Homeಅಂಕಣಗಳುಕಾಂಗ್ರೆಸ್ ಪ್ರಣಾಳಿಕೆ: ಮಾಸಿದ ಗೋಡೆಯ ಮೇಲಿನ ಹಳೆ ಸಿನೆಮಾ ಪೋಸ್ಟರ್

ಕಾಂಗ್ರೆಸ್ ಪ್ರಣಾಳಿಕೆ: ಮಾಸಿದ ಗೋಡೆಯ ಮೇಲಿನ ಹಳೆ ಸಿನೆಮಾ ಪೋಸ್ಟರ್

- Advertisement -
- Advertisement -

| ಸುರೇಶ ಕೆ.ಪಿ |

ಕಾಂಗ್ರೆಸ್ ತನ್ನ ಪ್ರಣಾಲಿಕೆ ಬಿಡುಗಡೆ ಮಾಡಿದೆ. ಕಾಂಗ್ರೆಸ್ಸಿನ  ಸದ್ಯದ ದುಸ್ಥಿತಿ ನೋಡಿದರೆ ಈ ಪ್ರಣಾಳಿಕೆಯನ್ನು ಯಾರೂ  ಗಂಭೀರವಾಗಿ  ತೆಗೆದುಕೊಳ್ಳಲಾರರು..  ಭಾಜಪಕ್ಕೆ ಪ್ರಣಾಳಿಕೆಯ ಅಗತ್ಯವೇ ಇದ್ದಂತಿಲ್ಲ! ( ದಮನ ಮಾಡಲು ಯಾವ ಪ್ರಣಾಳಿಕೆ ಬೇಕು?) ಪ್ರಾದೇಶಿಕ ಪಕ್ಷಗಳ ಪ್ರಣಾಳಿಕೆ ಹೇಗಿದೆಯೆಂದು ನಮಗೆ ಗೊತ್ತಿಲ್ಲ.!!

ಆದರೆ ಈ ಕಾಂಗ್ರೆಸ್ ಪ್ರಣಾಳಿಕೆಯ ಕೆಲವೊಂದು ಅಂಶವನ್ನು ಅಕ್ಷರ ಶತ್ರು ಭಾಜಪ ಹಾಗೂ  ಮೋದಿ ಕಾಪಿ ಚೀಟಿ ಮಾಡಬಹುದು ಅಷ್ಟರ ಮಟ್ಟಿಗೆ ಈ ಪ್ರಣಾಳಿಕೆ ಭಾಜಪದ ಗಮನ ಸೆಳೆದೀತು!!

‘ಉದ್ಯೋಗ ಸೃಷ್ಠಿ’ ಮತ್ತು ‘ಕನಿಷ್ಠ  ಆದಾಯ ಬೆಂಬಲ’ಗಳೆರಡು ಕಾಂಗ್ರೆಸ್ಸಿನ ಈ  ಬಾರಿಯ ಪ್ರಮುಖ ಘೋಷಣೆಗಳು.

ಉದ್ಯೋಗ ಸೃಷ್ಟಿ ವಿಚಾರದಲ್ಲಿ ಕಾಂಗ್ರೆಸ್ ಕೆಲವು ಭರವಸೆಗಳನ್ನು ನೀಡಿದೆ.

*     ಖಾಲಿ ಇರುವ 4 ಲಕ್ಷ ಸರ್ಕಾರೀ ಹುದ್ದೆಗಳ ಭರ್ತಿ (ಮುಂದಿನ ಮಾರ್ಚ್ ಒಳಗೆ)

*     ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ 10 ಲಕ್ಷ ಹುದ್ದೆ ಸೃಷ್ಟಿ

ಇವೆರಡೂ ಕಣ್ಣು ಕೋರೈಸುವಂಥಾ ಸಂಗತಿಗಳು.  ಆದರೆ ಇವು ಮೂಲತಃ ರಾಜ್ಯ- ಕೇಂದ್ರ ಜಂಟಿ ಕಾರ್ಯಾಚರಣೆ!!  ಸರ್ಕಾರೀ ವೆಚ್ಚ ಕಡಿತಗೊಳಿಸುವ ವಚನ  ಕೊಟ್ಟ ಮೇಲೆಯೇ ವಿಶ್ವ ಬ್ಯಾಂಕ್ ನಮಗೆ ಸಾಲ ಕೊಟ್ಟಿದ್ದು!! ಜಗತ್ತಿನ ಯಾವ ದೇಶದಲ್ಲೂ  ಸರ್ಕಾರಗಳು ಆರೋಗ್ಯ ಮತ್ತು ಶಿಕ್ಷಣ  ಕ್ಷೇತ್ರ ಹೊರತುಪಡಿಸಿ  ಉಳಿದಂತೆ  ಹುದ್ದೆ ಹೆಚ್ಚಿಸುತ್ತಾ ಹೋದ ಉದಾಹರಣೆ ಇಲ್ಲ!!   ಆದ್ದರಿಂದ ಈ ಭರವಸೆ ಎಷ್ಟು ವಿಶ್ವಾಸಾರ್ಹ ಎಂಬುದು ಅವರವರಿಗೆ ಬಿಟ್ಟಿದ್ದು.

ಕಾಂಗ್ರೆಸ್ಸಿನ ಉಳಿದ ಉದ್ಯೋಗ ಸೃಷ್ಟಿಯ ವಿವರಗಳು ಜೊಲ್ಲು ತುಂಬಿದ ಬಾಯಲ್ಲಿ ವಾದ್ಯ ಊದಿದ ಹಾಗಿದೆ..!! ಉದಾ: ಕಡಿಮೆ ಕೌಶಲ್ಯದ ಉದ್ಯೋಗ ಸೃಷ್ಟಿಗಾಗಿ ‘ಜಲಾಶ್ರಯಗಳ  ಪುನಶ್ಚೇತನ ಮಿಷನ್’, ‘ಬೀಳುಭೂಮಿ ಪುನಶ್ಚೇತನ ಮಿಶನ್’ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯ ನೀಲ ನಕ್ಷೆ ಕಾಂಗ್ರೆಸ್ ಮುಂದಿಟ್ಟಿದೆ. ಹಾಗೇ 2500 ಜನಸಂಖ್ಯೆ ಮೀರಿದ ಹಳ್ಳಿಗಳಲ್ಲಿ 2ನೇ ಆಶಾ ಕಾರ್ಯಕರ್ತೆಯರ ನೇಮಕ.

ಇವೆಲ್ಲವೂ ತಾತ್ಕಾಲಿಕ ಮತ್ತು ಅಭದ್ರ ಉದ್ಯೋಗಗಳು ಎಂದು ಕಾಂಗ್ರೆಸ್ಸಿಗೆ ಗೊತ್ತು.  ಅದು ಕೂರಲು ಆಶಿಸುತ್ತಿರುವುದು ಮೋದಿ ಕೂತ ಕುರ್ಚಿಯಲ್ಲೇ  ತಾನೇ.. ಆದ್ದರಿಂದ ಮೂಲತಃ ಉದ್ಯೋಗ ಸೃಷ್ಟಿಯ ಸೂಚಿಗಳನ್ನಿಟ್ಟಾಗಲೂ ಎಲ್ಲೂ ಸುಭದ್ರ ಖಾಯಂ ಉದ್ಯೋಗ ಅನ್ನುವುದನ್ನು ತಪ್ಪಿಯೂ ಹೇಳಿಲ್ಲ!!

ಆಟದ ಖದರು ಬದಲಾಗುತ್ತೆ ಅಂತ ಕಾಂಗ್ರೆಸ್  ನಂಬಿಕೆ ಇಟ್ಟುಕೊಂಡಿರುವುದು ರೂ 72000/-ದ  ಕನಿಷ್ಠ ಆದಾಯದ ಬೆಂಬಲ ಘೋಷಣೆ ಮೇಲೆ.

ಪ್ರಣಾಳಿಕೆಪ್ರಕಾರ ಐದು ಕೋಟಿ ಕುಟುಂಬಗಳಿಗೆ ಈ ಸಹಾಯ ಸಿಗಲಿದೆ. ಆದರೆ  ಯಥಾಪ್ರಕಾರದ ಜಾರಿಕೊಳ್ಳುವ ಜಾಣ ವಿವರಗಳು ತದನಂತರ ಕಾಣುತ್ತದೆ.  ಪ್ರಣಾಳಿಕೆ ಪ್ರಕಾರ ಇದು ರಾಜ್ಯ- ಕೇಂದ್ರದ ಜಂಟಿ ಕಾರ್ಯಕ್ರಮ. ‘ಕುಟುಂಬಗಳು ಬಡತನದಿಂದ ಹೊರಬಂದ ಮೇಲೆ ಸತತವಾಗಿ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗದು’ ಎನ್ನುತ್ತೆ ಪ್ರಣಾಳಿಕೆ.   ಅಂದರೆ ಪ್ರಾಯಶಃ ಕಾಲಮಿತಿಯ ಬೆಂಬಲ ಅಥವಾ ಶರತ್ತುಗಳನ್ನಿಟ್ಟುಕೊಂಡು  ಕುಟುಂಬಗಳಿಗೆ ಸಹಾಯ ಸಿಗಬಹುದು.  ಉದಾ: ಕುಟುಂಬದ ಯಾರಿಗೂ ಉದ್ಯೋಗ ಇಲ್ಲ ಎಂಬ ಪ್ರಮಾಣ ಪತ್ರ. ಉದ್ಯೋಗ ಸಿಕ್ಕಿದ ತಕ್ಷಣ ಬೆಂಬಲ ಸ್ಥಗಿತ ಹೀಗೆ..

ಇಂಥಾ ಕೇವಿಯೆಟ್‍ಗಳಿಲ್ಲದೇ  ಈ ಸಾರ್ವತ್ರಿಕ ಬೆಂಬಲದ ಘೋಷಣೆ ಕಾಂಗ್ರೆಸ್ ಬಿಡಿ, ಸಾಕ್ಷಾತ್ ಲಕ್ಷ್ಮೀಪತಿ ತಿಮ್ಮಪ್ಪನೂ ಮಾಡಲಾರ. ಅಂದರೆ ಇಂಥಾ ಝಲಕ್ ಇರುವ ಯೋಜನೆಯೇ ಗಿಲೀಟು ಅನ್ನಿಸತೊಡಗಿದರೆ  ಉಳಿದವು ಹೇಗಿರಬಹುದು?

ಉಳಿದವು? ಕಾಂಗ್ರೆಸ್ಸಿನ ಬೌದ್ಧಿಕ ದಾರಿದ್ರ್ಯ  ನೋಡಬೇಕೆಂದಿದ್ದರೆ ಕೆಲವು ಹಾರು ಹೇಳಿಕೆಯ ಭಾಗಗಳನ್ನು ಗಮನಿಸಬೇಕು.

ಉದಾ:  ಕೈಮಗ್ಗ ಮತ್ತಿತರ ಪಾರಂಪರಿಕ ಉತ್ಪನ್ನಗಳ ಉತ್ಪಾದನೆ ಮತ್ತು ರಪ್ತಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು ‘ ಎಂಬ ವಾಕ್ಯ ಇದೆ. ಅದರಿಂದಾಚೆ ಯಾವ ಗಟ್ಟಿ ವಿವರಗಳೂ ಇಲ್ಲ! ಏನಿದರ ಅರ್ಥ?

ಹಾಗೇ ಮೋದಿಯವರ ‘ಮೇಕ್ ಇನ್ ಇಂಡಿಯಾ’ಕ್ಕೆ ಪ್ರತಿಯಾಗಿ ‘ಮೇಕ್ ಫಾರ್ ದಿ ವರ್ಲ್ಡ್’ ಎನ್ನುವ ಘೋಷಣೆ  ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ. ಇದೇನಪ್ಪಾ ಅಂದರೆ ಅದೇ ಹಳೇ ಎಸ್.ಇ.ಜೆಡ್ ಬಾಟಲನ್ನು ತೊಳೆದು ಹೊಸ ಲೇಬಲ್ ಹಾಕಿ ಕೂತಿದೆ ಕಾಂಗ್ರೆಸ್. ಹಳೇ ಎಸ್.ಇ.ಜೆಡ್ ನ ಕಮಟು ವಾಸನೆ ಇದರಲ್ಲೂ ಮುಂದುವರಿದಿದೆ.

ಕೃಷಿಯಲ್ಲಿ ಏನಪ್ಪಾ ಅಂದರೆ ‘ಕೃಷಿ ಅಭಿವೃದ್ಧಿ ಮತ್ತು ಯೋಜನೆಯ ರಾಷ್ಟ್ರೀಯ ಆಯೋಗ’  ಹಾಗೂ ‘ಅತೀ ಸಣ್ಣ ರೈತ ಮತ್ತು ಕೃಷಿ ಕೂಲಿಕಾರ ಆಯೋಗ’ ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಎದೆ ತಟ್ಟಿ ಹೇಳಿಕೊಂಡಿದೆ.!

ಈ  ಆಯೋಗ ಸ್ಥಾಪಿಸುವುದೆಂದರೆ  ಸಮಸ್ಯೆಗೆ ಪರಿಹಾರ ಹೊಳೆಯದೇ ಉಸುಕಲ್ಲಿ ತಲೆ ಹುದುಗಿಸುವುದು ಎಂದರ್ಥ

ಈಗಾಗಲೇ ಇಂಥಾ  ಬೋರ್ಡ್, ಸೀಟು ಕವರ್ ಬದಲಾಯಿಸಿ  ಹಳೇ ಬಸ್ಸಿಗೇ  ರಯ್ಯಾ ಎಂದ ಮೋದಿ ನಮ್ಮನ್ನು ಎಲ್ಲಿ ತಂದು ಕೆಡವಿದ್ದಾರೆ ಎಂಬುದನ್ನು ಗಮನಿಸಿದರೆ ಕಾಂಗ್ರೆಸ್ ಬಗ್ಗೆ ವಿಶ್ವಾಸ ಹುಟ್ಟುವುದಿಲ್ಲ.

ಕಾಂಗ್ರೆಸ್ಸಿನ ಸಮಸ್ಯೆ ಏನು? ಕೋಮುವಾದೀ ರಾಜಕೀಯ ಹೊರತುಪಡಿಸಿ ಕಾಂಗ್ರೆಸ್ಸಿಗೆ ಭಾಜಪದ ಜೊತೆ ತಕರಾರಿಲ್ಲ!! ಭಾಜಪ  ತನ್ನ ಕನ್ನಡಿ ಬಿಂಬದಂಥಾ ಎದುರಾಳಿಯಾಗಿ ತನ್ನ ಕುರ್ಚಿಯಲ್ಲಿ ಕೂತಿದೆ ಎಂಬುದಷ್ಟೇ ಬೇಗುದಿ. ಇಷ್ಟು ವರ್ಷ ತಾನು ಆಳುವಾಗ ಕೆಡಿಸಿ ಕೂತ ಸಂಗತಿಗಳನ್ನೆಲ್ಲಾ ಭಾಜಪ ಕೆದಕಿ ತನ್ನ ಮೇಲೆ ಎಸೆಯುವ ಪರಿಗೆ ಕಾಂಗ್ರೆಸ್ ಬ್ರೈನ್ ಡೆಡ್ ಆಗಿ ಕೂತಿದೆ. ಅದಕ್ಕೀಗ ಹೊಸ ಹೊಳಹುಗಳೂ ಇಲ್ಲ. ಅದನ್ನು ನೆಚ್ಚುವ ಕನಸುಗಣ್ಣಿನ ಯುವ ಪಡೆಯೂ ಇಲ್ಲ. ಉಳಿದ ಪಕ್ಷಗಳಿಗಿಂತ ಭಿನ್ನವಾದ ದೇಶದ ನಿಜ ಅಭಿವೃದ್ಧಿಯ ನೀಲನಕ್ಷೆ ತನ್ನಲ್ಲಿದೆ ಎಂದು ಕ್ಲೈಮ್ ಮಾಡುವ ಕಾಣ್ಕೆಯೂ ಇಲ್ಲ.  ಸಕಾರೀ ಉದ್ಯೋಗ ಕಡಿತ ಮಾಡಿ ಅಭದ್ರ ಗುತ್ತಿಗೆ  ಉದ್ಯೋಗದ ಪರ್ವ ಶುರು ಮಾಡಿದ ಕಾಂಗ್ರೆಸ್  ಸಂಪೂರ್ಣ ಭಿನ್ನವಾಗಿ ಯೋಚಿಸಲು ಸಾಧ್ಯವಿಲ್ಲ. ಕೃಷಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ  ಇತ್ಯಾತ್ಮಕ ಬದಲಾವಣೆ ತರಲು ದೊಡ್ಡ ವಿವರಗಳ ದೀರ್ಘ ಕಾಲೀನ ಕಲ್ಪನೆ ಇರಬೇಕು. ಈಗ ಘೋಷಿಸಿರುವಂಥಾದ್ದು ಮೀನು ಕೊಡುವ ವಿಧಾನವೇ ಹೊರತು ಮೀನು ಹಿಡಿಯುವುದನ್ನು ಕಲಿಸುವ ವಿಧಾನ ಅಲ್ಲ. ಮೋದಿಯೇನೋ ತೊಲಗಬೇಕು. ಆದರೆ ಕಾಂಗ್ರೆಸ್ ಕೈಗೆ ಕೊಟ್ಟರೆ  ಪರಿಸ್ಥಿತಿ ಸುಧಾರಿಸಿತೆಂಬ ಭರವಸೆ ಇಲ್ಲಿ ಕಾಣಿಸುವುದಿಲ್ಲ.  ಅಷ್ಟಕ್ಕೂ ಕಾಂಗ್ರಸ್ಸಿಗೇ ಇಷ್ಟು ಸ್ಥಾನ ಬಂದೀತೆಂಬ ನಂಬಿಕೆ ಇಲ್ಲದಿರುವಾಗ ಪ್ರಣಾಳಿಕೆಯಲ್ಲಿ ಬರೆಯಲು ತೊಡಕೇನೂ ಇಲ್ಲ!!

ಕಳೆದ ಬಾರಿಯ  ರಾಜ್ಯದ ಪ್ರಣಾಳಿಕೆ ಎಷ್ಟು ಅಧ್ವಾನವಾಗಿತ್ತೆಂದರೆ ಥೇಟ್ ಮೊಯಿಲಿಯಂಥಾ ಕಲಸುಮೇಲೋಗರ ನಿಪುಣರೇ ಬರೆದಂತಿತ್ತು. ಈ ಪ್ರಣಾಲಿಕೆ ಸ್ಟಾಂಪ್ ಪೇಪರ್ ಮೇಲೆ ಗಾಳಿಯಲ್ಲಿ ಸಹಿ ಹಾಕುವ  ನಟನೆಯಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...