Homeಸಾಹಿತ್ಯ-ಸಂಸ್ಕೃತಿಕಥೆಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ - ಯೋಗೇಶ್ ಮಾಸ್ಟರ್

ಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ – ಯೋಗೇಶ್ ಮಾಸ್ಟರ್

- Advertisement -
- Advertisement -

“ತಿಂಮ, ನಾಟಕ ನೋಡಿದೆಯೇನೋ?” ಬುದ್ಧನ ನಾಟಕ ನೋಡಲು ರಾತ್ರಿ ಮಗನ ಕಳುಹಿಸಿದ್ದ ತಂದೆ ಬೆಳಗ್ಗೆ ಕೇಳಿದ.
“ನೋಡಿದೆ ಅಪ್ಪಾ.”
“ಎಲ್ಲಾ ಅರ್ಥ ಆಯ್ತೇನೋ?”
“ಆಯ್ತಪ್ಪಾ” ಎನ್ನುವ ತಿಂಮ ಮತ್ತೆ ನೆನಪಿಸಿಕೊಂಡು ಹೇಳುತ್ತಾನೆ, “ಆದರೆ, ಒಂದರ್ಥ ಆಗಲಿಲ್ಲ. ಬುದ್ಧ ರಾಜ್ಯ, ಹೆಂಡತಿ, ಮಗ; ಎಲ್ಲವನ್ನೂ ಬಿಟ್ಟು ಹೋದವನು, ತಗಡಿನ ಬಿಲ್ಲೆ ಕೊಡ್ತೀವಿ ಅಂದ ತಕ್ಷಣ ಓಡಿ ಬಂದುಬಿಟ್ಟನಲ್ಲಪ್ಪಾ?”ಬೀಚಿಯ ಬೆಳ್ಳಿ ತಿಂಮ ಒಬ್ಬ ಬಾಲಕ. ಅವನು ತಾನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನೋಡುವುದನ್ನೆಲ್ಲಾ ಪ್ರಶ್ನಿಸುತ್ತಾನೆ. ಅವನ ಪ್ರಶ್ನೆಗಳು ಸಮಾಜವು ಯಾವುದನ್ನು ಗಂಭೀರ ಅಂತ ಪರಿಗಣಿಸುತ್ತದೋ ಅದನ್ನು ಲೇವಡಿ ಮಾಡುತ್ತದೆ. ಹೀಗೆ ವ್ಯಂಗ್ಯವಾಡುವುದು ವ್ಯವಸ್ಥೆಯನ್ನು ಪ್ರತಿಭಟಿಸುವ, ಚಿಂತನೆಗೆ ಹಚ್ಚುವ ಬೀಚಿಯವರ ರೀತಿ.

ಬುದ್ಧ ತಗಡಿನ ಬಿಲ್ಲೆಗೆ ಓಡಿ ಬರುವುದು, ತಿಂಮನಿಗೆ ನಾಟಕ ಮತ್ತು ವಾಸ್ತವದ ಅರಿವಿಲ್ಲ ಅಂತಲ್ಲ. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅದಕ್ಕೆ ಪ್ರಶಸ್ತಿ ಬರಲೆಂದು ಅರ್ಜಿ ಹಾಕುವುದನ್ನು, ಲಾಬಿ ಮಾಡುವ ವಾಸ್ತವವನ್ನು ಅದು ಅಣಕಿಸುತ್ತದೆ.

ರಸ್ತೆಯಲ್ಲಿ ಯಾರಿಗೋ ಕೈಕೋಳ, ಕಾಲ್ಗಳಿಗೆ ಸರಪಳಿ ಹಾಕಿ ಎಳೆದೊಯ್ಯುತ್ತಿದ್ದ ಗಲಾಟೆ. ತಿಂಮ ಕೇಳಿದ ಅದೇನೆಂದು. ಜೈಲಿಗೆಂದರು ಯಾರೋ. ‘ಜೈಲಿಗೋ ಇಷ್ಟು ರಂಪು! ನಾನೆಲ್ಲೋ ಸ್ಕೂಲಿಗೆ ಎಂದುಕೊಂಡೆ’ ಎನ್ನುತ್ತಾ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾನೆ ತಿಂಮ.

“ಇವತ್ತು ಬರುವ ಅತಿಥಿಯ ಮೂಗಿನ ಬಗ್ಗೆ ಏನೂ ಮಾತಾಡಬೇಡ” ಎಂದು ತಂದೆ ಎಚ್ಚರಿಸಿರುತ್ತಾನೆ. ಅತಿಥಿ ಬಂದಾಗ ಅವರನ್ನೇ ನೋಡಿಕೊಂಡು ತಿಂಮ ಕುಳಿತಿರುತ್ತಾನೆ. ಅತಿಥಿಗೂ ಅದು ಗಮನಕ್ಕೆ ಬಂದು, ಯಾಕಪ್ಪಾ ಎಂದು ಕೇಳುತ್ತಾರೆ. ಅವನು ಏನಿಲ್ಲ ಎಂದು ತಂದೆಗೆ ಕೇಳುತ್ತಾನೆ. “ಅಪ್ಪಾ, ಇವರ ಮೂಗಿನ ಬಗ್ಗೆ ಏನೂ ಮಾತಾಡಬೇಡಾಂದೆ. ಆದರೆ, ಇವರಿಗೆ ಮೂಗೇ ಇಲ್ಲ!” ಎಂದು ಮಕ್ಕಳ ಮುಖವಾಡವಿಲ್ಲದ ಮನಸ್ಸನ್ನು ತೋರಿಸುವ ಮಗುವಿನ ಮನೋವಿಜ್ಞಾನ ಬೀಚಿಯದು.

“ಹಸುವಿಗೆ ನಾಲ್ಕಿರುತ್ತವೆ. ನನಗೆ ಎರಡಿವೆ. ಏನದು ಹೇಳು?” ಶಾಲೆಗೆ ಸೇರಿಸಿಕೊಳ್ಳುವ ಉಪಾಧ್ಯಾಯಿನಿ ತಿಂಮನ ಪರೀಕ್ಷಿಸಿದಳು. ಅವನಿಗೆ ಕಂಡದ್ದು ಹೇಳಿದ. ಶಿಕ್ಷಕಿ ಮುಜುಗರಗೊಂಡು ಇವನು ದೊಡ್ಡ ತರಗತಿಗೆ ಹೋಗಬೇಕೆನ್ನುವಳು. ಪಾಪ, ಕಾಲುಗಳೆಂಬ ಉತ್ತರ ಅವಳು ಬಯಸಿದ್ದಳು. ಕಿರಿಯ ಪೀಳಿಗೆ ದಡ್ಡರಿರುತ್ತಾರೆಂದು ಕಡೆಗಣಿಸದಿರಲು ಬೀಚಿ ಹಿರಿಯರಿಗೆ ಎಚ್ಚರಿಸುತ್ತಾರೆ.

ಪಶುವೈದ್ಯರು ಹಸುವಿಗೆ ಹೇಗೆ ಗುಳಿಗೆ ನುಂಗಿಸಬೇಕೆಂದು ಹೇಳಿ ತಿಂಮನ ಕಳುಹಿಸಿದ್ದರು. ಸ್ವಲ್ಪ ಹೊತ್ತಿಗೆ ತಿಂಮ ಗಾಬರಿಯಿಂದ ಮರಳಿ ಹಸುವಿಗೆ ಗುಳಿಗೆ ನುಂಗಿಸಲಾಗಲಿಲ್ಲವೆಂದು ಹೇಳಿದ.
“ಯಾಕೋ, ಗೊಟ್ಟದಲ್ಲಿ (ಬಿದಿರಿನ ಕೊಳವೆ) ಗುಳಿಗೆ ಇಟ್ಟೆಯೇನೋ?”
“ಇಟ್ಟೆ.”
“ಗೊಟ್ಟವನ್ನು ಹಸುವಿನ ಗಂಟಲಿಗಿಟ್ಟೆಯೇನೋ?”
“ಇಟ್ಟೆ.”
“ಜೋರಾಗಿ ಊದಿದೆಯೇನೋ?”
“ನಾನು ಊದುವಷ್ಟರಲ್ಲಿ ಅದೇ ಊದಿಬಿಟ್ಟಿತು!” ತಿಂಮನ ಗಾಬರಿಯ ಕಾರಣ ಅದು.
ವ್ಯವಸ್ಥೆಯನ್ನು ಬದಲಿಸುತ್ತೇನೆಂದು ಹೋದವರನ್ನು ವ್ಯವಸ್ಥೆಯೇ ಬದಲಿಸುವ ಕತೆ ಈ ತಿಂಮನಲ್ಲಿ.
ಈ ಪುಸ್ತಕದ ಪ್ರತಿ ಈಗ ನನ್ನಲ್ಲಿಲ್ಲ. ಆದರೆ ಸಂದರ್ಭಾನುಸಾರವಾಗಿ ಬೇಕಾದ ಪುಟಗಳು ನನ್ನೊಳಗೆ ತೆರೆದುಕೊಂಡಿರುತ್ತವೆ.
“ತಿಂಮ, ಚೌಡಯ್ಯನವರ ಪಿಟೀಲು ಕೇಳಿದ್ಯೇನೋ?”
“ಕೇಳಿದೆ. ಕೊಡಲಿಲ್ಲಪ್ಪಾ.”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...