Homeಮುಖಪುಟಸಂವಿಧಾನ ಕರಡನ್ನು ರಚಿಸಿದ್ದು ಬ್ರಾಹ್ಮಣರೇ ಹೊರತು ಅಂಬೇಡ್ಕರ್‌ ಅಲ್ಲ: ಗುಜರಾತ್‌ ಸ್ಪೀಕರ್‌ ವಿವಾದಾತ್ಮಕ ಹೇಳಿಕೆ

ಸಂವಿಧಾನ ಕರಡನ್ನು ರಚಿಸಿದ್ದು ಬ್ರಾಹ್ಮಣರೇ ಹೊರತು ಅಂಬೇಡ್ಕರ್‌ ಅಲ್ಲ: ಗುಜರಾತ್‌ ಸ್ಪೀಕರ್‌ ವಿವಾದಾತ್ಮಕ ಹೇಳಿಕೆ

60 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನದ ಮೊದಲ ಕರಡನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನೀಡಿದ್ದು ಬ್ರಾಹ್ಮಣನಾದ ಬಿ.ಎನ್‌ ರಾವ್‌..

- Advertisement -
- Advertisement -

ಗುಜರಾತ್ ವಿಧಾನಸಭೆಯ ಸ್ಪೀಕರ್ ರಾಜೇಂದ್ರ ತ್ರಿವೇದಿ, ಬ್ರಾಹ್ಮಣರಿಗೆ ‘ವಿಭಿನ್ನ ಡಿಎನ್‌ಎ’ ಇದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಹೆಚ್ಚಿನ ನೊಬೆಲ್ ವಿಜೇತರು ಬ್ರಾಹ್ಮಣರು ಎಂದು ಹೇಳಿದ್ದು “ಎಲ್ಲರಿಗೂ ಆಶೀರ್ವಾದ ನೀಡುವುದು, ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ಬ್ರಾಹ್ಮಣರ ಜನ್ಮಸಿದ್ಧ ಹಕ್ಕು” ಎಂದು ಹೇಳಿದರು.

ಗಾಂಧಿನಗರದಲ್ಲಿ ನಡೆಯುತ್ತಿರುವ ಮೂರು ದಿನಗಳ “ಬ್ರಾಹ್ಮಣ ಉದ್ಯಮ ಶೃಂಗಸಭೆ”ಯ ಎರಡನೇ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದ ಅವರು, “ನಾವು ಬ್ರಾಹ್ಮಣರಾಗಿ ಹುಟ್ಟಿದ್ದೇವೆ ಮತ್ತು ನಮ್ಮಲ್ಲಿ ಬ್ರಾಹ್ಮಣರ ಡಿಎನ್‌ಎ ಇದೆ… ಆದರೆ ನಾವು ಯಾರಿಗೂ ವಿರುದ್ಧವಾಗಿಲ್ಲ ಹಾಗಾಗಿ ನಮ್ಮೊಂದಿಗೆ ಹಗೆತನವನ್ನು ಸಾಧಿಸಬಾರದು ಎಂದು ಎಲ್ಲರಿಗೂ ವಿನಂತಿಸುತ್ತೇನೆ ಎಂದಿದ್ದಾರೆ”.

ಅಭಿಜಿತ್ ಬ್ಯಾನರ್ಜಿ ಸೇರಿದಂತೆ ದೇಶದ ಒಂಬತ್ತು ಮಂದಿ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ, ಎಂಟು ಮಂದಿ ಬ್ರಾಹ್ಮಣರು ಎಂದು ಅವರು ಹೇಳಿದ್ದಾರೆ.

ಭಾರತದ ಸಂವಿಧಾನ ಪಿತಾಮಹ ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ “ಬ್ರಾಹ್ಮಣರರನ್ನು ದಲಿತ ಐಕಾನ್ “ಮುನ್ನಡೆಸಲಿ” ಎಂದು ಅಂಬೇಡ್ಕರ್‌ ಹೇಳಿದ್ದರು. ಆದರೆ ಬ್ರಾಹ್ಮಣರು ಯಾವಾಗಲೂ ಹಿಂದೆ ನಿಂತು ಇತರರನ್ನು ಉತ್ತೇಜಿಸುತ್ತಾರೆ ಎಂದು ಇತಿಹಾಸ ಹೇಳುತ್ತದೆ. ಬಾಬಾ ಸಾಹೇಬರನ್ನು ಮುನ್ನಡೆಸಿದ ವ್ಯಕ್ತಿ ಡಾ ಬಿ.ಎನ್. ರಾವ್‌ ಆಗಿದ್ದಾರೆ. 1949 ರ ನವೆಂಬರ್ 25 ರಂದು ಅಂಬೇಡ್ಕರ್ ಅವರೇ ಇದನ್ನು ಹೇಳಿದ್ದಾರೆ. ಸಂವಿಧಾನವನ್ನು ರಚಿಸಿದ ಶ್ರೇಯಸ್ಸನ್ನು ನನಗೆ ನೀಡಲಾಗುತ್ತಿದೆ ಆದರೆ ನಿಜವಾದ ಕ್ರೆಡಿಟ್ ಬಿ ಎನ್ ರೌಗೆ ಸಲ್ಲಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು” ಎಂದು ಸ್ಪೀಕರ್‌ ಹೇಳಿದ್ದಾರೆ.

“ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಅಂತರರಾಷ್ಟ್ರೀಯ ನ್ಯಾಯಾಲಯದ ಮೊದಲ ಭಾರತೀಯ ನ್ಯಾಯಾಧೀಶರು ಯಾರು ಎಂದು ನಿಮಗೆ ತಿಳಿದಿದೆಯೇ? 60 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನದ ಮೊದಲ ಕರಡನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನೀಡಿದ್ದು ಅವರೇ ಎಂದು ನಿಮಗೆ ತಿಳಿದಿದೆಯೇ? ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಗೌರವದಿಂದ ತೆಗೆದುಕೊಳ್ಳುತ್ತೇವೆ ಆದರೆ ಸಂವಿಧಾನದ ಮೊದಲ ಕರಡನ್ನು ರಚಿಸಿದ ವ್ಯಕ್ತಿ ಡಾ.ಬಿ.ಎನ್. ರಾವ್‌” ಎಂದು ತ್ರೀವೇದಿ ಹೇಳಿದ್ದಾರೆ.

ಜನಾಂಗೀಯ ನಿಂದನೆಯನ್ನು ಬಳಸಿದ ತ್ರಿವೇದಿ, “ಸ್ನೇಹಿತರೇ, ನೀವು ಆಫ್ರಿಕಾಕ್ಕೆ ಹೋದರೆ, ಅಲ್ಲಿನ ಜನರ ಬಣ್ಣ ಮತ್ತು ನೋಟವನ್ನು ತಪ್ಪದೇ ನೋಡಿ. ನೀವು ಚೀನಾದ ಜನರನ್ನು ನೋಡಿರಬೇಕು, ಅವರ ಕಣ್ಣುಗಳು ತೆರೆದಿದೆಯೆ ಅಥವಾ ಮುಚ್ಚಲ್ಪಟ್ಟಿದೆಯೆ ಎಂದು ಸಹ ನಿಮಗೆ ಗೊತ್ತಾಗುವುದಿಲ್ಲ. ಜಪಾನಿಯರ ವಿಷಯವೂ ಇದೇ ಆಗಿದೆ. ಆದರೆ, ನೀವು ನಮ್ಮ ಹಿಂದೂಸ್ತಾನ್‌ಗೆ ಹಿಂತಿರುಗಿ ಪಂಜಾಬ್, ಹರಿಯಾಣ ಇತ್ಯಾದಿಗಳಿಗೆ ಹೋದಾಗ, ನೀವು ಚೆನ್ನಾಗಿರುವ ಸಧೃಢ ಜನರನ್ನು ನೋಡುತ್ತೀರಿ. ಪರ್ವತಗಳಲ್ಲಿ ನೀವು ಹಸುಗಳನ್ನು ನೋಡಿರಬೇಕು, ಅವು ಸಣ್ಣದಾಗಿರುತ್ತದೆ. ಆದರೆ ಸಮತಟ್ಟಾದ ಪ್ರದೇಶದಲ್ಲಿನ ಹಸುಗಳನ್ನು ನೋಡಿ ದಷ್ಟಪುಟ್ಟವಾಗಿರುತ್ತವೆ. ಜಗತ್ತಿನಲ್ಲಿ ರಾಜ್ಯವಾರು ಮತ್ತು ದೇಶವಾರು ವ್ಯತ್ಯಾಸಗಳಿವೆ. ಈ ವೈವಿಧ್ಯತೆಗೆ ಹವಾಮಾನ ಮತ್ತು ಎಲ್ಲರ ಡಿಎನ್‌ಎ ಕಾರಣ.” ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ದೆಹಲಿಯ ಬೆಂಕಿಯ ಸಂದರ್ಭದಲ್ಲಿ 11 ಜನರನ್ನು ರಕ್ಷಿಸಿದ ಫೈರ್‌ಮ್ಯಾನ್ ರಾಜೇಶ್ ಶುಕ್ಲಾ ಅವರು ನಮ್ಮ ಸಮುದಾಯದ ಅನುಕರಣೀಯ ಸದಸ್ಯ ಎಂದು ಸ್ಪೀಕರ್ ಉಲ್ಲೇಖಿಸಿದ್ದಾರೆ.

ಬ್ರಾಹ್ಮಣ ನೇತೃತ್ವದ ಕಂಪನಿಗಳನ್ನು ಉತ್ತೇಜಿಸಲು “ವ್ಯಾಪಾರ ಶೃಂಗಸಭೆ” ಯೋಜಿಸಲಾಗಿದೆ. ವ್ಯಾಪಾರೋದ್ಯಮಗಳು ಮತ್ತು ಯೋಜನೆಗಳ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಲು ಸಮಾವೇಶದಲ್ಲಿ 150 ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಭಾಗವಹಿಸಿದವರಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಅನೇಕ ಪ್ರಮುಖ ಬಿಜೆಪಿ ನಾಯಕರು ಇದ್ದರು.

ಗುಜರಾತ್ ಅಸೆಂಬ್ಲಿ ಸ್ಪೀಕರ್ ತ್ರೀವೇದಿಯವರ ಹೇಳಿಕೆಗಳು 2019ರ ಸೆಪ್ಟೆಂಬರ್‌ನಲ್ಲಿ ಕೋಟಾದಲ್ಲಿ ನಡೆದ ಬ್ರಾಹ್ಮಣ ಸಮಾವೇಶದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮಾತುಗಳಿಗೆ ಬಲವಾದ ಹೋಲಿಕೆಯನ್ನು ಹೊಂದಿವೆ.

ಕೋಟಾದ ಅಖಿಲ ಬ್ರಾಹ್ಮಣ ಮಹಾಸಭೆಯಲ್ಲಿ ಮಾತನಾಡಿದ ಓಂ ಬಿರ್ಲಾ, “ಬ್ರಾಹ್ಮಣ ಸಮುದಾಯವು ಯಾವಾಗಲೂ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿದೆ. ಅವರು ಇತರ ಎಲ್ಲ ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿದ್ದಾರೆ ಮತ್ತು ಸಮುದಾಯವು ಈ ರಾಷ್ಟ್ರದಲ್ಲಿ ಯಾವಾಗಲೂ ಮಾರ್ಗದರ್ಶಕ ಪಾತ್ರವನ್ನು ವಹಿಸಿದೆ. ಸಮಾಜದಲ್ಲಿ ಅವರು ಹೊಂದಿರುವ ವಿಶೇಷ ಸ್ಥಾನವೆಂದರೆ ಅವರ ತ್ಯಾಗ ಮತ್ತು ಸಂಯಮ. ಸಮಾಜದಲ್ಲಿ ಶಿಕ್ಷಣ ಮತ್ತು ಮೌಲ್ಯಗಳನ್ನು ಹರಡುವಲ್ಲಿ ಬ್ರಾಹ್ಮಣರು ಯಾವಾಗಲೂ ಪಾತ್ರವಹಿಸಿದ್ದಾರೆ.” ಎಂದಿದ್ದರು.

ಗುಜರಾತಿನ ದಲಿತ ನಾಯಕ ಮತ್ತು ಜಾತಿ ವಿರೋಧಿ ಕಾರ್ಯಕರ್ತ ಜಿಗ್ನೇಶ್‌ ಮೇವಾನಿ “ಬಿರ್ಲಾ ಅವರ ಹೇಳಿಕೆಗಳು ಶೋಷಕ ಜಾತಿ ವ್ಯವಸ್ಥೆಯ ಅನುಮೋದನೆ ಮಾತ್ರವಲ್ಲದೆ ಸಂಭ್ರಮಾಚರಣೆ ಸಹ ಆಗಿವೆ” ಎಂದು ಖಂಖಡಿಸಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಪ್ರತಿಪಕ್ಷಗಳ “ಒಲೈಸುವಿಕೆ” ಮತ್ತು “ಮತ ಬ್ಯಾಂಕ್” ರಾಜಕೀಯವನ್ನು ಖಂಡಿಸಿದ್ದಾರೆ. ಆದರೆ ಅವರು ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಕ್ರಿಯಿಸುವುದನ್ನು ಸ್ಪಷ್ಟವಾಗಿ ತ್ಯಜಿಸಿದ್ದಾರೆ. ಬ್ರಾಹ್ಮಣ ಶ್ರೇಷ್ಠತೆಯ ಬಗ್ಗೆ ತ್ರಿವೇದಿ ಅವರ ಹೇಳಿಕೆಗೆ ಇಲ್ಲಿಯವರೆಗೆ ಬಿಜೆಪಿಯ ಉನ್ನತ ನಾಯಕರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ದಿ ವೈರ್‌ ವರದಿ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಮತ್ತೆ ಮತ್ತೆ ಭೀಮಾ ಕೊರೆಂಗಾವ್ ಯುದ್ಧ ಭೂಮಿಗೆ ಸಮೀಪಕ್ಕೆ ಕಾರಣವಾಗುತ್ತದೆ
    ಕಾರಣ ನರೇಂದ್ರ ಮೋದಿಯ ಕ್ಯಾಬಿನೆಟ್ ಅಲ್ಲಿ ಪೂರ್ತಿ ಅವಿದ್ಯಾವಂತರು ದರೋಡೆಕೋರರು ಸಂಪುಟ ದರ್ಜೆಯಲ್ಲಿ ರೇಪಿಸ್ಟ್ ಅರು ನರೇಂದ್ರ ಮೋದಿಯ ಸಂಪುಟ ಸಹೋದ್ಯೋಗಿಗಳು ಆಗಿದ್ದಾರೆ ಕ್ರಿಮಿನಲ್ ಹಿಂಸಾಚಾರ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ ಅಷ್ಟೇ ವರೆತು ಬೇರೆಯಾವ ಜಿಡಿಪಿ ಉದ್ಯೋಗ ವ್ಯವಸ್ಥೆ ಹಾಳಾಗುತ್ತಿರುವ ಬಗ್ಗೆ ಸ್ವಲ್ಪನಾದರೂ ಕಾಳಜಿ ಇಲ್ಲದ ನಾಯಿಗಳ ತರ ಬಳಕೆ ಆಗುತ್ತಿವೆ ನರೇಂದ್ರ ಮೋದಿ ಸಂಪುಟಕ್ಕೆ ನಾಚಿಕೆಯಾಗಬೇಕು ಜೈ ಭೀಮ್ ಜೈ ಭಾರತ್

  2. Once again emergency came in India …….next once again there will be
    Koregaon war …. How many years
    We can tolerete ……they exploited
    More than 2500 years , they still wanted to exploit …….In India fire is
    started , now saffron flame is going
    on, definitely there will be BLUE flame ,it takes time but ….. REMEMBER………. BLUE flame is more dangerous than saffron………….

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...