Homeಸಾಹಿತ್ಯ-ಸಂಸ್ಕೃತಿಕಥೆಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ - ಯೋಗೇಶ್ ಮಾಸ್ಟರ್

ಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ – ಯೋಗೇಶ್ ಮಾಸ್ಟರ್

- Advertisement -
- Advertisement -

“ತಿಂಮ, ನಾಟಕ ನೋಡಿದೆಯೇನೋ?” ಬುದ್ಧನ ನಾಟಕ ನೋಡಲು ರಾತ್ರಿ ಮಗನ ಕಳುಹಿಸಿದ್ದ ತಂದೆ ಬೆಳಗ್ಗೆ ಕೇಳಿದ.
“ನೋಡಿದೆ ಅಪ್ಪಾ.”
“ಎಲ್ಲಾ ಅರ್ಥ ಆಯ್ತೇನೋ?”
“ಆಯ್ತಪ್ಪಾ” ಎನ್ನುವ ತಿಂಮ ಮತ್ತೆ ನೆನಪಿಸಿಕೊಂಡು ಹೇಳುತ್ತಾನೆ, “ಆದರೆ, ಒಂದರ್ಥ ಆಗಲಿಲ್ಲ. ಬುದ್ಧ ರಾಜ್ಯ, ಹೆಂಡತಿ, ಮಗ; ಎಲ್ಲವನ್ನೂ ಬಿಟ್ಟು ಹೋದವನು, ತಗಡಿನ ಬಿಲ್ಲೆ ಕೊಡ್ತೀವಿ ಅಂದ ತಕ್ಷಣ ಓಡಿ ಬಂದುಬಿಟ್ಟನಲ್ಲಪ್ಪಾ?”ಬೀಚಿಯ ಬೆಳ್ಳಿ ತಿಂಮ ಒಬ್ಬ ಬಾಲಕ. ಅವನು ತಾನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನೋಡುವುದನ್ನೆಲ್ಲಾ ಪ್ರಶ್ನಿಸುತ್ತಾನೆ. ಅವನ ಪ್ರಶ್ನೆಗಳು ಸಮಾಜವು ಯಾವುದನ್ನು ಗಂಭೀರ ಅಂತ ಪರಿಗಣಿಸುತ್ತದೋ ಅದನ್ನು ಲೇವಡಿ ಮಾಡುತ್ತದೆ. ಹೀಗೆ ವ್ಯಂಗ್ಯವಾಡುವುದು ವ್ಯವಸ್ಥೆಯನ್ನು ಪ್ರತಿಭಟಿಸುವ, ಚಿಂತನೆಗೆ ಹಚ್ಚುವ ಬೀಚಿಯವರ ರೀತಿ.

ಬುದ್ಧ ತಗಡಿನ ಬಿಲ್ಲೆಗೆ ಓಡಿ ಬರುವುದು, ತಿಂಮನಿಗೆ ನಾಟಕ ಮತ್ತು ವಾಸ್ತವದ ಅರಿವಿಲ್ಲ ಅಂತಲ್ಲ. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅದಕ್ಕೆ ಪ್ರಶಸ್ತಿ ಬರಲೆಂದು ಅರ್ಜಿ ಹಾಕುವುದನ್ನು, ಲಾಬಿ ಮಾಡುವ ವಾಸ್ತವವನ್ನು ಅದು ಅಣಕಿಸುತ್ತದೆ.

ರಸ್ತೆಯಲ್ಲಿ ಯಾರಿಗೋ ಕೈಕೋಳ, ಕಾಲ್ಗಳಿಗೆ ಸರಪಳಿ ಹಾಕಿ ಎಳೆದೊಯ್ಯುತ್ತಿದ್ದ ಗಲಾಟೆ. ತಿಂಮ ಕೇಳಿದ ಅದೇನೆಂದು. ಜೈಲಿಗೆಂದರು ಯಾರೋ. ‘ಜೈಲಿಗೋ ಇಷ್ಟು ರಂಪು! ನಾನೆಲ್ಲೋ ಸ್ಕೂಲಿಗೆ ಎಂದುಕೊಂಡೆ’ ಎನ್ನುತ್ತಾ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾನೆ ತಿಂಮ.

“ಇವತ್ತು ಬರುವ ಅತಿಥಿಯ ಮೂಗಿನ ಬಗ್ಗೆ ಏನೂ ಮಾತಾಡಬೇಡ” ಎಂದು ತಂದೆ ಎಚ್ಚರಿಸಿರುತ್ತಾನೆ. ಅತಿಥಿ ಬಂದಾಗ ಅವರನ್ನೇ ನೋಡಿಕೊಂಡು ತಿಂಮ ಕುಳಿತಿರುತ್ತಾನೆ. ಅತಿಥಿಗೂ ಅದು ಗಮನಕ್ಕೆ ಬಂದು, ಯಾಕಪ್ಪಾ ಎಂದು ಕೇಳುತ್ತಾರೆ. ಅವನು ಏನಿಲ್ಲ ಎಂದು ತಂದೆಗೆ ಕೇಳುತ್ತಾನೆ. “ಅಪ್ಪಾ, ಇವರ ಮೂಗಿನ ಬಗ್ಗೆ ಏನೂ ಮಾತಾಡಬೇಡಾಂದೆ. ಆದರೆ, ಇವರಿಗೆ ಮೂಗೇ ಇಲ್ಲ!” ಎಂದು ಮಕ್ಕಳ ಮುಖವಾಡವಿಲ್ಲದ ಮನಸ್ಸನ್ನು ತೋರಿಸುವ ಮಗುವಿನ ಮನೋವಿಜ್ಞಾನ ಬೀಚಿಯದು.

“ಹಸುವಿಗೆ ನಾಲ್ಕಿರುತ್ತವೆ. ನನಗೆ ಎರಡಿವೆ. ಏನದು ಹೇಳು?” ಶಾಲೆಗೆ ಸೇರಿಸಿಕೊಳ್ಳುವ ಉಪಾಧ್ಯಾಯಿನಿ ತಿಂಮನ ಪರೀಕ್ಷಿಸಿದಳು. ಅವನಿಗೆ ಕಂಡದ್ದು ಹೇಳಿದ. ಶಿಕ್ಷಕಿ ಮುಜುಗರಗೊಂಡು ಇವನು ದೊಡ್ಡ ತರಗತಿಗೆ ಹೋಗಬೇಕೆನ್ನುವಳು. ಪಾಪ, ಕಾಲುಗಳೆಂಬ ಉತ್ತರ ಅವಳು ಬಯಸಿದ್ದಳು. ಕಿರಿಯ ಪೀಳಿಗೆ ದಡ್ಡರಿರುತ್ತಾರೆಂದು ಕಡೆಗಣಿಸದಿರಲು ಬೀಚಿ ಹಿರಿಯರಿಗೆ ಎಚ್ಚರಿಸುತ್ತಾರೆ.

ಪಶುವೈದ್ಯರು ಹಸುವಿಗೆ ಹೇಗೆ ಗುಳಿಗೆ ನುಂಗಿಸಬೇಕೆಂದು ಹೇಳಿ ತಿಂಮನ ಕಳುಹಿಸಿದ್ದರು. ಸ್ವಲ್ಪ ಹೊತ್ತಿಗೆ ತಿಂಮ ಗಾಬರಿಯಿಂದ ಮರಳಿ ಹಸುವಿಗೆ ಗುಳಿಗೆ ನುಂಗಿಸಲಾಗಲಿಲ್ಲವೆಂದು ಹೇಳಿದ.
“ಯಾಕೋ, ಗೊಟ್ಟದಲ್ಲಿ (ಬಿದಿರಿನ ಕೊಳವೆ) ಗುಳಿಗೆ ಇಟ್ಟೆಯೇನೋ?”
“ಇಟ್ಟೆ.”
“ಗೊಟ್ಟವನ್ನು ಹಸುವಿನ ಗಂಟಲಿಗಿಟ್ಟೆಯೇನೋ?”
“ಇಟ್ಟೆ.”
“ಜೋರಾಗಿ ಊದಿದೆಯೇನೋ?”
“ನಾನು ಊದುವಷ್ಟರಲ್ಲಿ ಅದೇ ಊದಿಬಿಟ್ಟಿತು!” ತಿಂಮನ ಗಾಬರಿಯ ಕಾರಣ ಅದು.
ವ್ಯವಸ್ಥೆಯನ್ನು ಬದಲಿಸುತ್ತೇನೆಂದು ಹೋದವರನ್ನು ವ್ಯವಸ್ಥೆಯೇ ಬದಲಿಸುವ ಕತೆ ಈ ತಿಂಮನಲ್ಲಿ.
ಈ ಪುಸ್ತಕದ ಪ್ರತಿ ಈಗ ನನ್ನಲ್ಲಿಲ್ಲ. ಆದರೆ ಸಂದರ್ಭಾನುಸಾರವಾಗಿ ಬೇಕಾದ ಪುಟಗಳು ನನ್ನೊಳಗೆ ತೆರೆದುಕೊಂಡಿರುತ್ತವೆ.
“ತಿಂಮ, ಚೌಡಯ್ಯನವರ ಪಿಟೀಲು ಕೇಳಿದ್ಯೇನೋ?”
“ಕೇಳಿದೆ. ಕೊಡಲಿಲ್ಲಪ್ಪಾ.”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...