Homeಅಂಕಣಗಳುಥೂತ್ತೇರಿ | ಯಾಹೂವಯಸ್ಸಾದ ಮ್ಯಾಲೆ ಜೀರ್ಣಶಕ್ತಿ ಕಡಿಮೆ ಆಯ್ತದೆ ಸಾ!

ವಯಸ್ಸಾದ ಮ್ಯಾಲೆ ಜೀರ್ಣಶಕ್ತಿ ಕಡಿಮೆ ಆಯ್ತದೆ ಸಾ!

- Advertisement -
| ಯಾಹೂ |
ಇಡೀ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದು ಮೂರು ಜಿಲ್ಲೆಗಳಲ್ಲಿ ಎಂಬಂತೆ ಮಾಧ್ಯಮಗಳು ಬೊಬ್ಬೆ ಇಡುತ್ತಿರುವಾಗ ಮಂಡ್ಯದ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂಬ ಬಗ್ಗೆ ವಾಟಿಸ್ಸೆ ಕೇಳಬೇಕೆಂದು ಫೋನ್ ಮಾಡಲಾಗಿ ರಿಂಗಾಯ್ತು.
“ಹೇಳಿ ಸಾ.”
“ನನ್ನೆಸರು ನಿನ್ನ ಮೊಬೈಲಲ್ಲಿ ಫೀಡಾಗಿದೆಯಾ ವಾಟಿಸ್ಸೆ.”
“ಇಲ್ಲ ಸಾ.”
“ಮತ್ತೆ ಹೇಳಿ ಸಾರ್ ಅಂದ್ಯಲ್ಲ.”
“ನಾನು ಅಂಬರೀಶ್ ಅಭಿಮಾನಿ ಸಾ.”
“ಅದಕ್ಕೂ ಇದಕ್ಕೂ ಏನು ಸಂಬಂಧ.”
“ನಮ್ಮ ಅಂಬರೀಶ್‍ಗೆ ಪ್ರೊಡ್ಯೂಸರೊ, ಡೈರೆಕ್ಟರೊ ಶೂಟಿಂಗ್ ಡೇಟ್ ಹೇಳಿದ್ರೆ ಬರಕತಿರಲಿಲ್ಲವಂತೆ. ಅಂಗೆ ಗೆಪ್ತಿಲಿ ಮಡಿಕ್ಯಂಡು ಹೋಯ್ತಿದ್ನಂತೆ. ಅಂಗೆ ನಾನೊಂದು ನಂಬರ್ ನೋಡಿಕೊಂಡರೆ ಸಾಕು, ಬರಕಳೋದಿಲ್ಲ. ಅದೇ ಮೈಂಡ್ ಫೀಡಾಗಿರುತ್ತೆ ಸಾ.”
“ಎಂಥಾ ಪ್ರತಿಭೆನ್ರಿ ನಿಮ್ದು.”
“ಏನು ಮಾಡದು ಸಾ, ಬ್ಯಾಡ್‍ಲಕ್ಕು.”
“ಲಕ್ಕನ್ಯಲ್ಲ ನಂಬುತಿಯಾ.”
“ಸುಮ್ಮನೆ ಮಾತಿಗೇಳಿದೆ, ಇದ್ಯಲ್ಲ ಮೂಡನಂಬಿಕೆ ಕಾಲ್ದಲ್ಲಿ ಬಂದ ಪದ ರೂಢಿಯಾಗಿಬಿಟ್ಟಿವೆ.”
“ಇರ್ಲಿ ಮಂಡ್ಯದ ರಾಜಕಾರಣ ಹೆಂಗೆ ನಡೀತಿದೆ.”
“ಈ ಜೆಡಿಎಸ್‍ನವುಕೆ ಏನೋ ಕೇಡುಗಾಲ ಸಾ.”
“ಯಾಕೆ.”
“ಸುಮಲತಾ ಕ್ಯಾಂಡಿಡೇಟಾದೇಟಿಗೆ, ಸುಮಲತಾ ಅನ್ನೋ ಹೆಸರಿನ ಮೂರು ಹೆಂಗಸರನ್ನ ಹುಡುಕಿ ನಿಲ್ಸದ ಸಾ.”
“ಅವುರಾಗಿ ನಿಂತಿಲ್ಲವೇ?”
“ಥೂ ಇಲ್ಲ ಸಾ. ಗೊರವಿ ಸುಮಲತಾ ನಮ್ಮ ಫ್ರೆಂಡ್ ದೇವರಾಜನ ಸಮಂದಿ, ಅವನ್ನ ವಿಚಾರಿಸ್ದೆ. ಅವಳ ಗಂಡನಿಗೂ ಹೇಳದಂಗೆ ಅವಳ ಹಾರಿಸಿಗಂಡೋಗಿ ನಾಮಪತ್ರ ಸಲ್ಸದ ಸಾ.”
“ಕ್ಯೆಟ್ಟ ರಾಜಕಾರಣ ಇದು.”
“ಕ್ಯೆಟ್ಟ ರಾಜಕಾರಣ ಅಲ್ಲ, ಕುಲಗೆಟ್ಟ ರಾಜಕಾರಣ.”
“ಇದನ್ನೆಲ್ಲ ಹ್ಯಂಗೆ ಫೇಸ್ ಮಾಡ್ತಾಯಿದೀರಿ.”
“ಆ ಕುಮಾರಸ್ವಾಮಿ ಟೀಮು ಮಾಡಿದ್ದೆಲ್ಲಾ ಅವುರಿಗೇ ಅಟಕಾಯ್ಸಿಗತ್ತಾ ಅದೇ ಸಾ.”
“ಹೆಂಗೇ.”
“ಸುಮಲತನೆಸರಿನ ಮೂರು ಜನ ಹೆಂಗಸರ ಹುಡುಕಿ ನಿಲ್ಸಿದರಂತೆ ಅನ್ನದೆ ಸುಮಲತನಿಗೆ ಪ್ಲಸ್ ಪಾಯಿಂಟ್ ಆಗದೆ ಸರ್.”
“ಓಟರ್ಸ್‍ಗೆ ಕನ್‍ಪೀಜಾಗಲ್ವಾ.”
“ಕನಪೀಜ್ ಮಾಡಿಕಳೊ ಓಟರ್ಸ್ ತಿರೋದ್ರು, ಈಗ ಬದುಕಿರೋರ್ಯಲ್ಲ ನನ್ನಂಥೋರು. ಅವುರಿಗೆಲ್ಲ ತಿಳಿತದೆ ಸಾ.”
“ಕ್ಯಾನುವಾಸ್ಯೆಂಗೆ ಮಾಡ್ತಾಯಿದೀರಿ.”
“ಇಬ್ಬರು ತರಕಲೆಂಗಸರ ಮಧ್ಯೆ ಒಂದು ಒಳ್ಳೆ ಹೆಂಗಸದೆ ನೋಡಿ, ಕ್ಯಂಪಗೆ ತುಂಬಿದ ಮುಖ, ಅವಳೇ ನಮ್ಮ ಸುಮಲತಾ ಅಂತ ಪ್ರಚಾರ ಮಾಡ್ತಾ ಇದೀವಿ.”
“ಸುಮಲತಾ ಯಂಗೇ.”
“ಭಾಳಾ ವರುಸದ ನಂತ್ರ ನಮಿಗೆ ಒಳ್ಳೆ ರಾಜಕಾರಣಿ ಸಿಕ್ಕಿದ್ರು ಸಾ. ಸಂಸ್ಕೃತೀನೆ ಇಲ್ಲದ ದಳದವುಕೆ ರಾಜಕಾರಣ ಅಂದ್ರೇನು, ಚುನಾವಣಾ ಭಾಷಣ ಅಂದ್ರೇನು, ಅಂತ ಹೇಳಿ ಕೊಡ್ತಾ ಅವುಳೆ. ಅದರಲ್ಲೂ ಕುಮಾರಸ್ವಾಮಿ ಹರಾಜಾಗೋಗಿಬಿಟ್ಟ.”
“ಅಂಗಂತೀಯ.”
“ಊ ಸಾ, ಅವುನಿಗೊಂತರಾ ತಲಿ ಕೆಟ್ಟೋಗಿಬುಟ್ಟದೆ. ರಾತ್ರಿ ವೊತ್ತು ತಾಲೂಕಿಗೆ ಬತ್ತನೆ, ಕಾಂಗ್ರೆಸ್ಸಿನೋರನ್ನೆಲ್ಲಾ ಕೊಳ್ಕತಾ ಅವುನೆ, ನನಿಗೂ ಆಫರ್ ಬಂದಿತ್ತು ಸಾ. ಹೋಗಲಿಲ್ಲ.”
“ಯಾಕೆ.”
“ವಾಟಿಸ್ಸೆಗೆ ಇವತ್ತಿನವರೆಗೂ ಯಾಕೆ ವಳ್ಳೆ ಹೆಸುರದೆ ಅಂದ್ರೆ, ಅವುನ್ನ ಯಾರು ಕೊಳ್ಳಕ್ಕಾಗಿಲ್ಲ ಸಾ.”
“ಅವರು ಓಟಿಗೆ ದುಡ್ಡು ಕೊಟ್ರೆ ಈಸಗತ್ತಿನಿ ಅಂದಿದ್ರಿ.”
“ಅದು ನಮ್ಮನೆ ದುಡ್ಡನ್ನ ರಿಟರ್ನ್ ಈಸಗಂಡಂಗೆ ಸಾ, ಅದಕ್ಕೆ”
“ಯಲಕ್ಷನ್ ಖರ್ಚಿಗೆ ಸುಮಲತ ಯಂಗೆ ಮಾಡ್ತಾ ಅವುರೆ”
“ಮೇಜರ್ ಖರ್ಚಾ ರಾಕ್‍ಲೈನ್ ವ್ಯೆಂಕಟೇಶ ನೋಡಿಕತ್ತನೆ, ಇನ್ನುಳದದ್ದ ಕಾರ್ಯಕರ್ತರೆ ಕೈಯಿಂದ ಹಾಯ್ಕಂಡು ಮಾಡ್ತ ಅವುರೆ ಸಾ, ಅಂಬರೀಶ್‍ಗೋಸ್ಕರ.”
“ಸುಮಲತರಿಗೋಸ್ಕರ ಅಲವಾ.”
“ಅಂಬರೀಶ್ ರುಣ ಅದೇ ಸಾ ನಮ್ಮ ಮ್ಯಾಲೆ. ಅದ ತೀರುಸಬೇಕಾದ್ರೆ ಸುಮಲತಾರಿಗೆ ಕ್ಯೆಲಸ ಮಾಡಬೇಕಾಗಿದೆ. ಅದರಲ್ಲೂ ಸುಮಲತಾನೆ ಅಂಬರೀಶ್‍ಗಿಂತ ಗ್ರೇಟು ಸಾ.”
“ಅದ್ಯಂಗೆ.”
“ನೋಡಿ ಸಾ, ಅಂಬರೀಶ್ ಲಾಡ್ಜಲ್ಲಿ ರೂಂ ಮಾಡಿಕೊಂಡಿದ್ದೋನು, ಅಂತೋನಿಗೆ ಮೂಗುದಾರ ಹಾಕಿ, ಕೊಳ್ಳುರಿ ಹಾಕಿ, ಸಂಸಾರಕ್ಕೆ ಒಗ್ಗಿಸಿದೋಳು ಸುಮಲತಾ. ಅಂಥ ಒಂಟಿ ಸಲಗನ್ನ ಬಗ್ಗಿಸಿದೋಳಿಗೆ ಈ ತರಕಲ ಗಂಡುಸ್ರು ಯಾವ ಲೆಕ್ಕ ಸಾ. ಅದ್ಕೆ ಅವುಳೆದ್ರಿಗೆ ಕುಮಾರಸ್ವಾಮಿ, ಡಿಕೆ.ಶಿವಕುಮಾರ್ ಯಲ್ಲ ನೀರು ಕುಡಿತ ಇರದು.”
“ತಮ್ಮಣ್ಣನ ಬಗ್ಗೆ ಏನೇಳ್ತಿ.”
“ಅವನು ಕದ್ದು ಮರಳೊಡೆಯೋ ಲಾರಿ ಡ್ರೈವರ್‍ತರ ಅವುನೆ ಸಾ, ಅವನ ಬಗ್ಗೆ ಮಾತಾಡಿದ್ರೆ ನನಿಗೆ ಅವಮಾನ.”
“ಯಾಕಂಗಂತೀರಿ.”
“ಸುಮಲತ ದಕ್ಷಿಣ ಭಾರತದ ಮಹಾನ್ ನಟಿ, ಅಂಬರೀಶ್ ಪತ್ನಿ, ಈ ತಮ್ಮಣ್ಣ ಅವುರ ಮನಿಗೋದಾಗ ಸುಮಲತಾ ನೀರು ಕೊಡಬೇಕಾಗಿತ್ತಂತೆ. ಅಷ್ಟು ಬಾಯಾರಿದ್ರೆ ಅಲ್ಲೇ ಟೇಬಲ್ ಮ್ಯಾಲೆ ನೀರಿನ ಬಾಟ್ಳಿ ಇದ್ದೋ, ತಗೊಂಡು ಕುಡಿಬೇಕಾಗಿತ್ತು. ಸೋಡನೂ ಇತ್ತು, ನ್ಯೆನ್ನೆ ದಿನ ಕುಡುದು ಬಿಟ್ಟಿರೋ ಡ್ರಿಂಕ್ಸೂ ಇತ್ತು ಸಾ. ಈ ಮರಳಿನ ಲಾರಿ ಡ್ರೈವರ್ರು, ಸುಮಲತಾ ಬಂದು ನೀರುಕೊಡ್ನಿಲ್ಲ ಅಂತಾನಲ್ಲ, ನೀವೇ ಹೇಳಿ ಸಾ.”
“ನಿಖಿಲ್‍ಗೆ ಓಟು ಮಾಡದ್ರಿಂದ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗತದೆ ಅಂತ ಡಿಕೆಶಿ ಹೇಳಿದ್ರು ಕೇಳಿಸಿಗಂಡ್ಯಾ.”
“ಕೇಳಿಸಿಗಂಡು ಸಕತ್ತು ನಗಾಡಿದೆ ಸಾ.”
“ಯಾಕೆ.”
“ಮಂಡ್ಯ ಚುನಾವಣೇಲಿ ಇಲ್ಲಿಗಂಟ ಇಂತ ಮಾತ ಕೇಳಿರಲಿಲ್ಲ. ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗತದೆ ಅಂದ್ರೆ ನಿಖಿಲೇನು ಅಂಬರೀಶ್ ಮಗನ ಸಾ. ಈ ಡಿಕೆಸಿ ಹಣ ಆಸ್ತಿ ಜಾಸ್ತಿಯಾಗಿ, ಆಸ್ತಿ ಕಾರಣಕ್ಕೆ ಕಷ್ಟ ಅನುಬವುಸ್ತಯಿರೋನು. ಅವೊಂತರ ಆತ್ಮವಂಚನೆ ಜನ ಸಾ. ಸಿಂಹ ಇಲ್ಲ ಅಂತ ನಾಯಿ ನರಿಗಳೆಲ್ಲ ಬೊಗಳತ ಅವೇ. ಆದರೆ ಹುಲಿ ಎದ್ದು ನಿಂತಿರದು ಅವುಕ್ಕೆ ಗೊತ್ತೇಯಿಲ್ಲ.”
“ಸಿಂಹ ಯಾರು? ಹುಲಿ ಯಾರು?”
“ಸಿಂಹ ಅಂಬರೀಶಣ್ಣ, ಅಂದ್ರೆ ಲಯನ್ನು, ಸುಮಲತಾ ಹುಲಿ, ಅಂದ್ರೆ ಟೈಗರ್ರು. ಈ ಟೈಗರ್ ಮತ್ತೆ ಸಿಂಹದ ಮರಿ ಅಂದ್ರೆ ಲೈಗರ್ ಅಭಿಷೇಕ್.”
“ಲೈಗರ್ ಅಂದ್ರೇನು.”
“ಅಂದ್ರೆ, ಲಯನ್ನು ಮತ್ತು ಟೈಗರ್ರು ಕ್ರಾಸಲ್ಲಿ ಲೈಗರ್ ಬರುತ್ತೆ ಸಾ. ಅದೇ ನಮ್ಮ ಅಭಿಷೇಕ್. ಗೊತ್ತಾಯ್ತಾ ಸಾ.”
“ಪರವಾಗಿಲ್ಲ ಒಳ್ಳೆ ತಳಿ ತಜ್ಞನಂಗೆ ಮಾತಾಡ್ತಿ. ನಮ್ಮ ದ್ಯಾವೇಗೌಡ್ರ ಬಗ್ಗೆ ಏನೇಳ್ತೀರಿ.”
“ಪಾಪ ದುರಾಶೆ ಮುದುಕ. ಎಂಟು ಮುದ್ದೆ ಕೇಳಿದ್ದ, ಆ ಕಾಂಗ್ರೆಸ್ ಬಡ್ಡೇತವು ಹೋಗತ್ತಾಗೆ ನುಂಗು ಅಂತ ಯೆಂಟು ಮುದ್ದೆ ಇಕ್ಕಿದ್ರು. ಉಣ್ಣಕ್ಕಾಗದೆ ಒಂದು ಮುದ್ದೆಯ ವಾಪಸ್ ಕೊಟ್ಟವುನೆ. ಚಿಕ್ಕಮಂಗ್ಳೂರ್ ಮುದ್ದೆನ ತಿರಗ ಕಾಂಗ್ರೆಸ್ ಕ್ಯಾಂಡಿಡೇಟಿಗೆ ಕೊಟ್ಟವುನೆ. ಆರಂಬುದಲ್ಲಿ ಹನ್ನೆಲ್ಡು ಮುದ್ದೆ ಕೇಳಿದ್ದ. ಇವತ್ತಿನ ಸ್ಥಿತಿ ನೋಡಿದರೆ ಅವುನ್ನ ವಾಪಸ್ ಕೊಡುತಿದ್ದ ಅನ್ನಸ್ತದೆ. ವಯಸ್ಸಾದ ಮ್ಯಾಲೆ ಜೀರ್ಣಶಕ್ತಿ ಕಡಿಮೆ ಆಯ್ತದೆ ಅನ್ನದ್ಕೆ ಇದೇ ಉದಾರಣೆ ಸಾ.”
“ಸಾ, ಒಂದ್ ಟೂ ಹಂಡ್ರೆಡ್ ರುಪೀಸ್ ಕರೆನ್ಸಿ ಹಾಕ್ಸಿ ಸಾ”
“ಥೂತ್ತೇರಿ!!!”
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...