Homeಚಳವಳಿವರವರ ರಾವ್ ಮುಂಬೈ ಬಿಟ್ಟು ಹೋಗದಂತೆ ಹೈಕೋರ್ಟ್ ಷರತ್ತು: ವಿಚಾರಣೆಗೆ ಹಾಜರಾಗದ್ದಕ್ಕೆ ಮಧುಗಿರಿ ಕೋರ್ಟ್ ವಾರೆಂಟ್!

ವರವರ ರಾವ್ ಮುಂಬೈ ಬಿಟ್ಟು ಹೋಗದಂತೆ ಹೈಕೋರ್ಟ್ ಷರತ್ತು: ವಿಚಾರಣೆಗೆ ಹಾಜರಾಗದ್ದಕ್ಕೆ ಮಧುಗಿರಿ ಕೋರ್ಟ್ ವಾರೆಂಟ್!

ಮಧುಗಿರಿ ಕೋರ್ಟ್ ವರವರರಾವ್‌ರವರು ಗೈರು ಹಾಜರಾಗಿರುವ ಕಾರಣ ನೀಡಿ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ, ಅವರ ಶ್ಯೂರಿಟಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ!

- Advertisement -
- Advertisement -

ಎಲ್ಗರ್‌ ಪರಿಷದ್‌ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ 82 ವರ್ಷದ ಖ್ಯಾತ ಕವಿ, ಹೋರಾಟಗಾರ ವರವರ ರಾವ್‌ ಅವರು ಸದ್ಯ ಷರತ್ತುಬದ್ಧ ವೈದ್ಯಕೀಯ ಜಾಮೀನಿನ ಮೇಲೆ ಮುಂಬೈನಲ್ಲಿದ್ದಾರೆ. ಅವರು ಮುಂಬೈ ಬಿಟ್ಟು ಹೊರಹೋಗಬಾರದು ಎಂಬುದು ಜಾಮೀನಿನ ಪ್ರಮುಖ ಷರತ್ತುಗಳಲ್ಲೊಂದಾಗಿದೆ. ವರವರ ರಾವ್ ಕುಟುಂಬ ಹಣಕಾಸಿನ ಸಮಸ್ಯೆ ಸೇರಿ ಹಲವು ಕಾರಣಗಳನ್ನು ಮುಂದಿಟ್ಟು ಹೈದರಾಬಾದ್‌ಗೆ ಅವರನ್ನು ಕರೆತರಲು ಮನವಿ ಮಾಡಿದರೂ ಬಾಂಬೆ ಹೈಕೋರ್ಟ್ ಅದಕ್ಕೆ ಅವಕಾಶ ನೀಡಿಲ್ಲ. ಇದೇ ಅಕ್ಟೋಬರ್ 28 ರಂದು ಅವರ ಜಾಮೀನು ಮುಂದುವರಿಕೆಯ ಅರ್ಜಿ ವಿಚಾರಣೆಗೆ ಬರಲಿದೆ.

ಇಂತಹ ಸಂದರ್ಭದಲ್ಲಿ ಅವರ ಮೇಲಿರುವ 2005ರ ಮತ್ತೊಂದು ಪ್ರಕರಣದಲ್ಲಿ ಕರ್ನಾಟಕದ ಮಧುಗಿರಿ ಕೋರ್ಟ್ ಅವರಿಗೆ ಸಮನ್ಸ್ ಕಳುಹಿಸಿದೆ. ವರವರರಾವ್‌ರವರು ವಿಚಾರಣೆಗೆ ಪದೇ ಪದೇ ಗೈರು ಹಾಜರಾಗಿರುವ ಕಾರಣ ನೀಡಿ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ, ಅವರ ಶ್ಯೂರಿಟಿಯನ್ನು ಮುಟ್ಟುಗೋಲು ಹಾಕಿಕೊಂಡು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ!

ಬಾಂಬೆ ಹೈಕೋರ್ಟ್ ವರವರರಾವ್‌ರವರಿಗೆ ಜಾಮೀನು ನೀಡುವಾಗ ಅವರು ಮುಂಬೈ ಬಿಟ್ಟು ಹೊರಹೋಗಬಾರದು ಎಂದು ಷರತ್ತು ವಿಧಿಸಿದೆ. ಆ ಕಾರಣದಿಂದ ಅದೇ ಸಂದರ್ಭದಲ್ಲಿ ಮಧುಗಿರಿ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಅವರು ಹಾಜರಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ, ಅವರ ಶ್ಯೂರಿಟಿಯನ್ನು ಮುಟ್ಟಗೋಲು ಹಾಕಿಕೊಂಡು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲು ಹೇಗೆ ಸಾಧ್ಯ ಎಂಬುದು ಕುಟುಂಬ ಸದಸ್ಯರ ಪ್ರಶ್ನೆಯಾಗಿದೆ.

ಏನಿದು ಪ್ರಕರಣ

2005 ರಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನಕ್ಸಲ್ ಮುಖಂಡ ಸಾಕೇತ್ ರಾಜನ್‌ರವರ ಎನ್‌ಕೌಂಟರ್ ಸಂಭವಿಸಿತ್ತು. ಅದನ್ನು ಖಂಡಿಸಿ ಬೆಂಗಳೂರಿನಲ್ಲಿ ಖಂಡನಾ ಸಭೆ ನಡೆಯಿತು. ಅದರಲ್ಲಿ ವರವರರಾವ್ ಮತ್ತು ತೆಲುಗಿನ ಮತ್ತೊಬ್ಬ ಕ್ರಾಂತಿಕಾರಿ ಕವಿ ಗದ್ದರ್‌ರವರು ಭಾಗವಹಿಸಿದ್ದರು. ಆದಾದ ನಂತರ ತುಮಕೂರಿನ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು ಕೆಎಸ್‌ಆರ್‌ಪಿ ತುಕಡಿ ಮೇಲೆ ದಾಳಿ ಮಾಡಿದ್ದರಿಂದ ಏಳು ಜನ ಪೊಲೀಸರು ಹತ್ಯೆಯಾಗಿದರೆಂಬ ಆರೋಪವಿತ್ತು. ಈ ದಾಳಿಗೆ ವರವರ ರಾವ್ ಮತ್ತು ಗದ್ದರ್‌ರವರು ಬೆಂಗಳೂರಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದೆ ಪ್ರೇರಣೆ ಎಂದು ಆರೋಪಿಸಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ವಿಚಿತ್ರವೆಂದರೆ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ 22 ಜನರು ಪ್ರಕರಣದಿಂದ ಖುಲಾಸೆಯಾಗಿದ್ದರೂ ವರವರರಾವ್ ಮತ್ತು ಗದ್ದರ್ ಮೇಲಿನ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ!

ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿ 82 ವರ್ಷ ವಯಸ್ಸಿನ ರಾವ್‌ ಅವರಿಗೆ ಆರು ತಿಂಗಳು ಮಧ್ಯಂತರ ಜಾಮೀನನ್ನು ಫೆ.22ರಂದು ಹೈಕೋರ್ಟ್ ನೀಡಿತ್ತು. ಸೆಪ್ಟೆಂಬರ್‌ 5ರಂದು ನ್ಯಾಯಾಂಗ ಬಂಧನಕ್ಕೆ ಮರಳುವಂತೆ ನಿರ್ಧರಿಸಲಾಗಿತ್ತು. ಆದರೆ ಕೋರ್ಟ್‌ ಸಮಯಾವಕಾಶ ಇಲ್ಲದ ಕಾರಣದಿಂದ ಅಕ್ಟೋಬರ್ 28ರವರೆಗೆ ಅವರ ವೈದ್ಯಕೀಯ ಜಾಮೀನು ಅವಧಿ ವಿಸ್ತರಿಸಲಾಗಿದೆ.


ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...