Homeಮುಖಪುಟಬಹುಸಂಖ್ಯಾತ ಭಾರತೀಯರಿಗೆ ಬಗೆದ ದ್ರೋಹ: ಬಜೆಟ್ ಕುರಿತು ಪಿ. ಚಿದಂಬರಂ ಪ್ರತಿಕ್ರಿಯೆ

ಬಹುಸಂಖ್ಯಾತ ಭಾರತೀಯರಿಗೆ ಬಗೆದ ದ್ರೋಹ: ಬಜೆಟ್ ಕುರಿತು ಪಿ. ಚಿದಂಬರಂ ಪ್ರತಿಕ್ರಿಯೆ

- Advertisement -
- Advertisement -

ವಿತ್ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ 2023-24ರ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಇದು “ಜಡ್ಡುಗಟ್ಟಿದ” ಮತ್ತು ಬಹುಸಂಖ್ಯಾತ ಭಾರತೀಯರ ಆಶಯಗಳಿಗೆ ದ್ರೋಹ ಬಗೆಯುವ ಬಜೆಟ್ ಆಗಿದೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

”ಬಜೆಟ್ ಬಗ್ಗೆ ನಮ್ಮ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವಿಟ್ ಮಾಡಿದ್ದಾರೆ ನೋಡಿ, ”ಬಜೆಟ್ ಘೋಷಣೆಗಳಲ್ಲಿ ದೊಡ್ಡದಾಗಿದೆ ಮತ್ತು ವಿತರಣೆಯಲ್ಲಿ ಚಿಕ್ಕದಾಗಿದೆ” ಎಂದು ಹೇಳಿದ್ದಾರೆ ಮತ್ತು ಬಿಜೆಪಿ ಸರ್ಕಾರವು ಸಾಮಾನ್ಯ ಜನರ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಅಮೃತ್ ಕಾಲದ ಥೀಮ್‌ನ್ನು ಮಿತ್ರ ಕಾಲ [ಸ್ನೇಹಿತರ ಯುಗ] ಬಜೆಟ್ ಎಂದು ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಕರೆದರು, ಅದು ಭಾರತದ ಭವಿಷ್ಯವನ್ನು ನಿರ್ಮಿಸುವ ಮಾರ್ಗಸೂಚಿಯನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ, ”ಸರ್ಕಾರವು ಜನರಿಂದ ಎಷ್ಟು ದೂರದಲ್ಲಿದೆ ಮತ್ತು ಜೀವನ, ಜೀವನೋಪಾಯ ಮತ್ತು ಶ್ರೀಮಂತ-ಬಡವರ ನಡುವಿನ ಅಸಮಾನತೆಯ ಬಗ್ಗೆ ಅವರ ಕಾಳಜಿಯನ್ನು ಈ ಬಜೆಟ್ ತೋರಿಸುತ್ತದೆ” ಎಂದು ಹೇಳಿದರು.

ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ಕಡಿಮೆ ಸಂಖ್ಯೆಯ ಜನರನ್ನು ಹೊರತುಪಡಿಸಿ ಯಾವುದೇ ತೆರಿಗೆಯನ್ನು ಬಜೆಟ್‌ನಲ್ಲಿ ಕಡಿಮೆ ಮಾಡಲಾಗಿಲ್ಲ ಎಂದು ಅವರು ಪ್ರತಿಪಾದಿಸಿದರು. ಹೊಸ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ ಆಯ್ಕೆಯನ್ನಾಗಿ ಮಾಡುವ ಮೂಲಕ, ಸರ್ಕಾರವು ”ಸಾಮಾನ್ಯ ತೆರಿಗೆ ಪಾವತಿದಾರನಿಗೆ ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಸಿಗಬಹುದಾದ ಅತ್ಯಲ್ಪ ಸಾಮಾಜಿಕ ಭದ್ರತೆಯನ್ನು ದೋಚಲು ಬಯಸುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: ಇದೊಂದು ಕಾರ್ಪೊರೇಟ್‌ ಪರ ಬಜೆಟ್‌: ಆರ್ಥಿಕ ವಿಶ್ಲೇಷಕರು ಹೇಳುವುದೇನು?

ತೆರಿಗೆ ವಿನಾಯಿತಿಗಳನ್ನು ರದ್ದುಗೊಳಿಸಬೇಕು ಎಂಬುದು ಸರ್ಕಾರದ ಅಂತಿಮ ಗುರಿಯಾಗಿದೆ. ತೆರಿಗೆ ವಿನಾಯಿತಿಗಳು ಇಂದು ಮಧ್ಯಮ ವರ್ಗದವರಿಗೆ ಸ್ವಲ್ಪ ಸಾಮಾಜಿಕ ಭದ್ರತೆಯನ್ನು ನೀಡುತ್ತವೆ. ತೆರಿಗೆ ವಿನಾಯಿತಿಗಳನ್ನು ರದ್ದುಗೊಳಿಸಿದರೆ, ತೆರಿಗೆ ಪಾವತಿದಾರರು ಕೆಲವು ಸಾಮಾಜಿಕ ಭದ್ರತೆಯನ್ನು ಪಡೆಯುವ ಮತ್ತೊಂದು ಕಾರ್ಯವಿಧಾನ ಇರಬೇಕು” ಎಂದು ಶ್ರೀ ಚಿದಂಬರಂ ಹೇಳಿದರು.

”ಈ ಬಜೆಟ್‌ನಿಂದ ಯಾರಿಗೆ ಲಾಭ? ಖಂಡಿತವಾಗಿಯೂ ಬಡವರಿಗಲ್ಲ. ಯುವಕರು ಉದ್ಯೋಗಕ್ಕಾಗಿ ಹತಾಶರಾಗಿದ್ದಾರೆ ಅವರನ್ನೂ ನೋಡುತ್ತಿಲ್ಲ. ಉದ್ಯೋಗ ಕಳೆದುಕೊಂಡವರನ್ನೂ ನೋಡುತ್ತಿಲ್ಲ. ಬಹುಪಾಲು ತೆರಿಗೆದಾರರನ್ನಲ್ಲ, ಗೃಹಿಣಿಯರನ್ನೂ ನೋಡುತ್ತಿಲ್ಲ. ಹೆಚ್ಚುತ್ತಿರುವ ಅಸಮಾನತೆ, ಶತಕೋಟ್ಯಾಧಿಪತಿಗಳ ಆಸ್ತಿಯ ಹೆಚ್ಚಳ ಮತ್ತು ಜನಸಂಖ್ಯೆಯ 1% ಜನರ ಕೈಯಲ್ಲಿ ಸಂಗ್ರಹವಾಗುತ್ತಿರುವ ಸಂಪತ್ತಿನಿಂದ ಆಘಾತಕ್ಕೊಳಗಾಗಿರುವ ಭಾರತೀಯರ ಬಗ್ಗೆ ಇವರಿಗೆ ಚಿಂತೆ ಇಲ್ಲ” ಎಂದು ಮಾಜಿ ಹಣಕಾಸು ಸಚಿವ ಹೇಳಿದರು.

ಪರೋಕ್ಷ ತೆರಿಗೆಗಳನ್ನು ಕಡಿಮೆ ಮಾಡಿಲ್ಲ ಅಥವಾ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಯಾವುದೇ ಕಡಿತ ಮಾಡಿಲ್ಲ. ಪೆಟ್ರೋಲ್, ಡೀಸೆಲ್, ಸಿಮೆಂಟ್, ರಸಗೊಬ್ಬರಗಳ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳದ ಹಲವಾರು ಹೆಚ್ಚುವರಿ ಶುಲ್ಕಗಳು ಮತ್ತು ಸೆಸ್‌ಗಳು ಸಹ ಅಸ್ತಿತ್ವದಲ್ಲಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ತಿಳಿಸಿದರು.

ಆರ್ಥಿಕ ಸಮೀಕ್ಷೆಯು, ಜಗತ್ತು ಎದುರಿಸಲಿರುವ ಎಲ್ಲಾ ಸಮಸ್ಯೆಗಳ ಪಟ್ಟಿ ಮಾಡಿದ್ದರೂ, ಬಜೆಟ್‌ ಮೂಲಕ ಯಾವುದೇ ಪರಿಹಾರವನ್ನು ನೀಡಲಿಲ್ಲ. “ಬಜೆಟ್ ಭಾಷಣವು ಆರ್ಥಿಕ ಸಮಸ್ಯೆಗಳನ್ನು ಸಹ ಗುರುತಿಸಲಿಲ್ಲ, ಈ ಸರ್ಕಾರವು ತನ್ನದೇಯಾದ ಕಾಲ್ಪನಿಕ ಜಗತ್ತಿನಲ್ಲಿ ವಾಸಿಸುತ್ತಿದೆ” ಎಂದು ಅವರು ಹೇಳಿದರು.

ವಿಶ್ವಾದ್ಯಂತ ಅಂಗಿಕರಿಸಲಾದ ಮೂರು ಕಟುವಾದ ಸಂಗತಿಗಳನ್ನು ಗಮನಿಸಬೇಕು, 1) ಜಾಗತಿಕ ವ್ಯಾಪಾರ ಮತ್ತು ಬೆಳವಣಿಗೆಯು 2023 ರಲ್ಲಿ ಗಮನಾರ್ಹವಾಗಿ ನಿಧಾನಗೊಳ್ಳುತ್ತದೆ. 2) ಅನೇಕ ಮುಂದುವರಿದ ರಾಷ್ಟ್ರಗಳು ಆರ್ಥಿಕ ಹಿಂಜರಿತಕ್ಕೆ ಹೋಗುತ್ತವೆ. 3) ಉಕ್ರೇನ್ ಯುದ್ಧ ಮತ್ತು ಇತರ ಬ್ರೂಯಿಂಗ್ ಘರ್ಷಣೆಗಳೊಂದಿಗೆ, ಜಾಗತಿಕ ಭದ್ರತಾ ಪರಿಸ್ಥಿತಿಯು ಹದಗೆಡುತ್ತದೆ ಎಂದು ಮಾಜಿ ಹಣಕಾಸು ಸಚಿವರು ನೆನಪಿಸಿದರು.

”ಈ ಮೂರೂ ಸಂಗತಿಗಳು ಕಾರ್ಯರೂಪಕ್ಕೆ ಬಂದರೆ, ಸರ್ಕಾರ ಏನು ಮಾಡುತ್ತದೆ? ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಜನರ ಮೇಲೆ ಅದು ಯಾವ ರೀತಿಯ ಹೊರೆಗಳನ್ನು ಹಾಕುತ್ತದೆ? ಆರ್ಥಿಕ ಸಮೀಕ್ಷೆಯಲ್ಲಿ ಅಥವಾ ಬಜೆಟ್ ಭಾಷಣದಲ್ಲಿ ಯಾವುದೇ ಉತ್ತರಗಳನ್ನು ನೀಡಲಾಗಿಲ್ಲ” ಎಂದು ಚಿದಂಬರಂ ಹೇಳಿದರು.

ಬಜೆಟ್ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ”ಕಳೆದ ವರ್ಷದ ಬಜೆಟ್ ಕೃಷಿ, ಆರೋಗ್ಯ, ಶಿಕ್ಷಣ, ಎಂಜಿಎನ್‌ಆರ್‌ಇಜಿಎ ಮತ್ತು ಎಸ್‌ಸಿಗಳ ಕಲ್ಯಾಣಕ್ಕೆ ಮೀಸಲಿಡಲು ಮೆಚ್ಚುಗೆಯನ್ನು ಗಳಿಸಿತು. ಆದರೆ ಇಂದು ವಾಸ್ತವ ಸ್ಪಷ್ಟವಾಗಿದೆ. ವಾಸ್ತವಿಕ ವೆಚ್ಚವು ಬಜೆಟ್‌ಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಓವರ್ ಪ್ರಾಮಿಸ್, ಅಂಡರ್ ಡೆಲಿವರ್- ಇದು ಮೋದಿಯವರ ಒಪಿಯುಡಿ ಕಾರ್ಯತಂತ್ರದ ಮುಖ್ಯಾಂಶವಾಗಿದೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...