Homeಮುಖಪುಟಛತ್ತೀಸ್‌ಗಡ: ಅಧಿಕಾರ ಹಸ್ತಾಂತರಕ್ಕೆ ನಿರ್ದೇಶಿಸಿದ ಕಾಂಗ್ರೆಸ್; ಕೊನೆಯ ಪ್ರಯತ್ನದತ್ತ ಭೂಪೇಶ್‌!

ಛತ್ತೀಸ್‌ಗಡ: ಅಧಿಕಾರ ಹಸ್ತಾಂತರಕ್ಕೆ ನಿರ್ದೇಶಿಸಿದ ಕಾಂಗ್ರೆಸ್; ಕೊನೆಯ ಪ್ರಯತ್ನದತ್ತ ಭೂಪೇಶ್‌!

- Advertisement -
- Advertisement -

ಛತ್ತೀಸ್‌ಗಡದ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಆಂತರಿಕ ಬಿಕ್ಕಟ್ಟು ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಒಪ್ಪಿದಂತೆ ಅಧಿಕಾರದ ಹಸ್ತಾಂತರವನ್ನು ಸರಾಗವಾಗಿ ಮಾಡುವಂತೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್ ಅವರಲ್ಲಿ ಪಕ್ಷದ ಕೇಂದ್ರ ನಾಯಕತ್ವವೂ ಹೇಳಿಕೊಂಡಿದೆ ಎಂದು TNIE ವರದಿ ಮಾಡಿದೆ. ಎರಡು ವರ್ಷಗಳ ಹಿಂದೆ ಮಾತುಕತೆಯಾಗಿರುವಂತೆ ತಮ್ಮ ಸಂಪುಟದ ಸಹೋದ್ಯೋಗಿ ಟಿಎಸ್‌ ಸಿಂಗ್ ದಿಯೋಗೆ ಅಧಿಕಾರ ವರ್ಗಾಯಿಸುವಂತೆ ಕಾಂಗ್ರೆಸ್ ಕೇಂದ್ರ ನಾಯಕತ್ವವು ಮುಖ್ಯಮಂತ್ರಿಗೆ ನಿರ್ದೇಶನ ನೀಡಿದೆ.

ಅದಾಗಿಯು, ಭೂಪೇಶ್‌ ಅವರ ಬೆಂಬಲಿಗ ಶಾಸಕರು ಇದನ್ನು ಇನ್ನೂ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗಾಗಲೆ ಒಂದೆರೆಡು ಮಂತ್ರಿಗಳು, ಹಿರಿಯ ಶಾಸಕರು ಸೇರಿದಂತೆ ಹಲವರು ಗುರುವಾರ ರಾತ್ರಿ ದೆಹಲಿಗೆ ಹಾರಿದ್ದು, ಪಕ್ಷದ ಹೈಕಮಾಂಡ್‌‌ ಮುಂದೆ ಭೂಪೇಶ್‌ ಅವರ ಪರವಾಗಿ ನಿಲ್ಲಲಿದೆ.

ಇದನ್ನೂ ಓದಿ: ಛತ್ತೀಸ್‌ಗಡ ಸರ್ಕಾರದಲ್ಲಿ ಬಂಡಾಯ: ಕಾಂಗ್ರೆಸ್‌ಗೆ ಹೊಸ ತಲೆ ನೋವು!

ಈ ವಾರದ ಆರಂಭದಲ್ಲಿ ಭೂಪೇಶ್‌ ಮತ್ತು ದಿಯೋ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಆದರೆ ಶುಕ್ರವಾರ(ಇಂದು) ಕೂಡಾ ಭೂಪೇಶ್‌ ಅವರು ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

“ಸಭೆಯಲ್ಲಿ, 2018 ರ ವಿಧಾನಸಭಾ ಚುನಾವಣೆಯ ನಂತರ ಅವರೆ ಒಪ್ಪಿಕೊಂಡ ಅಧಿಕಾರ ಹಸ್ತಾಂತರದ ಸೂತ್ರವನ್ನು ಅನುಸರಿಸಲು ಭೂಪೇಶ್‌ ಅವರಿಗೆ ತಿಳಿಸಲಾಯಿತು. ಪಕ್ಷವು ಇದನ್ನು ಒಮ್ಮತದ ಮೂಲಕ ಮಾಡಲು ಬಯಸಿದೆ. ಆದರೆ ಈಗ ಅವರು ತಮ್ಮ ಪರವಾಗಿರುವ ಶಾಸಕರ ಮೂಲಕ ಅಧಿಕಾರದಲ್ಲಿ ಉಳಿಯಲು ಒತ್ತಡ ಹೇರುತ್ತಿದ್ದಾರೆ” ಎಂದು ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.

ಇದನ್ನೂ ಓದಿ: ಬಾಬಾ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಛತ್ತೀಸ್‌ಗಢ ಪೊಲೀಸರು

ಈ ಮಧ್ಯೆ ಇಬ್ಬರೂ ನಾಯಕರು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಆದರೆ, “ಸರ್ಕಾರ ರಚೆನೆಯಾಗುವ ವೇಳೆಗೆ ಎರಡುವರೆ ವರ್ಷಗಳ ನಂತರ ಅಧಿಕಾರವನ್ನು ಹಸ್ತಾಂತರ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಮುಖ್ಯಮಂತ್ರಿ ಭೂಪೇಶ್‌‌‌ ಅವರೇ ಅದಕ್ಕೆ ಒಪ್ಪಿಕೊಂಡಿದ್ದರು” ಎಂದು ಈ ಹಿಂದೆ ಟಿಎಸ್‌ ಸಿಂಗ್ ದಿಯೊ ಪ್ರತಿಪಾದಿಸುತ್ತಿದ್ದರು. ಅಷ್ಟೆ ಅಲ್ಲದೆ ಆಪ್ತರು ಕೂಡಾ ಅವರಿಗೆ ಅಧಿಕಾರ ಸಿಗದೆ ಇದ್ದರೆ ಸರ್ಕಾರದಿಂದ ಮಾತ್ರವಲ್ಲ, ಪಕ್ಷದಿಂದಲೆ ಹೊರಹೋಗಲಿದ್ದಾರೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿತ್ತು.

2018 ರಲ್ಲಿ ಛತ್ತೀಸ್‌ಗಡ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ, ಮುಖ್ಯಮಂತ್ರಿ ರೇಸ್‌ನಲ್ಲಿ ಟಿಎಸ್‌‌ ಸಿಂಗ್ ದಿಯೋ ದೇವ ಮತ್ತು ತಾಮ್ರಧ್ವಾಜ್ ಸಾಹು ಮತ್ತು ಭೂಪೇಶ್‌ ಬಘೇಲ್‌ ಇದ್ದರು. ಅಂತಿಮವಾಗಿ ಭೂಪೇಶ್ ಮುಖ್ಯಮಂತ್ರಿಯಾಗಿ, ಉಳಿದ ಇಬ್ಬರಿಗೆ ಮಂತ್ರಿ ಸ್ಥಾನಗಳನ್ನು ನೀಡಲಾಗಿತ್ತು.

ಇದನ್ನೂ ಓದಿ: ಯುವಕನ ಮೇಲೆ ಹಲ್ಲೆಗೈದು, ಮೊಬೈಲ್ ಹೊಡೆದುಹಾಕಿದ ಜಿಲ್ಲಾಧಿಕಾರಿ: ಕ್ರಮಕ್ಕೆ ಮುಂದಾದ ಛತ್ತೀಸ್‌ ಘಡ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ...