ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ರಾಜ್ಯದ ಬುರ್ದ್ವಾನ್ ಮೂಲದ ದಂಪತಿಗಳನ್ನು ಅಕ್ರಮ ಬಾಂಗ್ಲಾ ವಲಸಿಗರು ಎಂದು ಶಂಕಿಸಿ ಸುಮಾರು 301 ದಿನಗಳ ಕಾಲ ಜೈಲಿಗೆ ತಳ್ಳಿರುವ ಘಟನೆ ಬೆಂಗಳೂರಿಗೆ ನಡೆದಿದೆ. ದಂಪತಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು ಸ್ವಗ್ರಾಮಕ್ಕೆ ತೆರಳಲು ಗುರುವಾರ ರೈಲು ಹತ್ತಿದ್ದಾರೆ.
ಪಲಾಶ್ ಮತ್ತು ಶುಕ್ಲಾ ಅಧಿಕಾರಿ ದಂಪತಿಯ ಹೋರಾಟವು ಜುಲೈ 2022ರಲ್ಲಿ ಪ್ರಾರಂಭವಾಯಿತು. ತಮ್ಮ ಎರಡು ವರ್ಷದ ಮಗುವಿನೊಂದಿಗೆ ಬೆಂಗಳೂರಿನಲ್ಲಿ ದಂಪತಿ ಇದ್ದರು. ಬಾಂಗ್ಲಾದೇಶದಿಂದ ಬಂದವರು ಎಂದು ಶಂಕಿಸಿದ ಪೊಲೀಸರು, ನಂತರ ಅವರನ್ನು ಬಂಧಿಸಿದ್ದರು.
ವಿದೇಶಿಯರ ಕಾಯಿದೆಯಡಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. “ನಾವು ಪೂರ್ವ ಬುರ್ದ್ವಾನ್ನ ಜಮಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಝೌಗ್ರಾಮ್ನ ಟೆಲಿಪುಕೂರ್ನಿಂದ ಬಂದವರು” ಎಂದು ಪೊಲೀಸರಿಗೆ ವಿವರಿಸಲು ದಂಪತಿ ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ನಂತರ ಬೆಂಗಳೂರು ಪೊಲೀಸರ ತಂಡವು ಪೂರ್ವ ಬುರ್ದ್ವಾನ್ನಲ್ಲಿರುವ ಪಲಾಶ್ ಅವರ ಮನೆಯ ಕುರಿತು ತಪಾಸಣೆ ನಡೆಸಿತು. ತಂಡವು ಸ್ಥಳೀಯ ಜಮಾಲಪುರ ಬಿಡಿಒ ಅವರನ್ನು ಭೇಟಿಯಾಗಿ ದಾಖಲೆಗಳನ್ನು ಪರಿಶೀಲಿಸಿತು. ಪಾಲಾಶ್ ಅವರ ಸಂಬಂಧಿಕರು ಬೆಂಗಳೂರಿಗೆ ಆಗಮಿಸಿ ಜಾಮೀನು ಅರ್ಜಿ ಸಲ್ಲಿಸಲು ವಕೀಲರನ್ನು ನೇಮಿಸಿಕೊಂಡರು. ಪೊಲೀಸರು ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿರಿ: ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್ಗೆ ‘ಮಹಾ ರ್ಯಾಲಿ’ಯ ಅನುಮತಿ ನಿರಾಕರಿಸಿದ ಅಯೋಧ್ಯೆ ಜಿಲ್ಲಾಡಳಿತ
ದಂಪತಿಗೆ ಏಪ್ರಿಲ್ 28 ರಂದು ಜಾಮೀನು ನೀಡಲಾಯಿತು, ಆದರೆ ಜಾಮೀನುದಾರರು ತಮ್ಮ ಜಮೀನು ದಾಖಲೆಗಳನ್ನು ಸಲ್ಲಿಸಲು ಅಗತ್ಯವಿರುವ ಜಾಮೀನು ಬಾಂಡ್ಗಳನ್ನು ತಕ್ಷಣವೇ ಸಲ್ಲಿಸಲು ಸಾಧ್ಯವಾಗದ ಕಾರಣ ಅವರನ್ನು ಮೇ 24 ರಂದು ಜೈಲಿನಿಂದ ಬಿಡುಗಡೆ ಮಾಡಲಾಯಿತು ಎಂದು ಪಲಾಶ್ ಅವರ ಸಂಬಂಧಿ ಸುಜೋಯ್ ಹಲ್ದಾರ್ ಹೇಳಿದ್ದಾರೆ. ಹಲ್ದಾರ್ ಅವರು ತಮ್ಮ ಹೆಂಡತಿಯೊಂದಿಗೆ ಗುರುವಾರ ಬೆಳಿಗ್ಗೆ ಹೌರಾಕ್ಕೆ ಹೋಗುವ ಡುರೊಂಟೊ ಎಕ್ಸ್ಪ್ರೆಸ್ ಹತ್ತಿದರು. ಶುಕ್ರವಾರ ಮನೆಗೆ ತಲುಪಲಿದ್ದಾರೆ.
ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿರುವ ಪಲಾಶ್ನ ಸಹೋದರಿ ಸತಿ ಅಧಿಕಾರಿ ತನ್ನ ಸಂಪಾದನೆಯ ಬಹುತೇಕ ಹಣವನ್ನು ಈ ಪ್ರಕರಣಕ್ಕಾಗಿ ಖರ್ಚು ಮಾಡಿದ್ದಾರೆ.
“ಮೇ 24 ರಂದು ರಾತ್ರಿ 9.30 ರ ಸುಮಾರಿಗೆ ನನಗೆ ಕರೆ ಬಂದಿತು, ದಾದಾ (ಹಿರಿಯ ಸಹೋದರ) ಮತ್ತು ಬೌಡಿ (ಅತ್ತಿಗೆ) ಜೈಲಿನಿಂದ ಬಿಡುಗಡೆಯಾಗಿದ್ದರು. ನಾನು ಅವರೊಂದಿಗೆ ವೀಡಿಯೊ ಕರೆ ಮೂಲಕ ಮಾತನಾಡಿದೆ. ವೀಡಿಯೊ ಕರೆ ಸಮಯದಲ್ಲಿ, ನನ್ನ ತಾಯಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವಳ ಕಣ್ಣೀರು ಸುರಿಸಿದರು. ಇಬ್ಬರೂ ದುರ್ಬಲವಾಗಿ ಕಾಣುತ್ತಿದ್ದರು” ಎಂದಿದ್ದಾರೆ ಸತಿ ಅಧಿಕಾರಿ.