ ಸಂಪರ್ಕ ಪ್ರಾಪ್ತವಾಗಿತು. ಆಗಿನ್ನೂ ಗಣಿ ದಂಧೆ ತಾರಕಕ್ಕೆ ಏರಿರಲಿಲ್ಲ. ‘ಎನ್ನೋಬಲ್’ ಎಂಬ ಹಣಕಾಸಿನ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಟೋಪಿ ಹಾಕಿದ್ದ ರೆಡ್ಡಿಗಳು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದರು.

1999-2004ರ ವಾಜಪೇಯಿ ಸರ್ಕಾರದಲ್ಲಿ ಸುಷ್ಮಾ ಸಚಿವೆಯಾಗಿದ್ದರು. 2003ರ ವೇಳೆಗೆ ಕಬ್ಬಿಣ ಅದಿರಿಗೆ ಹೊರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಚೀನಾದಲ್ಲಿ ದೊಡ್ಡ ಬೇಡಿಕೆ ಉಂಟಾಗಿತು. ಅಷ್ಟೊತ್ತಿಗೆ ಸುಷ್ಮಾ ಕೃಪೆಯಿಂದ ಗಣಿ ದಂಧೆಗಿಳಿದಿದ್ದ ರೆಡ್ಡಿಗಳು ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಕರ್ನಾಟಕದ ಸಾರ್ವಜನಿಕ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದರು.

1999ರಲ್ಲಿ ಬಳ್ಳಾರಿಯಲ್ಲಿ ಸೋತ ಮೇಲೆಯೂ 2010ರವರೆಗೂ ಸುಷ್ಮಾರವರು ಕರ್ನಾಟಕದ ನಂಟು ಬಿಡಲೇ ಇಲ್ಲ ಎಂದು ಬಹುಪಾಲು ಮಾಧ್ಯಮಗಳು ಹೇಳುತ್ತಿವೆ. ನಿಜ, ಅದು ನಂಟಲ್ಲ, ಗಂಟಿನ ಕತೆ… ಸುಷ್ಮಾರವರು 1999ರಲ್ಲಿ ಸೋತ ನಂತರ ಪ್ರತಿವರ್ಷವೂ ಬಳ್ಳಾರಿಗೆ ಬಂದು ವರ ಮಹಾಲಕ್ಷ್ಮೀ ಹಬ್ಬ ಆಚರಿಸುತ್ತಿದ್ದರು. ರೆಡ್ಡಿ-ಶ್ರೀರಾಮುಲುಗಳನ್ನು ಅವರು ಮಕ್ಕಳೆನ್ನುವುದು, ಈ ಗಣಿಗಳ್ಳರು ಅವರನ್ನು ‘ಅಮ್ಮ’ ಎನ್ನುವುದು ಕೆಲವು ತೆಲುಗು ಸಿನಿಮಾದ ವಿಲಕ್ಷಣ ನಡವಳಿಕೆಗಳಂತೆ ಕಾಣುತ್ತಿದ್ದವು.

ಬಳ್ಳಾರಿಗೆ ಬರುತ್ತಿದ್ದ ‘ಅಮ್ಮ’ ಮಕ್ಕಳ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬ ಮಾಡುತ್ತಿರಲಿಲ್ಲ! ಬದಲಿಗೆ ಬಳ್ಳಾರಿಯ ಬ್ರಾಹ್ಮಣ ಕುಟುಂಬವೊಂದರ ಮನೆಯಲ್ಲಿ ಈ ಡ್ರಾಮಾ ಜರುಗುತ್ತಿತ್ತು! ಇದರಿಂದ ಎಂತಹ ಜಾತಿ ಮನಸ್ಸು ಸುಷ್ಮಾ ಅವರದ್ದು ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ? ಆದರೆ ಆ ಬ್ರಾಹ್ಮಣರ ಮನೆಯಲ್ಲಿ ಎಲೆ, ಅಡಿಕೆ, ಕುಂಕುಮ, ಅರಿಷಿಣ, ಸೀರೆಗಳ ಉಡಿ ತುಂಬಿಕೊಳ್ಳುತ್ತಿದ್ದ ನಂತರ ಅವರ ಸವಾರಿ ಸೀದಾ ರೆಡ್ಡಿಗಳ ಮನೆ ಕಡೆ ಹೊರಡುತ್ತಿತ್ತು. ಅಲ್ಲಿ ನಿಜವಾದ ಉಡಿ ತುಂಬುವ ಕಾರ್ಯ ನಡೆಯುತ್ತಿತ್ತು. ಈ ನಾಡಿನ ಸಂಪತ್ತಿನ ಲೂಟಿಯ ಒಂದು ಭಾಗ ಅದಿರಿನ ಧೂಳಿನ ಹಾಗೆ ದೆಹಲಿ ಕಡೆ ಹಾರಿ ಹೋಗುತ್ತಿತ್ತು.

2008ರಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗಲಂತೂ ರೆಡ್ಡಿ-ಶ್ರೀರಾಮುಲುಗಳ ಕಾರುಬಾರು ಭಾರೀ ಜೋರಾಗಿತ್ತಲ್ಲ? ಒಮ್ಮೆ ಯಡಿಯೂರಪ್ಪರನ್ನೇ ಕೆಡವಲು ಈ ಅಡವಿ-ದೊಂಗುಲುಗಳು ಕೈ ಹಾಕಿದಾಗ ಉಡಿ ತುಂಬಿಸಿಕೊಂಡವರ ಸಪೋರ್ಟೂ ಅದಕ್ಕಿತ್ತು! ಮುಂದೆ ಅಡ್ವಾಣಿ ಸಮ್ಮುಖದಲ್ಲಿ ಯಡಿಯೂರಪ್ಪ ಮತ್ತು ರೆಡ್ಡಿ – ರಾಮುಲಗಳ ನಡುವೆ ರಾಜಿ ಮಾಡಿಸಿದ್ದು ಇದೇ ಸುಷ್ಮಾ ಮೇಡಮ್ಮು.

ಯಾವಾಗ ಜನಾರ್ಧನರೆಡ್ಡಿ ಜೈಲು ಪಾಲಾದರೋ ಆಗ ಯು ಟರ್ನ್ ತೆಗೆದುಕೊಂಡ ಸುಷ್ಮಾರವರು, ‘ರೆಡ್ಡಿ-ರಾಮುಲು ಇತ್ಯಾದಿ ಎಲ್ಲ ನನಗೆ ವಿಶೇಷವಾಗಿ ಗೊತ್ತಿಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರಂತೆ ಅವರೂ ಪರಿಚಯ ಅಷ್ಟೇ’ ಎಂದು ಕೈ ಎತ್ತಿಬಿಟ್ಟರು! ಈಗ ಹೇಳಿ, ಸುಷ್ಮಾ ಧೀಮಂತ ನಾಯಕಿ ಆಗಿದ್ದರೇ? ಆದರೆ ಅವರ ನಂತರದಲ್ಲಿ ಪ್ರವರ್ಧಮಾನಕ್ಕೆ ಬಂದ ನರೇಂದ್ರಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಥರಹದ ತೀವ್ರಗಾಮಿ ನಾಯಕರನ್ನು ನೋಡಿದಾಗ ಸುಷ್ಮಾರವರಂತವರು ಸಭ್ಯರಂತೆ ಕಂಡುಬರುವುದು ಈ ಕಾಲದ ದುರಂತಗಳಲ್ಲೊಂದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ವಸ್ತುನಿಷ್ಟ ವಿಶ್ಲೇಷಣೆ.
    ವ್ಯಕ್ತಿಯೋರ್ವ ಇಲ್ಲವಾದಾಗ ಔಪೋಚಾರಿಕ ಸ್ಮರಣೆ ನಾಗರೀಕ ಲಕ್ಷಣ ನಿಜ, ಆದರೆ ಅತಿಶಯ ಗುಣಗಾನ ಆತ್ಮವಂಚನೆ ಮತ್ತು ಸುಳ್ಳುಗಳ ಮಾದರಿ ಕಟ್ಟಿಕೊಡುವ ಕೆಲಸವೇ ಆಗಿರುತ್ತದೆ.
    ಚರಿತ್ರೆಯೇ ಅರಿವಿಲ್ಲದ ಮಾಧ್ಯಮಗಳು ಸಮೂಹ ಸನ್ನಿಯಂತೆ ಪರಾಕು ಹಾಕುತ್ತಿರುವುದು ಅಸಹ್ಯವಷ್ಟೆ.
    ಇದರ ನಡುವೆ ಮಲ್ಲನಗೌಡರು ಅಸಲಿ ಸುಷ್ಮಾ ಅವರನ್ನು ಮತ್ತೆ ಪರಿಚಯಿಸಿದ್ದಾರೆ.

  2. ತಲೆ ಬೋಲಸಕೋತಿನಿ ಅಂತ ಹೇಳಿದ್ದು ಉಮಾ ಭಾರತಿ ಇವರಲ್ಲ . ಉಳಿದೆರೋ ನಿಮ್ಮ ಮಾತು ನಿಜವಾಗಿದೆ .

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...