ಕೊರೊನಾವನ್ನು ಬಳಸಿಕೊಂಡು ಬಿಜೆಪಿ ಸರ್ಕಾರಗಳನ್ನು ಹಣಿಯಲು ಕಾಂಗ್ರೆಸ್ ಪಕ್ಷವು “ಟೂಲ್ಕಿಟ್” ತಯಾರಿಸಿದೆ ಎಂದು ಬಿಜೆಪಿಯ ನಾಯಕ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ಗೆ ‘ತಿರುಚಲ್ಪಟ್ಟ ವಿಷಯ’(ಮ್ಯಾನಿಪ್ಯುಲೇಟೆಡ್ ಮೀಡಿಯಾ) ಎಂದು ಟ್ವಿಟರ್ ಅಧೀಕೃತವಾಗಿ ಟ್ಯಾಗ್ ಮಾಡಿ, ಅವರು ಹಂಚಿರುವ ಮಾಹಿತಿ ಸುಳ್ಳು ಎಂದು ಸೂಚಿಸಿದೆ. ಇದು ಬಿಜೆಪಿಗೆ ಭಾರಿ ಮುಖಭಂಗ ಉಂಟು ಮಾಡಿದ್ದು, ಇದೀಗ ಕೇಂದ್ರ ಸರ್ಕಾರವು ಆ ಟ್ಯಾಗ್ ಅನ್ನು ತೆಗೆಯುವಂತೆ ಟ್ವಿಟರ್ ಅನ್ನು ಕೇಳಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಸಂಬಿತ್ ಪಾತ್ರ ಅವರ ಟ್ವೀಟ್ಗೆ ಹಾಕಿರುವ ‘ಟ್ಯಾಗ್’ ಪೂರ್ವಾಗ್ರಹದಿಂದ ಕೂಡಿದ್ದು, ಸ್ಪಷ್ಟ ಅತಿಕ್ರಮಣ ಮತ್ತು ಅನಗತ್ಯವಾಗಿದೆ ಎಂದು ಹೇಳಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಟ್ವಿಟರ್ನ ಜಾಗತಿಕ ತಂಡದೊಂದಿಗೆ, ಕಠಿಣವಾದ ಸಂವಹನ ನಡೆಸಿದ್ದು, ‘ತಿರುಚಲ್ಪಟ್ಟ ವಿಷಯ’ ಎಂಬ ಟ್ಯಾಗ್ ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ‘ಕಾಂಗ್ರೆಸ್ ಟೂಲ್ಕಿಟ್ ಎಕ್ಸ್ಪೋಸ್ಡ್’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!
ಮೇ 18 ರಂದು ಸಂಬಿತ್ ಪತ್ರಾ ಮಾಡಿದ್ದ ಟ್ವೀಟ್ ಅನ್ನು ಹಲವಾರು ಬಿಜೆಪಿ ನಾಯಕರು ಹಂಚಿಕೊಂಡಿದ್ದು, ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಹಣಿಯಲು, ಕೊರೊನಾವನ್ನು ಬಳಸುವಂತೆ ಕಾಂಗ್ರೆಸ್ “ಟೂಲ್ಕಿಟ್” ತಯಾರಿಸಿದೆ ಎಂದು ಹೇಳುವ ಸ್ಕ್ರೀನ್ಶಾರ್ಟ್ಗಳನ್ನು ಟ್ವೀಟ್ ಮಾಡಿದ್ದರು.
Friends look at the #CongressToolKit in extending help to the needy during the Pandemic!
More of a PR exercise with the help of “Friendly Journalists” & “Influencers” than a soulful endeavour.
Read for yourselves the agenda of the Congress:#CongressToolKitExposed pic.twitter.com/3b7c2GN0re— Sambit Patra (@sambitswaraj) May 18, 2021
ಆದರೆ ಈ ಸ್ಕ್ರೀನ್ಶಾಟ್ ನಕಲಿ ಹಾಗೂ ಪಕ್ಷದ ಲೆಟರ್ಹೆಡ್ ಅನ್ನು ನಕಲಿಸಿ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಅದೇ ದಿನ ಛತ್ತೀಸ್ಗಡ ಮತ್ತು ರಾಜಸ್ಥಾನದಲ್ಲಿ ಎಫ್ಐಆರ್ ದಾಖಲಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ‘ಟೂಲ್ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ
ಅಷ್ಟೇ ಅಲ್ಲದೆ, ಸಂಬಿತ್ ಪತ್ರ ಮತ್ತು ಇತರ ಬಿಜೆಪಿ ನಾಯಕರ ಟ್ವೀಟ್ಗಳನ್ನು ತೆಗೆದುಹಾಕಿ, ಸಮಾಜದಲ್ಲಿ ತಪ್ಪು ಮಾಹಿತಿ ಮತ್ತು ಅಶಾಂತಿಯನ್ನು ಹರಡಿದ್ದಕ್ಕಾಗಿ ಅವರ ಖಾತೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪಕ್ಷವು ನಿನ್ನೆ ಟ್ವಿಟರ್ಗೆ ಪತ್ರ ಬರೆದಿದೆ.
ಇದಾಗಿ ಸಂಜೆ, ಸಂಬಿತ್ ಪತ್ರಾ ಅವರ ಟ್ವೀಟ್ ಕೆಳಗೆ “ಮ್ಯಾನಿಪ್ಯುಲೇಟೆಡ್ ಮೀಡಿಯಾ” ಟ್ಯಾಗ್ ಕಾಣಿಸಿಕೊಂಡಿದೆ.
ಟ್ವಿಟರ್ನ ಈ ಕ್ರಮವನ್ನು “ಪೂರ್ವ ನಿರ್ಣಯ, ಪೂರ್ವಾಗ್ರಹ ಮತ್ತು ತನಿಖೆಯನ್ನು ಒಂದು ಕಡೆಗೆ ಮಾಡುವ ಉದ್ದೇಶಪೂರ್ವಕ ಪ್ರಯತ್ನ” ಎಂದು ಸರ್ಕಾರ ದೂಷಿಸಿದೆ.
“ಟೂಲ್ಕಿಟ್” ನ ನಿಖರತೆಯನ್ನು ಪ್ರಶ್ನಿಸಿ ಈಗಾಗಲೇ ದೂರು ನೀಡಲಾಗಿದೆ ಮತ್ತು ಅದು ತನಿಖೆಯಲ್ಲಿದೆ. ಈ ವಿಷಯದ ಕುರಿತು ಸತ್ಯತೆಯನ್ನು ತನಿಖೆಯು ನಿರ್ಧರಿಸುತ್ತದೆಯೆ ಹೊರತು ಟ್ವಿಟ್ಟರ್ ಅಲ್ಲ. ಟ್ವಿಟರ್ ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಈ ವಿಷಯವು ತನಿಖೆಯಲ್ಲಿದ್ದಾಗ ಟ್ವಿಟರ್ ತನ್ನ ತೀರ್ಪನ್ನು ರವಾನಿಸಬಾರು” ಎಂದು ಸರ್ಕಾರ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ‘ಮುಗ್ಧ ಜನರ ರಕ್ತವು ಮೊಸಳೆ ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ – #CrocodileTears ಟ್ರೆಂಡ್!