Homeಅಂಕಣಗಳುಬಹುಜನ ಭಾರತ: ಆದಿವಾಸಿಗಳ ನರಮೇಧ; ನ್ಯಾಯವಿನ್ನೂ ಬಿಸಿಲುಗುದುರೆ!

ಬಹುಜನ ಭಾರತ: ಆದಿವಾಸಿಗಳ ನರಮೇಧ; ನ್ಯಾಯವಿನ್ನೂ ಬಿಸಿಲುಗುದುರೆ!

- Advertisement -
- Advertisement -

ಈದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು. ಛತ್ತೀಸಗಢದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ 2012ರಲ್ಲಿ ಹುಸಿ ಎನ್ಕೌಂಟರೊಂದು ನಡೆಯಿತು. ಆರು ಮಂದಿ ಅಪ್ರಾಪ್ತ ವಯಸ್ಕರೂ ಸೇರಿದಂತೆ 17 ಮಂದಿ ಆದಿವಾಸಿಗಳನ್ನು ಈ ಎನ್ಕೌಂಟರಿನಲ್ಲಿ ಕೊಲ್ಲಲಾಗಿತ್ತು. ಈ ಹತ್ಯಾಕಾಂಡದಲ್ಲಿ ಹತರಾದವರಿಗೆ ಮಾವೋವಾದಿಗಳ ಹಣೆಪಟ್ಟಿ ಹಚ್ಚಿತ್ತು ಅಂದಿನ ರಮಣಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ. ಭಾರೀ ಪ್ರತಿಭಟನೆ ವಿವಾದದ ನಂತರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿತ್ತು.

ಮಧ್ಯಪ್ರದೇಶ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಕೆ. ಅಗರವಾಲ ಆಯೋಗ ಸಲ್ಲಿಸಿದ ವರದಿಯನ್ನು 2019ರ ಡಿಸೆಂಬರಿನಲ್ಲಿ ಛತ್ತೀಸಗಢ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಭದ್ರತಾ ಪಡೆಗಳಿಂದ ಹತರಾದ 17 ಮಂದಿಯ ಪೈಕಿ ಯಾರೂ ಮಾವೋವಾದಿಗಳಾಗಿರಲಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಗ್ರಾಮಸ್ಥರನ್ನು ಬಹಳ ಸಮೀಪದಿಂದ ಗುಂಡು ಹಾರಿಸಿ ಕೊಲ್ಲಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರಿದ್ದ ಭದ್ರತಾ ಪಡೆಯು ಗಾಬರಿಯಲ್ಲಿ ಗುಂಡು ಹಾರಿಸಿರಬೇಕು. ಎನ್ಕೌಂಟರ್ ಜರುಗಿದ್ದು ರಾತ್ರಿಯ ಹೊತ್ತು. ಆದರೆ ಈ 17 ಮಂದಿಯ ಪೈಕಿ ಒಬ್ಬ ಯುವಕನನ್ನು ಬೆಳಿಗ್ಗೆ ಹಿಡಿದು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದೂ ಆಯೋಗ ಹೇಳಿತ್ತು.

ಭದ್ರತಾ ಪಡೆಯ ಕೆಲವರಿಗೆ ಆಗಿರುವ ಗಾಯಗಳಿಗೆ ತಮ್ಮದೇ ಸಂಗಾತಿಗಳ ಮತ್ತೊಂದು ತಂಡ ಕತ್ತಲಲ್ಲಿ ಗೊತ್ತಿಲ್ಲದೆ ಹಾರಿಸಿರುವ ಗುಂಡುಗಳೇ ಕಾರಣ. ಆದರೆ ಅಷ್ಟು ಮಂದಿ ಗ್ರಾಮಸ್ಥರ ಹಬ್ಬದ ಆಚರಣೆಯ ಯೋಜನೆಯನ್ನು ಚರ್ಚಿಸಲು ಸೇರಿದ್ದರು ಎಂಬ ಕಾರಣವನ್ನು ನಂಬಲಾಗದು ಎಂದೂ ವರದಿಯಲ್ಲಿ ಸಂದೇಹ ಪ್ರಕಟಿಸಲಾಗಿತ್ತು.

ಬಸಗುಡಾದಿಂದ ಹೊರಟ ಎರಡು ಭದ್ರತಾ ಪಡೆಯ ತಂಡಗಳು ಮೂರು ಕಿ.ಮೀ. ದೂರದ ಸರ್ಕೇಗುಡದಲ್ಲಿ ’ಮಾವೋವಾದಿಗಳ ಸಭೆ’ ನಡೆಯುತ್ತಿದ್ದುದನ್ನು ಕಂಡವು. ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರ ಭದ್ರತಾ ಪಡೆಯ ತಂಡಗಳ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳು ವಾಪಸು ಗುಂಡು ಹಾರಿಸಿದರು ಎಂಬುದು ಭದ್ರತಾ ಪಡೆಗಳ ಹೇಳಿಕೆಯಾಗಿತ್ತು.

ಆದರೆ ಗ್ರಾಮಸ್ಥರ ಪ್ರಕಾರ ತಾವು ಬೀಜ ಪಂಡುಮ್ ಹಬ್ಬದ ಸಿದ್ಧತೆಗಾಗಿ ಸಭೆ ಸೇರಿದ್ದು. ಭದ್ರತಾ ಪಡೆಗಳು ಅವರನ್ನು ಸುತ್ತುವರೆದು ಗುಂಡು ಹಾರಿಸಿದವು. ಪಡೆಗಳಿಂದ ಹತ್ಯೆಗೀಡಾದ ಮತ್ತು ಗಾಯಗೊಂಡ ಗ್ರಾಮಸ್ಥರ ನಕ್ಸಲೀಯರು ಎನ್ನಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ’ದೂರದಲ್ಲಿ ಅನುಮಾನಾಸ್ಪದ ಸದ್ದು ಕೇಳಿಬರುತ್ತಿದೆ ಎಂಬುದಾಗಿ ತಮ್ಮ ’ಮಾರ್ಗದರ್ಶಿ’ಯ ಮಾತಿನಿಂದ ಪ್ರಭಾವಿತರಾದಂತಿರುವ ಪೊಲೀಸರು ಗಾಬರಿಯಾಗಿ ನಕ್ಸಲೀಯರಿದ್ದಾರೆಂದು ಭಾವಿಸಿ ಗುಂಡು ಹಾರಿಸಿ ಗ್ರಾಮಸ್ಥರ ಸಾವು ನೋವುಗಳಿಗೆ ಕಾರಣರಾಗಿದ್ದಾರೆ. ಗ್ರಾಮಸ್ಥರ ಗುಂಡು ಹಾರಿಸಿಲ್ಲವೆಂಬ ಅಂಶವು ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್.ಇಳಂಗೋ ಮತ್ತು ಮನೀಶ್ ಬರ್ಮೋಲ ಅವರ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಸಾಕ್ಷ್ಯಾಧಾರಗಳ ಪ್ರಕಾರ 17 ರಲ್ಲಿ ಹತ್ತು ಮಂದಿ ಬೆನ್ನಿಗೆ ಗುಂಡು ಬಿದ್ದು ಸತ್ತಿದ್ದಾರೆ. ಅರ್ಥಾತ್ ಪರಾರಿಯಾಗುತ್ತಿದ್ದಾಗ ಕೊಲ್ಲಲಾಗಿದೆ. ಕೆಲವರು ತಲೆಗೆ ಗುಂಡು ಬಿದ್ದು ಸತ್ತಿದ್ದಾರೆ. ಈ ಅಂಶಗಳನ್ನು ಗಮನಿಸಿದರೆ ಗುಂಡು ಹಾರಿಸಿದ್ದು ಬಲು ಸಮೀಪದಿಂದಲೇ ವಿನಾ ಪೊಲೀಸರು ಹೇಳುವಂತೆ ದೂರದಿಂದ ಅಲ್ಲ. ಗಾಯಗೊಂಡವರ ಮೈ ಮೇಲಿನ ಗಾಯಗಳು ಕೂಡ ಬಂದೂಕದ ಹಿಡಿಯಿಂದ ಮತ್ತು ಹರಿತ ಅಂಚಿನ ಮತ್ತು ಮೊಂಡು ವಸ್ತುವಿನಿಂದ ಆದಂತಹವು. ಈ ಗಾಯಗಳು ಆದದ್ದು ಹೇಗೆ ಎಂಬುದಕ್ಕೆ ಭದ್ರತಾ ಪಡೆಗಳಿಂದ ಉತ್ತರ ಬರಲಿಲ್ಲ’ ಎಂದು ನ್ಯಾಯಾಂಗ ವರದಿ ಹೇಳಿತ್ತು.

ಹತ್ಯೆಗೀಡಾದವರ ಪೈಕಿ ಕಾಕಾ ಸರಸ್ವತಿ ಮತ್ತು ಕಾಕಾ ನಾಗೇಶ್ 12 ವರ್ಷ ವಯಸ್ಸಿನವರು. ಇರ್ಪಾ ಸುರೇಶ್ ವಯಸ್ಸು ಹದಿನೈದು. ಹಾಪ್ಕಾ ಮಿಟ್ಟೂಗೆ 17 ವರ್ಷ. ಹದಿನೇಳು ವರ್ಷದ ಕುಂಜಮ್ ಮಲ್ಲಾ, ಹದಿನಾರು ವಯಸ್ಸಿನ ಕೊರ್ಸಾ ಬಿಚೆಮ್ ಅವರಂತಹ ಸಣ್ಣ ವಯಸ್ಸಿನವರೂ ಇದ್ದರು. ಇವರನ್ನು ’ಹಾರ್ಡ್ ಕೋರ್’ ನಕ್ಸಲೀಯರು ಎಂದು ಬಣ್ಣಿಸಲಾಗಿತ್ತು. ಅಂದಿನ ಕೇಂದ್ರ ಗೃಹಮಂತ್ರಿ ಪಿ.ಚಿದಂಬರಂ ಅವರಂತೂ ಮೂವರು ಬಹುಮುಖ್ಯ ನಕ್ಸಲೀಯ ನಾಯಕರನ್ನು ಕೊಲ್ಲಲಾಯಿತು ಎಂದು ಎದೆ ಉಬ್ಬಿಸಿದ್ದರು. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಮತ್ತು ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಈ ಎನ್ಕೌಂಟರನ್ನು ಬಹುದೊಡ್ಡ ಮಾವೋವಾದಿ ಎನ್ಕೌಂಟರ್ ಎಂದು ಬಣ್ಣಿಸಿದ್ದವು. ವರದಿ ಬಂದ ನಂತರ ಚಿದಂಬರಂ ಅವರು ಕ್ಷಮಾಪಣೆ ಕೇಳಬೇಕಾಯಿತು.

ಬಂಡುಕೋರರನ್ನು ಹತ್ತಿಕ್ಕುವ ಯಶಸ್ವೀ ಕಾರ್ಯಾಚರಣೆ ಎಂದು ಈ ನರಮೇಧವನ್ನು ಸರ್ಕಾರ ಬಣ್ಣಿಸಿತ್ತು. ಮುಖ್ಯವಾಹಿನಿಯ ಸಮೂಹ ಮಾಧ್ಯಮಗಳು ಈ ಸುಳ್ಳನ್ನು ಧ್ವನಿವರ್ಧಕ ಹಿಡಿದು ಕೂಗಿ ಹೇಳಿದ್ದವು. ಆದರೆ ಹತ್ಯೆಗೀಡಾದವರು ಅಮಾಯಕ ಗ್ರಾಮಸ್ಥರಷ್ಟೇ ಎಂಬ ಅಂಶವಷ್ಟೇ ಅಲ್ಲ, ಈ ಎನ್ಕೌಂಟರ್ ನಡೆದ ಸ್ಥಳದ ಸುತ್ತಮುತ್ತ ಎಲ್ಲಿಯೂ ಮಾವೋವಾದಿಗಳು ಇದ್ದ ಕುರಿತು ಯಾವ ಸಾಕ್ಷ್ಯವೂ ಸಿಕ್ಕಿಲ್ಲ. ಎನ್ಕೌಂಟರ್ ನಡೆದ ನಂತರ ಈ ನಿರಪರಾಧಿ ಗ್ರಾಮಸ್ಥರ ನರಮೇಧವನ್ನು ಸಮರ್ಥಿಸಲು ಸುಳ್ಳಿನ ಜಾಲವನ್ನೇ ಹೆಣೆಯಲಾಯಿತು ಎಂದು ವರದಿ ಹೇಳಿತ್ತು.

ಎಡಪಂಥೀಯ ಉಗ್ರವಾದದ ನೆಲೆಯೆಂದು ಹೆಸರಾಗಿದ್ದ ಬಿಜಾಪುರದ ಸರ್ಕೇಗುಡ ಅದೇ ಕಾರಣಕ್ಕಾಗಿ ಕೆಂಡದ ಹೊಂಡದ ಮೇಲೆ ಜೀವಿಸಿದ ಗ್ರಾಮ. ಆದಿವಾಸಿಗಳಿಂದಲೇ ಆದಿವಾಸಿಗಳನ್ನು ಬೇಟೆಯಾಡಲು ಛತ್ತೀಸಗಢ ಸರ್ಕಾರ ಕಟ್ಟಿದ ಖಾಸಗಿ ಆದಿವಾಸಿ ಸೇನೆ ಸಲ್ವಾ ಜುದುಮ್ ಈ ಗ್ರಾಮವನ್ನು 2005ರಲ್ಲಿ ಸುಟ್ಟು ಹಾಕಿತ್ತು. 2009ರಲ್ಲಿ ಗ್ರಾಮಸ್ಥರ ಈ ಹಳ್ಳಿಗೆ ವಾಪಸು ಬರಲು ಆರಂಭಿಸಿದ್ದರು. ಬೂದಿಯಾಗಿದ್ದ ತಮ್ಮ ಬದುಕುಗಳನ್ನು ಪುನಃ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರು. ನರಮೇಧ ನಡೆದ ರಾತ್ರಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಬೀಜ ಪಂಡುಮ್ ಉತ್ಸವ ಆಚರಣೆಯ ಜೊತೆಗೆ ಜಾನುವಾರು ಇಲ್ಲದ ಕುಟುಂಬಗಳು ಮತ್ತು ಏಕಮಹಿಳೆಯ ಕುಟುಂಬಗಳಿಗೆ ನೆರವಾಗುವ ಬಗೆ ಎಂತು ಎಂದು ಚರ್ಚಿಸಲಾಗುತ್ತಿತ್ತು. ಆದಿವಾಸಿ ರೂಢಿ ರಿವಾಜುಗಳ ಪ್ರಕಾರ ಉತ್ಸವದ ಸಿದ್ಧತೆಗಳು ರಾತ್ರಿ ನಡೆಯುತ್ತವೆ. ಮರುದಿನ ಮುಂಜಾನೆ ಉತ್ಸವ ಆರಂಭವಾಗುತ್ತದೆ.

ನ್ಯಾಯಾಂಗ ವರದಿ ಬಂದನಂತರ ಈ ನರಮೇಧಕ್ಕೆ ಕಾರಣರಾದವರ ವಿರುದ್ಧ ಅತ್ಯಂತ ಬಿಗಿ ಕ್ರಮವನ್ನು ಜರುಗಿಸಲಾಗುವುದು ಎಂದು ಛತ್ತೀಸಗಢದ ಹಾಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಾರಿದ್ದುಂಟು. ಆದರೆ ಎರಡು ವರ್ಷ ಉರುಳಿದರೂ ಹಂತಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಸರ್ಕೇಗುಡದಲ್ಲಿ ಒಂಬತ್ತು ವರ್ಷಗಳ ಹಿಂದೆ ಜರುಗಿದ ಸರ್ಕಾರಿ ನರಮೇಧದಲ್ಲಿ ಹತರಾದ 17 ಮಂದಿಗೆ ಶ್ರದ್ಧಾಂಜಲಿ ಮೇಳವನ್ನು ಮೊನ್ನೆ ನಡೆಸಲಾಯಿತು. ಸಾವಿರಾರು ಆದಿವಾಸಿಗಳು ಸೇರಿದ್ದರು. ಭಾರೀ ಸಂಖ್ಯೆಯ ಅರೆಸೇನಾ ಪಡೆಗಳು ಈ ಮೇಳವನ್ನು ಸುತ್ತುವರೆದು ನಿಗಾ ಇಟ್ಟಿದ್ದವು.

ಬಿಗಿ ಕ್ರಮ ಕೈಗೊಳ್ಳುವ ಬಾಘೇಲ್ ಸರ್ಕಾರ ತುಟಿ ಹೊಲಿದುಕೊಂಡಿದೆ. ಈ ದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು.


ಇದನ್ನೂ ಓದಿ: ಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...