- Advertisement -
- Advertisement -
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಡೆನ್ಮಾರ್ಕ್ನಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಭಾಗವಹಿಸಲು ಮತ್ತು ಅವರ ಸಾಧನೆಗಳ ಕುರಿತು ಮಾತನಾಡಲು ಆಹ್ವಾನಿಸಲಾಗಿತ್ತು. ಆದರೆ ಅದಕ್ಕೆ ಹಾಜರಾಗಲು ಮೋದಿ ಸರ್ಕಾರ ಅವರಿಗೆ ಅನುಮತಿ ನೀಡಿಲ್ಲ ಹಾಗಾಗಿ ಅವರು ಹೋಗಲು ಸಾಧ್ಯವಾಗಲಿಲ್ಲ.
ಈ ಕುರಿತು ಖ್ಯಾತ ಯೂಟೂಬರ್ ಧೃವ್ ರಾಠೀ ಕಿಡಿಕಾರಿದ್ದಾರೆ. “ಬೇರೆ ಯಾವುದೇ ವಿರೋಧ ಪಕ್ಷದ ರಾಜಕಾರಣಿ ವಿದೇಶಗಳಲ್ಲಿ ಪ್ರಶಂಸೆಗೆ ಒಳಗಾಗುವುದನ್ನು ಅಹಂಕಾರಿ ಮೋದಿಯವರು ಸಹಿಸುವುದಿಲ್ಲ. ಟ್ರಂಪ್ ಅವರ ರಾಜಕೀಯ ಪ್ರಚಾರಕ್ಕಾಗಿ ಮೋದಿಯವರು ಹೌಡಿ ಮೋದಿಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಸಮಯವನ್ನು ಕಳೆಯಬಹುದೆ? ಬಹಳಷ್ಟು ದಿನ ವಿದೇಶದಲ್ಲಿ ಸುತ್ತಬಹುದೇ?” ಎಂದು ಪ್ರಶ್ನಿಸಿದ್ದಾರೆ.
ಇದು ಮೊದಲ ಬಾರಿಗೆ ಅಲ್ಲ, ಕಳೆದ ವರ್ಷ ಮನೀಶ್ ಸಿಸೋಡಿಯಾ ಅವರು ಆಸ್ಟ್ರಿಯಾದಲ್ಲಿ ಶಿಕ್ಷಣದ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲ್ಪಟ್ಟಿದ್ದರು. ಆದರೆ ಆಗಲೂ ಈ ಸರ್ಕಾರ ಅವರನ್ನು ಅಲ್ಲಿಗೆ ಹೋಗದಂತೆ ನಿರ್ಬಂಧಿಸಿದ್ದರು.
ಇಂದು ನಮ್ಮ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂಬುದನ್ನು, ಇಂತಹ ಘಟನೆಗಳು ಸಾಬೀತುಪಡಿಸುತ್ತಿವೆ.