ಒಕ್ಕೂಟ ಸರ್ಕಾರದ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ ರಾಜ್ಯದ ಸಚಿವರನ್ನು ಜನತೆಗೆ ಪರಿಚಯಿಸಲು ಬಿಜೆಪಿ ಜನಾಶೀರ್ವಾದ ಯಾತ್ರೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯಾತ್ರೆಗಾಗಿ ಯಾದಗಿರಿಗೆ ಆಗಮಿಸಿದ್ದ ಸಚಿವ ಖೂಬಾ ಅವರ ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಬುಧವಾರ ವರದಿಯಾಗಿದೆ.
ಖೂಬಾ ಅವರ ಸ್ವಾಗತಕ್ಕೆ ಯರಗೋಳ ಗ್ರಾಮದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ನಾಡ ಬಂದೂಕು ಸಿಡಿಸಿ ಸ್ವಾಗತ ಮಾಡಿದ್ದಾರೆ. ವಿಡಿಯೊ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕನಿಷ್ಠ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬೇಗೂರು ಕೆರೆ ವಿವಾದ ಕೋಮುವಾದಿಕರಣ: ಬಿಜೆಪಿ ಬೆಂಬಲಿಗ ಪುನಿತ್ ಕೆರೆಹಳ್ಳಿ ಸಹಿತ ಹಲವರ ಮೇಲೆ FIR
Workers of @BJP4Karnataka fire shots in the air to welcome Union Minister of State @bhagwantkhuba in Yadgir. Party flag tied to Country-made rifles used to fire shots. At least 4 persons arrested so far & license of rifles being verified. Khuba was in Yadgir for #JanAshirwadYatra pic.twitter.com/8bjQgU83Wu
— Anusha Ravi Sood (@anusharavi10) August 18, 2021
ಈ ಮಧ್ಯೆ ಕೊರೊನಾ ನಿಯಮಗಳನ್ನು ಮೀರಿ ನೂರಾರು ಜನ ಸಚಿವರ ಸ್ವಾಗತಕ್ಕೆ ಸೇರಿದ್ದು ಕೂಡಾ ಜನಾಕ್ರೋಶಕ್ಕೆ ಗುರಿಯಾಗಿದೆ. ಕಲಬುರ್ಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಖೂಬಾ ಅವರ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ನಗರದ ಬ್ರಹ್ಮಪುರ ಠಾಣೆ ಪೊಲೀಸರು ಬಿಜೆಪಿ ಜಿಲ್ಲಾ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಯಾದಗಿರಿಯ ಜನಾಶೀರ್ವಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಸಚಿವ ಖೂಬಾ ಅವರನ್ನು ಸ್ವಾಗತಿಸಲು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಭಾಗವಹಿಸಿದ್ದರು.
ಬಂದೂಕಿನ ಬಗ್ಗೆ ಪ್ರಶ್ನೆಗೆ ಉತ್ತರಿಸಿದ್ದ ಚಿಂಚನಸೂರು, “ಅದು ಕಾಡು ಪ್ರಾಣಿ ಓಡಿಸಲು ಇಟ್ಟಿದ್ದ ಬಂದೂಕು” ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್ರನ್ನು ಬಿಜೆಪಿ ನಾಯಕರು ಅತಿಯಾಗಿ ಪ್ರಶಂಸಿಸುತ್ತಿರುವುದಕ್ಕೆ ಕಾರಣ ಇದು