Homeಮುಖಪುಟಮಂಗಳಸೂತ್ರ ಜಾಹಿರಾತು ವಾಪಾಸು ಪಡೆಯುವಂತೆ BJPಯಿಂದ ಬೆದರಿಕೆ

ಮಂಗಳಸೂತ್ರ ಜಾಹಿರಾತು ವಾಪಾಸು ಪಡೆಯುವಂತೆ BJPಯಿಂದ ಬೆದರಿಕೆ

- Advertisement -
- Advertisement -

ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರು ತಯಾರಿಸಿರುವ ಮಂಗಳಸೂತ್ರದ ಜಾಹೀರಾತು ವಿವಾದಕ್ಕೆ ಸಿಲುಕಿದ್ದು, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, 24 ಗಂಟೆಗಳ ಒಳಗೆ ಜಾಹೀರಾತನ್ನು ತೆಗೆದು ಹಾಕದಿದ್ದರೆ ಸಬ್ಯಸಾಚಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

“ಫ್ಯಾಶನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರ ಮಂಗಳಸೂತ್ರ ಜಾಹೀರಾತು ಅತ್ಯಂತ ಆಕ್ಷೇಪಾರ್ಹವಾಗಿದ್ದು, ಅದು ನೋವುಂಟುಮಾಡುತ್ತದೆ” ನರೋತ್ತಮ್‌ ಮಿಶ್ರಾ ಭಾನುವಾರ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

“ಮುಂದಿನ 24 ಗಂಟೆಗಳ ಒಳಗೆ ಆಕ್ಷೇಪಾರ್ಹ ಜಾಹೀರಾತನ್ನು ತೆಗೆದುಹಾಕದಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ.

ಹೊಸ ಮಾದರಿಯ ಮಂಗಳಸೂತ್ರ ಡಿಸೈನ್‌‌ನ ಫೋಟೋಶೂಟ್‌ನಲ್ಲಿ ರೂಪದರ್ಶಿಗಳ ಭಂಗಿಗಳ ವಿರುದ್ದ ಟೀಕೆ ವ್ಯಕ್ತವಾಗಿದೆ.

ಜಾಹೀರಾತಿನಲ್ಲಿ ಮಂಗಳಸೂತ್ರವನ್ನು ಬಳಸಿಕೊಂಡಿದ್ದಕ್ಕಾಗಿ ಬಿಜೆಪಿಯ ಕಾನೂನು ಸಲಹೆಗಾರರು ಶನಿವಾರ ಫ್ಯಾಷನ್ ಡಿಸೈನರ್‌ಗೆ ನೋಟಿಸ್ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: ‘ಸುಪ್ರೀಂಕೋರ್ಟ್‌ ಇ-ಮೇಲ್‌‌ನಲ್ಲೂ ಮೋದಿ ಜಾಹಿರಾತು!’ – ತೆಗೆದುಹಾಕಿ ಎಂದ ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಿಜೆಪಿ ಯಿಂದ ಬೆದರಿಕೆ ಅಲ್ಲಾ ಆಯೋಗ್ಯರ,ಬಹುಜನರ ಸಂಪ್ರದಾಯದ ಮೇಲೆ ಪರಿಣಾಮ ವಾಗುತ್ತೇ ,ಬಹುಜನ ರಿಗೆ ಈ ಜಾಹಿರಾತು ನೋವನ್ನು ಉಂಟುಮಾಡುತ್ತದೆ ಅಂತ ಬಿಜೆಪಿಯು ಹೇಳಿರೋದು ,ನಿಮ್ಮ ಅಯೋಗ್ಯ ಮನಸ್ಥಿತಿ ಯಾವಾಗ ಹೋಗುತ್ತೇ ,ನಿಮ್ಮ ಕಮ್ಯುನಿಸ್ಟ್ ದು ,ಯಾವಾಗಲು ಹಿಂದೂ ಭಾವನೆಗಳ ಮೇಲೆ ಸವಾರಿ ಮಾಡೋದು ಹಾಗೋಗಿದೆ ತೂ ನಾಚಿಕೆ ಆಗಬೇಕು ನಿಮ್ಮಗಳ ಮನಸ್ಥಿತಿಗೆ ……

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...